20-04-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 20-04-2026 ರಂದು ಸಂಜೆ 5.30 ಗಂಟೆಗೆ ಶ್ರೀ ವಿಶ್ವಂಭರ ಭಜನಾ ಮಂಡಳಿ ಉರ್ವ ಸ್ಟೋರ್ ಇವರ ಸಹಯೋಗದೊಂದಿಗೆ ನಡೆಯಿತು. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
19-04-2026, 8:00 PM
ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ ಟ್ರೋಫಿಯೊಂದಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ತಾರನಾಥ ಪೂಜಾರಿ, ಅಖಿಲ ಭಾರತ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ ಇದರ […]
Read More
19-04-2026, 8:00 PM
ಕಡಬ: ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ದಿನಾಂಕ 19-04-2026 ರ ಭಾನುವಾರ ಸಂಜೆ 7.15 ರಿಂದ 9.30 ಗಂಟೆಯವರೆಗೆ ಕಡಬದ ಏನೆಕಲ್ಲಿನಲ್ಲಿ ಮನೆ ಮನ ಭಜನೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕಡಬ ಘಟಕದ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಭಜನಾ ಸೇವೆಯಲ್ಲಿ ತೊಡಗಿಸಿಕೊಂಡರು. ಪರಮಪೂಜ್ಯ ನಾರಾಯಣ ಗುರು ಅವರ ಭಜನೆಗಳ ಮೂಲಕ ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಐಕ್ಯತೆಗೆ ಯುವವಾಹಿನಿ ಸದಾ ಬದ್ಧವಾಗಿರುವುದನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಪ್ರತಿಪಾದಿಸಿತು.ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ […]
Read More
19-04-2026, 6:00 PM
ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ 2026 ರ ಕವನ ಸ್ಪರ್ಧೆಯಲ್ಲಿ ಯುವವಾಹಿನಿ ಕೊಲ್ಯ ಘಟಕದ ಸದಸ್ಯರು ಹಾಗೂ ಯುವಸಿಂಚನ ಸಂಪಾದಕ ಮಂಡಳಿಯ ಸದಸ್ಯರು ಲತೀಶ್ ಎಂ ಸಂಕೊಳಿಗೆ ಇವರ ಬಿರ್ವೆರೆ ಚೀಯನ ಕವನ ಪ್ರಥಮ ಬಹುಮಾನ ಪಡೆಯಿತು ಡೆನ್ನ ಡೆನ್ನ ಡೆನ್ನ ಡೆನ್ನ ಡೆನ್ನ ಡೆನ್ನ ಡೆನ್ನನಯುವವಾಹಿನಿ ಸಂಸಾರೊದ ಬಾರಿ ಗೌಜಿದ ಆಯನ|| ಅಪ್ಪೆಬೂಡುದ ಕೊಡಿಯಡಿಟ್ಪೇರ್ ಬೆಲ್ಲದ ಪಾತೆರಮುಪ್ಪತ್ತೈನ್ ಎಗ್ಗೆ ಅರಳ್ ದ್ಸಿರಿತುಪ್ಪೆ ದಿಂಜುನ ಐಸಿರ || ತುಳುವ ನೆಲತ ಬಿರ್ವ ಕುಲತಉಡಲ ಕಲೆಕುಲ […]
Read More
19-04-2026, 6:00 PM
ಬಂಟ್ವಾಳ ; ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ 2026 ರ ಕವನ ಸ್ಪರ್ಧೆಯಲ್ಲಿ ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಗೀತಾ ವಸಂತ್ ಡೆನ್ನಾನ ಡೆನ್ನಾನ ಕವನ ದ್ವಿತೀಯ ಬಹುಮಾನ ಪಡೆಯಿತು ಡೆನ್ನಾನ ಡೆನ್ನಾನ, ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ, ಡೆನ್ನಾನರಿ ಡೆನ್ನಾನ ಡೆನ್ನಾನ ಡೆನ್ನಾನಡೋಲು ನಗಾರಿ ತೂಯನ ಸೇರ್ದ್ ಒಟ್ಟುಗು ಬೊಟ್ಟುಗನಾ ಬಪ್ಪನಾಡ್ದ ಡೋಲು ಸಬ್ದ ಡೆನ್ನಾನ – ಡೆನ್ನಾನಗುಡ್ಡೆ ಬೈಲ್ಡ್ ಇರೆ ಕೊಡಿ ಮರ್ದ್ಡ್ಸೀಕ್ ಸಂಕಡ ಇಜ್ಜಾಂಡತ್ತ ಡೆನ್ನಾನ|| ಕೊಡಿ ಮರ್ದ್ ಪೋದು, […]
Read More
19-04-2026, 5:30 PM
ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಅಪರೂಪದ ಸುಸಂದರ್ಭಕ್ಕೆ ಸಂಘಟನೆ ಸಾಕ್ಷಿಯಾಯಿತು. ನಿಸ್ವಾರ್ಥ ಸೇವೆ: ಸಂಘಟನೆಯ ಬಲವರ್ಧನೆಗಾಗಿ ಹತ್ತಾರು ಯೋಜನೆಗಳನ್ನು ರೂಪಿಸಿ, ಯುವಶಕ್ತಿಗೆ ಪ್ರೇರಣಾದಾಯಕ ನಾಯಕತ್ವ ನೀಡಿದ ಗಣ್ಯರ ಶ್ರಮ ಅಪಾರ. ಪರಿಶ್ರಮ ಮತ್ತು ತ್ಯಾಗ: ಈ ಹಿರಿಯ ಚೇತನಗಳ ನಿಸ್ವಾರ್ಥ […]
Read More
19-04-2026, 2:00 PM
ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ ಅವರನ್ನು ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಯುವಸಿಂಚನ ಪತ್ರಿಕೆ ಬಿಡುಗಡೆಇದೇ ಸಂದರ್ಭದಲ್ಲಿ ಯುವವಾಹಿನಿ ಮುಖವಾಣಿ ‘ಯುವಸಿಂಚನ’ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟ ಅವರು, ದೇಶದ ಸಾಂಸ್ಕೃತಿಕ ವೈಭವದ […]
Read More
19-04-2026, 2:00 PM
ಬಂಟ್ವಾಳ : ಎಪ್ರಿಲ್ 19 ರಂದು ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ ಸಮಾರಂಭದಲ್ಲಿ ಯುವವಾಹಿನಿಯ ಮುಖವಾಣಿ ‘ಯುವಸಿಂಚನ’ದ ಎಪ್ರಿಲ್ ಸಂಚಿಕೆಯನ್ನು ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟ ಅವರು ಬಿಡುಗಡೆಗೊಳಿಸಿದರು, ದೇಶದ ಸಾಂಸ್ಕೃತಿಕ ವೈಭವದ ಮಹತ್ವವನ್ನು ಒತ್ತಿ ಹೇಳಿ, ಯುವಜನತೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು. ಯುವವಾಹಿನಿ ಸಂಸ್ಥೆಯು ಈ ನಿಟ್ಟಿನಲ್ಲಿ ಕೈಗೊಂಡಿರುವ ಸಾಂಸ್ಕೃತಿಕ ಚಟುವಟಿಕೆಗಳು ಶ್ಲಾಘನೀಯವಾಗಿದ್ದು, ಸಮಾಜದಲ್ಲಿ ಉತ್ತಮ […]
Read More
19-04-2026, 1:30 PM
ಯುವವಾಹಿನಿಯ 38 ವರ್ಷಗಳ ಸಾರ್ಥಕ ಪಯಣದ ಬಳಿಕ, 39ನೇ ಅಧ್ಯಕ್ಷನಾಗಿ ಈ ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವಕಾಶ ನನಗೆ ದೊರೆತಿರುವುದು, ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣವಾಗಿದೆ. ಇದು ಕೇವಲ ಸ್ಥಾನಮಾನವಲ್ಲ, ಇದು ನಂಬಿಕೆಯ ಪ್ರತಿಬಿಂಬ, ಹೊಣೆಗಾರಿಕೆಯ ಆಳ, ಮತ್ತು ಸೇವಾ ಸಂಕಲ್ಪದ ಹೊಸ ಅಧ್ಯಾಯ. 80ರ ದಶಕದಲ್ಲಿ ದೂರದರ್ಶಿ ಯುವಕರ ಕೈಚಳಕದಿಂದ ರೂಪುಗೊಂಡ ಈ ಸಂಸ್ಥೆ, ಇಂದು ಲೋಕಮಾನ್ಯತೆಯ ದಿಕ್ಕಿನಲ್ಲಿ ಸಾಗುತ್ತಿರುವುದು ಹಿರಿಯ ಸದಸ್ಯರ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ದೃಢಚಿತ್ತತೆಯ ದ್ಯೋತಕವಾಗಿದೆ. ಕಾಲ ಬದಲಾಗುತ್ತಿದ್ದಂತೆ […]
Read More
19-04-2026, 1:30 PM
ಯುವಸಿಂಚನ ಪತ್ರಿಕೆಯ 2025–26ನೇ ಸಾಲಿನ ಪ್ರಥಮ ಆವೃತ್ತಿಯನ್ನು ಬಿಡುಗಡೆಗೊಂಡಿದೆ. ಯುವವಾಹಿನಿಯ 35 ಘಟಕಗಳು ನಿರಂತರ ಕ್ರಿಯಾಶೀಲತೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿರುವುದು ಅಪಾರ ಸಂತೋಷದ ವಿಷಯ. ಈ ಕಾರ್ಯಚಟುವಟಿಕೆಗಳು ಸಂಸ್ಥೆಯ ಚೈತನ್ಯ ಮತ್ತು ಬದ್ಧತೆಯ ಪ್ರತಿಬಿಂಬವಾಗಿವೆ. ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಿ ಸಹಕರಿಸಿದಕ್ಕಾಗಿ ಅಭಿನಂದನೆಗಳು. ಯುವಸಿಂಚನಕ್ಕೆ ಲೇಖನ, ಕವನ, ಕಥೆಗಳನ್ನು ರಚಿಸಿ ಕೊಡುಗೆ ನೀಡಿದ ಎಲ್ಲಾ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು. ಸಂಪಾದಕ ಬಳಗದ ಸಹಕಾರಕ್ಕೂ ಧನ್ಯವಾದಗಳು. ಯುವವಾಹಿನಿಯ ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ […]
Read More