25-11-2025 ಸಂಗೀತ ಎಂಬುದು ಮನಸ್ಸುಗಳನ್ನು ಜೋಡಿಸುವ ಶಕ್ತಿ, ಜನರನ್ನು ಒಗ್ಗೂಡಿಸುವ ಶಕ್ತಿ ಹಾಗೂ ನಮ್ಮ ಮನಸ್ಸಿನ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುವ ಒಂದು ಕಲೆಯಾಗಿದೆ ಎಂದು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ದೀಕ್ಷಿತ್ ಅತ್ತಾವರ ಹೇಳಿದರು. ಅವರು ಘಟಕದ ಆಶ್ರಯದಲ್ಲಿ ನಡೆದ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆಯೊoದಿರುತ್ತದೆ ಅಂತಹ ಪ್ರತಿಭೆಗಳನ್ನು ಮುನ್ನೆಲೆಗೆ ತರಲು ಮಂಗಳೂರು ಘಟಕವೂ ಸಂಗೀತ ಸ್ಪರ್ಧೆಯ ಮೂಲಕ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಒಟ್ಟು ಮೂರು ವಿಭಾಗಗಳಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಮಕ್ಕಳ ವಿಭಾಗದಲ್ಲಿ ಸಾರಿಕಾ ಬಿ ಎಚ್ ಪ್ರಥಮ, ಚಿರಂತ್ ಎಸ್ ಪೂಜಾರಿ ದ್ವಿತೀಯ, ರಮ್ಯಶ್ರೀ ಟಿ ತ್ರತೀಯ, ಮಹಿಳೆಯರ ವಿಭಾಗದಲ್ಲಿ ಕಾವ್ಯಶ್ರೀ ಪ್ರಥಮ, ಜಯಂತಿ ಕೋಟ್ಯಾನ್ ದ್ವಿತೀಯ, ದಯಾವತಿ ತೃತೀಯ ಹಾಗೂ ಪುರುಷರ ವಿಭಾಗದಲ್ಲಿ ದಿಶಾಂತ್ ಪ್ರಥಮ, ಪ್ರವೀಣ್ ಕಿರೋಡಿ ದ್ವಿತೀಯ, ಯಶವಂತ್ ಪೂಜಾರಿ ತೃತೀಯ ಬಹುಮಾನ ವಿಜೇತರಾದರು.
ಈ ಸಂದರ್ಭದಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 105 ಕೆಜಿ ಮಾಸ್ಟರ್ಸ್-3 ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದ ಘಟಕದ ಸದಸ್ಯರಾದ ಕಮಲಾಕ್ಷ ರನ್ನು ಸನ್ಮಾನಿಸಲಾಯಿತು ,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಪ್ರಥಮ ಉಪಾಧ್ಯಕ್ಷರಾದ ಹರೀಶ್ ಕೆ ಸುವರ್ಣ ವಹಿಸಿದ್ದರು.
ಹೆಸರಾಂತ ಗಾಯಕರಾದ ಪ್ರಶಾಂತ್ ಕಂಕನಾಡಿ ಹಾಗೂ ಅರುಣ ರಾವ್ ಕಟೀಲ್ ಸಂಗೀತ ಸ್ಪರ್ಧೆಯ ತೀರ್ಪುಗಾರಿಕೆಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ಸಂಚಾಲಕರಾದ ದಿನೇಶ್ ಕಂದಾವರ ಸ್ವಾಗತಿಸಿದರು. ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು ವಂದಿಸಿದರು. ಘಟಕದ ಸದಸ್ಯರಾದ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಉಷಾ, ಜಯಂತಿ ಕೋಟ್ಯಾನ್ ಹಾಗೂ ಪೂರ್ಣಿಮಾ ಯು ಆರ್ ಪ್ರಾರ್ಥನೆ ಗೀತೆ ಹಾಡಿದರು


