27-09-2022, 2:12 PM
ಬಜ್ಪೆ :- ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿ ದಿನಾಂಕ 27 ಸೆಪ್ಟೆಂಬರ್ 22ರ ಸಂಜೆ 7.00 ಗಂಟೆಯಿಂದ 8.30 ಗಂಟೆ ವರೆಗೆ ಶ್ರೀ ಚಾಮುಂಡಿ ಕ್ಷೇತ್ರ ಮುರನಗರ ಇಲ್ಲಿ ಭಜನಾ ಸೇವೆ ನಡೆಯಿತು. ಹಾಗೂ ದಿನಾಂಕ 28 ಸೆಪ್ಟೆಂಬರ್ 2022 ರಂದು ಸಂಜೆ 6.30ರಿಂದ 8.00 ವರೆಗೆ ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇಲ್ಲಿ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Read More
23-09-2022, 4:59 PM
ಮೂಲ್ಕಿ :- ಯುವವಾಹಿನಿ (ರಿ.) ಮುಲ್ಕಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮವಾಗಿರುವ “ತುಳುವೆರೆ ತುಡರಪರ್ಬ” ಕಾರ್ಯಕ್ರಮವು ದಿನಾಂಕ 23 ಅಕ್ಟೋಬರ್ 2022ನೇ ಆದಿತ್ಯವಾರದಂದು ಘಟಕದ ಅಧ್ಯಕ್ಷರಾದ ಭಾರತಿ ಭಾಸ್ಕರ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಂಘದ ಸಭಾ ಗ್ರಹದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉದ್ಘಾಟಿಸಿ ಮಾತನಾಡಿ ದೀಪಾವಳಿಯ ಪರ್ವಕಾಲದ ಬೆಳಕು ದೇಶದ ಉನ್ನತಿಯ ಬೆಳಕಾಗಿ ಮೂಡಿ ಸಮಾಜದ ಅಭಿವೃದ್ಧಿಗೊಳಿಸುವಂತಾಗಬೇಕೆಂದರು. ಸಮಾಜ ಸೇವಕ ಬಿಲ್ಲವ ಸಂಘ […]
Read More
22-09-2022, 9:44 AM
ಪಡುಬಿದ್ರಿ:- ಘಟಕದ ವತಿಯಿಂದ ದಿನಾಂಕ 22 ಸೆಪ್ಟೆಂಬರ್ 2022ರಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇಲ್ಲಿ ಭಜನಾ ಸೇವೆ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಅರ್ಚಕರಾದ ಚಂದ್ರಶೇಖರ ಶಾಂತಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಕೆ, ಕೋಟ್ಯಾನ್ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಶಾಶ್ವತ್, ಕಾರ್ಯದರ್ಶಿ ಡಾ|| ಐಶ್ಚರ್ಯ ಸಿ ಅಂಚನ್ , ಕೋಶಾಧಿಕಾರಿ ಸುಜಾತಾ ಪ್ರಸಾದ್, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭಜನೆಯ […]
Read More
11-09-2022, 1:40 PM
ಮಂಗಳೂರು :- ನಾರಾಯಣ ಗುರುಗಳ ತತ್ವಾದರ್ಶಗಳ ಬೆಳಕಿನಡಿಯಲ್ಲಿ ಸಾಗುತ್ತಿರುವ ಯುವವಾಹಿನಿ ಸಂಸ್ಥೆಯ ಯುವಕರು ಸಮಾಜದ ಆಶಕ್ತರಿಗೆ, ಅಸಾಯಕರಿಗೆ ನೆರವಾಗುವುದರೊಂದಿಗೆ ಸಮಾಜಮುಖಿ ಕಾರ್ಯಗಳಿಂದಾಗಿ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್ ಎಸ್ ಸಾಯಿರಾಂ ತಿಳಿಸಿದರು. ಅವರು ಶ್ರೀ ಗೋಕರ್ಣನಾಥ ಸಭಾಂಗಣದ ದಿ|| ಪ್ರವೀಣ್ ನೆಟ್ಟಾರು ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಮಹಿಳಾ ಘಟಕದ ವತಿಯಿಂದ ನಡೆದ ಕುಣಿದು ಭಜಿಸಿರೋ ಯುವವಾಹಿನಿ ಅಂತರ್ ಘಟಕ ಕುಣಿತ ಭಜನಾ […]
Read More
05-09-2022, 3:47 PM
ಮಂಗಳೂರು:- ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 05.09.2022ರ ಸೋಮವಾರದಂದು ಸಾಪ್ತಾಹಿಕ ಭಜನಾ ಸರಣಿ ಸಂಕೀರ್ತನೆ ನಡೆಯಿತು. ಯುವವಾಹಿನಿ (ರಿ.) ಬಜ್ಪೆ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಬಹಳ ಸುಶ್ರಾವ್ಯವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಾನಿಧ್ಯದಲ್ಲಿ ಗುರುಪೂಜೆ ನಡೆಸಿ ಆಡಳಿತ ಮಂಡಳಿ ಮತ್ತು ಆರ್ಚಕರು ಸೇವಾರ್ಥಿಗಳಿಗೆ ಪ್ರಸಾದ ನೀಡಿದರು. ಭಜನಾ ಸಲಹೆಗಾರರಾದ ರಾಮಚಂದ್ರ ಪೂಜಾರಿ ದಂಪತಿಗಳು ಭಜನಾ ಸೇವಾರ್ಥಿಗಳಿಗೆ ಶಾಲು ಹೊದಿಸಿ, ಅನುಗ್ರಹ ಪತ್ರ ನೀಡಿ ಗೌರವಿಸಿದರು. […]
Read More
03-09-2022, 3:28 PM
ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಸೋಣ ಸಂಭ್ರಮ ಕಾರ್ಯಕ್ರಮವು ದಿನಾಂಕ 03 ಸೆಪ್ಟೆಂಬರ್ 2022 ಶನಿವಾರದಂದು ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷರಾದ ಸುನೀತಾ ಗೋಪಾಲ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತ ಲ್ ಸಾರ್ ನಡೆಸಿದರು. ನಂತರ ಮಾತನಾಡಿದ ಕತ್ತಲ್ ಸಾರ್ ಸೋಣ ತಿಂಗಳು ತುಳುವರ ಭಕ್ತಿ ಪ್ರಧಾನವಾದ ತಿಂಗಳು , ಹಬ್ಬ ಹರಿದಿನಗಳ […]
Read More
16-08-2022, 5:02 PM
ಕೊಲ್ಯ :- ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದಲ್ಲಿ ತಾ. 16 ಆಗಸ್ಟ್ 2022 ರಂದು ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರಿಂದ ಓಂಕಾರದೊಂದಿಗೆ ಆರಂಭಗೊಂಡು ಗಣಪತಿ ಸ್ತುತಿ, ಗುರುಸ್ತುತಿ ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಿಂದಲೇ ನಿತ್ಯಾನುಷ್ಠಾನ ಶ್ಲೋಕ ಪಠಣೆ ಮಾಡಿಸಲಾಯಿತು. ಇಂದಿನ ತರಗತಿಯಲ್ಲಿ ವಿಶೇಷವಾಗಿ ರಕ್ಷಾ ಬಂಧನದ ಮಹತ್ವವನ್ನು ಗುರುಗಳು ತಿಳಿಸಿಕೊಟ್ಟರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಸೇರಿ ಪರಸ್ಪರ ರಕ್ಷೆ ಕಟ್ಟಿ ಸಹೋದರತೆಯ ಹಬ್ಬ ರಕ್ಷಾ ಬಂಧನ ವನ್ನು ಸಂಭ್ರಮದಿಂದ ಆಚರಿಸಲಾಯಿತು.ವಿಶೇಷವಾಗಿ […]
Read More
15-08-2022, 2:57 PM
ಬಂಟ್ವಾಳ : ವಿದೇಶಿ ಸಂಸ್ಕೃತಿ ಬಗ್ಗೆ ಆಕರ್ಷಣೆಗೆ ಒಳಗಾಗುವ ಯುವ ಜನತೆಗೆ ವೈಜ್ಞಾನಿಕ ಕಾರಣಗಳನ್ನು ನೀಡಿ ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಮನವರಿಕೆ ಮಾಡಿದಾಗ ಯುವ ಪೀಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಹಾದಿ ಸುಗಮವಾಗಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ಸಂಶೋಧಕ, ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ 15.08.2022 ರಂದು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ […]
Read More
11-08-2022, 4:43 PM
ಶಕ್ತಿ ನಗರ :- ಯುವವಾಹಿನಿ (ರಿ.) ಶಕ್ತಿನಗರ ಘಟಕ ಇದರ ವತಿಯಿಂದ 11 ಆಗಸ್ಟ್ 22ರ ಗುರುವಾರ ದಂದು ಘಟಕದ ವತಿಯಿಂದ ಪವಿತ್ರ ಹಬ್ಬ ರಕ್ಷಾ ಬಂಧನ ಆಚರಣಾ ಕಾರ್ಯಕ್ರಮಕ್ಕೆ ಘಟಕದ ಮಾಜಿ ಅಧ್ಯಕ್ಷರಾದ ಭಾರತೀ ಜಿ ಅಮೀನ್ ರವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಸಭೆಯಲ್ಲಿ ಸಹೋದರತ್ವದ ಬಗ್ಗೆ ಅಧ್ಯಕ್ಷರಾದ ಜಯರಾಮ್ ಇವರು ಮಾತನಾಡುತ್ತಾ ಸಹೋದರ ಮತ್ತು ಸಹೋದರಿ ಎನ್ನುವ ಈ ಸುಂದರ ಬಂಧದ ಮಹತ್ವವನ್ನು ಗುರುತಿಸಲು, ಪ್ರತಿ ವರ್ಷ, ರಕ್ಷಾ ಬಂಧನ ಹಬ್ಬವನ್ನು ನಮ್ಮ ಯುವವಾಹಿನಿ […]
Read More
07-08-2022, 3:01 PM
ಮಾಣಿ :- ತುಳುವರ ಬದುಕಿನ ಪ್ರತಿಯೊಂದು ಕಾರ್ಯವು ಕೆಲಸಕ್ಕೆ ಕೇಂದ್ರಿತವಾಗಿದ್ದು,ಕೆಲಸದ ಪ್ರತಿಯೊಂದು ಕ್ರಮವೇ ಆಚರಣೆಯ ಒಂದು ಭಾಗವೇ ಆಗಿರುತ್ತದೆ.ತುಳುನಾಡಿನ ಹಳೆಯ ವಸ್ತುಗಳೇ ಒಂದೊಂದು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿಯವರು ನುಡಿದರು. ಅವರು ದಿನಾಂಕ 07 ಆಗಸ್ಟ್ 2022 ರ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿ ಇಲ್ಲಿ ಯುವವಾಹಿನಿ(ರಿ.) ಮಾಣಿ ಘಟಕ ಹಮ್ಮಿಕೊಂಡ “ಆಟಿದ ತಿರ್ಲ್” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು . ಕಾರ್ಯಕ್ರಮವನ್ನು ನೆಲ ಶುಧ್ಧಿಕರಿಸಿ,ಸುತ್ತಿಗೆ ಇಟ್ಟು ,ದೀಪ […]
Read More