
22-06-2026, 5:00 PM
ನಮಸ್ಕಾರ……ಮಳೆಗಾಲದ ಆಗಮನದೊಂದಿಗೆ ಪ್ರಕೃತಿ ಹೇಗೆ ಮೈದುಂಬಿ ಹಸಿರಾಗುತ್ತದೆಯೋ, ಹಾಗೆಯೇ ‘ಯುವಸಿಂಚನ’ ಪತ್ರಿಕೆಯ ಎರಡನೇ ಸಂಚಿಕೆಯೂ ನವಚೈತನ್ಯದೊಂದಿಗೆ ನಿಮ್ಮ ಕೈ ಸೇರುತ್ತಿದೆ. ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಆಶೀರ್ವದಿಸಿದ ಓದುಗ ಪ್ರಭುಗಳಿಗೆ ಹಾಗೂ ಶ್ರಮಿಸಿದ ಎಲ್ಲಾ ಘಟಕಗಳಿಗೆ ನನ್ನ ಅನಂತ ವಂದನೆಗಳು. ಅಕ್ಷರ ಎಂಬುದು ಕೇವಲ ಕಪ್ಪು ಇಂಕಿನ ಗುರುತಲ್ಲ; ಅದು ಬದಲಾವಣೆಯ ಬೀಜ. ಬಿತ್ತಿದ ಪ್ರತಿ ಅಕ್ಷರವೂ ಯುವ ಮನಸ್ಸುಗಳಲ್ಲಿ ವಿಚಾರದ ಮೊಳಕೆಯೊಡೆಯಬೇಕು ಎಂಬುದು ನಮ್ಮ ಆಶಯ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೈಗಳಿಗೆ ಅಕ್ಷರಗಳೇ ಆಯುಧ. ಈ ನಿಟ್ಟಿನಲ್ಲಿ […]
Read More

22-06-2026, 5:00 PM
ಯುವವಾಹಿನಿ ಕುಟುಂಬದ ಅತ್ಮೀಯ ಸದಸ್ಯರೆ, ‘ಯುವಸಿಂಚನ’ದ ಚೊಚ್ಚಲ ಸಂಚಿಕೆಗೆ ನೀವು ತೋರಿದ ಅತೀವ ಪ್ರೀತಿ, ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿವೆ. ಅದೇ ಲವಲವಿಕೆ ಮತ್ತು ಆತ್ಮವಿಶ್ವಾಸದೊಂದಿಗೆ, ಮಲೆನಾಡ ಮಳೆಯ ಸಿಂಚನದಂತೆ ಹಿತ ನೀಡುವ ಈ ದ್ವಿತೀಯ ಸಂಚಿಕೆಯನ್ನು ನಿಮ್ಮ ಕೈಗಿಡಲು ಹೆಮ್ಮೆ ಎನಿಸುತ್ತಿದೆ. ಯುವವಾಹಿನಿಯ ಪಯಣವು ಕೇವಲ ಕಾರ್ಯಕ್ರಮಗಳ ಸರಮಾಲೆಯಲ್ಲ; ಅದು ವ್ಯಕ್ತಿತ್ವವನ್ನು ಪಳಗಿಸುವ, ಸಮಾಜವನ್ನು ಭಾವನಾತ್ಮಕವಾಗಿ ಬೆಸೆಯುವ ಮತ್ತು ಹೊಸ ಭರವಸೆಯ ಹಾದಿಗಳನ್ನು ಸೃಷ್ಟಿಸುವ ಒಂದು ನಿರಂತರ ಜ್ಞಾನಯಜ್ಞ. ಬಂಟ್ವಾಳ […]
Read More

22-06-2026, 5:00 PM
ತಲ್ಲಣ, ಹೋರಾಟ ಯಾರಿಗಿಲ್ಲ ಹೇಳಿ ?. ಆದರೆ ಇಲ್ಲಿ ಯೋಚಿಸ ಹೊರಟಿರುವುದು ಮಧ್ಯಮ ವರ್ಗದ ಸುತ್ತ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ನೋಡಿದರೆ ಇಲ್ಲಿ ಇರುವ ದೊಡ್ಡ ಗುಂಪು ಮಧ್ಯಮ ವರ್ಗದ್ದು. ಬಡವರು ಅಥವಾ ಕಡು ಬಡವರು ಇಲ್ಲ ಎಂದಲ್ಲ .ಅವರ ಸಂಖ್ಯೆ ವಿರಳ. ಬಡವರಿದ್ದರೂ ನೋಡುವವರ ಕಣ್ಣಿಗೆ ಮಧ್ಯಮ ವರ್ಗದಂತೆಯೆ ಕಾಣುತ್ತಾರೆ. ಶ್ರೀಮಂತರೆಂದು ಕಾಣ ಬಯಸುವವರು ಅಥವಾ ಕಾಣುವವರು ಒಳ ಹೊಕ್ಕರೆ ಮಧ್ಯಮ ವರ್ಗದವರೇ ಆಗಿರುತ್ತಾರೆ. ಉತ್ತರ ಕರ್ನಾಟಕಕ್ಕೊ; ಉತ್ತರ ಭಾರತಕ್ಕೊ ಹೋದರೆ […]
Read More

18-06-2026, 8:00 PM
ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯ ಅಂಚೆ ರವಾನೆ ಪೂರ್ವ ಸಿದ್ಧತಾ ಕಾರ್ಯವು ಇಂದು ಯಶಸ್ವಿಯಾಗಿ ನಡೆಯಿತು. ಚಂದಾದಾರರು ಹಾಗೂ ಹಿತೈಷಿಗಳಿಗೆ ಯುವಸಿಂಚನ ಪತ್ರಿಕೆಯನ್ನು ತಲುಪಿಸುವ ಉದ್ದೇಶದಿಂದ ಸುಮಾರು 4,000 ಪತ್ರಿಕೆಗಳಿಗೆ ವಿಳಾಸ ಅಂಟಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಕಾರ್ಯದಲ್ಲಿ ಯುವವಾಹಿನಿ ಮಂಗಳೂರು ಘಟಕ, ಯುವವಾಹಿನಿ ಮಂಗಳೂರು ಮಹಿಳಾ ಘಟಕ ಹಾಗೂ ಯುವಸಿಂಚನ ಸಂಪಾದಕೀಯ ಮಂಡಳಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಹಕಾರ ನೀಡಿದರು.
Read More

14-06-2026, 1:00 PM
ಬೆಂಗಳೂರು : ಯುವವಾಹಿನಿಯ ಅಧಿಕೃತ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯನ್ನು ಆರ್ಯ ಈಡಿಗ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ಡಾ. ನಳಿನಾಕ್ಷಿ ಸಣ್ಣಪ್ಪ ಅವರು ಬಿಡುಗಡೆಗೊಳಿಸಿದರು. ದಿನಾಂಕ 14-06-2026ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂನಲ್ಲಿ ನಡೆದ ಯುವವಾಹಿನಿ ಬೆಂಗಳೂರು ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಂಚಿಕೆ ಬಿಡುಗಡೆ ನೆರವೇರಿತು. ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ನಳಿನಾಕ್ಷಿ ಸಣ್ಣಪ್ಪ ಅವರು ಯುವವಾಹಿನಿ ಸಂಸ್ಥೆಯ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, […]
Read More

19-04-2026, 6:00 PM
ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ 2026 ರ ಕವನ ಸ್ಪರ್ಧೆಯಲ್ಲಿ ಯುವವಾಹಿನಿ ಕೊಲ್ಯ ಘಟಕದ ಸದಸ್ಯರು ಹಾಗೂ ಯುವಸಿಂಚನ ಸಂಪಾದಕ ಮಂಡಳಿಯ ಸದಸ್ಯರು ಲತೀಶ್ ಎಂ ಸಂಕೊಳಿಗೆ ಇವರ ಬಿರ್ವೆರೆ ಚೀಯನ ಕವನ ಪ್ರಥಮ ಬಹುಮಾನ ಪಡೆಯಿತು ಡೆನ್ನ ಡೆನ್ನ ಡೆನ್ನ ಡೆನ್ನ ಡೆನ್ನ ಡೆನ್ನ ಡೆನ್ನನಯುವವಾಹಿನಿ ಸಂಸಾರೊದ ಬಾರಿ ಗೌಜಿದ ಆಯನ|| ಅಪ್ಪೆಬೂಡುದ ಕೊಡಿಯಡಿಟ್ಪೇರ್ ಬೆಲ್ಲದ ಪಾತೆರಮುಪ್ಪತ್ತೈನ್ ಎಗ್ಗೆ ಅರಳ್ ದ್ಸಿರಿತುಪ್ಪೆ ದಿಂಜುನ ಐಸಿರ || ತುಳುವ ನೆಲತ ಬಿರ್ವ ಕುಲತಉಡಲ ಕಲೆಕುಲ […]
Read More

19-04-2026, 2:00 PM
ಬಂಟ್ವಾಳ : ಎಪ್ರಿಲ್ 19 ರಂದು ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ ಸಮಾರಂಭದಲ್ಲಿ ಯುವವಾಹಿನಿಯ ಮುಖವಾಣಿ ‘ಯುವಸಿಂಚನ’ದ ಎಪ್ರಿಲ್ ಸಂಚಿಕೆಯನ್ನು ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟ ಅವರು ಬಿಡುಗಡೆಗೊಳಿಸಿದರು, ದೇಶದ ಸಾಂಸ್ಕೃತಿಕ ವೈಭವದ ಮಹತ್ವವನ್ನು ಒತ್ತಿ ಹೇಳಿ, ಯುವಜನತೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು. ಯುವವಾಹಿನಿ ಸಂಸ್ಥೆಯು ಈ ನಿಟ್ಟಿನಲ್ಲಿ ಕೈಗೊಂಡಿರುವ ಸಾಂಸ್ಕೃತಿಕ ಚಟುವಟಿಕೆಗಳು ಶ್ಲಾಘನೀಯವಾಗಿದ್ದು, ಸಮಾಜದಲ್ಲಿ ಉತ್ತಮ […]
Read More

19-04-2026, 1:30 PM
ಯುವವಾಹಿನಿಯ 38 ವರ್ಷಗಳ ಸಾರ್ಥಕ ಪಯಣದ ಬಳಿಕ, 39ನೇ ಅಧ್ಯಕ್ಷನಾಗಿ ಈ ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವಕಾಶ ನನಗೆ ದೊರೆತಿರುವುದು, ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣವಾಗಿದೆ. ಇದು ಕೇವಲ ಸ್ಥಾನಮಾನವಲ್ಲ, ಇದು ನಂಬಿಕೆಯ ಪ್ರತಿಬಿಂಬ, ಹೊಣೆಗಾರಿಕೆಯ ಆಳ, ಮತ್ತು ಸೇವಾ ಸಂಕಲ್ಪದ ಹೊಸ ಅಧ್ಯಾಯ. 80ರ ದಶಕದಲ್ಲಿ ದೂರದರ್ಶಿ ಯುವಕರ ಕೈಚಳಕದಿಂದ ರೂಪುಗೊಂಡ ಈ ಸಂಸ್ಥೆ, ಇಂದು ಲೋಕಮಾನ್ಯತೆಯ ದಿಕ್ಕಿನಲ್ಲಿ ಸಾಗುತ್ತಿರುವುದು ಹಿರಿಯ ಸದಸ್ಯರ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ದೃಢಚಿತ್ತತೆಯ ದ್ಯೋತಕವಾಗಿದೆ. ಕಾಲ ಬದಲಾಗುತ್ತಿದ್ದಂತೆ […]
Read More

19-04-2026, 1:30 PM
ಯುವಸಿಂಚನ ಪತ್ರಿಕೆಯ 2025–26ನೇ ಸಾಲಿನ ಪ್ರಥಮ ಆವೃತ್ತಿಯನ್ನು ಬಿಡುಗಡೆಗೊಂಡಿದೆ. ಯುವವಾಹಿನಿಯ 35 ಘಟಕಗಳು ನಿರಂತರ ಕ್ರಿಯಾಶೀಲತೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿರುವುದು ಅಪಾರ ಸಂತೋಷದ ವಿಷಯ. ಈ ಕಾರ್ಯಚಟುವಟಿಕೆಗಳು ಸಂಸ್ಥೆಯ ಚೈತನ್ಯ ಮತ್ತು ಬದ್ಧತೆಯ ಪ್ರತಿಬಿಂಬವಾಗಿವೆ. ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಿ ಸಹಕರಿಸಿದಕ್ಕಾಗಿ ಅಭಿನಂದನೆಗಳು. ಯುವಸಿಂಚನಕ್ಕೆ ಲೇಖನ, ಕವನ, ಕಥೆಗಳನ್ನು ರಚಿಸಿ ಕೊಡುಗೆ ನೀಡಿದ ಎಲ್ಲಾ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು. ಸಂಪಾದಕ ಬಳಗದ ಸಹಕಾರಕ್ಕೂ ಧನ್ಯವಾದಗಳು. ಯುವವಾಹಿನಿಯ ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ […]
Read More

05-01-2026, 5:41 PM
ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಯುವಸಿಂಚನ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿಯ 2025–26ನೇ ಸಾಲಿನ ಪ್ರಥಮ ಸಭೆಯು 2026ರ ಜನವರಿ 5ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಒಂದು ವರ್ಷದ ಪತ್ರಿಕಾ ಹಾಗೂ ಜಾಲತಾಣ ಕಾರ್ಯಚಟುವಟಿಕೆಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಚಿಂತನೆ, ಚರ್ಚೆ ಮತ್ತು ನಿರ್ಧಾರಗಳೊಂದಿಗೆ ಸಭೆ ಅರ್ಥಪೂರ್ಣವಾಗಿ ಜರುಗಿತು. 35 ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ ಪ್ರತಿಯೊಂದು ಘಟಕದ ಚಟುವಟಿಕೆಗಳಿಗೂ ಸಮಾನ ಪ್ರಚಾರ ದೊರಕಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ ಕೇಂದ್ರ ಸಮಿತಿಯ […]
Read More