ಕೋಟಿ ಚೆನ್ನಯ್ಯ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಭಾನುವಾರ, ಅಕ್ಟೋಬರ್ 12 ರಂದು ನಾಡಪ್ರಭು ಕೆಂಪೇಗೌಡ ಬ್ಯಾಡ್ಮಿಂಟನ್ ಕೋರ್ಟ್, ವಿಜಯನಗರ ದಲ್ಲಿ ನಡೆಯಿತು.
ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಡಬಲ್ಸ್ , ಮಿಕ್ಸಡ್ ಡಬಲ್ಸ್ ಪಂದ್ಯಗಳು* ನಡೆದವು.
ಮಧ್ಯಾಹ್ನ 3 ಗಂಟೆಯಿಂದ ಮಾಸಿಕ ಸಭೆ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಬ್ಯಾಡ್ಮಿಂಟನ್ ಕೋರ್ಟ್, ರೆಫರಿಗಳು, ಜಡ್ಜ್ ಹಾಗೂ ಇತರೆ ಸ್ಥಳೀಯ ವ್ಯವಸ್ಥೆಗಳನ್ನು ಕ್ರೀಡಾ ನಿರ್ದೇಶಕರು ಕಿಶನ್ ಪೂಜಾರಿ ಮತ್ತು ರಕ್ಷಾ ಪ್ರಾಯೋಜಿಸಿದ್ದರು.
ಸುಂದರ ಟ್ರೋಫಿಗಳು ಮತ್ತು ಬಹುಮಾನಗಳನ್ನು ಯಜ್ನೇಶ್ ಪೂಜಾರಿ, ದುಬೈ — (ಸುಧೀರ್ ಪೂಜಾರಿ ಪೆರಾಡಿ ಅವರ ರೆಫೆರೆನ್ಸ್ ಮೂಲಕ) ಹಾಗೂ ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಚ್ಚಿಂದ್ರ ಕೋಟ್ಯಾನ್ ರವರು ಪ್ರಾಯೋಜಿಸಿದ್ದರು.
ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಘಟಕದ ಸದಸ್ಯರ ಉಪಸ್ಥಿತಿ ಪಂದ್ಯಾಟಕ್ಕೆ ಮೆರಗು ನೀಡಿತು. ನುರಿತ ಆಟಗಾರರು ಒಂದು ಕಡೆಯಿಂದ ಕಣಕ್ಕಿಳಿದರೆ ಇನ್ನೊಂದು ಕಡೆಯಿಂದ ಕ್ರೀಡಾ ಸ್ಪೂರ್ತಿಯೊಂದಿಗೆ ನಮ್ಮ ಕೆಲವು ಹೊಸ ಆಟಗಾರರ ಭಾಗವಹಿಸುವಿಕೆ ಕ್ರೀಡೆಯ ಮಹತ್ವವನ್ನು ಹೆಚ್ಚಿಸಿತು.
ಭಾಗವಹಿಸಿದ ಎಲ್ಲಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಆಡಿ ಗಮನ ಸೆಳೆದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಲೆಂಜರ್ಸ್ ತಂಡದ ವಿನೋದ್ ರಾಜ್ ಚಾಂಪಿಯನ್ ಆದರೆ ತುಡರ್ ತಂಡದ ಕಿಶನ್ ಎರಡನೇ ಸ್ಥಾನವನ್ನು ಅಲಂಕರಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ತುಡರ್ ತಂಡದ ಗಣೇಶ್ ಹಾಗೂ ಕಿಶನ್ ಜೋಡಿ ಚಾಂಪಿಯನ್ ಆದರೆ ಚಾಲೆಂಜರ್ಸ್ ತಂಡದ ವಿನೋದ್ ರಾಜ್ ಹಾಗೂ ಸುರೇಂದ್ರ ಜೋಡಿ ಎರಡನೇ ಸ್ಥಾನ ಪಡೆದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತುಡರ್ ತಂಡದ ಶ್ರಾವ್ಯ ಮತ್ತು ಅಮಿತ ಜೋಡಿ ಚಾಂಪಿಯನ್ ಆದರೆ ಪವರ್ ತಂಡದ ದೀಕ್ಷಾ ಹಾಗೂ ವೈಶು ಜೋಡಿ ಎರಡನೇ ಸ್ಥಾನ ಪಡೆದರು.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ತುಡರ್ ತಂಡದ ಕಿಶನ್ ಮತ್ತು ಶ್ರಾವ್ಯ ಜೋಡಿ ಚಾಂಪಿಯನ್ ಆದರೆ ಬಿರುವೆರ್ ತಂಡದ ಅನುಷಾ ಹಾಗೂ ರೋಹಿತ್ ಎರಡನೇ ಸ್ಥಾನ ಪಡೆದರು.
ತುಡರ್ ತಂಡದ ಎಲ್ಲಾ ಆಟಗಾರರ ಕಮಿಟ್ಮೆಂಟ್ ಎಲ್ಲಾ ವಿಭಾಗದಲ್ಲಿ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿತು.
ಭಾಗವಹಿಸಿದ ಎಲ್ಲಾ ಆಟಗಾರರು ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತಾ ಆಟವಾಡಿ ಯುವವಾಹಿನಿ ಯನ್ನು ಗೆಲ್ಲಿಸಿದರು.
ಈ ಪಂದ್ಯಕೂಟದ ಮಧ್ಯೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಯುವವವೈಭವ 2025 ಪೂರ್ವಭಾವಿ ಸಭೆ ನಡೆಸಿ ರೂಪುರೇಷೆ ಬಗ್ಗೆ ವಿವರಣೆ ನೀಡಿದರು.
ಪಂದ್ಯಕೂಟದ ನಂತರ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪಣಪಿಲ , ಮಾಜಿ ಅಧ್ಯಕ್ಷರುಗಳು ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷ ಲೊಕೇಶ್ ಹಾಗೂ ಸದಸ್ಯೆ ದೀಪಾ ಇವರ ಸಮಾಗಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.


