19-09-2025, 7:27 AM
ದಿನಾಂಕ 16-09-2025: ಘಟಕದ ಸಾಪ್ತಾಹಿಕ ಸಭೆಯಲ್ಲಿ ಇಂಜಿನಿಯರ್ ದಿನ ಆಚರಿಸಲಾಯಿತು. ಘಟಕದ ಇಂಜಿನಿಯರ್ ಸದಸ್ಯರುಗಳಾದ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಹಾಗೂ ಗಣೇಶ್ ವಿ ಕೋಡಿಕಲ್ ರನ್ನು ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಇಂಜಿನಿಯರ್ ದಿನದ ಪ್ರಯುಕ್ತ ಗೌರವಿಸಿ ಶುಭಾಶಯ ತಿಳಿಸಿದರು. ಈ ಸಂದರ್ಭ ಘಟಕದ ಪ್ರಥಮ ಉಪಾಧ್ಯಕ್ಷರಾದ ಹರೀಶ್ ಕೆ ಸುವರ್ಣ, ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು, ಕೋಶಾಧಿಕಾರಿ ಮಹೇಶ್ ಅಮೀನ್ ಹಾಗೂ ಘಟಕದ ಮಾಜಿ ಅಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.
Read More
17-09-2025, 4:50 AM
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುಂಜಾಲಕಟ್ಟೆ ಶ್ರೀ ನಾರಾಯಣಗುರು ವಸತಿ ಶಾಲೆ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಗಾಣದಪಡ್ಡು, ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜನ್ಮದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಗುರುಜಯಂತಿ ಆಚರಣೆ ದಿನಾಂಕ 07/09/2025 ನೇ ಆದಿತ್ಯವಾರ ಬಿ.ಸಿ.ರೋಡಿನ ಗಾಣದಪಡ್ಡುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ವಹಿಸಿ ಮಾತನಾಡಿ, ಸಂಘರ್ಷ […]
Read More
16-09-2025, 7:32 PM
ದಿನಾಂಕ 07- 09- 2025ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಮಹಾ ಪೂಜೆಯನ್ನು ಸಲ್ಲಿಸಲಾಯಿತು.
Read More
16-09-2025, 7:30 PM
07- 09- 2025ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು.
Read More
16-09-2025, 7:28 PM
ವಿಶ್ವ ಬಿಲ್ಲವರ ಸೇವಾ ಚಾವಡಿ ಹಾಗೂ ಯುವವಾಹಿನಿ (ರಿ) ಗ್ರಾಮಚಾವಡಿ-ಕೊಣಾಜೆ ಘಟಕ ಇವರ ಸಹಕಾರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಯ ಆಚರಣೆಯನ್ನು ಅಸೈಗೋಳಿ ಅಭಯ ಆಶ್ರಮದಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಹಿರಿಯರ ಸಮ್ಮುಖದಲ್ಲಿ ಆಚರಿಸಲಾಯಿತು. ಸಾಮೂಹಿಕ ಗುರುಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಘಟಕದ ಕಾರ್ಯದರ್ಶಿಯಾದ ಸೌಮ್ಯ ಯೋಗೀಶ್ ಸರ್ವರನ್ನೂ ಸ್ವಾಗತಿಸಿದರು. ನಮ್ಮ ಘಟಕದ ಸದಸ್ಯರು ದೈವ ದಶಕಂ ಶ್ಲೋಕದ ಜೊತೆ ಆಶ್ರಮದ ಹಿರಿಯ ಸದಸ್ಯರು ದೀಪ ಬೆಳಗಿಸಿದರು. […]
Read More
16-09-2025, 7:25 PM
ಅಶಕ್ತರಿಗೆ ಆಸರೆ. ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿಯ ಅಂಗವಾಗಿ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಣೆಯನ್ನು ಬ್ರಹ್ಮ ಶ್ರೀ ನಾರಾಯಣ ಗುರುಮಂದಿರ ದಲ್ಲಿ ವಿತರಣೆ ಮಾಡಲಾಯಿತು
Read More
16-09-2025, 7:17 PM
ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ 171 ನೇ ಜನ್ಮದಿನದ ಆಚರಣೆ ದಿನಾಂಕ 07-09-2025 ನೇ ಆದಿತ್ಯವಾರ ದಂದು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ನಲ್ಲಿ ನಡೆಯಿತು ಹಿರಿಯರಾದ ವಿಶಾಲಾಕ್ಷಿ.ಎಸ್ ರವರು ಗುರುಗಳಿಗೆ ದೀಪ ಬೆಳಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಪ್ರಥಮ ಉಪಾಧ್ಯಕ್ಷರಾದ ಗೀತಾ ವಸಂತ್ ವಹಿಸಿದ್ದರು ಘಟಕದ ಸದಸ್ಯರಾದ ಚಿತ್ರ ಶ್ರೀ ರವರು ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ ಬಗ್ಗೆ ಮಾಹಿತಿಯನ್ನು ನೀಡಿದರು. ಸೂಪರ್ ವೈಸರ್ ವಿದ್ಯಾ ರವರು ಮಾತನಾಡಿ ಘಟಕದ ಸಾಮಾಜಿಕ ಕಾಳಜಿಯನ್ನು […]
Read More
16-09-2025, 7:14 PM
ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಾಗಿ ನಿಸ್ವಾರ್ಥವಾಗಿ ಸೇವೆಗೈಯುತ್ತಿರುವ ಘಟಕದ ಸಕ್ರಿಯ ಐವರು ಸದಸ್ಯರಾದ ಶ್ರೀಮತಿ ಸಂಧ್ಯಾ ಕುಳಾಯಿ, ಶ್ರೀ ಯೋಗೀಶ್ ಪೂಜಾರಿ, ಶ್ರೀಮತಿ ರೂಪಾವತಿ, ಡಾ. ಶಿಲ್ಪಾ ದಿನೇಶ್ ಮತ್ತು ಶ್ರೀಮತಿ ಪೂಜಾ ಕಿರಣ್ ರವರನ್ನು ಗೌರವಿಸಲಾಯಿತು.
Read More
16-09-2025, 7:11 PM
ಬ್ರಹ್ಮಶ್ರೀ ನಾರಾಯಣಗುರುಗಳ 171 ನೆ ಜನ್ಮ ದಿನಾಚರಣೆ ಪ್ರಯುಕ್ತ ಗುರು ಪೂಜೆ 07/09/2025 ರಂದು ನಡೆಯಿತು . ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಮಾತಿನ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂದರೆ ಇಂದು ‘ಶಿಕ್ಷಣ’ ಮತ್ತು ‘ಉದ್ಯೋಗ’ ಎಂಬ ಸೀಮಿತ ಅರ್ಥವಲ್ಲ. ಮಾರುಕಟ್ಟೆ ಜಗತ್ತು ಎಲ್ಲವನ್ನು ನಿಯಂತ್ರಿಸುತ್ತಿವೆ. ಮನಸ್ಸು ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಒದ್ದಾಡುತ್ತಿವೆ. ಸ್ವತಂತ್ರ ಆಯೋಚನೆಗಳು ಮಾತ್ರ ನಮ್ಮನ್ನು ಕಾಪಾಡಬಹುದು. ಗುರುಗಳ ಸಂದೇಶ ಬೆಳಕಿನಲ್ಲಿ ವರ್ತಮಾನದ ಬಹು ಬಗೆಯ ಕತ್ತಲೆಯಿಂದ ಪಾರಾಗಬಹುದು ಎಂದು ಘಟಕದ ಮಾಜಿ ಅಧ್ಯಕ್ಷ […]
Read More
16-09-2025, 7:07 PM
ಬ್ರಹ್ಮ ಶ್ರೀ ನಾರಾಯಣಗುರು ಧರ್ಮಶಿಕ್ಷಣ ಕೇಂದ್ರ ಕೊಲ್ಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ತರಗತಿಯಲ್ಲಿ “ಗುರುವಂದನಂ” ಕಾರ್ಯಕ್ರಮ ದಿನಾಂಕ 09-09-2025 ನೇ ಮಂಗಳವಾರ ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರು ಓಂಕಾರದೊಂದಿಗೆ ತರಗತಿ ಪ್ರಾರಂಭಿಸಿದರು, ಗಣಪತಿ ಶ್ಲೋಕ, ಗುರುಶ್ಲೋಕ,ನಿತ್ಯಾನುಷ್ಠಾನ ಶ್ಲೋಕ ಜೊತೆಯಾಗಿ ಪಠಿಸಲಾಯಿತು.ಧರ್ಮ ಶಿಕ್ಷಣ ಗುರುಗಳಾದ ಡಾ.ಅರುಣ್ ಉಳ್ಳಾಲ್ ಹಾಗೂ ತರಗತಿಯ ಶಿಕ್ಷಕರು ಮತ್ತು ಕೊಲ್ಯ ಘಟಕದ ಶಿಕ್ಷಕರನ್ನು ಗೌರವಿಸಲಾಯಿತು.ಶಿಕ್ಷಕರ ದಿನಾಚರಣೆ ವಿಶೇಷವಾಗಿ ಧರ್ಮ ಶಿಕ್ಷಣ ತರಗತಿಯ ವಿದ್ಯಾರ್ಥಿಗಳಾದ ಕು| ತನಿಷ್ಕ ಗುರುಕೀರ್ತನೆ ಹಾಡಿದರು,ಕು| ಹೃದ್ವಿ ರಾಜೇಶ್, […]
Read More