ತಾರೀಕು27/07/2025 ರಂದು 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ
ಆಧುನಿಕ ಯುಗದ ಪಿಜ್ಜಾ ಬರ್ಗರ್ ತಿಂಡಿಗಳನ್ನು ಬದಿಗೆ ಸರಿಸಿ ಹಿಂದಿನ ಕಾಲದ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹಿಂದಿನ ಕಾಲದಲ್ಲಿ ಹಿರಿಯರು ಕೃಷಿ ಕಾರ್ಯದಲ್ಲಿ ಪಟ್ಟ ಶ್ರಮ ವನ್ನೂ ತಿಳಿ ಹೇಳುವ ಕಾರ್ಯವಾಗಬೇಕು ಎಂದು ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲು ಹೇಳಿದರು.
ಮುಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಮುಲ್ಕಿ ಯುವವಾಹಿನಿ 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅಕ್ಕಿ ಮುಡಿಯಿಂದ ಸಾಂಪ್ರದಾಯಿಕ ಸಾಧನದ ಮೂಲಕ ಅಕ್ಕಿಯನ್ನು ಹೊರ ತೆಗೆದು ತಡಪೆಗೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾನಪದ ಕಲ್ಪಾರ್ಥಿ ದಿನೇಶ್ ಸುವರ್ಣ ರಾಯಿ ಆಷಾಡ ಮಾಸದ ತಿಂಗಳ ಮಹತ್ವದ ಬಗ್ಗೆ ಆಟಿದ ಮದಿಪು ನೀಡಿದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣರನ್ನು ಸಾಧಕರ ನೆಲೆಯಲ್ಲಿ ಆಟಿದತಮ್ಮನ ನೀಡಿ ಗೌರವಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ತರವಾಡು ಚಲನಚಿತ್ರ ನಟ ,ನಿರ್ಮಾಪಕ ಶೋಧನ್ ಶೆಟ್ಟಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ವಿನಯಕುಮಾರ್ ಮಟ್ಟು ವಹಿಸಿದ್ದರು. ಘಟಕದ ಕಾರ್ಯದರ್ಶಿ ಪ್ರೇರಣಾ, ಕಾರ್ಯಕ್ರಮ ನಿರ್ದೇಶಕಿ ಶಕೀಲಾ ಹರಿಂದ್ರ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಮಾಜಿ ಅಧ್ಯಕ್ಷ ಜಯ ಕುಮಾರ್ ಕುಬೇರ್ ಹಿಂದಿನ ದೂರದರ್ಶನ ದ ವಾರ್ತಾ ಪ್ರಸಾರ ವಾಚನದ ರೀತಿಯಲ್ಲಿ ಪ್ರಸ್ತಾವನೆಯನ್ನು ಮಾಡಿದರು.
ಬೆಳಿಗ್ಗೆ ಎಲ್ಲರಿಗೂ ಅರೆಪುದಡ್ಡೆ ಚಾ ಕಾಫಿ , ಕಾರ್ಯಕ್ರಮದ ನಡು ನಡುವೆ ಕಡ್ಲೆ ಹಪ್ಪಳ , ಮಧ್ಯಾಹ್ನ ಆಟಿದ ಅಟಿಲ್, ವಿವಿಧ ಬಗೆಯ ತಿನಿಸುಗಳನ್ನು ಸೇರಿದವರು ಸವಿದರು.
ಘಟಕಾಧ್ಯಕ್ಷ ವಿನಯ್ ಕುಮಾರ್ ಮಟ್ಟು ಸ್ವಾಗತಿಸಿದರು, ಕಾರ್ಯದರ್ಶಿ ಪ್ರೇರಣಾ ಧನ್ಯವಾದ ಸಲ್ಲಿಸಿದರು. ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡ್ ನಿರೂಪಿಸಿದರು.


