ದಿನಾಂಕ 30-10-2025 ನೇ ಗುರುವಾರ ಘಟಕದ ವತಿಯಿಂದ ಘಟಕದ ಸದಸ್ಯರಾದ ತುಕಾರಾಮ ಎಸ್ ಪೂಜಾರಿ ಮತ್ತು ಅನಿತಾ ತುಕಾರಾಮ್ ದಂಪತಿಗಳ ಮನೆಯಲ್ಲಿ ಜರುಗಿದ
ನಮ್ಮ ಮನೆ ಹಬ್ಬ ದೀಪಾವಳಿ, ಕತ್ತಲಿನಿಂದ ಬೆಳಕಿನೆಡೆಗೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತುಳುನಾಡಿನ ಹಿಂದಿನ ಆಚರಣೆಗಳ ವಿಶೇಷತೆ, ಮೂಲ ಅರ್ಥ, ನಮ್ಮ ಹಿರಿಯರು ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಿಕೊಂಡು ಬಂದಿದ್ದಾರೆ ಎಂಬುದರ ಬಗ್ಗೆ ವಿವರಿಸಿದರು. ತುಳುನಾಡಿನ ದೀಪಾವಳಿ ಎಂದರೆ ಅದು ಭೂಮಿ ತಾಯಿ, ಪ್ರಕೃತಿ ಸಂಬಂಧದ ಅರಿವು ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿತ್ತು ಎಂದರು. ಈಗಿನ ಕಾಲದಲ್ಲಿ ಯುವವಾಹಿನಿ ಕಾರ್ಯಕ್ರಮದಲ್ಲಿ ದೀಪಾವಳಿ ಆಚರಣೆ ಮಾಡಿರುವ ಬಗ್ಗೆ ಶ್ಲಾಘಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಘಟಕದ ಒಂದೊಂದು ಸದಸ್ಯರ ಮನೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ದೇವಿಕಾ ಟಿಂಬರ್ಸ್ ಮಾಲಕರಾದ ಮಧುಗೋಪಾಲನ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಅಭಿನಂದಿಸಲಾಯಿತು.
ಮಧು ಗೋಪಾಲನ್ ಅವರನ್ನು ಯುವವಾಹಿನಿ ಕೂಳೂರು ಘಟಕಕ್ಕೆ ನೀಡಿದ ಸಹಕಾರ ಗುರುತಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ನಡೆಸಲು ಅನುವು ಮಾಡಿಕೊಟ್ಟ ಮನೆಯ ಯಜಮಾನರಾದ ತುಕಾರಾಮ ಎಸ್ ಪೂಜಾರಿ, ಅನಿತಾ ತುಕಾರಾಮ್ ರವರನ್ನು ಅಭಿನಂದಿಸಲಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಹಾಗೂ ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರನ್ನು ಮನೆಯವರು ಸೇರಿ ಅಭಿಮಾನದಿಂದ ಸನ್ಮಾನಿಸಿದರು. ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ, ಮನೆ ಯಜಮಾನರಾದ ತುಕಾರಾಮ ಎಸ್ ಪೂಜಾರಿ, ಕಾರ್ಯಕ್ರಮ ಸಂಚಾಲಕರಾದ ಅನಿತಾ ತುಕಾರಾಮ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುಳುನಾಡಿನ ದೀಪಾವಳಿ ಆಚರಣೆಗಳಾದ ಎಣ್ಣೆ ಸ್ನಾನ, ಲಕ್ಷ್ಮೀ ಪೂಜೆ, ಗೋಪೂಜೆ, ಬಲೀಂದ್ರ ಪೂಜೆ, ದೀಪ ಬೆಳಗಿಸಿ ತುಳಸೀ ಪೂಜೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸದಸ್ಯರಿಂದ ದಾಂಡಿಯಾ ನೃತ್ಯ ಪ್ರದರ್ಶನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಅಧ್ಯಕ್ಷರು ಸ್ವಾಗತಿಸಿದರು. ಹರ್ಷಿತಾ, ಸೃಜನಿ ಪ್ರಾರ್ಥಿಸಿದರು. ಮಧುಶ್ರೀ ಪ್ರಶಾಂತ್ ಮತ್ತು ಲೋಕೇಶ್ ಪೂಜಾರಿ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕರಾದ ಅನಿತಾ ತುಕಾರಾಮ್ ವಂದಿಸಿದರು.


