ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 21ರಂದು ಮಂಗಳೂರು ಪುರಭವನದಲ್ಲಿ ನಡೆದ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಯುವವಾಹಿನಿಯ 38 ನೇ ವಾರ್ಷಿಕ ಸಮಾವೇಶದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಣೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರೇಖಾಗೋಪಾಲ್, ಪ್ರಥಮ ಉಪಾಧ್ಯಕ್ಷರಾಗಿ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಸತೀಶ್ ಕಿಲ್ಪಾಡಿ ಮೂಲ್ಕಿ,

ಜತೆ ಕಾರ್ಯದರ್ಶಿಯಾಗಿ ಹರೀಶ್ ಕೋಟ್ಯಾನ್ ಕುದನೆ, ಯುವಸಿಂಚನ ಕಾರ್ಯನಿರ್ವಾಹಕ ಸಂಪಾದಕರಾಗಿ ಹರೀಶ್ ವಿ. ಪಚ್ಚನಾಡಿ, ಸಾಮಾಜಿಕ ಜಾಲತಾಣ ಸಂಪಾದಕರಾಗಿ ರಾಜೇಶ್ ಸುವರ್ಣ ಬಂಟ್ವಾಳ, ವಿಶುಕುಮಾರ್ ದತ್ತಿನಿಧಿ ಸಂಚಾಲಕರಾಗಿ ಜಗದೀಶ್ ಕುಮಾರ್ ಉಡುಪಿ, ಸಾಂಸ್ಕೃತಿಕ ನಿರ್ದೇಶಕರಾಗಿ ದಿನೇಶ್ ಸುವರ್ಣ ರಾಯಿ, ಕ್ರೀಡಾ ನಿರ್ದೇಶಕರಾಗಿ ಶಂಕರ್ ಎ. ಕೋಟ್ಯಾನ್ ಮೂಡುಬಿದ್ರೆ, ವಾರ್ಷಿಕ ಸಮಾವೇಶ ನಿರ್ದೇಶಕರಾಗಿ ಅಜಿತ್ ಕುಮಾರ್ ಅಲೇರ್, ಮಹಿಳಾ ಸಂಘಟನಾ ನಿರ್ದೇಶಕರಾಗಿ ಸುಧಾ ಸುರೇಶ್ ಕೊಲ್ಯ,

ಸಮಾಜ ಸೇವಾ ನಿರ್ದೇಶಕರಾಗಿ ನಿತೀಶ್ ಎಚ್.ವೇಣೂರು, ನಾರಾಯಣಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾಗಿ ಲೋಹಿತ್ ಆರ್., ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಗಣೇಶ್ ವಿ.ಕೋಡಿಕಲ್, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ರಂಜನ್ ಕೆ. ಕೋಟ್ಯಾನ್, ಪ್ರಚಾರ ನಿರ್ದೇಶಕರಾಗಿ ಶಿವಪ್ರಸಾದ್ ಎನ್.ಎ. ಕಡಬ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಹರೀಶ್ ಪೂಜಾರಿ ಬಾಕಿಲ ಮಾಣಿ, ಆರೋಗ್ಯ ನಿರ್ದೇಶಕರಾಗಿ ರಾಕೇಶ್ ಕುಮಾರ್ ಪಿ., ಸಭಾ ವ್ಯವಸ್ಥಾಪನಾ ನಿರ್ದೇಶಕರಾಗಿ ಕಿರಣ್ ಪಡುತೋಟ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಸುಂದರ್ ಸುವರ್ಣ ಕೊಲ್ಯ,

ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ್ ಕುಮಾರ್ ಸುರತ್ಕಲ್, ಜಯರಾಮ್ ಬಿ.ಎನ್. ಪುತ್ತೂರು, ಶಶಿಕಲಾ ಪಡುಬಿದ್ರೆ, ಸೋಮಸುಂದರ ಉಪ್ಪಿನಂಗಡಿ, ಶಿವರಾಮ್ ಜಿ. ಅಮೀನ್ ಹೆಜಮಾಡಿ, ಅಕ್ಷತ್ ಕುಮಾರ್ ಕುಪ್ಪೆಪದವು, ನಿರಂಜನ್ ಬಜಪೆ, ರಾಹುಲ್ ಎ. ಸನಿಲ್ ಕಂಕನಾಡಿ, ಇಂದಿರಾ ಬಿ.ಕೂಳೂರು, ನಾಗೇಶ್ ಪೂಜಾರಿ ಕೊಂಕಣಪದವು, ಶುಭಕರ ಪೂಜಾರಿ ವೇಣೂರು, ಸುಶಾಂತ್ ಕರ್ಕೇರ ಮೂಡುಬಿದ್ರೆ, ಗಣೇಶ್ ಕೆ.ಶಕ್ತಿನಗರ, ಸುಂದರ ಪೂಜಾರಿ ಕಡಬ, ಪ್ರಸಾದ್ ಕುಮಾರ್, ಮಮತಾ ರಾಜ್ ಕಾರ್ಕಳ ಹಾಗೂ ಹರೀಶ್ ಪೂಜಾರಿ ಎ. ಕೋಣಾಜೆ ಆಯ್ಕೆಯಾಗಿದ್ದಾರೆ.

ಯುವವಾಹಿನಿ ಕೇಂದ್ರ ಸಮಿತಿಯ ಆಯ್ಕೆ ಸಮಿತಿಯ ಸಂಚಾಲಕರಾದ ಹರೀಶ್ ಕೆ. ಪೂಜಾರಿ ಅವರು ನೂತನ ಕಾರ್ಯಕಾರಿ ಸಮಿತಿಯನ್ನು ಸಭೆಗೆ ಪರಿಚಯಿಸಿದರು.


