30-01-2022, 12:50 PM
ಸುರತ್ಕಲ್ : ಯುವವಾಹಿನಿ ಸುರತ್ಕಲ್ ಘಟಕದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿವೇಕ್ ಬಿ.ಕೋಟ್ಯಾನ್ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿ : ಮೃದುಲಾ ಪವನ್ ಉಪಾಧ್ಯಕ್ಷ : ತಾರಾ ಅಶೋಕ್ ಹಾಗೂ ಅಶೋಕ್ ಕುಮಾರ್ ಕೋಶಾಧಿಕಾರಿ : ವಾಣಿ ಗಣೇಶ್ ಜತೆ ಕಾರ್ಯದರ್ಶಿ : ಶೈಲೇಶ್ ಕೋಟ್ಯಾನ್ ಸಂಘಟಕನಾ ಕಾರ್ಯದರ್ಶಿ : ರೇವತಿ ನವೀನ್ ವ್ಯಕ್ತಿತ್ವ ವಿಕಸನ ನಿರ್ದೇಶಕರು ವಿದ್ಯಾ ಕೇಶವ್ ಕ್ರೀಡೆ, ಆರೋಗ್ಯ ಮತ್ತು ಸಮಾಜಸೇವಾ ನಿರ್ದೇಶಕರು : ಶ್ರೀನಿವಾಸ್ ಸುವರ್ಣ ಕಲೆ ಮತ್ತು ಸಾಹಿತ್ಯ ನಿರ್ದೇಶಕರು […]
Read More
11-08-2019, 3:42 AM
ಅದು 1983 ರ ಸೆಪ್ಟೆಂಬರ್ 29 ಶ್ರೀಮತಿ ಪುಷ್ಪ ಮತ್ತು ಗೋಪಾಲ್ ಕುಕ್ಯಾನ್ ದಂಪತಿ ಮಗನಾಗಿ ಕಡಲ ತಡಿಯ ಸುಂದರ ದ್ವೀಪ ಪ್ರದೇಶ ಸಸಿಹಿತ್ಲು ಎಂಬ ಗ್ರಾಮದಲ್ಲಿ ಜನಿಸಿದ ಕುವರನೆ ಯುವವಾಹಿನಿಯ 32ನೇ ನಾಯಕ ನರೇಶ್ ಕುಮಾರ್ ಸಸಿಹಿತ್ಲು ವೃತ್ತಿಯಲ್ಲಿ ಆರೋಗ್ಯ ಇಲಾಖೆಯ ಯೋಜನೆ ಯಿಂದರ ವ್ಯವಸ್ಥಾಪಕರಾಗಿರುವ ನರೇಶ್ ಕುಮಾರ್ ಅವರು, ಪ್ರವೃತ್ತಿಯಲ್ಲಿ ಲೇಖಕ, ನಾಟಕಕಾರ, ನಿರ್ದೇಶಕ, ನೃತ್ಯಪಟುವಾಗಿ ಗುರುತಿಸಿಕೊಂಡವರು. ಮೂಲ ಜಾನಪದ ಕುಣಿತಗಳ ಅಧ್ಯಯನ, ತರಭೇತಿ ಮತ್ತು ಪ್ರದರ್ಶನದ ವಿಶೇಷ ಆಸಕ್ತಿ ಹೊಂದಿರುವ ಇವರು, ನೇಪಾಳ, […]
Read More
15-06-2019, 2:09 PM
ಅಕ್ಷಯದ ಮನೆಯಿಂದ ಅಕ್ಷರದವರೆಗೆ, ಪುತ್ತೂರಿನಿಂದ ಹತ್ತೂರವರೆಗೆ, ನನ್ನವರು ಎನ್ನುವುದರಿಂದ ನಮ್ಮವರು ಎನ್ನುವವರೆಗೆ ಒಂದು ಅದ್ಭುತ ಯುವ ಪ್ರಪಂಚದಲ್ಲಿ 365 ದಿನಗಳ ನಡಿಗೆ ಆರಂಭಿಸಿದ್ದೆ. ಇನ್ನು 60 ದಿನ ಮಾತ್ರ ಅಷ್ಟರಲ್ಲಿ ನನ್ನ ನಡಿಗೆ ಗುರಿ ಸೇರಬೇಕಿದೆ. ಸಾಕಷ್ಟು ಅನುಭವದೊಂದಿಗೆ, ಸಾಕಷ್ಟು ಮಂದಿಯ ಸ್ನೇಹವನ್ನು ಗಳಿಸಿಕೊಂಡು ಯುವವಾಹಿನಿಯಲ್ಲಿ 10 ತಿಂಗಳ ಪಯಣ ಮುಗಿಸಿದೆ. ಯುವವಾಹಿನಿ ನನ್ನನ್ನು ಎತ್ತರಕ್ಕೆ ಏರಿಸಿದೆ, ಹರಿತಗೊಳಿಸಿದೆ, ಸಾವಿರಾರು ಜನರ ಪ್ರೀತಿ ನೀಡಿದೆ, ಮರೆಯಲಸಾಧ್ಯವಾದ ಒಂದು ಹೊಸ ಅನುಭವವನ್ನು ನೀಡಿದೆ. ಯುವವಾಹಿನಿ ಎಲ್ಲರಿಗೂ ಸಮಾನವಾದ ಅವಕಾಶ […]
Read More
15-11-2018, 1:56 PM
ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು ಕಳೆದ ಹಲವು ವರುಷದಲ್ಲಿ ನೂರಾರು ಸಂಘಟನೆಗಳಲ್ಲಿ ಒತ್ತಡದ ಕೆಲಸ, ಆಗೆಲ್ಲ ನನ್ನ ಮಡದಿಯ ಮುನಿಸು ನಿಮಗೆ ಇದೆಲ್ಲ ಬೇಕಾ ? ಆಗೆಲ್ಲಾ ಗೊತ್ತಿಲ್ಲದಿದ್ದರೂ ಹಾಡೊಂದ ಗುಣುಗುತ್ತಿದ್ದೆ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ …. ಏನಾಶ್ಚರ್ಯ ಈಗ ಒಂದೇ ಒಂದು ದಿನವೂ ವಿಶ್ರಾಂತಿ ಇಲ್ಲ. ನನ್ನ ಯುವವಾಹಿನಿಯ ಕುಟುಂಬ ನನಗೆ ವಿಶ್ರಾಂತಿಯನ್ನೂ ನೀಡದೆ ದಿನಕ್ಕೊಂದು ಮನೆಗೆ (ಘಟಕ) ಆಹ್ವಾನಿಸುತ್ತಲೇ ಇದ್ದಾರೆ. ಒಂದಕ್ಕಿಂತ ಒಂದು ಘಟಕದ ಭಿನ್ನ ಭಿನ್ನ ಕಾರ್ಯಕ್ರಮ, ಪ್ರತಿ […]
Read More
14-09-2018, 2:16 PM
ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು ವರುಣನ ಅವಕೃಪೆಯಿಂದ ತತ್ತರಿಸಿದ ಕೊಡಗಿನಲ್ಲಿ, ಬಡವ, ಶ್ರೀಮಂತ, ಕೆಳಜಾತಿ ಮೇಲ್ಜಾತಿ ಎಂಬ ಯಾವುದೇ ಭೇದವನ್ನೂ ತೋರದೆ ನೆರೆ ಎಲ್ಲರನ್ನೂ, ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ತಣ್ಣನೇ ಹರಿದುಹೋಗಿದೆ. ಬಡವನ ಸೈಕಲ್ನಿಂದ ಹಿಡಿದು ಶ್ರೀಮಂತನ ಬೆಂಝ್ , ಆಡಿ ಕಾರುಗಳು ಕೂಡಾ ಮಣ್ಣೋಳಗೆ ಹೂತುಹೋಗಿ ಈಜಿಪ್ತಿನ ಪಿರಮಿಡ್ಡ್ ಒಳಗೆ ಹುದುಗಿರುವ ಅಸ್ಥಿಯಂತೆ ಕಂಡು ಬರುತ್ತಿದೆ. ಮನುಷ್ಯನ ಸ್ವಾರ್ಥದ ರುದ್ರನರ್ತನಕ್ಕೆ ಮುನಿದ ಪ್ರಕೃತಿ ದಯೆ ದಾಕ್ಷಿಣ್ಯವನ್ನೇ ಮರೆತು ಪಾಠ ಕಲಿಸಿದೆ. ಇಲ್ಲಿ ಎಲ್ಲರೂ ಮತ್ತೆ ಹೊಸ […]
Read More
15-04-2018, 4:43 PM
ಬಂಧುಗಳೇ, ಒಂದು ವರುಷ ವೇಗವಾಗಿ ಉರುಳಿ ಹೋಗುತ್ತಿದೆ, ಮೊನ್ನೆ ಮೊನ್ನೆ ಅಧಿಕಾರ ಸ್ವೀಕರಿಸಿದ್ದೆ ಈಗ ಮುಂದಿನ ಸಮಾವೇಶಕ್ಕೆ ಸಿದ್ದಗೊಳ್ಳಬೇಕಾಗಿದೆ. ಸಿಕ್ಕಿದ 365 ದಿನವನ್ನು ಯುವವಾಹಿನಿಗಾಗಿ ನೀಡಬೇಕುಎನ್ನುವುದು ನನ್ನ ಆಶಯ ಈ ನೆಲೆಯಲ್ಲಿ ಯುವವಾಹಿನಿಯನ್ನು ಉಸಿರಾಗಿಸಿಕೊಂಡಿದ್ದೇನೆ. ಮಾರ್ಚ್- ಎಪ್ರಿಲ್ ತಿಂಗಳು ನನಗೆ ಅತ್ಯಂತ ಖುಷಿಯ ತಿಂಗಳು, ನನ್ನ ಅಧಿಕಾರಾವಧಿ ಯುವವಾಹಿನಿಯ 30ನೇ ವರುಷ. ಈ ನೆಲೆಯಲ್ಲಿ ಯುವವಾಹಿನಿಗೆ 30 ಘಟಕಗಳನ್ನು ಸೇರ್ಪಡೆಗೊಳಿಸಿ ಯುವವಾಹಿನಿಯನ್ನು ಬಲ ಪಡಿಸಬೇಕು ಎನ್ನುವ ಆಶಯವಿತ್ತು. ಈ ಆಸೆ ಇಂದು ಕೈಗೂಡಿದೆ. ಯುವವಾಹಿನಿಗೆ ಬಲಿಷ್ಠವಾದ 30ನೇ […]
Read More
15-02-2018, 4:12 PM
ಪ್ರೀತಿಯ ಯುವವಾಹಿನಿಯ ಬಂಧುಗಳೇ, ಪದವಾಗಿ ಬಂದಿತ್ತು ನೂರೊಂದು ಮಾತು ಎದೆಯಲ್ಲಿ ಉಳಿದಿತ್ತು ಮುನ್ನೂರ ಒಂದು ಎಂದು ಕವಿ ಹಾಡಿನಂತೆ ನನ್ನ ಭಾವನೆಯೂ ಮೂಡಿದೆ. ಆಶಯದ ಪುಟ್ಟ ಕೈ ದೀಪವನ್ನು ಹಿಡಿದು ಆಗಸ್ಟ್ನಲ್ಲಿ ಅಧ್ಯಕ್ಷಗಾದಿಯ ನಡಿಗೆಯನ್ನು ಆರಂಭಿಸಿದವ ನಾನು, ಕನಸಿನ ನಡಿಗೆಯಲ್ಲಿ ಎರಡೆಜ್ಜೆಯನ್ನಷ್ಟೇ ಇಟ್ಟಿದ್ದೆ, ಅಷ್ಟರಲ್ಲಿ ಅಷ್ಟದಿಕ್ಕುಗಳಿಂದಲೂ ಪ್ರಖರವಾದ ಬೆಳಕು ಬೀಳುತ್ತಿದ್ದವು, ತಡಕಾಡುತ್ತಿದ್ದ ಹೆಜ್ಜೆ ವೇಗ ಪಡೆದುಕೊಳ್ಳಲು ಆರಂಭಿಸಿದವು.ಈ ಪ್ರಖರ ಬೆಳಕನ್ನು ಬೀರಿದವರು ಯಾರು ಎಂದು ಚಿತ್ತ ಹರಿಸಿದರೆ ಕಂಡಿದ್ದು ನನ್ನ ಯುವವಾಹಿನಿಯ ಕುಟುಂಬ ಪ್ರತಿಯೊಂದು ಘಟಕವೂ ಅತ್ಯದ್ಬುತವಾದ […]
Read More
15-09-2017, 3:29 AM
ಆತ್ಮೀಯರೇ ಒಂದು ದಶಕದ ಹಿಂದಿನ ದಿನಗಳು ನನಗೆ ನೆನಪಾಗುತ್ತಿದೆ, ಅದು ಡಾನ್ಬಾಸ್ಕೋ ಮಿನಿ ಹಾಲ್ನ ಮೂಲೆಯ ಕುರ್ಚಿ ಮೇಲೆ ಕುಳಿತ್ತಿರುತ್ತಿದ್ದ ನಾನು ಯುವವಾಹಿನಿಯ ಸಭೆಯಲ್ಲಿ ನಡೆಯುವ ಕಲಾಪಗಳನ್ನು ಮೂಕ ವಿಸ್ಮಿತನಾಗಿ ವೀಕ್ಷಿಸುತ್ತಿದ್ದೆ. ಯಾರಾದರೂ ನನ್ನಲ್ಲಿ ವೇದಿಕೆಯ ಮುಂದೆ ಮಾತನಾಡಲು ಕೇಳುತ್ತಾರೋ ಎಂದು ಅಂಜಿ ಸಭೆಯಿಂದ ಎಷ್ಟೊ ಬಾರಿ ಅರ್ಧದಿಂದ ಎದ್ದು ನಡೆದಿದೆ. ಯಾವುದೇ ಜವಬ್ದಾರಿಕೊಟ್ಟರೂ ಮತ್ತೆ ಎರಡು ದಿನ ನನಗೆ ನಿದ್ದೆಯೇ ಬೀಳುತ್ತಿರಲಿಲ್ಲ. ಇದೆಲ್ಲ ಮರೆಯಾಗಿ ಕೇವಲ ಹತ್ತು ವರುಷ ಕಳೆಯಿತು. ಹತ್ತು ವರುಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. […]
Read More
06-09-2017, 2:34 PM
ಆತ್ಮೀಯರೇ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳ ಬೆಳಕಿನಡಿಯಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ನಿಸ್ವಾರ್ಥ ಹಾಗೂ ಅರ್ಪಣಾ ಮನೋಭಾವದ ಸದಸ್ಯರ ಕೂಡುವಿಕೆಯೊಂದಿಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಹಾನ್ ಸಂಸ್ಥೆಯೇ ಯುವವಾಹಿನಿ. ನವೋಲ್ಲಾಸದ ನವ ಚೈತನ್ಯದಿಂದ 30ನೇ ಸಮಾವೇಶದ ವಿಶಿಷ್ಟ ಕಾರ್ಯಕ್ರಮದ ಅಂಗಳದಲ್ಲಿ ನಾವಿದ್ದೇವೆ. ದಿನಾಂಕ 30-07-2016ರಂದು ಪೊಡವಿಗೂಡೆಯ ಶ್ರೀಕೃಷ್ಣನ ನಾಡಾದ ಉಡುಪಿಯಲ್ಲಿ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಸಮಾಜದ ನೋವಿನೊಂದಿಗೆ ನೊಂದಿದ್ದೇನೆ, ನಲಿವಿನೊಡನೆ ಕುಣಿದಿದ್ದೇನೆ ಹಾಗೂ ಎಲ್ಲರ ಸಲಹೆ, […]
Read More
03-11-2012, 11:28 AM
ಮಂಗಳೂರಿನ ಬಿಜೈ ನಿವಾಸಿಯಾಗಿರುವ ಕೆ. ಮೋನಪ್ಪ ಸುವರ್ಣ ಮತ್ತು ಶ್ರೀಮತಿ ಕೆ. ಜಲಜಾಕ್ಷಿ ಇವರ ಸುಪುತ್ರನಾಗಿರುವ ಕಿಶೋರ್ ಕೆ. ಬಿಜೈ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಕೆನರಾ ಹೈಸ್ಕೂಲ್ ಡೊಂಗರಕೇರಿ ಇಲ್ಲಿ ಪೂರೈಸಿ, ಕೆನರಾ ಪದವಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾರೆ. ಇದೇ ವೇಳೆ ಇವರಿಗೆ ಎಸ್ .ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋ ಆಪರೇಟೀವ್ ಸೊಸೈಟಿಯಲ್ಲಿ ಉದ್ಯೋಗ ಲಭಿಸಿದ್ದು, ಉದ್ಯೋಗವನ್ನು ಮಾಡುತ್ತಲೇ ಶಿಕ್ಷಣವನ್ನು […]
Read More