ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂವರಿಗಾಗಿ ಅವಿಭಜಿತ ಪುತ್ತೂರು ತಾಲೂಕು ಮಟ್ಟದ
ಕೋಟಿ ಚೆನ್ನಯ ಕ್ರೀಡಾಕೂಟ 2025
ದಿನಾಂಕ 23/11/2025ರಂದು ಭಾನುವಾರ
ಸ್ಥಳ. ಜೂನಿಯಾರ್ ಕಾಲೇಜು ಕ್ರೀಡಾಂಗಣ ಕೊಂಬೆಟ್ಟು ಪುತ್ತೂರು .
ಬೆಳಗ್ಗೆ ಊರಿನ ಪ್ರಗತಿಪರ ಕೃಷಿಕರಾದ ಶ್ರೀಯುತ ವಾಸು ಪೂಜಾರಿ ಗುಂಡ್ಯಡ್ಕರವರು ತೆಂಗಿನ ಕಾಯಿ ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಇಲ್ಲಿ ಸೇರಿದ ಎಲ್ಲ ತಂಡಗಳಿಗೆ ಹಾಗೂ ಘಟಕದ ಎಲ್ಲರಿಗೂ ಶುಭಾರೈಸಿದರು. ನಂತರ ಸಭಾಕಾರ್ಯಕ್ರಮ ನಡೆಯಿತ್ತು. ಘಟಕದ ಉಪಾಧ್ಯಕ್ಷರಾದ ಸಮಿತ್ ಪಿ ಬಂದಂತಹ ಎಲ್ಲರನ್ನು ಸ್ವಾಗತಿಸಿದರು. ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ಸತೀಶ್ ಕುಮಾರ್ ಕೆಡೆಂಜಿಯವರು ದೀಪಬೆಳಗಿಸಿ ಉದ್ಘಾಟಿಸಿದರು.
ಘಟಕದ ಎಲ್ಲ ಕಾರ್ಯಕ್ರಮವು ಒಳ್ಳೆ ರೀತಿಯಲ್ಲಿ ಮೂಡಿಬರಲಿ ಎಂದು ತಮ್ಮ ಹಿತನುಡಿಗಳೊಂದಿಗೆ ಶುಭಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಮಂಗಳೂರು ಇದರ ಅಧ್ಯಕ್ಷರಾದ ಬಿ.ಎಸ್.ಸತೀಶ್ ರವರು ತಮ್ಮ ಅನುಭವದ ಮಾತುಗಳನಾಡಿ ನಮ್ಮ ಸಮಾಜದ ಬಾಂಧವರು ಕ್ರೀಡೆಯ ಮೂಲಕ ಉನ್ನತ ಮಟ್ಟವನ್ನೆರಬೇಕೆಂದು ಶುಭಾರೈಸಿದರು.ನಂತರ ಕೇಂದ್ರ ಸಮಿತಿಯ ಸಂಘಟಣಾಕಾರ್ಯದರ್ಶಿಯಾದ ಕೃಷ್ಣಪ್ಪ ಅಮೈ ತನ್ನ ಮಾತಿನ ಮೂಲಕ ಶುಭಾರೈಸಿದರು. ಘಟಕದ ಅಧ್ಯಕ್ಷರಾದ ಬಿ. ಅಣ್ಣಿಪೂಜಾರಿಯವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಬಂದಂತಹ ಎಲ್ಲ ಕ್ರೀಡಾಪಟ್ಟುಗಳಿಗೆ ಹಾಗೂ ದೈಹಿಕ ಶಿಕ್ಷಕ ಶಿಕ್ಷಕಿಯರಿಗೆ ಕ್ರೀಡಾಭಿಮಾನಿಗಳಿಗೆ ಮಾದ್ಯಮ ಮಿತ್ರರಿಗೆ ಘಟಕದ ಎಲ್ಲ ಮಾಜಿ ಅಧ್ಯಕ್ಷರುಗಳಿಗೂ ಘಟಕದ ಎಲ್ಲ ಪದಾಧಿಕಾರಿಗಳಿಗೂ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.
ಯುವವಾಹಿನಿ(ರಿ.)ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಕೊಟ್ಯಾನ್ ತನ್ನ ಹಿತನುಡಿಗಳನಾಡಿ ಎಲ್ಲರಿಗೂ ಶುಭಾರೈಸಿದರು. ಘಟಕದ ಕಾರ್ಯದರ್ಶಿಯಾದ ಶರತ ಸಾಲಿಯನ್ ಧನ್ಯವಾದ ಸಮರ್ಪಿಸಿದರು.
ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಬಿ.ಅಣ್ಣಿಪೂಜಾರಿಯವರು ವಹಿಸಿದರು.ಘಟಕದ ಉಪಾಧ್ಯಕ್ಷರಾದ ಸಮೀತ್ ಪಿ ರವರು ಬಂದಂತಹ ಎಲ್ಲ ಅಥಿತಿಗಳನ್ನು ಸ್ವಾಗತಿಸಿದರು.ವೇದಿಕೆಯಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಗೆಜ್ಜೆಗಿರಿ ಕ್ಷೇತ್ರದ ಪ್ರದಾನ ಕಾರ್ಯದರ್ಶಿಯಾದ ಡಾ.ರಾಜಾರಾಂ ಕೆ ಬಿ ಸಮಾಜ ಸೇವ ಟ್ರಸ್ಟ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು. ತಾಲೂಕು ಯುವಜನ ಕ್ರೀಡಾಂಗಣ ಕೊಂಬೆಟ್ಟು ಮೇಲ್ವಿಚಾರಕರಾದ ಶ್ರೀಕಾಂತ ಪೂಜಾರಿ ಬಿರಾವು. ಕಾರ್ಯದರ್ಶಿ ಶರತ್ ಸಾಲಿಯಾನ್ ದೋಳ, ಕ್ರೀಡಾ ನಿರ್ದೇಶಕರಾದ ಗೌತಮ್ ಪಿ ರವರು ಉಪಸ್ಥಿತಿದರು.ಬಂದಂತಹ ಎಲ್ಲ ಅಥಿತಿಗಳು ತಮ್ಮ ಹಿತನುಡಿಗಳನಾಡಿ ಶುಭಾರೈಸಿದರು. ನಂತರ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಪಟ್ಟಿಯನ್ನು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಜಯರಾಮ ಬಿ ಎನ್ ರವರು ವಾಚಿಸಿದರು.ಎಲ್ಲಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.ನಂತರ ಘಟಕದ ಅಧ್ಯಕ್ಷರಾದ ಅಣ್ಣಿಪೂಜಾರಿಯವರು ಬಂದಂತಹ ಎಲ್ಲ ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ ಕ್ರೀಡಾಕೂಟಕ್ಕೆ ಸಹಕಾರ ನೀಡಿದ ದೈಹಿಕ ಶಿಕ್ಷಕ ವೃಂದದವರಿಗೂ ಘಟಕದ ಮಾಜಿ ಅಧ್ಯಕ್ಷರುಗಳನ್ನು ಘಟಕದ ನಿರ್ದೇಶಕರುಗಳನ್ನು ಪದಾಧಿಕಾರಿಗಳನ್ನು ಸರ್ವ ಸದಸ್ಯರುಗಳನ್ನು ಸ್ವಯಂಸೇವಕರಾಗಿ ಸಹಕರಿಸಿದ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರನ್ನು ಮಾದ್ಯಮ ಮಿತ್ರರಿಗೂ ಪತ್ರಕರ್ತರಿಗೂ ತುಂಬುಹೃಯದ ಅಭಿನಂದನೆ ಸಲ್ಲಿಸಿದರು ಕಾರ್ಯದರ್ಶಿಯಾದ ಶರತ್ ಸಾಲಿಯಾನ್ ಧನ್ಯವಾದ ಸಮರ್ಪಿಸಿದರು


