
25-11-2018, 5:31 PM
ಬಂಟ್ವಾಳ: ಸಾಮಾಜಿಕ ಹಾಗೂ ದೈಹಿಕ ಆರೋಗ್ಯ ಇವೆರಡೂ ಕೂಡ ಬಹಳ ಪ್ರಾಮುಖ್ಯವಾದುದು. ಈ ನಿಟ್ಟಿನಲ್ಲಿ ಯುವ ಸಂಘಟನೆಗಳು ಹೆಚ್ಚು ಕ್ರೀಯಾಶೀಲರಾಗಿ ಕಾರ್ಯಕ್ರಮ ರೂಪಿಸಬೇಕು. ಯುವವಾಹಿನಿ(ರಿ) ನಂತಹ ಸಂಘಟನೆಗಳು ಈ ಕುರಿತು ಹೆಚ್ಚು ಸಕಾರಾತ್ಮಕವಾಗಿ ಆಲೋಚಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಮಾಜಿ ಸಚಿವರಾದ ಬಿ. ರಾಮನಾಥ ರೈ ತಿಳಿಸಿದರು. ಅವರು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ. ರೋಡಿ ನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 25-11-2018 ರಂದು ಜರುಗಿದ ರಕ್ತದಾನ ಮತ್ತು ಉಚಿತ ಆರೋಗ್ಯ […]
Read More

20-11-2018, 3:39 PM
ಹೆಜಮಾಡಿ : ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅನೇಕ ಸಾಂಪ್ರದಾಯಿಕ ಆಚರಣೆಗಳಿದ್ದು, ಇಂದಿನ ಆಧುನಿಕ ಯುಗದಲ್ಲಿ ಅನೇಕ ಆಚರಣೆಗಳು ಕಡಿಮೆಯಾಗುತ್ತುದ್ದು, ಅವುಗಳ ಉಳಿವಿಗೆ ಯುವಜನರು ಮತ್ತು ಯುವ ಸಂಘಟನೆಗಳು ಶ್ರಮವಹಿಸಿ, ಸಾಮೂಹಿಕ ಆಚರಣೆಗಳ ಮೂಲಕ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಬಹುದೆಂದು ಭಾರತ್ ಕೋ.ಆಪರೇಟಿವ್ ಬ್ಯಾಂಕ್, ಮುಂಬಯಿಯ ಮಾಜಿ ಅಧ್ಯಕ್ಷ, ಹೆಜಮಾಡಿ ಬಿಲ್ಲವ ಸಂಘದ ನವೀಕರಣದ ರೂವಾರಿ ವಾಸುದೇವ ಆರ್.ಕೋಟ್ಯಾನ್ ತಿಳಿಸಿದರು. ಅವರು ದಿನಾಂಕ 20.11.2018 ರಂದು ಹೆಜಮಾಡಿ ಬಿಲ್ಲವ ಸಂಘದಲ್ಲಿ ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ […]
Read More

18-11-2018, 2:05 PM
ಕಾಪು : ಸಮಾಜದ ಯುವಕರನ್ನು ಸಂಘಟಿಸುವಲ್ಲಿ ಯುವವಾಹಿನಿಯ ಪಾತ್ರ ಮಹತ್ವದ್ದಾಗಿದೆ ಸಮಾಜದ ಯುವಕರೊಳಗಿನ ಒಗ್ಗಟ್ಟು ಎಲ್ಲಾ ಸಮಯಗಳಲ್ಲೂ ಮುಂದುವರಿಯ ಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕಾಪುವಿನಲ್ಲಿ 18.11.2018 ರಂದು ಯುವವಾಹಿನಿ (ರಿ) ಘಟಕದ ಕಾಪು ಘಟಕದ ವತಿಯಿಂದ ಬಿಲ್ಲವ ಸಮಾಜದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಿಲ್ಲವ ಯುವಕ ಯುವತಿಯರಿಗಾಗಿ ಆಯೋಜಿಸಲಾಗಿದ್ದ ಕ್ರೀಡಾ ಸ್ನೇಹ ಸಮ್ಮಿಲನ – ಬ್ರಹ್ಮಶ್ರೀ ನಾರಾಯಣಗುರು ಕ್ರೀಡೋತ್ಸವ-2018 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ […]
Read More

18-11-2018, 12:30 PM
ಕೂಳೂರು: ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಶಿರಡಿ ಪ್ರವಾಸ ದಿನಾಂಕ 18/11/2018 ರಿಂದ ದಿನಾಂಕ 22/11/2018ರ ತನಕ ಏರ್ಪಡಿಸಲಾಗಿದ್ದು 45 ಮಂದಿ ಸದಸ್ಯರನ್ನೊಳಗೊಂಡ ತಂಡಕ್ಕೆ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ಚಾಲನೆ ನೀಡಿದರು. ದಿನಾಂಕ 18/11/2018 ರವಿವಾರ ರಾತ್ರಿ 9.45 ಕ್ಕೆ ಮಂಗಳೂರಿನಿಂದ ಹೊರಟು 19/11/18 ಸೋಮವಾರ ಸಂಜೆ 6 ಗಂಟೆಗೆ ಸರಿಯಾಗಿ ನಾಸಿಕ್ ತಲುಪಿದೆವು. ಅದೇ ದಿನ ರಾತ್ರಿ ಮೊದಲನೆಯದಾಗಿ ಬಿಲ್ಲವರ ಗುರುವಾದ ಗಿರ್ನಾರ್ದಲ್ಲಿರುವ ನಾರಾಯಣಗುರು ಸ್ವಾಮಿಯವರ ಮಂದಿರಕ್ಕೆ ಭೇಟಿ ನೀಡಿದೆವು. […]
Read More

14-11-2018, 2:29 PM
ಬಂಟ್ವಾಳ : ಡಿಸೆಂಬರ್ 7 ಮತ್ತು 8 ರಂದು ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ತುಕರಾಮ ಪೂಜಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಸದಸ್ಯರು ಪ್ರೊ.ತುಕರಾಮ ಪೂಜಾರಿ ಯವರನ್ನು ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ದಿನಾಂಕ 14-11-18 ರಂದು ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತಾನಾಡಿದ ಪ್ರೊ.ತುಕರಾಮ ಪೂಜಾರಿ ಯುವವಾಹಿನಿ ಸದಸ್ಯರು ನೀಡಿದ ಅಭಿನಂದನೆ, ಪ್ರೀತಿ ತನಗೆ ಇನ್ನಷ್ಟು ಸ್ಪೂರ್ತಿ […]
Read More

11-11-2018, 4:27 PM
ಕಟಪಾಡಿ : ಯುವವಾಹಿನಿ(ರಿ) ಕಟಪಾಡಿ ಘಟಕದಿಂದ ದಿನಾಂಕ 19.11.2018 ರಂದು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ದೀಪಾವಳಿ ಮತ್ತು ಕ್ಷೇತ್ರದ ಭಜನಾ ಸಪ್ತಾಹದ ಪ್ರಯುಕ್ತ ಗೂಡುದೀಪ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಿತೇಶ್ ಬಿ. ಕೋಟ್ಯಾನ್ ವಹಿಸಿದರು. ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ರತ್ನಾಕರ್ ಆಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಅಶೋಕ್ ಎಮ್. ಸುವರ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್, ಹಾಗೂ ಸದಸ್ಯರು, […]
Read More

08-11-2018, 4:49 PM
ಕುಪ್ಪೆಪದವು : ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ದಿನಾಂಕ 08-11-2018 ರಂದು ಬೆಳಿಗ್ಗೆ 9.00 ಗಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ, ನಮ್ಮ ನಡೆ ಬೇಸಾಯದ ಕಡೆ ಎಂಬ ಚಿಂತನೆಯಲ್ಲಿ ಪ್ರಾರಂಭವಾಗಿ ನಾಗಂಡದಿಯ ಗದ್ದೆಯಲ್ಲಿ ನಿರೀಕ್ಷಿತ ಸಮೃದ್ಧ ಬತ್ತದ ಫಸಲನ್ನು ಪಡೆದು, ದಾನ್ಯಲಕ್ಮಿ ಮತ್ತು ಗೋ ಮಾತೆಯ ಪೂಜೆಯನ್ನು ಷೋಡೋಪಚಾರಿ ವಿದಿ ವಿಧಾನಗಳಿಂದ ಮಹಿಳೆಯರ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಈ ಧಾರ್ಮಿಕ ಸಂಪ್ರದಾಯದ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟರು. ಅಲ್ಲದೆ ಕೃಷಿ […]
Read More

07-11-2018, 2:59 PM
ಉಪ್ಪಿನಂಗಡಿ : ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಯುವತುಡರ್ -2018 ಕಾರ್ಯಕ್ರಮವು ಘಟಕದ ಉಪಾಧ್ಯಕ್ಷರಾದ ಚಂದ್ರಶೇಖರ ಕೆ. ಸನಿಲ್ ಇವರ ಮನೆ “ಯಮುನಾ” ಇಲ್ಲಿ ದಿನಾಂಕ ೦೭. ೧೧. ೨೦೧೮ ರಂದು ನಡೆಯಿತು. ಘಟಕದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ಭಾಗವಹಿಸಿ ಮಾತನಾಡಿ ದೀಪಾವಳಿಯು ತುಳುನಾಡಿನ ವಿಶಿಷ್ಟ ಹಬ್ಬವಾಗಿದ್ದು, ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ಸಂಸ್ಕೃತಿಗಳ ಪ್ರತೀಕವಾದ ದೀಪಾವಳಿಯು ಎಲ್ಲರ ಬದುಕಿನಲ್ಲಿ ದೀಪದಂತೆ ಬೆಳಗಲಿ ಎಂದು ಶುಭ […]
Read More

06-11-2018, 5:05 PM
ಮೂಲ್ಕಿ: ನಾರಾಯಣಗುರುಗಳ ತತ್ವ ಆದರ್ಶದಂತೆ ಇಂದು ಬಿಲ್ಲವ ಸಮಾಜವು ಸಂಘಟನತ್ಮಕವಾಗಿ ಬೆಳೆಯುವುದರೊಂದಿಗೆ ಸಮಾಜದಲ್ಲಿ ಕರಾವಳಿಯ ಸಂಪ್ರದಾಯವನ್ನು ಸಂಸ್ಥೆಯ ಮೂಲಕ ಉಳಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಯುವ ಸಮಾಜವನ್ನು ಕಟ್ಟಿ ಬೆಳೆಸುವ ಜವಬ್ದಾರಿಯನ್ನು ನಾರಾಯಣಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಉಡುಪಿಯ ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್ ಹೇಳಿದರು. ಅವರು ಮೂಲ್ಕಿ ಯುವವಾಹಿನಿ ಘಟಕದ ವತಿಯಿಂದ ದಿನಾಂಕ 06.11.2018 ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬವನ್ನು ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಕೊಸೆಸಾಂ […]
Read More

06-11-2018, 3:36 PM
ಕೂಳೂರು : ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ‘ಕತ್ತಲಿನಿಂದ ಬೆಳಕಿನೆಡೆಗೆ- ನಮ್ಮ ಮನೆ ಹಬ್ಬ ದೀಪಾವಳಿ’ ಯನ್ನು ದಿನಾಂಕ 06/11/2018 ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಘಟಕದ ಕುಟುಂಬ ಸಂಪರ್ಕ ನಿರ್ದೇಶಕರಾದ ರೇಣುಕಾ ತಾರನಾಥ್ ಅವರ ಸಂಚಾಲಕತ್ವದಲ್ಲಿ ಅವರ ಮನೆಯಲ್ಲಿ 90 ಮಂದಿ ಸದಸ್ಯರ ಉಪಸ್ಥಿತಿಯೊಂದಿಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ) ಕೇಂದ್ರ […]
Read More