19-10-2019, 4:57 AM
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ (ರಿ.)ಬಜಪೆ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ “ಜೀವನ ಕೌಶಲ್ಯ ತರಬೇತಿ” ಕಾರ್ಯಗಾರವು ತಾರೀಕು 19.10.19ನೇ ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಅನ್ಸಾರ್ ಪ್ರೌಢಶಾಲೆ ಬಜಪೆ ಇಲ್ಲಿ ನಡೆಯಿತು. ಅನ್ಸಾರ್ ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಜ್ಯೋತಿ ನಾರಾಯಣ ಪೂಜಾರಿ(ಸಂಚಾಲಕರು,ಎಸ್,ಎನ್,ಎಸ್ ಶಿಕ್ಷಣ ಪ್ರತಿಷ್ಠಾನ ಸುಂಕದಕಟ್ಟೆ) ಇವರು ನೆರವೇರಿಸಿ ಉದ್ಘಾಟನ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಸುವರ್ಣ ಹಾಗೂ […]
Read More
19-10-2019, 4:39 AM
ಯುವವಾಹಿನಿ (ರಿ) ಕೊಲ್ಯ ಘಟಕ ವತಿಯಿಂದ ದಿನಾಂಕ 19.10.19 ರಂದು ಶನಿವಾರ ಸಂಜೆ 7.30 ಕ್ಕೆ ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ನಿವಾಸ (ಒಲವು) ದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿಯ ಸ್ವರ ಮಾಣಿಕ್ಯ ಶ್ರೀ ಯುತ. ದಿನೇಶ್ ಸುವರ್ಣ ರಾಯಿ ಅವರನ್ನು ನಮ್ಮ ಘಟಕದ ಅಧ್ಯಕ್ಷರು ಹೂ ಕೊಟ್ಟು ಸ್ವಾಗತಿಸಿದರು. ಹಾಗೂ ತರಬೇತಿಗೆ ಬಂದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಯುತ. ದಿನೇಶ್ ಸುವರ್ಣ […]
Read More
15-10-2019, 6:35 AM
ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 15.10.19 ರಂದು ಧಾರ್ಮಿಕ ಶಿಕ್ಷಣ_ ಭಜನಾ ತರಬೇತಿ ಕಮ್ಮಟ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಬಿಲ್ಲವ ಸೇವಾ ಸಮಾಜದ ಹಿರಿಯರು ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು . ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಯ೯ರಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಹಿರಿಯ ಸದಸ್ಯರಾದ […]
Read More
13-10-2019, 6:28 AM
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಉಡುಪಿ ಘಟಕದ ಆಶ್ರಯದಲ್ಲಿ “ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭ” ಯುವವಾಹಿನಿಯ ಸಭಾಂಗಣದಲ್ಲಿ ದಿನಾಂಕ 13/10/2019 ರಂದು ಜರಗಿತು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಖ್ಯಾತ ಹಿರಿಯ ಲೇಖಕಿ ಯಶವಂತಿ ಎಸ್ ಸುವರ್ಣ, ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ ಎನ್ ಅಚಾರ್ಯ ಕೊಡಂಕೂರು ಇವರಿಗೆ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಪ್ರಧಾನ ಮಾಡಿದರು. […]
Read More
12-10-2019, 6:04 AM
ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ ಯುವ ಸ್ಪಂದನ ಸೇವಾ ಯೋಜನೆಯ 20 ನೇ ಸೇವೆಯನ್ನು ಆರ್ಥಿಕ ನೆರವಿಗಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿಶ್ವನಾಥ ಪೂಜಾರಿ ವಿದ್ಯಾ ನಿವಾಸ್ ನಡಿಬೆಟ್ಟು ಮನೆ ಪುಚ್ಚೆಮೊಗರು ಇವರು ಮನವಿಯನ್ನು ಸಲ್ಲಿಸಿರುತ್ತಾರೆ ಈ ಮನವಿಯನ್ನು ಪರಿಶೀಲಿಸಲು ಇಂದು ಸಂಜೆ ಸಮಯ 6.30 ಕ್ಕೆ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಇವರು ಕಡುಬಡತನದಲ್ಲಿದ್ದು ಇವರಿಗೆ ಹೆಂಡತಿ, ಮಗು ಹಾಗೂ ಹೆತ್ತವರಿಗೆ ಇವರೇ ಆಧಾರ ಸ್ತಂಭವಾಗಿದ್ದು ಇದೀಗ ಮನೆಯವರಿಗೆ ದಿಕ್ಕೇ ತೋಚದಂತಗಿದೆ.ತೀರಾ […]
Read More
10-10-2019, 5:59 AM
ಯುವವಾಹಿನಿ (ರಿ) ಮಂಗಳೂರು ಘಟಕ ವತಿಯಿಂದ ವಿಶ್ವ ವಿಖ್ಯಾತ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಸತತ 8ನೇ ವರ್ಷದ ಶರಬತ್ ಸೇವೆಯು ದಿನಾಂಕ 08.10.2019ರಂದು ನಡೆಯಿತು. ಶರಬತ್ ಸೇವೆಯ ಉದ್ಘಾಟನೆಯನ್ನು ನಮಗೆ ಸ್ಥಳಾವಕಾಶ ಒದಗಿಸಿಕೊಟ್ಟ ಎಸ್ಎಲ್ ಶೇಟ್ ಡೈಮಂಡ್ಸ್ ಹೌಸ್ ನ ಮಾಲಕರಾದ ರವೀಂದ್ರ ಶೇಟ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಪಾಲಿಸಿಕೊಂಡು ಅತ್ಯುತ್ತಮವಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಉತ್ತಮವಾದ […]
Read More
09-10-2019, 8:28 AM
ದಿನಾಂಕ 08/10/2019 ರಂದು ದಸರಾ ಉತ್ಸವದ ಪ್ರಯುಕ್ತ ಶ್ರೀ ದುರ್ಗೆಶ್ವರಿ ದೇಗುಲದಿಂದ ಹೊರಡುವ ಶೋಭಾ ಯಾತ್ರೆಗೆ ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀರವರ ಪ್ರತಿಮೆಯನ್ನು ಸ್ತಬ್ಧ ಚಿತ್ರದ ಪ್ರದರ್ಶನ ಮೂಲಕ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾಗಲಾಯಿತು. ಮೆರವಣಿಗೆಯ ಉದ್ದಕ್ಕೂ ನಮ್ಮ ಸದಸ್ಯರೆಲ್ಲರೂ ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.(ಈ ಕಾರ್ಯಕ್ರಮಕ್ಕೆ ದಿನೇಶ್ ರಾಯಿರವರು ಹಿನ್ನೆಲೆ ಧ್ವನಿಯಾಗಿ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸಿ ಸ್ತಬ್ಧ ಚಿತ್ರಕ್ಕೆ […]
Read More
06-10-2019, 4:22 PM
ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ,ಸೇವಾಭಾರತಿ ಕನ್ಯಾಡಿಯವರ ಸಹಭಾಗಿತ್ವದಲ್ಲಿ ದಿನಾಂಕ 6/ 10 ಭಾನುವಾರ ಬಜಿರೆಯಲ್ಲಿ ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಟೈಲರಿಂಗ್ ತರಭೇತಿ ಶಿಬಿರ ಉದ್ಘಾಟನೆಗೊಂಡಿತ್ತು.ಸೇವಾಭಾರತಿ ಕನ್ಯಾಡಿಯ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಉದ್ಘಾಟನೆ ಮಾಡಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ವೇಣೂರು ಘಟಕದ ಅಧ್ಯಕ್ಷರಾದ ನವೀನ್ ಪಚ್ಚೇರಿ ವಹಿಸಿದ್ದರು ,ಕಾರ್ಯಕ್ರಮದ ವೇದಿಕೆಯಲ್ಲಿ ಸೇವಾಭಾರತಿಯ ಗ್ರಾಮಸಮಿತಿಯ ಅಧ್ಯಕ್ಷ ಹರೀಣ್ ಸುವರ್ಣ ಸೇರಿದಂತೆ ಯುವವಾಹಿನಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು
Read More
06-10-2019, 8:11 AM
ಯುವವಾಹಿನಿ (ರಿ) ಪಣಂಬೂರು -ಕುಳಾಯಿ ಘಟಕದ ವತಿಯಿಂದ ಅಕ್ಟೋಬರ್ 2ರಿಂದ 5ರ ತನಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ಸ್ಥಳವಾದ ಕೇರಳದ ಶಿವಗಿರಿಗೆ 50 ಸದಸ್ಯರ ತಂಡ ದೊಂದಿಗೆ ಯಾತ್ರೆಯನ್ನು ಹಮ್ಮಿ ಕೊಂಡು ಯಶಸ್ವಿಯಾಗಿದೆ
Read More
04-10-2019, 9:40 AM
ಶ್ರೀ ಚಾಮುಂಡಿ ರಾಹು ಗುಳಿಗ ದೇವಸ್ಥಾನದಲ್ಲಿ ನಮ್ಮ ಯುವವಾಹಿನಿ(ರಿ)ಶಕ್ತಿನಗರ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ,ಒಂದು ಘಂಟೆಗಳ ಸುಶ್ರಾವ್ಯ ಗಾಯನದೊಂದಿಗೆ ಶ್ರೀ ಯಶವ0ತ ಕರ್ಕೇರ ಎಲ್ಲಾರ ಮನ ಗೆದ್ದರು ಭಜನೆಯಲ್ಲಿ ಶ್ರೀನಿವಾಸ ಪೂಜಾರಿ, ಜಯರಾಮ ಪೂಜಾರಿ , ಲಕ್ಷ್ಮೀಕಾಂತ್, ಮಾರ್ರಪ್ಪ ಪೂಜಾರಿ, ಭವಾನಿಶಂಕರ, ಭವ್ಯಕುಮಾರ್, ಯೋಗೀಶ್ ಸುವರ್ಣ, ರೋಹಿಣಿ, ರಾಜೀವಿ, ಸುರೇಖಾ, ಶಂಕರ್ ಪೂಜಾರಿ, ಅನನ್ಯ ಮುಂತಾದ ಹಲವೂ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಿದರು..
Read More