Yuvavahini

ಘಟಕಗಳು

ಮಹಾಸಭೆ ಮತ್ತು ಯುವ ಬಾಂಧವ್ಯ 2025 ಸಮಾರೋಪ-ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ಯುವ ಸಮುದಾಯ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು” .. ನ್ಯಾಯವಾದಿ ಸಂತೋಷ್ ಕುಮಾರ್. ಯುವಕರು ಸಮಾಜದ ಸಮಸ್ಯೆ, ನೋವುಗಳಿಗೆ ಸ್ಪಂದಿಸುವ ಹಾಗೂ ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಆವರ ಮೂಲಕ ಸಂಘಟನೆಗಳ ಉದ್ದೇಶ ಸಾರ್ಥಕವಾಗಬಲ್ಲುದು. ಯುವವಾಹಿನಿ ಸಂಘಟನೆ ತನ್ನ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿರುವುದು ಅಭಿನಂದನಾರ್ಹ ಎಂದು ಉಪ್ಪಿನಂಗಡಿಯ ಖ್ಯಾತ ನ್ಯಾಯವಾದಿ ಶ್ರೀ ಸಂತೋಷ್ ಕುಮಾರ್ ತಿಳಿಸಿದರು. ಅವರು ದಿ.22.11.25 ರಂದು ಬೆಳ್ಳಿಪ್ಪಾಡಿ ಶ್ರೀ ಚಂದ್ರಶೇಖರ ಕೆ ಸನಿಲ್ ರವರ ಮನೆ “ಯಮುನಾ” ದಲ್ಲಿ ನಡೆದ ಘಟಕದ ಮಹಾಸಭೆ […]

Read More

ಯುವವಾಹಿನಿ ಕಟಪಾಡಿ ಘಟಕದ ಅಧ್ಯಕ್ಷರಾಗಿ ಸುಶಾಂತ್ ಕುಮಾರ್ ಆಯ್ಕೆ

ಕಟಪಾಡಿ : ಯುವವಾಹಿನಿ (ರಿ.) ಕಟಪಾಡಿ ಘಟಕದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಶಾಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರು : ಸುಶಾಂತ್ ಕುಮಾರ್ಉಪಾಧ್ಯಕ್ಷರು : ಶ್ರುತಿಕಾರ್ಯದರ್ಶಿ; ಲಕ್ಷ್ಮಿ ವಿ ಕೋಟ್ಯಾನ್ಜೊತೆ ಕಾರ್ಯದರ್ಶಿ; ಆಶಾ ಸಂತೋಷ್ಕೋಶಾಧಿಕಾರಿ ; ಕಮಲಾಕ್ಷಕಲೆ ಸಾಹಿತ್ಯ ನಿರ್ದೇಶಕರು ; ಸರಸ್ವತಿಸಾಂಸ್ಕೃತಿಕ ನಿರ್ದೇಶಕರು ; ಅಶ್ವತ್ ಕುಮಾರ್ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ; ವಾಮನ್ ಪೂಜಾರಿಮಹಿಳಾ ಸಂಘಟನಾ ನಿರ್ದೇಶಕರು ; ಹರಿಣಾಕ್ಷಿಕ್ರೀಡಾ ನಿರ್ದೇಶಕರು ; ಮಧುಕರ್ವ್ಯಕ್ತಿತ್ವ ವಿಕಾಸನ ನಿರ್ದೇಶಕರು […]

Read More

ಪದಗ್ರಹಣ ಸಮಾರಂಭ-ಯುವವಾಹಿನಿ( ರಿ.) ಮಂಗಳೂರು ಮಹಿಳಾ ಘಟಕ

ದಿನಾಂಕ 22/11/2025 ಯುವವಾಹಿನಿ ಸಭಾಂಗಣ ಶ್ರೀಮತಿ ನೈನಾ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವು ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷರು ಬಂದಿರುವ ಎಲ್ಲರನ್ನು ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್ ಅವರು ತನ್ನ ಪ್ರಸ್ತಾವಿಕ ನುಡಿಯಲ್ಲಿ ಯುವವಾಹಿನಿಯ ಮಹಿಳಾ ಘಟಕ ಹಿಂದಿನಿಂದ ಇಂದಿನವರಗೆ ನಡೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಶ್ರೀಮತಿ ನಮಿತಾ ಶ್ಯಾಮ, ಸಲಹಾ ಸಮಿತಿ ಸದಸ್ಯರು, ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ. ಅವರು ದೀಪ […]

Read More

ಗುರುತತ್ವವಾಹಿನಿ ಮಾಲಿಕೆ 60 ಕಾರ್ಯಕ್ರಮ-ಯುವವಾಹಿನ(ರಿ.)ಬಂಟ್ವಾಳ ಘಟಕ

ದಿನಾಂಕ 20/11/2025 ಶಿಕ್ಷಣ ಮತ್ತು ಸರಳತೆ ನಾರಾಯಣಗುರುಗಳ ಸಮಾಜ ಸುಧಾರಣೆಯ ದ್ವಿಮಂತ್ರ : ಸಂದೀಪ್ ಸಾಲ್ಯಾನ್ ನಾರಾಯಣಗುರುಗಳು ಧಾರ್ಮಿಕತೆಯ ನಿಜವಾದ ಅರ್ಥವನ್ನು ಸಮಾಜಮುಖಿ ಪರಿವರ್ತನೆಯೊಡನೆ ಜೋಡಿಸಿ ನೋಡಿದ ಮಹಾತ್ಮರು. ಧಾರ್ಮಿಕ ತಳಹದಿಯಲ್ಲಿ ಸಮಾಜ ಸುಧಾರಣೆ ಸಾಧ್ಯವೆಂದು ದೃಢವಾಗಿ ನಂಬಿದ ಅವರು, ದೇವಸ್ಥಾನಗಳನ್ನು ಕೇವಲ ಪೂಜಾ ಸ್ಥಳಗಳೆನ್ನದೆ, ಜನರ ಆತ್ಮೋದ್ಧಾರಕ್ಕೆ ದಾರಿಯಾಡಿಸುವ ಪವಿತ್ರ ಕೇಂದ್ರಗಳಾಗಿ ರೂಪಿಸುವ ಕನಸನ್ನು ಕಂಡರು. ದೇವಸ್ಥಾನಗಳು ಅಧ್ಯಯನ, ಜ್ಞಾನಾರ್ಜನೆ ಮತ್ತು ಮೌಲ್ಯಬೆಳೆಸುವ ಸಂಸ್ಕೃತಿಕ ವೇದಿಕೆಗಳಾಗಬೇಕು ಎಂಬುದು ಗುರುಗಳ ಮಹದ್ಭಾವನೆ. ಉತ್ತಮ ಶಿಕ್ಷಣ ಪಡೆದವರು ಮಾತ್ರ […]

Read More

ಪ್ರೀಮಿಯರ್ ಲೀಗ್ ಕ್ರಿಕೆಟ್-ಯುವವಾಹಿನಿ(ರಿ.)ಬಂಟ್ವಾಳ ಘಟಕ

ನವೆಂಬರ್ 22 ಹಾಗೂ 23ರಂದು ಬಂಟ್ವಾಳ ಭಂಡಾರಿಬೆಟ್ಟು ಎಸ್‌ವಿ‌ಎಸ್ ಶಾಲಾ ಮೈದಾನದಲ್ಲಿ, ಘಟಕದ ಆಶ್ರಯದಲ್ಲಿ, ಸೇವಾ ಚಟುವಟಿಕೆಗಳಿಗೆ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಮಟ್ಟದ 12 ತಂಡಗಳೊಂದಿಗೆ ಆಯೋಜಿಸಲ್ಪಟ್ಟ ಬೈದ್ಯಶ್ರೀ ಪ್ರೀಮಿಯರ್ ಲೀಗ್ ಬಿಲ್ಲವ ಕ್ರಿಕೆಟ್ ಪಂದ್ಯಾಟದಲ್ಲಿ ನಾಗೇಶ್ ಪೂಜಾರಿ ಏಲಾಬೆ ಮಾಲಕತ್ವದ ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ ಮೂವತ್ತು ಸಾವಿರ ನಗದು ಹಾಗೂ ಬೈದಶ್ರೀ ಟ್ರೋಫಿ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಪೃಥ್ವಿರಾಜ್ ಮಣಿಹಳ್ಳ ಮಾಲಕತ್ದದ ಬಿರುವೆರ ಕನಸು ಮಣಿಹಳ್ಳ ದ್ವೀತೀಯ ಪ್ರಶಸ್ತಿ, ವಿಕ್ರಮ್ ಶಾಂತಿ ಕೆರೆಕೋಡಿಗುತ್ತು ಮಾಲಕತ್ದದ […]

Read More

ಗುರುತತ್ವವಾಹಿನಿ ಮಾಲಿಕೆ 61 ಕಾರ್ಯಕ್ರಮ-ಯುವವಾಹಿನಿ (ರಿ.) ಬಂಟ್ವಾಳ ಘಟಕ

ದಿನಾಂಕ 27/11/2025 ನಾರಾಯಣಗುರುಗಳು ಮನುಕುಲದ ಬೆಳಕು : ದಿನೇಶ್ ಸುವರ್ಣ ರಾಯಿ ಬ್ರಹ್ಮಶ್ರೀ ನಾರಾಯಣಗುರುಗಳು ಮಾನವತೆಯ ಜ್ಯೋತಿ. ಅಂಧಕಾರ, ಅಸಮಾನತೆ, ಅಹಂಕಾರ ಮತ್ತು ಅಜ್ಞಾನ ರಾತ್ರಿಗಳಲ್ಲಿ ಅವರು ಬಂದು “ಒಂದು ಜಾತಿ, ಒಂದು ಧರ್ಮ, ಒಂದು ದೇವರು ” ಎನ್ನುವ ಬೆಳಕಿನ ದೀಪ ಹಚ್ಚಿದರು. ಜ್ಞಾನದ ಬೆಳಕು, ಸಮಾನತೆಯ ಬೆಳಕು, ಪ್ರೀತಿಯ ಬೆಳಕು ನೀಡಿದ ಗುರುಗಳು ಮನುಕುಲದ ದಾರಿದೀಪದ ಬೆಳಕು ನೀಡಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು ಅವರು […]

Read More

ಸಂಗೀತ ಸ್ಪರ್ಧೆ-ಯುವವಾಹಿನಿ(ರಿ.)ಮಂಗಳೂರು ಘಟಕ

25-11-2025 ಸಂಗೀತ ಎಂಬುದು ಮನಸ್ಸುಗಳನ್ನು ಜೋಡಿಸುವ ಶಕ್ತಿ, ಜನರನ್ನು ಒಗ್ಗೂಡಿಸುವ ಶಕ್ತಿ ಹಾಗೂ ನಮ್ಮ ಮನಸ್ಸಿನ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುವ ಒಂದು ಕಲೆಯಾಗಿದೆ ಎಂದು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ದೀಕ್ಷಿತ್ ಅತ್ತಾವರ ಹೇಳಿದರು. ಅವರು ಘಟಕದ ಆಶ್ರಯದಲ್ಲಿ ನಡೆದ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆಯೊoದಿರುತ್ತದೆ ಅಂತಹ ಪ್ರತಿಭೆಗಳನ್ನು ಮುನ್ನೆಲೆಗೆ ತರಲು ಮಂಗಳೂರು ಘಟಕವೂ […]

Read More

ಯುವವಾಹಿನಿ ಅಡ್ವೆ ಘಟಕದ ಅಧ್ಯಕ್ಷರಾಗಿ ಪ್ರಸಾದ್ ಪಲಿಮಾರು ಆಯ್ಕೆ

ಅಡ್ವೆ: ಯುವವಾಹಿನಿ (ರಿ.) ಅಡ್ವೆ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಸಾದ್ ಪಲಿಮಾರು ಆಯ್ಕೆಯಾಗಿದ್ದಾರೆ 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು : ಪ್ರಸಾದ್ ಪಲಿಮಾರು ಪ್ರಥಮ ಉಪಾಧ್ಯಕ್ಷರು : ಆನಂದ ಸಾಲ್ಯಾನ್ ದ್ವಿತೀಯ ಉಪಾಧ್ಯಕ್ಷರು: ರವೀಂದ್ರ ಪೂಜಾರಿ ಕಾರ್ಯದರ್ಶಿ : ಅಕ್ಷಯ ಸುವರ್ಣ ಜೊತೆ ಕಾರ್ಯದರ್ಶಿ : ತಿಲಕ್ ಕುಮಾರ್ ಕೋಶಾಧಿಕಾರಿ: ರೋಹಿತ್ ಪಲಿಮಾರು ವ್ಯಕ್ತಿತ್ವ ವಿಕಸನ ನಿರ್ದೇಶಕರು : ಚಂದ್ರಿಕಾ ಪಿ. ಪೂಜಾರಿ ಕ್ರೀಡಾ ನಿರ್ದೇಶಕರು : ಕಿಶನ್, […]

Read More

ಅಧ್ಯಕ್ಷರು: ಸುನೀಲ್ ಸಾಲ್ಯಾನ್

ಯುವವಾಹಿನಿ ಪಣಂಬೂರು–ಕುಳಾಯಿ ಘಟಕದ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಆಯ್ಕೆ

ಪಣಂಬೂರು–ಕುಳಾಯಿ: ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು: ಸುನೀಲ್ ಸಾಲ್ಯಾನ್ ಪ್ರಥಮ ಉಪಾಧ್ಯಕ್ಷರು: ಹರಿಣಿ ಜಗದೀಶ್ ದ್ವಿತೀಯ ಉಪಾಧ್ಯಕ್ಷರು: ಯಶವಂತ್ ಕುಮಾರ್ ಕಾರ್ಯದರ್ಶಿ: ಸಂದೀಪ್ ಕೋಟ್ಯಾನ್ ಜೊತೆ ಕಾರ್ಯದರ್ಶಿ: ರೇಣುಕಾ ರವಿ ಕೋಶಾಧಿಕಾರಿ: ಯಶಸ್ವಿನಿ ವ್ಯಕ್ತಿತ್ವ ವಿಕಸನ ನಿರ್ದೇಶಕರು: ಕವಿತಾ ತುಕಾರಾಮ್ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ದೀಪಕ್ ಕ್ರೀಡಾ ನಿರ್ದೇಶಕರು: ಸುದೇಶ್ ಕುಮಾರ್ ಆರೋಗ್ಯ […]

Read More

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ-ಯುವವಾಹಿನಿ( ರಿ.) ಮುಲ್ಕಿ ಘಟಕ

ದಿನಾಂಕ 04-09-2025ರಂದು ನಾರಾಯಣ ಗುರು ವಿದ್ಯಾ ಸಂಸ್ಥೆ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ವಿನಯ್ ಕುಮಾರ್ ಮಟ್ಟು ವಹಿಸಿದ್ದರು. ಶಾಲಾ ಸಂಚಾಲಕರಾದ ಹರೀoದ್ರ ಸುವರ್ಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಳವೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಸಂಸ್ಕಾರಯುತರನ್ನಾಗಿ ಮಾಡುವ ಕಾರ್ಯ ಅಭಿನಂದನೀಯ ಎಂದರು. ಮುಖ್ಯ ಅತಿಥಿಗಳಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರು ಲೋಕೇಶ್ ಕೋಟ್ಯಾನ್, ಶಾಲಾ ಕಾರ್ಯದರ್ಶಿ, ಬಾಲಚಂದ್ರ ಸನಿಲ್, ಮಂಜುಳ ಕೆ. ವಿ., ಯತೀಶ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!