ಅಂಚೆ ಜನ ಸಂಪರ್ಕ ಅಭಿಯಾನ
21-01-2026, 11:25 PM
06-01-2026, 3:08 PM
ಪಡುಬಿದ್ರಿ : ಯುವವಾಹಿನಿ (ರಿ.), ಪಡುಬಿದ್ರಿ ಘಟಕದ ವತಿಯಿಂದ ಆಹ್ವಾನಿತ ತಂಡಗಳ ಮಹಿಳಾ ಕ್ರಿಕೆಟ್ ಪಂದ್ಯಾವಳಿ “ಬಿಲ್ಲವ ಪ್ರೀಮಿಯರ್ ಲೀಗ್ (BPL)–2026” ಅನ್ನು 2026ರ ಜನವರಿ 31 ಮತ್ತು ಫೆಬ್ರವರಿ 1ರಂದು ರಾಜೀವ್ ಗಾಂಧಿ ಕ್ರೀಡಾಂಗಣ, ಹೆಜಮಾಡಿದಲ್ಲಿ ಆಯೋಜಿಸಲಾಗಿದೆ. ಕ್ರೀಡೆಯ ಮೂಲಕ ಸಂಘಟನೆ, ಏಕತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಈ ಪಂದ್ಯಾಕೂಟದ ಮುಖ್ಯ ಉದ್ದೇಶವಾಗಿದ್ದು, ಈ ಸಂದರ್ಭದಲ್ಲಿ ಪ್ರತಿಭಾವಂತ ಆಟಗಾರ್ತಿಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಗುವುದು. ಪಂದ್ಯಾಕೂಟದ ವಿಜೇತರಿಗೆ ಒಟ್ಟು ₹1,75,000 […]
04-01-2026, 2:48 PM
ಬೆಳ್ತಂಗಡಿ: ನೊಂದ ಕುಟುಂಬಗಳಿಗೆ ಸಾಂತ್ವನ ನೀಡುವ ಜೊತೆಗೆ ಯುವಜನತೆಯಲ್ಲಿ ಸ್ನೇಹ, ಸೌಹಾರ್ದತೆ ಮತ್ತು ಸಂಘಟನಾ ಮನೋಭಾವವನ್ನು ಬೆಳೆಸುವ ಕಾರ್ಯದಲ್ಲಿ ಯುವವಾಹಿನಿಯ ಪಾತ್ರ ಶ್ಲಾಘನೀಯವಾಗಿದೆ ಎಂದು ವಿವಿಧ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಶ ಸಂಭ್ರಮದ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟ ಹಾಗೂ ಸಾಂತ್ವನ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಗೇರ ಬ್ರಿಗೇಡ್ ಅಧ್ಯಕ್ಷ ಬಿನುತಾ ಬಂಗೇರ ಮಾತನಾಡಿ, ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಜೊತೆಗೆ ಮನಸ್ಸಿಗೆ ಧೈರ್ಯ ತುಂಬುವ ಸಂಘಟನೆ […]
12-12-2025, 6:12 AM
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂವರಿಗಾಗಿ ಅವಿಭಜಿತ ಪುತ್ತೂರು ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡಾಕೂಟ 2025 ದಿನಾಂಕ 23/11/2025ರಂದು ಭಾನುವಾರ ಸ್ಥಳ. ಜೂನಿಯಾರ್ ಕಾಲೇಜು ಕ್ರೀಡಾಂಗಣ ಕೊಂಬೆಟ್ಟು ಪುತ್ತೂರು . ಬೆಳಗ್ಗೆ ಊರಿನ ಪ್ರಗತಿಪರ ಕೃಷಿಕರಾದ ಶ್ರೀಯುತ ವಾಸು ಪೂಜಾರಿ ಗುಂಡ್ಯಡ್ಕರವರು ತೆಂಗಿನ ಕಾಯಿ ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಇಲ್ಲಿ ಸೇರಿದ ಎಲ್ಲ ತಂಡಗಳಿಗೆ ಹಾಗೂ ಘಟಕದ ಎಲ್ಲರಿಗೂ ಶುಭಾರೈಸಿದರು. ನಂತರ ಸಭಾಕಾರ್ಯಕ್ರಮ ನಡೆಯಿತ್ತು. ಘಟಕದ ಉಪಾಧ್ಯಕ್ಷರಾದ ಸಮಿತ್ […]
12-12-2025, 5:49 AM
ನವೆಂಬರ್ 22 ಹಾಗೂ 23ರಂದು ಬಂಟ್ವಾಳ ಭಂಡಾರಿಬೆಟ್ಟು ಎಸ್ವಿಎಸ್ ಶಾಲಾ ಮೈದಾನದಲ್ಲಿ, ಘಟಕದ ಆಶ್ರಯದಲ್ಲಿ, ಸೇವಾ ಚಟುವಟಿಕೆಗಳಿಗೆ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಮಟ್ಟದ 12 ತಂಡಗಳೊಂದಿಗೆ ಆಯೋಜಿಸಲ್ಪಟ್ಟ ಬೈದ್ಯಶ್ರೀ ಪ್ರೀಮಿಯರ್ ಲೀಗ್ ಬಿಲ್ಲವ ಕ್ರಿಕೆಟ್ ಪಂದ್ಯಾಟದಲ್ಲಿ ನಾಗೇಶ್ ಪೂಜಾರಿ ಏಲಾಬೆ ಮಾಲಕತ್ವದ ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ ಮೂವತ್ತು ಸಾವಿರ ನಗದು ಹಾಗೂ ಬೈದಶ್ರೀ ಟ್ರೋಫಿ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಪೃಥ್ವಿರಾಜ್ ಮಣಿಹಳ್ಳ ಮಾಲಕತ್ದದ ಬಿರುವೆರ ಕನಸು ಮಣಿಹಳ್ಳ ದ್ವೀತೀಯ ಪ್ರಶಸ್ತಿ, ವಿಕ್ರಮ್ ಶಾಂತಿ ಕೆರೆಕೋಡಿಗುತ್ತು ಮಾಲಕತ್ದದ […]
01-12-2025, 2:55 PM
ಕೋಟಿ ಚೆನ್ನಯ್ಯ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಭಾನುವಾರ, ಅಕ್ಟೋಬರ್ 12 ರಂದು ನಾಡಪ್ರಭು ಕೆಂಪೇಗೌಡ ಬ್ಯಾಡ್ಮಿಂಟನ್ ಕೋರ್ಟ್, ವಿಜಯನಗರ ದಲ್ಲಿ ನಡೆಯಿತು. ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಡಬಲ್ಸ್ , ಮಿಕ್ಸಡ್ ಡಬಲ್ಸ್ ಪಂದ್ಯಗಳು* ನಡೆದವು. ಮಧ್ಯಾಹ್ನ 3 ಗಂಟೆಯಿಂದ ಮಾಸಿಕ ಸಭೆ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಬ್ಯಾಡ್ಮಿಂಟನ್ ಕೋರ್ಟ್, ರೆಫರಿಗಳು, ಜಡ್ಜ್ ಹಾಗೂ ಇತರೆ ಸ್ಥಳೀಯ ವ್ಯವಸ್ಥೆಗಳನ್ನು ಕ್ರೀಡಾ ನಿರ್ದೇಶಕರು ಕಿಶನ್ ಪೂಜಾರಿ ಮತ್ತು ರಕ್ಷಾ ಪ್ರಾಯೋಜಿಸಿದ್ದರು. ಸುಂದರ ಟ್ರೋಫಿಗಳು ಮತ್ತು […]
21-10-2025, 3:13 PM
ಶ್ರೀ ಗಣೇಶ ಚತುರ್ಥಿ ಯ ಪ್ರಯುಕ್ತ ಪ್ರತಿ ವರ್ಷ ನಡೆಸುವಂತೆ ದಿನಾಂಕ 27-08-2025 ಬುಧವಾರದಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆಯ, ಆವರಣದಲ್ಲಿ ಯುವವಾಹಿನಿ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟಾ ಸ್ಪರ್ಧಾ ಕಾರ್ಯಕ್ರಮವನ್ನು ಘಟಕದ ವತಿಯಿಂದ ಹಮ್ಮಿಕೊಳ್ಳಲಾಯಿತು. ಮಕ್ಕಳ ವಿಭಾಗ ಮಹಿಳಾ ವಿಭಾಗ ಪುರುಷ ವಿಭಾಗ ಹೀಗೆ ಬೇರೆ ಬೇರೆ ವಿಭಾಗಗಳಾಗಿ ಹತ್ತು ಹಲವರು ಮನರಂಜನ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು . ತದನಂತರ ಚುಟುಕಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ಘಟಕದ ಅಧ್ಯಕ್ಷರು ವರುಣ್ ಕುಮಾರ್, ಸ್ಥಾಪಕ ಅಧ್ಯಕ್ಷರು […]
21-10-2025, 2:39 PM
ಮಂಗಳೂರು ತಾಲೂಕು ಬಿಲ್ಲವ ಸಂಘದ ಆಶ್ರಯದಲ್ಲಿ, ಮಂಗಳ ಸ್ಟೇಡಿಯಂ ನಲ್ಲಿ 21-09-2025 ರಂದು ನಡೆದ “”ಮಂಗಳೂರು ದಸರಾ ಕ್ರೀಡಾ ಕೂಟ”ದ ಪಥಸಂಚಲನದಲ್ಲಿ ಘಟಕದ ಸದಸ್ಯರು ಭಾಗವಹಿಸಿದರು.
19-09-2025, 8:44 AM
ದಿನಾಂಕ 10/08/2025 ಆಟಿದ ನೆಂಪುಕಾರ್ಯಕ್ರಮ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಸ್ನಾತಕೋತರ ವಿಭಾಗದಲ್ಲಿ ಮುಖ್ಯಸ್ಥರಾದ ಪ್ರೊ|ಡಾ| ರಾಕೇಶ್ ಕುಮಾರ್ ಆಗಮಿಸಿದ್ದರು. ಸಭಾ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ದೀಪವನ್ನು ಬೆಳಗುವುದರ ಮೂಲಕ ಉದ್ಘಾಟಿಸಲಾಯಿ..ಘಟಕದ ಅಧ್ಯಕ್ಷರಾದ ರಾಹುಲ್ ಸನಿಲ್ ರವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು, ನಂತರ ಆಟಿ ತಿಂಗಳ ಮದಿಪು ನುಡಿಯಲು ಬಂದಂತಹ ಪ್ರೊ|ಡಾ| ರಾಕೇಶ್ ಕುಮಾರ್ ರವರು ಮುಂಚಿನ ಕಾಲದಲ್ಲಿದ್ದ ಆಟಿ ತಿಂಗಳ ಕಷ್ಟದ ದಿನಗಳನ್ನು ನೆನಪಿಸಿಕೊಂಡು ನಮ್ಮ ಹಿರಿಯರು ಆಚರಿಸುತ್ತಿದ್ದ ಆಚರಣೆಗಳ ವೈಜ್ಞಾನಿಕ ವಿಶೇಷತೆಗಳನ್ನು ವಿವರಿಸಿದರು. […]
19-09-2025, 8:40 AM
ತಾರೀಕು27/07/2025 ರಂದು 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಆಧುನಿಕ ಯುಗದ ಪಿಜ್ಜಾ ಬರ್ಗರ್ ತಿಂಡಿಗಳನ್ನು ಬದಿಗೆ ಸರಿಸಿ ಹಿಂದಿನ ಕಾಲದ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹಿಂದಿನ ಕಾಲದಲ್ಲಿ ಹಿರಿಯರು ಕೃಷಿ ಕಾರ್ಯದಲ್ಲಿ ಪಟ್ಟ ಶ್ರಮ ವನ್ನೂ ತಿಳಿ ಹೇಳುವ ಕಾರ್ಯವಾಗಬೇಕು ಎಂದು ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲು ಹೇಳಿದರು. ಮುಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಮುಲ್ಕಿ ಯುವವಾಹಿನಿ 23 ನೇ ವರ್ಷದ […]