15-09-2025, 4:17 PM
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ, ಗುರುಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶಾಂತಿವರ್ಯರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಪೂರ್ವಾಹ್ನ ಗಂಟೆ 8.30 ರಿಂದ ಭಜನಾ ಸಂಕೀರ್ತನೆ, 9.30 ರಿಂದ ಗುರುಪೂಜೆ ನಂತರ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬ್ರಹ್ಮ ಶ್ರೀ […]
Read More
15-09-2025, 4:10 PM
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೆಯ ಜನುಮ ಮಹೋತ್ಸವದ ಪ್ರಯುಕ್ತ ಈ ಸಾಲಿನ ಮೊದಲ ಗೃಹಭಜನೆ ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಅನಿತಾ ಕಮಲಾಕ್ಷ ಅವರ ಮನೆಯಲ್ಲಿ ನೆರವೇರಿತು. ಘಟಕದ ಸದಸ್ಯರಾದ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು. ಘಟಕದ ಸದಸ್ಯರಿಂದ ಭಜನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮ ಮೂಡಿ ಬಂತು. ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶ್ರೀಮತಿ ಅನಿತಾ ಕಮಲಾಕ್ಷ […]
Read More
15-09-2025, 4:06 PM
ಘಟಕದ 7ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಶ್ರೀ ದೇವಿ ಭಜನಾ ಮಂದಿರದ ಆವರಣ. ಘಟಕದ ಸದಸ್ಯರಾದ ಶ್ರೀಮತಿ ಪ್ರತಿಮಾ ಪಾಲನ್ ಗುರು ಪ್ರಾಥನೆ ಮಾಡಿದರು. ಭಜನಾ ಮಂದಿರದ ಉಪಾಧ್ಯಕ್ಷರಾದ ಉಗ್ಗಪ ಬಂಗೇರ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು . ತೀರ್ಪುಗಾರರಾಗಿ ಶ್ರೀಮತಿ ಕನಕ ಮೋಹನ್ ಮತ್ತು ವಿದುಷಿ ಕುಮಾರಿ ಶ್ರೇಯ ಶೆಟ್ಟಿಯವರು ಪಾಲ್ಗೊಂಡಿದರು. ಮುದ್ದು ಕೃಷ್ಣ, ತುoಟ ಕೃಷ್ಣ, ಬಾಲ ಕೃಷ್ಣ, ರಾಧ ಕೃಷ್ಣ, ನಾಲ್ಕು ವಿಭಾಗದ ಸ್ಪರ್ಧೆ ಏರ್ಪಡಿಸಲಾಗಿತು ಸುಮಾರು ಮೂವತಕ್ಕು ಹೆಚ್ಚು […]
Read More
15-09-2025, 4:03 PM
ಕಾರ್ಗಿಲ್ ಯುದ್ಧ ದ ಒಂದೊಂದು ದಿನಗಳು ಕೂಡಾ ನಮಗೆ ಮರೆಯಲು ಸಾಧ್ಯವಿಲ್ಲ. ನಮ್ಮ ಕಣ್ಣೆದುರು ಅದೆಷ್ಟೂ ಯೋಧರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಕಾರ್ಗಿಲ್ ವಿಜಯ ದಿನಾಚರಣೆ ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ನೀಡುವ ಗೌರವ ವಾಗಿದೆ . ಮುಲ್ಕಿ ಘಟಕದ ದೇಶದ ಮೇಲಿನ ಅಭಿಮಾನದ ಈ ಕಾರ್ಯಕ್ರಮ ಶ್ಲಾಘನೀಯ ಎಂದು ನಿವೃತ್ತ ಯೋಧ ಹಾಗು ಮುಲ್ಕಿ ಆರಕ್ಷಕ ಉಪ ನಿರೀಕ್ಷಕ ಉಮೇಶ್ ಕುಮಾರ್ ಹೇಳಿದರು. ಘಟಕದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಂಘದಲ್ಲಿ ಜರಗಿದ […]
Read More
15-09-2025, 3:58 PM
ಘಟಕದ ಕಛೇರಿಯಲ್ಲಿ ದಿನಾಂಕ 10/08/2025 ರಕ್ಷಾ ಬಂಧನ ಕಾರ್ಯಕ್ರಮವನ್ನು “ಆಟಿದ ನೆಂಪು” ಕಾರ್ಯಕ್ರಮ ದೊಂದಿಗೆ ಅರ್ಥ ಗರ್ಭಿತವಾಗಿ ಆಚರಿಸಲಾಯಿತು , ಶ್ರೀ ಚರಣ್ ರಾಜ್ ಅಳಪೆ ಯವರು ರಕ್ಷಾಬಂಧನದ ಐತಿಹಾಸಿಕ ಹಿನ್ನೆಲೆ, ಆಧುನಿಕ ಯುಗದಲ್ಲಿ ರಕ್ಷಾ ಬಂಧನದ ಪ್ರಾಮುಖ್ಯತೆ,ಅದರ ಸಾಂಸ್ಕೃತಿಕ ನೆಲೆ ಗಟ್ಟಿನ ಬಗ್ಗೆ ಸವಿವರವಾದ ಭೌಧ್ಧಿಕ್ ನಡೆಸಿಕೊಟ್ಟರು.ನಂತರ ಸದಸ್ಯರು ಪರಸ್ಪರ ರಕ್ಷೆ(ರಾಖಿ) ಯನ್ನು ಕಟ್ಟುವ ಮೂಲಕ ರಕ್ಷಾ ಬಂಧನದ ಸಂಭ್ರಮ ಕಳೆಗಟ್ಟಿತು.ಘಟಕದ ಸದಸ್ಯರಿಂದ ಸಿಹಿತಿಂಡಿ ಮತ್ತು ತಂಪುಪಾನೀಯ ಹಂಚಲಾಯಿತು
Read More
15-09-2025, 3:55 PM
ದಿನಾಂಕ 14-08-2025 ನೇ ಗುರುವಾರ ಬೆಳಿಗ್ಗೆ ಘಟಕದ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಪಂಜಿಮೊಗರು ಇವರ ಸಹಯೋಗದೊಂದಿಗೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಯುವವಾಹಿನಿ ( ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕೂಳೂರು ಘಟಕವು ಕಳೆದ 10 ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ವಿತರಣೆ ಮಾಡಿಕೊಂಡು ಬರುತ್ತಿದೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹಿಸುವ ಯುವವಾಹಿನಿ ಕೂಳೂರು ಘಟಕದ […]
Read More
15-09-2025, 3:51 PM
15/08/2025ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಶಕ್ತಿ ನಗರ ಇಲ್ಲಿ ದ್ವಜಾರೋಹಣ ಕಾಯ೯ಕ್ರಮ ವನ್ನು ಘಟಕದ ಅಧ್ಯಕ್ಷರಾದ ಸುಜಾತ ನವೀನ್ ನೆರವೇರಿಸಿದರು ಕಾಯ೯ಕ್ರಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಅದ್ಯಕ್ಷರು ಆದ ತುಕರಾಮ್ ಪೂಜಾರಿ ಮತ್ತು ಘಟಕದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
Read More
15-09-2025, 3:48 PM
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಜಂಟಿ ಆಶ್ರಯದಲ್ಲಿ ನಡೆಯುವ ಯುವವಾಹಿನಿ ಸಾಪ್ತಾಹಿಕ ಸಂಕೀರ್ತನ ಸರಣಿಯ 01-09-2025ರ ಭಜನಾ ಸೇವೆಯು ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕುಳಾಯಿ ಇವರ ಸಹಯೋಗದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು. ಭಜನಾ ಮಂಡಳಿಯ ಸದಸ್ಯರು ಭಕ್ತಿ ಪೂರ್ವಕವಾಗಿ ರಾಗ ತಾಳದೊಂದಿಗೆ ಭಜನಾ ಸೇವೆಯನ್ನು ನೀಡಿದರು. ಅರ್ಚಕರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ ಭಜನಾ ತಂಡಕ್ಕೆ ಪ್ರಸಾದ ಹಾಗೂ ಅನುಗ್ರಹ ಪತ್ರ ನೀಡಿ […]
Read More
15-09-2025, 3:45 PM
ದಿನಾಂಕ 24-08-2025 ರಂದು ಭಾನುವಾರ ಮಹಿಳಾ ಮಂಡಲ ಕುಳಾಯಿಯಲ್ಲಿ, ರೋಟರಿ ಕ್ಲಬ್ ಸುರತ್ಕಲ್, ಮಹಿಳಾ ಮಂಡಲ ಕುಳಾಯಿ, ಇನ್ನರ್ ವೀಲ್ ಕ್ಲಬ್ ಸುರತ್ಕಲ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಸ್ಟೀಸ್ ಕೆ. ಎಸ್. ಹೆಗ್ಡೆ ದೇರಳಕಟ್ಟೆ, ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ವಿದ್ಯಾಲಯದ ಸಹಭಾಗೀತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.. ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ಡಾl ಗೋಪಾಲಕೃಷ್ಣ ಭಟ್ ಸಂಕಬಿತ್ತಿಲು, ಉದ್ಘಾಟಿಸಿದರು. ರೋಟರಿ ಕ್ಲಬ್ ಸುರತ್ಕಲ್ ನ ಅಧ್ಯಕ್ಷರಾದ ರೊ. […]
Read More
15-09-2025, 3:41 PM
ದಿನಾಂಕ 15-08-2025 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಜೋಟ್ಟಿ ಅಂಗನವಾಡಿ ಕೇಂದ್ರದಲ್ಲಿ ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅದ್ಯಕ್ಷರು,ಸದಸ್ಯರು ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Read More