
09-10-2019, 8:28 AM
ದಿನಾಂಕ 08/10/2019 ರಂದು ದಸರಾ ಉತ್ಸವದ ಪ್ರಯುಕ್ತ ಶ್ರೀ ದುರ್ಗೆಶ್ವರಿ ದೇಗುಲದಿಂದ ಹೊರಡುವ ಶೋಭಾ ಯಾತ್ರೆಗೆ ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀರವರ ಪ್ರತಿಮೆಯನ್ನು ಸ್ತಬ್ಧ ಚಿತ್ರದ ಪ್ರದರ್ಶನ ಮೂಲಕ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾಗಲಾಯಿತು. ಮೆರವಣಿಗೆಯ ಉದ್ದಕ್ಕೂ ನಮ್ಮ ಸದಸ್ಯರೆಲ್ಲರೂ ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.(ಈ ಕಾರ್ಯಕ್ರಮಕ್ಕೆ ದಿನೇಶ್ ರಾಯಿರವರು ಹಿನ್ನೆಲೆ ಧ್ವನಿಯಾಗಿ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸಿ ಸ್ತಬ್ಧ ಚಿತ್ರಕ್ಕೆ […]
Read More

06-10-2019, 8:11 AM
ಯುವವಾಹಿನಿ (ರಿ) ಪಣಂಬೂರು -ಕುಳಾಯಿ ಘಟಕದ ವತಿಯಿಂದ ಅಕ್ಟೋಬರ್ 2ರಿಂದ 5ರ ತನಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ಸ್ಥಳವಾದ ಕೇರಳದ ಶಿವಗಿರಿಗೆ 50 ಸದಸ್ಯರ ತಂಡ ದೊಂದಿಗೆ ಯಾತ್ರೆಯನ್ನು ಹಮ್ಮಿ ಕೊಂಡು ಯಶಸ್ವಿಯಾಗಿದೆ
Read More

04-10-2019, 9:40 AM
ಶ್ರೀ ಚಾಮುಂಡಿ ರಾಹು ಗುಳಿಗ ದೇವಸ್ಥಾನದಲ್ಲಿ ನಮ್ಮ ಯುವವಾಹಿನಿ(ರಿ)ಶಕ್ತಿನಗರ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ,ಒಂದು ಘಂಟೆಗಳ ಸುಶ್ರಾವ್ಯ ಗಾಯನದೊಂದಿಗೆ ಶ್ರೀ ಯಶವ0ತ ಕರ್ಕೇರ ಎಲ್ಲಾರ ಮನ ಗೆದ್ದರು ಭಜನೆಯಲ್ಲಿ ಶ್ರೀನಿವಾಸ ಪೂಜಾರಿ, ಜಯರಾಮ ಪೂಜಾರಿ , ಲಕ್ಷ್ಮೀಕಾಂತ್, ಮಾರ್ರಪ್ಪ ಪೂಜಾರಿ, ಭವಾನಿಶಂಕರ, ಭವ್ಯಕುಮಾರ್, ಯೋಗೀಶ್ ಸುವರ್ಣ, ರೋಹಿಣಿ, ರಾಜೀವಿ, ಸುರೇಖಾ, ಶಂಕರ್ ಪೂಜಾರಿ, ಅನನ್ಯ ಮುಂತಾದ ಹಲವೂ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಿದರು..
Read More

30-09-2019, 8:48 AM
ದಿನಾಂಕ 29.09.2019 ರಂದು ಯುವವಾಹಿನಿ(ರಿ) ಮಂಗಳೂರು ಘಟಕ ಮತ್ತು ಕಾರ್ಕಳ ಘಟಕ ಇದರ ಜಂಟಿ ಆಶ್ರಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ವ್ಯಾಪಾರಸ್ಥರು, ಸ್ವ ಉದ್ಯೋಗಿಗಳಿಗೆ, ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಮತ್ತು ನಿರುದ್ಯೋಗಿಗಳಿಗೆ ಯಶಸ್ವಿ ಉದ್ಯಮಕ್ಕೆ ಸಮಗ್ರ ಮಾರ್ಗದರ್ಶನ ಚೇತರಿಕಾ 2019 ಎಂಬ ಕಾರ್ಯಕ್ರಮವು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ನಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಯಮಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಇದರ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಉದ್ಘಾಟಿಸಿದರು. ಯುವವಾಹಿನಿಯು ಅವಕಾಶ ವಂಚಿತ ವರ್ಗಗಳಿಗೆ […]
Read More

23-09-2019, 9:33 AM
ಯುವವಾಹಿನಿ ಕೂಳೂರು ಘಟಕವು ಕ್ರಿಯಾಶೀಲತೆಗೆ ಹೆಸರುವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವವಾಹಿನಿಯ ಇತಿಹಾಸದಲ್ಲೇ ವಿಭಿನ್ನತೆ ತಂದುಕೊಟ್ಟಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ಹೇಳಿದರು. ಅವರು ದಿನಾಂಕ 22.09.19 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ನಡೆದ ಯುವಜನತೆಯ ಪ್ರೇರೇಪಣೆಗಾಗಿ ಯೂತ್ ಫೆಸ್ಟ್ 2019 ನಮ್ಮ ಚಿತ್ತ ಪ್ರತಿಭೆಗಳ ಅನಾವರಣದತ್ತ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಮಂಗಳೂರು ನಗರ ಪೂರ್ವ ಪೋಲಿಸ್ ಠಾಣೆಯ ನಿರೀಕ್ಷಕರಾದ ಶಾಂತರಾಮ್ ಕುಂದಾರ್ ಕಾರ್ಯಕ್ರಮದ ಸ್ಪರ್ಧೆಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ […]
Read More

17-09-2019, 10:40 AM
ನಮ್ಮ ಎಲ್ಲಾ ಯುವವಾಹಿನಿ ಭಂಧುಗಳು ದಿನಾಂಕ17/09/2019ನೇ ಮಂಗಳವಾರ ಸಮಯ 6:45ಕ್ಕೆ ನಮ್ಮ ಯುವವಾಹಿನಿ ಶಕ್ತಿನಗರ ಘಟಕವು ನೂತನವಾಗಿ ರಚಿಸಿರುವ “ಯುವವಾಹಿನಿ ಭಜನಾ ಸಮಿತಿ” ಯ ಉಧ್ಘಾಟನಾ ಕಾರ್ಯಕ್ರಮ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮ ಕೊಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿದೆ, ಭಜನೆ ಸಮಿತಿಯನ್ನು ಮಠದ ಧರ್ಮದರ್ಶಿ ನೆರವೇರಿಸಿ ಧಾರ್ಮಿಕ ಉಪಾನ್ಯಾಸ ಮಾಡಿದ ಧರ್ಮದರ್ಶಿ ಅನಂತಕ್ರಷ್ಣರವರು ಭಜನೆ ಯಿಂದ ವಿಭಜನೆ ಆಗಲಾರದು ಹಾಗೂ ಎಲ್ಲರಿಗೂ ಒಳಿತಾಗಲಿ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹ ನಿಮ್ಮೆಲ್ಲರಿಗೂ ಇರಲಿ ಎಂದು ಆಶಿರ್ವದಿಸಿದರು ನಮ್ಮೊಂದಿಗೆ […]
Read More

15-09-2019, 10:37 AM
ನಮ್ಮ ಸಮಾಜದಲ್ಲಿ ಮದುವೆಯ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನವು ವಿಪರೀತವಾಗಿದ್ದು ಅದರಿಂದ ಆಗುವ ತೊಂದರೆಗಳು ಹಲವಾರು. ಬ್ರಹ್ಮಶ್ರೀ ನಾರಾಯಣ ಗುರುಗಳು ಮದ್ಯಪಾನವನ್ನು ಬಹಳ ವಿರೋಧಿಸಿದ್ದರು. ಮೂಡಬಿದ್ರೆ ಯುವವಾಹಿನಿ ಘಟಕ ಬ್ರಹ್ಮಶ್ರೀ ನಾರಾಯಣ ಗುರುಗಳ 165 ಜನ್ಮದಿನಾಚರಣೆಯ ಅಂಗವಾಗಿ ಮದ್ಯಪಾನ ಮುಕ್ತ ಮದರಂಗಿ ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿಸುವ ಗುರು ಸಂದೇಶ ಸಂಕಲ್ಪ ಎಂಬ ನಾಮಾಂಕಿತ ಮನವಿ ಪತ್ರವನ್ನು ದಿನಾಂಕ 15/09/2019 ರಂದು ಕಡಂದಲೆ ಪಾಲಡ್ಕ ಬಿಲ್ಲವ ಸಂಘದಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಹೊಸ್ಮಾರು ಬಲ್ಲೆಟ್ಟು ಸ್ವಾಮಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ […]
Read More

13-09-2019, 8:59 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕವು ನಾರಾಯಣ ಗುರು ಜಯಂತಿಯ ಪ್ರಯುಕ್ತ ಗುರುವರ್ಯರು ಸಮಾಜಕ್ಕೆ ಕೊಟ್ಟ ಸಂದೇಶವಾದ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಮಾತಿನಂತೆ ವಿವಿಧ ಮಹಿಳಾ ಮಂಡಳಿಗಳನ್ನು ಜೊತೆಗೂಡಿಸಿ ಬೆಳಗ್ಗೆ12ರಿಂದ ಸಂಜೆ 7 ಘಂಟೆಯವರೆಗೆ ಭಜನಾ ಕಾರ್ಯಕ್ರಮವನ್ನು ನಡೆಯಸಿತು. ಕಾರ್ಯಕ್ರಮಕ್ಕೆಗುರುಸ್ತೋತ್ರ ಹಾಗೂ ಭಜನೆ ಮೂಲಕ ಮಂಗಳೂರು ಮಹಿಳಾ ಘಟಕವು ಚಾಲನೆ ನೀಡಿ ನಂತರ ವಿವಿಧ ಮಹಿಳಾ ಮಂಡಳಿಗಳಿಗೆ ಅವಕಾಶಕೊಟ್ಟು ನಂತರ ಕೊನೆಯ ಹಂತವನ್ನು ಮಂಗಳೂರುಘಟಕದವರೊಂದಿಗೆ ಸೇರಿ ಮುಕ್ತಾಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಉಮಾಶ್ರೀಕಾಂತ್, ನೈನವಿಶ್ವನಾಥ್,ರವಿಕಲ, ನಾರಾಯನಗುರು ತತ್ವ […]
Read More

08-09-2019, 5:07 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 08.09.19 ರಂದು ಹಳ್ಳಿಡೊಂಜಿ ದಿನ ಕಾರ್ಯಕ್ರಮವು ಘಟಕದ ಸದಸ್ಯರಾದ *ಪ್ರಸಾದ್ ಈದು ಬಟ್ಟೇಣಿ ಇವರ ಊರು ಈದು ಬಟ್ಟೇಣಿ, ಕಾರ್ಕಳ* ಇಲ್ಲಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಘಟಕದ 50 ಸದಸ್ಯರು ಕೂಳೂರಿನಿಂದ ಹೊರಟು 10.30 ಕ್ಕೆ ಶಿರ್ತಾಡಿ ತಲುಪಿ ಘಟಕದ ಸದಸ್ಯರಾದ *ಜಯ ಬಂಗೇರ* ಅವರ ಮನೆಯಲ್ಲಿ ಉಪಹಾರ ಮುಗಿಸಿ ನಂತರ ಅಲ್ಲಿಂದ ಹೊಸ್ಮಾರು ಆಶ್ರಮಕ್ಕೆ ಭೇಟಿ ನೀಡಿ, *ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರ ದರ್ಶನ […]
Read More

08-09-2019, 4:48 PM
ದಿನಾಂಕ 08/09/2019 ರಂದು ಯುವವಾಹಿನಿ ಸಭಾಂಗಣದಲ್ಲಿ ಸೋಣ ಸಂಭ್ರಮ ಕಾರ್ಯಕ್ರಮವು ಬೆಳಗ್ಗೆ 9:30ರಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾಶ್ರೀಕಾಂತ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗೋಕರ್ಣನಾಥೇಶ್ವರ ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಉದ್ಘಾಟಿಸಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ನಾನು ಕಲಿತೆ ಹಾಗೂ ಈ ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸಿವ ಕೆಲಸ ನಮ್ಮಿಂದ ಆಗಬೇಕು ಹಾಗಾಗಿ ಆದಷ್ಟು ಮಕ್ಕಳನ್ನು ಜೋಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಶಕ್ತಿ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ್ ಆಚಾರ್ಯ ಸೋಣದ ಮದಿಪನ್ನು ನೀಡಿ […]
Read More