06-08-2017, 4:04 PM
ಸ್ವಾಂತಂತ್ರ್ಯ ಪಡೆದು 70 ವರ್ಷಗಳು ಸಂದರೂ ಭಾರತ ಸ್ವಾವಲಂಬಿ ರಾಷ್ಟ್ರವೆಂಬ ಹೆಸರು ಪಡೆದಿಲ್ಲ. ಎಲ್ಲದಕ್ಕೂ ಪರ ರಾಷ್ಟ್ರದ ಮೆಲೆ ನಾವು ಅವಲಂಬಿತರಾಗಿದ್ದೇವೆ. ಭಾರತವನ್ನು ನೂರಾರು ವರ್ಷ ಆಳಿದ ಮೊಗಲರು, ಬ್ರಿಟಿಷರು ಇಲ್ಲಿನ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ಹೋದರೆ, ಈಗಿನ ಕೆಲ ರಾಜಕಾರಣಿಗಳು ಅವನ್ನೇ ಮಾಡುತ್ತಿರುವುದು ವಿಪರ್ಯಾಸ. ಸ್ವಾತಂತ್ರೋತ್ತರ ಭಾರತದ ನಮ್ಮ ಹಲವು ನಾಯಕರು ಭಾರತದ ಪ್ರಗತಿಗಿಂತ ತಮ್ಮ ಕುಟುಂಬಸ್ಥರ ಪ್ರಗತಿಯ ಬಗ್ಗೆ ಚಿಂತಿತರಾಗಿದ್ದಾರೆ. ಇತ್ತೀಚೆಗೆ ಭಾರತ ಎತ್ತ ಸಾಗುತ್ತಿದೆ, ಎಂಬ ಭಯ ನಮ್ಮನ್ನು ಕಾಡುತ್ತಿದೆ. ಕೋಟಿಗಟ್ಟಲೆ ಹಗರಣದಲ್ಲಿ […]
Read More
06-08-2017, 4:02 PM
ಬ್ರಹ್ಮಶ್ರೀ ನಾರಾಯಣಗುರುಗಳು ಹತ್ತೊಂಭತ್ತನೇಯ ಶತಮಾನದ ಕೇರಳದ ಮಹಾನ್ ಸಂತ ಹಾಗೂ ಸಮಾಜ ಸುಧಾರಕರು. ಅದ್ವೈತ ಪ್ರತಿಪಾದನೆ, ‘ಮಾನವರೆಲ್ಲ ಒಂದೇ ಜಾತಿ, ಒಂದೇ ಮತ, ಎಲ್ಲರಿಗೂ ದೇವರೊಬ್ಬನೇ’ ಎನ್ನುವ ಸರಳ ಸಂದೇಶಗಳೊಂದಿಗೆ ಕೇರಳ, ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ ಕರಾವಳಿ ಜಿಲ್ಲೆಗಳನ್ನೂ ಪ್ರಭಾವಿಸಿ ಸಾಮಾಜಿಕ ಪರಿವರ್ತನೆ ಸಾಧಿಸಿದವರು. ದಾರ್ಶನಿಕತೆ, ಪ್ರಖರ ಚಿಂತನೆ, ಪಾಂಡಿತ್ಯದ ಅವರ ಸರಳ ಉದ್ಭೋದಕ ಕೃತಿಗಳು ಸಮಾಜ ಸುಧಾರಣಾ ಕಾರ್ಯಗಳು ಹಿಂದುಳಿದ ಸಮಾಜದ ಆತ್ಮಸ್ಥೈರ್ಯ ಮತ್ತು ಸಂಘರ್ಷರಹಿತ ಸಮಾಜ ನಿರ್ಮಾಣಕ್ಕಾಗಿ ಸಮಕಾಲೀನವಾಗಿಯೂ ಅತ್ಯಂತ ಪ್ರಸ್ತುತವಾಗಿವೆ. ಇಂತಹ ಮಹೋನ್ನತ […]
Read More
06-08-2017, 3:54 PM
ಸುಮಾರು 1918-20ರ ಸಮಯ. ಕೇರಳದಲ್ಲಿನ ಈಳವ ಮತ್ತು ತೀಯ ಜನಾಂಗದವರು, ಸಾಮೂಹಿಕವಾಗಿ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದ ಸಾಮಾಜಿಕ ದುರಂತ ಕಾಲವಾಗಿತ್ತು. ಇದರಿಂದ ಬೇಸತ್ತ ಬ್ರಹ್ಮಶ್ರೀ ನಾರಾಯಣಗುರುಗಳ ಶಿಷ್ಯರುಗಳಾದ ಸ್ವಾಮಿ ಬೋಧಾನಂದ, ನ್ಯಾಯವಾದಿ ಪರಮೇಶ್ವರ ಮೆನನ್ (ಮುಂದೆ ಗುರುಗಳಿಂದ ದೀಕ್ಷೆ ಪಡೆದ ಸ್ವಾಮಿ ಧರ್ಮತೀರ್ಥರ್) ಸಿ. ಕೃಷ್ಣ ವಕೀಲ, ನ್ಯಾಯಮೂರ್ತಿ ಅಯ್ಯಾ ಕುಟ್ಟಿ, ಸಹೋದರನ್ ಅಯ್ಯಪ್ಪನ್, ರಾಮವರ್ಮ ತಂಪುರಾನ್ ಮುಂತಾದವರು ಈ ಸಾಮೂಹಿಕ ಮತಾಂತರವನ್ನು ತಪ್ಪಿಸಲು ಶ್ರೀ ನಾರಾಯಣ ಧರ್ಮವೆಂಬ ಹೊಸ ಧರ್ಮವನ್ನು ಸ್ಥಾಪಿಸಿ, ಹಿಂದೂ […]
Read More
06-08-2017, 3:48 PM
ಮೇ-ಜೂನ್ ತಿಂಗಳುಗಳು ಅಬ್ಬರದ ಮುಂಗಾರು ಮಳೆಯನ್ನು ತರುವುದರ ಜೊತೆ ವಿದ್ಯಾರ್ಥಿ ಸಮುದಾಯದಲ್ಲಿ ಅತ್ಯಂತ ತಳಮಳದ, ಅಲ್ಲೋಲ ಕಲ್ಲೋಲದ ಆತಂಕದ ಕಾಲವನ್ನೂ ತರುತ್ತವೆ. ವಿದ್ಯಾರ್ಥಿಗಡಣ CET ಎಂಬ ಸುನಾಮಿಯ ಸುತ್ತ ದಿಕ್ಕು ತಪ್ಪಿದವರಂತೆ, ಸುತ್ತ ತೊಡಗುತ್ತದೆ. CET ಒಂದೆರಡು ವರ್ಷಗಳ ಮೊದಲೇ ಪ್ರಾರಂಭವಾಗುವ ಈ ಸುನಾಮಿ ಕೇವಲ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಅವರ ಹೆತ್ತವರನ್ನೂ, ಕುಟುಂಬವನ್ನೂ ಒಟ್ಟಿಗೆ ಬಾಧಿಸುತ್ತದೆ. ಈ ಚಂಡಮಾರುತಕ್ಕೆ ಒಂದು ಕರಾಳ ಮುಖವೂ ಇದೆ. ಇದಕ್ಕೆ ಅನೇಕ ವಿದ್ಯಾರ್ಥಿಗಳು ಸುಖಾಸುಮ್ಮನೆ ಬಲಿಯಾಗುತ್ತಿದ್ದಾರೆ. ಇನ್ನೊಂದಷ್ಟು ಜನ ಮಾನಸಿಕ ತುಮುಲಕ್ಕೊಳಗಾಗಿ […]
Read More
06-08-2017, 3:25 PM
ತುಳುನಾಡ್ ತುಳುಭಾಷೆಗ್ ಭಾರೀ ಪಿರಾಕ್ದ ಇತಿಹಾಸೊ ಉಂಡು. ಕರ್ನಾಟಕದ ಅಂಚನೆ ಭಾರತೊದ ಸಂಸ್ಕೃತಿಗ್ ತುಳುನಾಡ್ದ ಕೊಡುಗೆ ಮಸ್ತ್ ಉಂಡು. ಭಾರಿ ವಿಶಿಷ್ಟತೆನ್ ಪಡೆಯಿನ ಈ ಪೊರ್ಲು ತುಳುನಾಡ್, ಈ ನಡುಟ್ಟು ಬೇತೆ ಭಾಷೆಲೆನ ಬಿರುಗಾಳಿ ಏತ ಜೋರುಡು ಬೀಜಿಂಡಲಾ ೨೦೦೯ನೇ ಇಸವಿಡ್ ಉಜಿರೆಡ್ ನಡೆತಿನ ವಿಶ್ವ ತುಳು ಸಮ್ಮೇಳನೊಡ್ದು ಬೊಕ್ಕ ತುಳುಭಾಷೆ, ತುಳುವೆರೆನ ಆಚಾರ-ವಿಚಾರ, ತುಳುವ ಸಂಸ್ಕೃತಿ, ಸಂಪ್ರದಾಯೊಳೆಗ್ ಒಂಜಿ ಪೊಸ ದೇಕಿ ಬತ್ತಂಡ್. ಒಂಜಿ ರೀತಿಡ್ ಆನೆ ಬಲ ಬತ್ತಿಲೆಕ್ಕ ಆಂಡ್. ನಮ್ಮ ತುಳುವ ಸಂಸ್ಕೃತಿದ […]
Read More
06-08-2017, 3:06 PM
ಕಳೆದ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಜಾತಿ ಸಂಘಟನೆಗಳಿಗೊಂದು ವಿಶೇಷ ಬಲ ಬಂದಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಹೀಗೆ ಜಾತಿ ಸಂಘಟನೆ ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ಸರಿಯಲ್ಲ ಎಂದು ವಾದಿಸುವವರ ತರ್ಕ ಏನೇ ಇರಲಿ. ಅವರ ತರ್ಕವನ್ನು ಗೌರವಿಸುತ್ತಾ ಜಾತಿ ಸಂಘಟನೆಗಳು ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಗಟ್ಟಿಗೊಳ್ಳುತ್ತಿರುವುದಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಜಾತಿ ವಿನಾಶಕ್ಕಾಗಿ ಶತಮಾನಗಳಿಂದ ನಮ್ಮ ನಾಡಿನ ಮಹಾಪುರುಷರೆಲ್ಲಾ ಸಾಕಷ್ಟು ಚಿಂತನೆ, ಬೋಧನೆಗಳನ್ನು ಮಾಡಿದರೂ ಅದರ ಬೇರನ್ನು ಕೀಳಲು ಸಾಧ್ಯವಾಗಲಿಲ್ಲ. ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷೀಲಿ’ ಎಂಬಂತೆ […]
Read More
06-08-2017, 2:55 PM
ಬ್ರಹ್ಮಶ್ರೀ ನಾರಾಯಣ ಗುರುವರ್ಯರ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಅಮರವಾಣಿಯ ಅನುಸಾರ ‘ವಿದ್ಯೆ-ಉದ್ಯೋಗ-ಸಂಪರ್ಕ’ ಎಂಬ ಮೂರು ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಸಮಾಜ ಅಭ್ಯುದಯದ ಕೈಂಕರ್ಯಕ್ಕಾಗಿ ಬಿಲ್ಲವ ಸಮಾಜದ ಸಮಾನ ಮನಸ್ಕ ಯುವಜನರ ಸಂಘಟನೆಯಾಗಿ 1987ರಲ್ಲಿ ಯುವವಾಹಿನಿಯು ರೂಪುಗೊಂಡಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಹಾಗೂ ಮುಖ್ಯವಾಗಿ ಶೈಕ್ಷಣಿಕವಾಗಿ ಸಮಾಜದಲ್ಲಿ ಬಿಲ್ಲವರು ಬಲಿಷ್ಠರಾಗಬೇಕು ಎಂಬ ಸಂಕಲ್ಪದೊಂದಿಗೆ ಯುವವಾಹಿನಿ ಕಾರ್ಯನಿರ್ವಹಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, […]
Read More
06-08-2017, 2:51 PM
ಹಲವು ಸಮಯದಿಂದ ನನ್ನನ್ನು ಕಾಡುತ್ತಿರುವ ಎರಡು ಶಬ್ಧಗಳಿವು. ‘ಮರ್ಯಾದಾ ಹತ್ಯೆ ಮತ್ತು ದಯಾಮರಣ’ ನಂಬುವುದಿದ್ದರೆ ನಂಬಿ. ಮೊದಲನೆಯದರಲ್ಲಿ ಪ್ರೀತಿಯ ಹೆಸರಿನಲ್ಲಿ ಮಕ್ಕಳು ಸಾಯುತ್ತಾರೆ. ಎರಡನೆಯದರಲ್ಲಿ ಗುಣವಾಗದ ಕಾಯಿಲೆಯಿಂದ ಆಗುವ ಹಿಂಸೆಯ ಹೆಸರಿನಲ್ಲಿ ಜೀವಗಳು ಸಾಯಬಯಸುತ್ತವೆ. ಹುಟ್ಟಿದಂದಿನಿಂದ ತಮ್ಮ ಆಶ್ರಯದ ನೆರಳಿನಲ್ಲಿ ಬೆಳೆದು, ಯೌವನ ಅವಸ್ಥೆಗೆ ಬಂದಾಗ ತಮ್ಮ ಮಾತನ್ನು ಮೀರಿ ಅವನ/ಅವಳ ಪ್ರೀತಿಯಲ್ಲಿ ಬಿದ್ದು ತಮ್ಮ ಮಾತನ್ನು ದಿಕ್ಕರಿಸಿ ನಡೆಯುವ ಮಕ್ಕಳನ್ನು ಮರ್ಯಾದೆಯ ಹೆಸರಿನಲ್ಲಿ ಹೆತ್ತವರು ಕೊಲ್ಲುವುದು ಅದು ಮರ್ಯಾದಾ ಹತ್ಯೆಯಂತೆ. ಇಲ್ಲಿ ಮಗುವಾಗಿದ್ದಾಗ ಅದೇ ಮಕ್ಕಳನ್ನು […]
Read More
06-08-2017, 2:24 PM
ಒಂಜಿ ಬಿನ್ನಯ ಕೇನ್ಲೆ ಉಲ್ಲಾಯ ಇರೆ ಪಾದ ಪುರ್ಪೊಗೆ ಸೊಲ್ಮೆ ಸಂದಯಾ… ಕಬಿದಿ ಮಬ್ಬುಡು ಸಾದಿ ತೋಜಂದೆ ದಿಕ್ಕ್ ಓಲುಂದು ದಿಂಜ ನಾಡಿಯಾ… || ಪ || ಕುಟ್ಟಿ ಅಮ್ಮಾಳೆ ಪುಣ್ಯ ಗರ್ಭೊಡೆ ಪುಟ್ಟಿ ಬಾಲೆ ಈರಾದೆ ಮುಗುರು ತೆಲ್ತರ್… ಕೇರಳ ಪನ್ಪಿಂಚಿ ದೇವೆರೆ ನಾಡ್ಡ್ ನಾರಾಯಣ ಪುದರ್ಡೆ ಮೆರೆಯರ್ ….! ಎಂಕ್ಲೆ ಲೆಪ್ಪುಗು ಬೇಗ ಓಕೊಂಡರ್ ಗುರುನ ರೂಪೊಡೆ ಭೂಮಿ ಜತ್ತರ್… ಸೋತಿ ಜೀವೊಗು ಮತಿನ್ ಕೊರಿಯರ್ ಭ್ರಾಂತಿ ದೂರ ಮಲ್ತ್ದ್ ತೆಲಿಪಯರ್… || ಪ […]
Read More
06-08-2017, 2:03 PM
ಆತ್ಮೀಯ ಓದುಗ ಬಾಂಧವರೇ, ಮಾನವ ತನ್ನ ಸುತ್ತ ತಾನೇ ನಿರ್ಮಿಸಿಕೊಂಡಿರುವ, ಅಜ್ಞಾನ, ಅಂಧಕಾರ, ಮೂಢನಂಬಿಕೆಗಳ ಕೋಟೆಯನ್ನು ಒಡೆದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿ ಪರಿಪೂರ್ಣತೆಯನ್ನು ಹೊಂದುವುದಕ್ಕೆ ಸಾಧ್ಯವಿದೆ ಎಂಬ ಸತ್ಯವನ್ನು ಹಲವಾರು ಮಂದಿ ಯುಗಪುರುಷರು ನಮಗೆ ಸಾಧಿಸಿ, ತೋರಿಸಿಕೊಟ್ಟಿರುತ್ತಾರೆ. ಅಂತಹ ಮಹತ್ತರವಾದ ದಿವ್ಯ ಪಥವನ್ನು ತಮ್ಮ ಕೃತಿಯಿಂದ ಮತ್ತು ಸಾಧನೆಗಳಿಂದ ನಮಗೆ ತೋರಿಸಿಕೊಟ್ಟು ನಮ್ಮ ಸಮಾಜಕ್ಕೆ ಅಂಟಿದ್ದ ಅಸ್ಪ್ರಶ್ಯತೆ ಶಾಪವನ್ನು ತೊಡೆದು ಹಾಕಿ, ಸನ್ಮಾರ್ಗದತ್ತ ನಮಗೆ ಬೆಳಕು ತೋರಿದವರು ಬ್ರಹ್ಮಶ್ರೀ ನಾರಾಯಣಗುರುಗಳು. ಅವರು ಸಾರಿದ ಒಂದೇ ಜಾತಿ, ಒಂದೇ […]
Read More