19-09-2025, 7:45 AM
ಸಂಪರ್ಕದ ನಿಟ್ಟಿನಲ್ಲಿ ಕುಟುಂಬ ಸಂಪರ್ಕ ನಿರ್ದೇಶಕರಾದ ಸುಜಾತ ರವರ ಸಂಚಾಲಕತ್ವದಲ್ಲಿ ದಿನಾಂಕ 11-08-2025 ರಂದು ಸು ಪ್ರಮ್ ಸೋ ಚಲನಚಿತ್ರ ವೀಕ್ಷಣೆಗೆ ಹೋಗಲಾಗಿತ್ತು. 51 ಜನ ಸದಸ್ಯರ ತಂಡ ಚಲನಚಿತ್ರ ವೀಕ್ಷಣೆ ಮಾಡಿದೆವು.
Read More
16-09-2025, 7:17 PM
ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ 171 ನೇ ಜನ್ಮದಿನದ ಆಚರಣೆ ದಿನಾಂಕ 07-09-2025 ನೇ ಆದಿತ್ಯವಾರ ದಂದು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ನಲ್ಲಿ ನಡೆಯಿತು ಹಿರಿಯರಾದ ವಿಶಾಲಾಕ್ಷಿ.ಎಸ್ ರವರು ಗುರುಗಳಿಗೆ ದೀಪ ಬೆಳಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಪ್ರಥಮ ಉಪಾಧ್ಯಕ್ಷರಾದ ಗೀತಾ ವಸಂತ್ ವಹಿಸಿದ್ದರು ಘಟಕದ ಸದಸ್ಯರಾದ ಚಿತ್ರ ಶ್ರೀ ರವರು ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ ಬಗ್ಗೆ ಮಾಹಿತಿಯನ್ನು ನೀಡಿದರು. ಸೂಪರ್ ವೈಸರ್ ವಿದ್ಯಾ ರವರು ಮಾತನಾಡಿ ಘಟಕದ ಸಾಮಾಜಿಕ ಕಾಳಜಿಯನ್ನು […]
Read More
15-09-2025, 3:55 PM
ದಿನಾಂಕ 14-08-2025 ನೇ ಗುರುವಾರ ಬೆಳಿಗ್ಗೆ ಘಟಕದ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಪಂಜಿಮೊಗರು ಇವರ ಸಹಯೋಗದೊಂದಿಗೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಯುವವಾಹಿನಿ ( ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕೂಳೂರು ಘಟಕವು ಕಳೆದ 10 ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ವಿತರಣೆ ಮಾಡಿಕೊಂಡು ಬರುತ್ತಿದೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹಿಸುವ ಯುವವಾಹಿನಿ ಕೂಳೂರು ಘಟಕದ […]
Read More
15-09-2025, 3:41 PM
ದಿನಾಂಕ 15-08-2025 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಜೋಟ್ಟಿ ಅಂಗನವಾಡಿ ಕೇಂದ್ರದಲ್ಲಿ ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅದ್ಯಕ್ಷರು,ಸದಸ್ಯರು ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Read More
14-09-2025, 5:36 PM
61 ನೇ ಮನೆ ಮನೆ ಭಜನೆಯು ಘಟಕದ ಸದಸ್ಯರಾದ ಶ್ವೇತಾ ಲತೀಶ್ ರವರ ಅಮ್ಮನ ಮನೆಯಲ್ಲಿ ದಿನಾಂಕ 18-08-2025 ನೇ ಸೋಮವಾರ ದಂದು ನೆರವೇರಿತು. ಮನೆ ಮನೆ ಭಜನೆಯಲ್ಲಿ ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು.
Read More
13-08-2025, 2:24 PM
ಯುವವಾಹಿನಿ( ರಿ.) ಕೂಳೂರು ಘಟಕ ವಿಶ್ವ ಮಹಿಳಾ ದಿನಾಚರಣೆ ದಿನಾಂಕ 12-03-2025 ಶ್ರೀಮತಿ ವಾಣಿ, ಮುಖ್ಯೋಪಾಧ್ಯಾಯಿನಿ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು* ಕಾರ್ಯಕ್ರಮ ಉದ್ಘಾಟಿಸಿ ಮಹಿಳಾ ದಿನಾಚರಣೆಯ ಅಗತ್ಯತೆ ಬಗ್ಗೆ ಮಾತನಾಡಿದರು.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಲತೀಶ್ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕರಾದ ಶ್ರೀಮತಿ ಕವಿತಾ ಅಡ್ವೆ ಮಾತನಾಡಿ ಯುವವಾಹಿನಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಇದ್ದು, ಉತ್ತಮ ಪ್ರೋತ್ಸಾಹ […]
Read More
26-11-2024, 6:32 AM
ಕೂಳೂರು: ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ 17-11-2024ರ ಆದಿತ್ಯವಾರದಂದು ಬೆಳಗ್ಗೆ 5.30 ಗಂಟೆಗೆ ಸರಿಯಾಗಿ ಕುಟುಂಬ ಸಂಪರ್ಕ ನಿರ್ದೇಶಕರಾದ ಶ್ರೀಮತಿ ಸುಮಾ ಶಿವು ಇವರ ಸಂಚಾಲಕತ್ವದಲ್ಲಿ ನಿಗದಿ ಪಡಿಸಿದ ಬಸ್ಸಿನ ಮುಂದೆ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಮೂಲಕ ಕ್ಷೇತ್ರ ದರ್ಶನಕ್ಕೆ ಚಾಲನೆ ನೀಡಿದರು. ಸುಮಾರು 87 ಜನರನ್ನು ಒಳಗೊಂಡ 2 ಬಸ್ ಬೆಳಗ್ಗಿನ ಜಾವ 5.30 ಗಂಟೆಗೆ ಸರಿಯಾಗಿ ಕುಳೂರಿನಿಂದ ಹೊರಟು 6.15 ಕ್ಕೆ ತಲಪಾಡಿ ತಲುಪಿತು. ಅಲ್ಲಿ ನಿಗದಿ […]
Read More
15-11-2024, 6:07 PM
ಕೂಳೂರು: ದೇವರಿಗೆ ಮತ್ತು ಮನುಷ್ಯರಿಗೆ ಅತೀ ಹತ್ತಿರದ ಸಂಬಂಧ ಅಂದರೆ ಭಜನೆಯೇ ಹೊರತು ಬೇರೇನೂ ಅಲ್ಲ. ಭಜನೆಯಿಂದ ಅದೆಷ್ಟೋ ಜನರ ಆರೋಗ್ಯ ಸುಧಾರಿಸುತ್ತದೆ. ಭಜನೆ ಎನ್ನುವುದು ಮನುಷ್ಯನಿಗೆ ಆನಂದ, ನೆಮ್ಮದಿ, ಶಾಂತಿ ಕೊಡುವ ಸಂಜೀವಿನಿ ಇದ್ದಂತೆ. ಯುವವಾಹಿನಿ (ರಿ) ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನಾ ಕಾರ್ಯಕ್ರಮದ 54ನೇ ಭಜನಾ ಕಾರ್ಯಕ್ರಮವು ಘಟಕದ ಮಾತೃ […]
Read More
26-10-2024, 5:19 AM
ಕೂಳೂರು : ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಹಬ್ಬವು ಎಲ್ಲರ ಮನ ಮನೆ ಬೆಳಗಿದಂತೆ ಬಡವರ ಬಾಳಿನಲ್ಲೂ ಬೆಳಕನ್ನು ತರಲಿ ಎಂಬ ಉದ್ದೇಶದಿಂದ ಯುವವಾಹಿನಿ (ರಿ) ಕೂಳೂರು ಘಟಕ ಕಳೆದ 9 ವರುಷಗಳಿಂದ ಅಶಕ್ತ ಕುಟುಂಬಗಳಿಗೆ ನೆರವಿನ ಆಶಾ ದೀಪ ಎಂಬ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದು ಪ್ರತಿ ವರ್ಷವೂ ಕಡು ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಹಬ್ಬವನ್ನು ಆಚರಿಸಲು ಬೇಕಾದ ಎಲ್ಲ ದಿನಸಿ ಸಾಮಾಗ್ರಿಗಳನ್ನು ನೀಡುತ್ತಾ ಬಂದಿದೆ. ಅದೇ ರೀತಿ ಈ ವರ್ಷವೂ ಕುಟುಂಬ ಸಂಪರ್ಕ ನಿರ್ದೇಶಕರಾದ […]
Read More