19-04-2026, 5:30 PM
ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಅಪರೂಪದ ಸುಸಂದರ್ಭಕ್ಕೆ ಸಂಘಟನೆ ಸಾಕ್ಷಿಯಾಯಿತು. ನಿಸ್ವಾರ್ಥ ಸೇವೆ: ಸಂಘಟನೆಯ ಬಲವರ್ಧನೆಗಾಗಿ ಹತ್ತಾರು ಯೋಜನೆಗಳನ್ನು ರೂಪಿಸಿ, ಯುವಶಕ್ತಿಗೆ ಪ್ರೇರಣಾದಾಯಕ ನಾಯಕತ್ವ ನೀಡಿದ ಗಣ್ಯರ ಶ್ರಮ ಅಪಾರ. ಪರಿಶ್ರಮ ಮತ್ತು ತ್ಯಾಗ: ಈ ಹಿರಿಯ ಚೇತನಗಳ ನಿಸ್ವಾರ್ಥ […]
Read More
19-04-2026, 2:00 PM
ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ ಅವರನ್ನು ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಯುವಸಿಂಚನ ಪತ್ರಿಕೆ ಬಿಡುಗಡೆಇದೇ ಸಂದರ್ಭದಲ್ಲಿ ಯುವವಾಹಿನಿ ಮುಖವಾಣಿ ‘ಯುವಸಿಂಚನ’ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟ ಅವರು, ದೇಶದ ಸಾಂಸ್ಕೃತಿಕ ವೈಭವದ […]
Read More
01-03-2026, 6:00 PM
ಉಡುಪಿ : ಭಾರತೀಯ ಸಂಸ್ಕ್ರತಿಯಲ್ಲಿ ಕುಟುಂಬ ವ್ಯವಸ್ಥೆಯೆ ಪ್ರಧಾನವಾದುದು. ರಾಷ್ಟ್ರಭಕ್ತಿ, ಶ್ರದ್ಧೆ, ಒಕ್ಕೂಟ ವ್ಯವಸ್ಥೆ, ಸಾಮಾಜಿಕ ಮೌಲ್ಯಗಳಿಗೆ ಸದಾ ಪ್ರೇರಣೆಗಳಾಗುವುದು ಕುಟುಂಬ ವ್ಯವಸ್ಥೆಯಿಂದ. ಆಧುನಿಕ ದಿನಮಾನದಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿ ಕುಟುಂಬದ ಉಳಿವಿಗೆ ಹೆಚ್ಚು ಸಹಕಾರಿಯಾಗುವುದು ಸಂಘಟನಾ ಸಹಭಾಗಿತ್ವ ಎಂದು ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ತಾರಾನಾಥ ಪೂಜಾರಿ ಅಭಿಪ್ರಾಯಪಟ್ಟರು. ಯುವವಾಹಿನಿಯಂತಹ ಸಂಘಟನೆ ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಮಾತೃವಾತ್ಸಲ್ಯದ ರೀತಿಯಲ್ಲಿ ಸದಸ್ಯರನ್ನು ಪ್ರೇರೇಪಿಸುತ್ತಾ ಸಂಘಟನೆ ಮತ್ತು ಸೇವಾ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವುದು ಶ್ಲಾಘನೀಯ ಎಂದರು.ರಜತ ಮಹೋತ್ಸವದ ಸವಿ […]
Read More
01-03-2026, 1:00 PM
ಶ್ರೀಯುತರು ಉಡುಪಿ ಯುವವಾಹಿನಿಯ ರಜತ ಸಂಭ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳು ಕರಮುಕ್ಕು ದೇಗುಲದಲ್ಲಿ ಪ್ರತಿಷ್ಠಾಪಿಸಿದ ದೀಪದ ಮಾದರಿಯನ್ನು ಪ್ರಜ್ವಲಿಸಿ ಸಂಸ್ಥೆಯು ನಡೆಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಜತ ಸಂಭ್ರಮ ಸಂಚಾಲಕರಾದ ರಘುನಾಥ್ ಮಾಬಿಯಾನ್ ಗೌರವ ಉಪಸ್ಥಿತರಿದ್ದರು. ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಸಂಗ್ರಹಿಸಿದ ‘ಗುರುವಾಣಿ’ ಕೃತಿಯನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ […]
Read More
28-02-2026, 6:00 PM
ಉಡುಪಿ : ಸಮುದಾಯದ ಉನ್ನತಿಗೆ ಭೌದ್ದಿಕ ವಿಕಸನದೊಂದಿಗೆ ಸಾಂಸ್ಕೃತಿಕ ವಿಚಾರಧಾರೆಗಳು ಅವಶ್ಯಕ. ಈ ನಿಟ್ಟಿನಲ್ಲಿ ಯುವವಾಹಿನಿಯು ಯುವ ಮನಸ್ಸುಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಸೃಜನಶೀಲತೆಯನ್ನು ಸದ್ವಿನಿಯೋಗಪಡಿಸುತ್ತಿದೆ ಎಂದು ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಮುದ್ರಾಡಿ ಮಂಜುನಾಥ ಪೂಜಾರಿ ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಪ್ರಜ್ಞೆಗಳು ವ್ಯಕ್ತಿಗಳಲ್ಲಿ ಸೃಜನಶೀಲತೆಯನ್ನು ಸೃಷ್ಟಿಸುತ್ತಿದ್ದು, ಉತ್ತಮ ವಿಚಾರಧಾರೆಗಳು, ನೈಜ್ಯ ಇತಿಹಾಸಗಳ ಸಂದೇಶವನ್ನು ಬಿತ್ತರಿಸುವಲ್ಲಿ ನಿರಂತರ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಯುವವಾಹಿನಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಯತರು ದಿನಾಂಕ 28-02-2062,ಶನಿವಾರ ,ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ […]
Read More
28-02-2026, 12:30 PM
ಉಡುಪಿ : ಸದಭಿರುಚಿಯ ಚಟುವಟಿಕೆಗಳು ಪ್ರತಿಭಾ ಪರಿಶೋಧದ ಜೊತೆಗೆ ಸ್ನೇಹ,ಸೌಹಾರ್ದ ಸಂಬಂಧವನ್ನೂ ಸಾಧ್ಯವಾಗಿಸುತ್ತದೆ. ಸಂಸ್ಕೃತಿ,ಸಂಸ್ಕಾರಗಳನ್ನು ಪ್ರಸ್ತುತಪಡಿಸುವುದರಿಂದ ಸಮುದಾಯದ ಸಂವರ್ಧನೆಗೂ ಕಾರಣವಾಗುತ್ತದೆ. ವಿವಿಧ ಆಸಕ್ತಿಗಳ ಜೊತೆಗೆ ಸಜ್ಜುಗೊಳ್ಳುವ ಸಾಂಸ್ಕೃತಿಕ ಪ್ರಕಾರಗಳು ಅನ್ಯೋನ್ಯತೆಯ ಪ್ರತೀಕವಾಗಿ ಸಂಘಟನೆಗೆ ಶಕ್ತಿ ತುಂಬುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು. ಶ್ರೀಯುತರು ದಿನಾಂಕ 28-02-2026,ಶನಿವಾರದಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿದ ಉಡುಪಿ ಘಟಕದ ರಜತ ಸಂಭ್ರಮ ಪ್ರಯುಕ್ತ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಸಂಘಗಳಿಗೆ ಆಯೋಜಿಸಲಾದ ಸಾಂಸ್ಕೃತಿಕ ಸ್ಪರ್ಧಾ […]
Read More
25-01-2026, 8:30 PM
ಮಂಗಳೂರು : ಸೇವಾ ಮನೋಭಾವ, ಸಂಘಟನಾ ಶಕ್ತಿ ಮತ್ತು ಸಮಾಜಮುಖಿ ಚಿಂತನೆಯ ದಶಕದ ಪಯಣವನ್ನು ಸ್ಮರಿಸುವಂತೆ, ಯುವವಾಹಿನಿ (ರಿ.) ಕಂಕನಾಡಿ ಘಟಕದ ದಶಮಾನೋತ್ಸವ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ 25-01-2026ರ ಆದಿತ್ಯವಾರ ಕಂಕನಾಡಿ ಗರೋಡಿ ಸಮೀಪದ ಸಮೃದ್ಧಿ ಭವನದಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಮಾತನಾಡಿ,“ಹಿರಿಯರು ನಡೆದು ಬಂದ ತತ್ವಾದರ್ಶಗಳೇ ಸಂಘಟನೆಯ ನೆಲೆ. ಆ ಮಾರ್ಗದರ್ಶನವಿಲ್ಲದೆ ಹೊಸಬರ ಹೆಜ್ಜೆಗಳು […]
Read More
25-01-2026, 5:30 PM
ಮಂಗಳೂರು: ಸಂಪರ್ಕ ವೆಬ್ಸೈಟ್ (samparka.yuvavahini.in) ಮೂಲಕ ಯುವವಾಹಿನಿ ಸಂಸ್ಥೆಯ ಎಲ್ಲಾ ಹಣಕಾಸು ರಶೀದಿಗಳನ್ನು ಆನ್ಲೈನ್ ಮೂಲಕ ಅಪ್ಡೇಟ್ ಮಾಡುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.ಈ ಹಿನ್ನಲೆಯಲ್ಲಿ ಪ್ರತಿ ಸದಸ್ಯರು ಹಾಗೂ ದಾನಿಗಳು ತಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ (OTP) ಬಳಸಿ ತಮ್ಮ ರಶೀದಿಗಳನ್ನು ಆನ್ಲೈನ್ ಮೂಲಕ ವೀಕ್ಷಿಸುವ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಅಳವಡಿಸಲಾಗಿದೆ. ಆನ್ಲೈನ್ ಮೂಲಕ ಅಪ್ಡೇಟ್ ಆಗಿರುವ ಪ್ರಥಮ ರಶೀದಿಯ ಮುದ್ರಿತ ಪ್ರತಿಯನ್ನು (Hard Copy) ದಿನಾಂಕ 25.01.2026 ರಂದು ನಡೆದ ಯುವವಾಹಿನಿ […]
Read More
07-01-2026, 1:49 PM
ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಸಾಮಾಜಿಕ, ಸಂಘಟನಾ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ತೋರಿದ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಈ ಪುರಸ್ಕಾರ ಯುವವಾಹಿನಿಗೆ ಹೆಮ್ಮೆಯ ವಿಷಯವಾಗಿದ್ದು, ಸಂಘಟನೆಯ ಮಹಿಳಾ ಶಕ್ತಿಗೆ ಸ್ಫೂರ್ತಿಯಾಗಿದೆ. ಯುವವಾಹಿನಿ (ರಿ.) ಕೇಂದ್ರ ಸಮಿತಿಯು […]
Read More