
24-09-2017, 8:01 AM
ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಬಡತನ, ಕಂದಾಚಾರ, ಮೂಢನಂಬಿಕೆ, ಹಾಗೂ ದುಂದುವೆಚ್ಚದ ಸಮಾರಂಭ ಮುಂತಾದ ಸಮಸ್ಯೆಗಳಿಂದ ಮುಕ್ತವಾದ ಸಮಾಜವೊಂದರ ನಿರ್ಮಾಣದ ಗುರುತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದ್ದು ಈ ಕಾರ್ಯಕ್ಕೆ ಶ್ರೀ ನಾರಾಯಣಗುರುಗಳ ಚಿಂತನೆಗಳನ್ನು ಪ್ರೇರಣೆಯಾಗಿ ಸ್ವೀಕರಿಸಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ಹೇಳಿದರು ನಾರಾಯಣಗುರು ವಿಚಾರ ಕಮ್ಮಟ (ನಾವಿಕ) ಮಂಗಳೂರು ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನಾಚರಣೆ ಅಂಗವಾಗಿ ಯುವಜನರ ಗುರು ಮತ್ತು ಗುರಿ – ನಾರಾಯಣಗುರು ವಿಷಯದ ಕುರಿತು […]
Read More

15-09-2017, 3:45 PM
ವೃದ್ಧಾಪ್ಯ ಅಥವಾ ಮುದಿತನ ಎನ್ನುವುದು ಒಂದು ಪ್ರಾಯ ಸಹಜ ಸ್ಥಿತಿ. ಮೂವತ್ತರಾಚೆ ಮುಪ್ಪು’ ಎನ್ನುವ ಮಾತೊಂದಿದೆ. ಆದರೆ ಅದನ್ನು ತಕ್ಷಣ ಒಪ್ಪಿಕೊಳ್ಳದಿರುವುದೇ ಕ್ಷೇಮ. ಮುಪ್ಪು ಎನ್ನುವುದು ಒಂದು ಮನಸ್ಥಿತಿ. ಹಾಗಾಗಿ ಮೂವತ್ತಕ್ಕೇ ಮುಪ್ಪು ಎಂದುಕೊಂಡರೆ ಅದು ಆಗಲೇ ಹತ್ತಿರವಾಗಬಹುದು. ಮನಸ್ಸಿನಲ್ಲಿ ಸದುದ್ದೇಶವಿದ್ದು ಸನ್ಮಾರ್ಗದಲ್ಲಿ ಸದಾ ಪ್ರಯತ್ನಶೀಲರಾದರೆ ಮುಪ್ಪನ್ನು ಮುಂದೂಡ ಬಹುದೆನ್ನುವ ಅಭಿಪ್ರಾಯವೂ ಇದೆ. ಆದರೂ ನಮ್ಮ ದೇಹವೆನ್ನುವ ರಕ್ತ ಮೂಳೆ ಮಾಂಸಯುಕ್ತ ಜಟಿಲಾತಿಜಟಿಲ ಯಂತ್ರ ದಿನದಿನವೂ ಸವೆಯುತ್ತಾ ದುರ್ಬಲಗೊಳ್ಳುತ್ತಾ ಮುಪ್ಪಿನೆಡೆಗೆ ನಿಧಾನವಾಗಿಯಾದರೂ ಸಾಗುತ್ತಲೇ ಇರುತ್ತದೆ. ದೀರ್ಘಾಯುಷ್ಯದ ಯೋಗವಂತರಿಗೆ […]
Read More

15-09-2017, 2:46 PM
ಪರಿವರ್ತನೆ ಜಗದ ನಿಯಮ ಎಂದು ಶ್ರೀಕೃಷ್ಣ ಗೀತೆಯಲ್ಲ್ಲಿ ಸಾರಿದ ಮಾತು ಪ್ರಸಕ್ತ ದಿನದಲ್ಲೂ ಉಲ್ಲೇಖನೀಯ. ಒಂದು ಯುಗವಿತ್ತು ಅಲ್ಲಿ ದೇವತೆಗಳಿಗೊಂದು ಲೋಕ, ರಾಕ್ಷಸರಿಗೊಂದು ಲೋಕವಿತ್ತು. ಅದೇ ಸ್ವರ್ಗ ಮತ್ತು ನರಕ. ಬಳಿಕ ಯುಗ ಪರಿವರ್ತನೆಯಾಯಿತು. ಇಲ್ಲ್ಲಿ ದೇವಮಾನವರೂ ರಾಕ್ಷಸರು ಒಂದೇ ಲೋಕದಲ್ಲಿದ್ದರು. ಆದರೆ ದೂರದೂರವಿದ್ದರು. ಅದೇ ರಾಮ ಮತ್ತು ರಾವಣರಿದ್ದಂತೆ. ಬಳಿಕ ಮತ್ತೊಂದು ಯುಗ ಪರಿವರ್ತನೆಯಾಯಿತು. ಇಲ್ಲಿ ದೇವಮಾನವ ರಾಕ್ಷಸ ಒಂದೇ ಕುಟುಂಬಕ್ಕೆ ಬಂದರು. ಅಂದರೆ ಶ್ರೀಕೃಷ್ಣ-ಕಂಸ ಇದ್ದಂತೆ. ಇದೀಗ ಮತ್ತೊಂದು ಯುಗ ಪರಿವರ್ತನೆಯಾಯಿತು. ಇಲ್ಲಿ ದೇವ […]
Read More

15-09-2017, 1:57 PM
ಬರೆಯಲು ಪದಗಳಿಗಾಗಿ ತಡಕಾಡುತ್ತಿದ್ದೇನೆ, ಮನದಲ್ಲಿ ಅವ್ಯಕ್ತವಾದ ಭಯ ಕಾಡುತ್ತಿದೆ ವಿವಿಧ ಸಂಘಟನೆಗಳಲ್ಲಿ ಸಾಕಷ್ಟು ಜವಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ, ಆದರೆ ಈ ಜವಬ್ದಾರಿ ಎಲ್ಲಕ್ಕಿಂತಲೂ ಬೇರೆಯಾದುದು, ಅದಕ್ಕಿಂತಲೂ ಮುಖ್ಯವಾಗಿ ಇದು ಯುವವಾಹಿನಿ ಎನ್ನುವ ಮಹಾ ಸಾಗರದಲ್ಲಿ ನಾವೆಯನ್ನು ಮುನ್ನಡೆಸುವ ಯತ್ನ. ಯುವವಾಹಿನಿಯಲ್ಲಿ ಎಲ್ಲವೂ ಒಂದು ವರುಷದ ಅಧಿಕಾರ, ಆದರೆ ಈ ಒಂದು ವರುಷದಲ್ಲಿ ನಾನು ಮಾಡುವ ಕೆಲಸ ಒಂದು ಶತಮಾನದ ವರೆಗೂ ದಾಖಲೆಯಾಗಿ ಉಳಿದಿರುತ್ತದೆ. ಇದು ಯುವವಾಹಿನಿಯನ್ನು ಹೊರ ಜಗತ್ತಿನ ಜೊತೆ ನಿರಂತರ ಸಂಪರ್ಕದಲ್ಲಿರಿಸುವ ಮಾಧ್ಯಮ. ಹೀಗಾಗಿ ಇದರ ಬಗ್ಗೆ […]
Read More

10-09-2017, 1:16 PM
ವಿಶಿಷ್ಟ ವಿನ್ಯಾಸದೊಂದಿಗೆ ವರ್ಣರಂಜಿತ ಪುಟಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಎಲ್ಲರ ಮನಸ್ಸು ಗೆಲ್ಲಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ತಿಳಿಸಿದರು ಅವರು ದಿನಾಂಕ 10.09.2017 ರಂದು ಯುವವಾಹಿನಿ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸಸಿಹಿತ್ಲು ವೈಶಾಲಿ ರೆಸಾರ್ಟ್ ಇಲ್ಲಿ ಜರುಗಿದ ಯುವವಾಹಿನಿಯ 26 ಘಟಕಗಳ ಸಮನ್ವಯತೆ ಸ್ನೇಹಾನುಬಂಧ ಕಾರ್ಯಕ್ರಮದಲ್ಲಿ ಯುವಸಿಂಚನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ ಹಾಗೂ ಸಹಕಾರದಿಂದ ಹೊಸ ವಿನ್ಯಾಸದಲ್ಲಿ ಯುವಸಿಂಚನ […]
Read More

06-09-2017, 4:45 PM
ಪ್ರೀತಿಯ ಸ್ನೇಹಿತರೇ, ಪ್ರತಿ ದಿನ ನಿಮ್ಮ ಬೆರಳಂಚಿಗೆ ಬಂದು ನಿಮ್ಮೆಲ್ಲರ ಗಮನವನ್ನು ನನ್ನಡೆಗೆ ಸೆಳೆದು ಹೋಗುತ್ತಿದ್ದೇನೆ, ನಿಮ್ಮೆಲ್ಲರ ಮೊಬೈಲ್ನಲ್ಲಿ ನಮ್ಮ ಸಂಸ್ಥೆಯು ನೆಲೆ ಕಂಡುಕೊಂಡಿರುವಾಗ ಮತ್ತೆ ನನ್ನ ಮಾತಿನ ಅವಶ್ಯಕತೆ ಇಲ್ಲ ಎಂದುಕೊಳ್ಳುತ್ತೇನೆ. ಹೀಗಿದ್ದರೂ ಔಪಚಾರಿಕ ನೆಲೆಗಟ್ಟಿನಲ್ಲಿ ನಮ್ಮ ಆಕರ ಗ್ರಂಥ ಸಾಕಾರಗೊಳ್ಳುತ್ತಿರುವ ಹೊತ್ತಿನಲ್ಲಿ ದಾಖಲೀಕರಣದ ನೆಲೆಯಲ್ಲಿ ಎರಡಕ್ಷರ ಬರೆಯಲೇ ಬೇಕಿದೆ. ಸುದೀರ್ಘ ಮೂವತ್ತು ವರುಷಗಳ ಸಾರ್ಥಕ ನಡೆಯನ್ನು ತಪಸ್ಸಿನಂತೆ ಕಳೆದಿರುವ ಯುವವಾಹಿನಿಯು, ಸಾಮಾಜಿಕವಾಗಿ ಬದಲಾವಣೆಯ ಪ್ರಬಲ ಕ್ರಾಂತಿಯನ್ನೇ ಹುಟ್ಟುಹಾಕಿದೆ .ಯಾವ ಸಮಯದಲ್ಲಿ ಏನು ಆಗಬೇಕಿದೆಯೋ ಅದು […]
Read More

06-08-2017, 5:53 PM
ಮಳೆರಾಯಗೆ ಅಡ್ಡ ಹಿಡಿಯಬೇಕಿದ್ದ ಬಣ್ಣಬಣ್ಣದ ಛತ್ರಿಯ ತುಂಬೆಲ್ಲಾ… ಕುಂಟಲ ಹಣ್ಣುಗಳದ್ದೇ ಕಾರುಬಾರು… ನಾ ನೆನದರೂ ಹಣ್ಣು ನೆನೆಯಬಾರದೆಂಬ ಕಕ್ಕುಲತೆ… ಅಮ್ಮ ಬೈಯುವಳೆಂದು ಹಸಿರೆಲೆಗಳ ತಿಂದು ಕುಂಟಲ ಬಣ್ಣವ ಮಾಸಿಸಿ… ನಾಲಗೆ ಬಿಳಿ ಮಾಡಿದ ನೆನೆದರೆ ಕನವರಿಸದೇ…ಬಾಲ್ಯ..ಇನ್ನೊಮ್ಮೆ…? ಗೆಳತಿಯರೊಡನೆ ಓಡೋಡಿ ಜೊತೆಗೂಡಿ ಗುಡ್ಡ ತೋಡು ದಾಟಿ ಪ್ರೀತಿಯ ಶಾಲೆಗೆಂದು ಪ್ರೀತಿಯಿಂದ ಬರುತ್ತಿದ್ದ ಅಂದಿನ ಮನಸ್ಸು ಇಂದಿನ ಮಕ್ಕಳಿಗಿಹುದೇ…! ಶಾಲೆಗಿಹುದು ಕಲ್ಲು ಮುಳ್ಳ …ಗುಡ್ಡದ ಹಾದಿ… ಆದರೆ… ಈ ದಿನಗಳಲ್ಲಿ… ಎಂದೂ ಅನ್ನಿಸಲಿಲ್ಲ… ಕಲ್ಲು ಮುಳ್ಳೆಂದು…. ಅದರೀಗ ಮನೆಯ ಮೆಟ್ಟಲಿಳಿಯಬೇಕೆಂದರೆ […]
Read More

06-08-2017, 5:25 PM
ವಿದ್ಯಾತುರರಿಗೆ ನೆಮ್ಮದಿಯಾಗಲೀ ನಿದ್ರೆಯಾಗಲೀ ಇರದು – ಇದು ನಮ್ಮ ಜ್ಞಾನಾರ್ಜನೆಗೆ ಸಂಬಂಧಪಟ್ಟ ಒಂದು ಮಾತು. ಜ್ಞಾನ ದೇಗುಲ ನಮ್ಮ ಭಾರತ. ಸಾವಿರಾರು ವರ್ಷಗಳಿಂದ ಜಗತ್ತಿಗೆ ಶುದ್ಧ ಜ್ಞಾನ, ವಿಜ್ಞಾನವನ್ನು ಪ್ರಸಾರ ಮಾಡುತ್ತಾ ವಿಶ್ವದ ಎಲ್ಲ ಮಾನವ ಜನಾಂಗವನ್ನು ಶ್ರೇಷ್ಠರನ್ನಾಗಿ ಸುಸಂಸ್ಕøತರನ್ನಾಗಿಸುವುದರಲ್ಲಿ ಭಾರತೀಯ ಸಂಸ್ಕøತಿ ಗುರುತಿಸಲ್ಪಟ್ಟಿದೆ. ನಮ್ಮಲ್ಲಿರುವ ಮೆದುಳು ಪ್ರಪಂಚದಲ್ಲಿರುವ ಯಾವುದೇ ಅತ್ಯಂತ ಪ್ರಬಲ ಆಧುನಿಕ ಗಣಕ ಯಂತ್ರಕ್ಕಿಂತ ಹೆಚ್ಚು ಸಂಕೀರ್ಣ, ಬಲಶಾಲಿ ಎಂದು ಗುರುತಿಸಲ್ಪಟ್ಟಿದೆ. ಇದರ ಇನ್ನೊಂದು ರೂಪ “ಕಾಮಾತುರಾಣಾಂ ನಭಯಂ ನಲಜ್ಜಾ” ಇದು ಬಯಕೆಗಳ (ಕಾಮಗಳ) […]
Read More

06-08-2017, 5:03 PM
“ಬೇಡಗಳೆಡೆಯಲ್ಲಿ ಕಾಡಿದ ಬಯಕೆಗಳ… ಸುಡುವ ಕಾವನು ಬೆಳೆಸಿ ಬೆಂದು ಕಳೆದ… ಅಹಲ್ಯ, ತಾರಾ, ಸೀತೆ, ದ್ರೌಪದಿ, ಮಂಡೋದರಿಯರ ನನ್ನ, ಅವಳ, ಇವಳ, ಮತ್ತೊಬ್ಬಳ, ಇನ್ನೊಬ್ಬಳ ಊರ್ಮಿಳಾಳ… ಕತೆಯ ಕಾಯ್ವ, ಕೇಳ್ವ, ಸುಡುವ, ಬೆಳೆಸುವ ಹೊತ್ತು…” ಮುಸ್ಸಂಜೆಯ ಮಾತು. ಕವಿತೆ ಹೊಸೆಯುವ ಹೊತ್ತು. ಕವಿತೆ ಗೀತೆಯರ ಮಾತುಕತೆ. ಕವಿತೆ ಕತೆಯಾಗುವ ಕತೆ. ಮಾತುಕತೆಯ ನಡುವೆ ಒಂದಿಷ್ಟು ಕಣ್ಣೀರು _ ಮತ್ತೊಂದಿಷ್ಟು ನೆನಪುಗಳು. ಸಾಹುಕಾರ ಅಪ್ಪನ ದರ್ಪದ ಮಾತುಗಳಿಗೆ ಬೆದರಿದ ಹರಿಣಿ- ಅಮ್ಮ. ತುಂಬು ಸಂಸಾರಕ್ಕೆ ಸೊಸೆಯಾಗಿ ಬಂದವಳನ್ನು ಓಲೈಸುವವರಿಲ್ಲ. […]
Read More

06-08-2017, 4:51 PM
ತೆಂಕಿನಲ್ಲಿ ಕಾಸರಗೋಡಿನ ಚಂದ್ರಗಿರಿ ನದಿ ತೀರದಿಂದ ಬಡಗಿನಲ್ಲಿ ಬಾರ್ಕೂರು, ಹಾಗೇ ಪಶ್ಚಿಮ ಘಟ್ಟದ ಬುಡದಿಂದ ಪಡುವಣಕಡಲ ತೀರದ ವರೆಗೆ ವ್ಯಾಪಿಸಿರುವ ಪ್ರದೇಶವೇ ಇಂದಿನ ತುಳು ನಾಡು. ಹಿಂದಿನ ಕಾಲದಲ್ಲಿ ತುಳುನಾಡು ವಿಶಾಲವಾಗಿತ್ತು. ತೆಂಕಣದ ರಾಮೇಶ್ವರ, ಬಡಗಣ ಅಂಕೋಲ, ಪಡುವಣ ಅರಬ್ಬೀ ಸಮುದ್ರ, ಮೂಡಣದಲ್ಲಿ ವಿಸ್ತಾರವಾಗಿ ಹಬ್ಬಿರುವ ಪಶ್ಚಿಮ ಘಟ್ಟದತಪ್ಪಲು ಇವು ತುಳುನಾಡಿನ ಗಡಿ ಪ್ರದೇಶಗಳಾಗಿದ್ದವು. ಬಯಲು ಸೀಮೆಯ ಸಮತಟ್ಟು ನೆಲದಂತೆ ತುಳುನಾಡಿನ ಭೂಮಿಯಲ್ಲ. ಕರಾವಳಿ ಪ್ರದೇಶ ಮಾತ್ರ ಸಮತಟ್ಟಾಗಿರುವುದು. ಉಳಿದಂತೆ ಗುಡ್ಡ, ಕಾಡು, ಹಾಡಿ, ಇಳಿಜಾರು ಪ್ರದೇಶದಿಂದ […]
Read More