
21-06-2019, 4:00 PM
ಉಡುಪಿ : ಯುವವಾಹಿನಿಯ ಉಡುಪಿ ಘಟಕದ ವತಿಯಿಂದ 5 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಘಟಕದ ಸಭಾಂಗಣದಲ್ಲಿ ದಿನಾಂಕ 21/06/2019 ರಂದು ನಡೆಯಿತು. ಯುವವಾಹಿನಿಯ ಉಡುಪಿ ಘಟಕದ ಅಧ್ಯಕ್ಷರಾದ ನಾರಾಯಣ್ ಬಿ. ಎಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಪತಾಂಜಲಿ ಹರಿದ್ವಾರ ಯೋಗ ಶಿಬಿರ” ಉಡುಪಿ ಇದರ ಯೋಗ ಶಿಕ್ಷಕಿ ಅನಿತಾ ಹಾಗೂ ಅವರ ಪತಿ ಯೋಗ ಶಿಕ್ಷಕ ತಿಪ್ಪೆಶ್ ರವರು ಯೋಗದ ಮಹತ್ವವನ್ನು ತಿಳಿಸಿದರು ಹಾಗೂ ಎಲ್ಲಾ ಸದಸ್ಯರಿಗೂ ತರಬೇತಿ ನೀಡಿದರು. ಯೋಗ ಗುರು […]
Read More

16-06-2019, 4:50 PM
ಸಸಿಹಿತ್ಲು : ಯುವವಾಹಿನಿ (ರಿ) ಸಸಿಹಿತ್ಲು ಘಟಕ ಹಮ್ಮಿಕೊಂಡಿದ್ದ ಕಾಡಿನ ನಡುವೆ ಒಂದು ದಿನದ ಚಾರಣ ದಲ್ಲಿ ನಾಲ್ಕು ಘಟಕ.ಸಮ್ಮಿಲನ ಗೊಂಡಿದ್ದು ಪರಿಚಯ ಮತ್ತು ಆತ್ಮೀಯತೆಗೆ ಕಾರಣವಾಗಿದೆ. ಮುಂಜಾನೆಯ ಹೊತ್ತು ಯುವವಾಹಿನಿ ಸಸಿಹಿತ್ಲು ಘಟಕದ ಸದಸ್ಯರನ್ನು ಬೆಳ್ತಂಗಡಿ ಘಟಕದ ಸದಸ್ಯರು ಬೆಳ್ತಂಗಡಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಿಂದ ಆರಂಭಗೊಂಡ ಚಾರಣ ಮತ್ತೂರು ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಮುಂದುವರಿಯಿತು. ಚಾರ್ಮಾಡಿಯಲ್ಲಿ ಚಾರಣ, ಸ್ನಾನ ಬಳಿಕ ಮೂಡಿಗೆರೆ ಕಾಮತ್ ರೆಸಾರ್ಟ್ ನಲ್ಲಿ ಸ್ನೇಹಮಿಲನ.ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ರಚನೆಯಾದ ಯುವವಾಹಿನಿ […]
Read More

16-06-2019, 4:29 PM
ಮೂಡುಬಿದಿರೆ : ಯುವವಾಹಿನಿ .ರಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 16-6-2019ನೇ ಆದಿತ್ಯವಾರದಂದು “ಯುವಸ್ಪಂದನ” ಸೇವಾ ಯೋಜನೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ” ದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು “ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ. ರಿ ಮೂಡುಬಿದಿರೆಯಲ್ಲಿ ಜರಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದಿರೆ ಯುವವಾಹಿನಿ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ ವಹಿಸಿದ್ದರು. ಯುವಸ್ಪಂದನ ಸೇವಾಯೋಜನೆಯ ಉದ್ಘಾಟನೆಯನ್ನು ಮುಲ್ಕಿ-ಮೂಡಬಿದಿರೆಯ ಜನಪ್ರಿಯ ಶಾಸಕರಾದ […]
Read More

16-06-2019, 3:57 PM
ಬೆಂಗಳೂರು : ದಿನಾಂಕ 16-06-2019 ರಂದು 45 ಸದಸ್ಯರು ಹಾಗೂ 6 ಮಕ್ಕಳು ಒಟ್ಟು 51 ಮಂದಿ ಒಂದು ದಿನದ ಪ್ರವಾಸಕ್ಕೆ ಡ್ರೀಮ್ ಲ್ಯಾಂಡ್ ರೆಸಾರ್ಟ್ ಗೊಲ್ಲಹಳ್ಳಿ, ಬೆಂಗಳೂರು ಇಲ್ಲಿಗೆ ಕೈಗೊಂಡಿದ್ದೇವು.ಈ ಕಾರ್ಯಕ್ರಮವು ನಿರೀಕ್ಷೆಗೆ ಮೀರಿ ಯಶಸ್ವಿ ಗೊಂಡಿತು. ಬೆಳಿಗ್ಗೆ ಸರಿಯಾಗಿ 8.35ಕ್ಕೆ ಬೆಂಗಳೂರಿನಿಂದ ಬಸ್ನಿಂದ ಪ್ರಯಾಣಿಸಿ ಸರಿಯಾಗಿ 9.20 ಕ್ಕೆ ರೆಸಾರ್ಟ್ ತಲುಪಿದೆವು.ಬೆಳಗ್ಗಿನ ಉಪಹಾರ ಮಾಡಿ ಮುಂದಿನ ಆಟಗಳಲ್ಲಿ ತೊಡಗಿಸಿಕೊಂಡಿದ್ದೇವು. ಬೆಂಗಳೂರಿನ ಒತ್ತಡದ ಜೀವನದಲ್ಲಿ ಎಲ್ಲರೂ ಯುವವಾಹಿನಿ ಬಂಧು ಮಿತ್ರರು ಒಟ್ಟಾಗಿ ಒಂದು ದಿನ ಬಿಡುವು […]
Read More

16-06-2019, 2:57 PM
ಬಂಟ್ವಾಳ : ಬಿರುವೆರ್ ಕುಡ್ಲ ( ರಿ.) ಬಂಟ್ವಾಳ ಘಟಕ ಮತ್ತು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಯೂನಿವರ್ಸಿಟಿ ಮತ್ತು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ನಡೆಯುವ ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ದಿನಾಂಕ 16-06-2019ನೇ ಆದಿತ್ಯವಾರದಂದು ನಾವೂರ ಪ್ರೌಢಶಾಲೆಯಲ್ಲಿ ನಡೆಯಿತು. ಬಿರ್ವೆರ್ ಕುಡ್ಲ (ರಿ) ಬಂಟ್ವಾಳ […]
Read More

16-06-2019, 2:37 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದಿಂದ ದಿನಾಂಕ 16.06.2019 ರ ಭಾನುವಾರ ಶ್ರೃಂಗೇರಿ, ಹೊರನಾಡು, ಕಲಶ ಮತ್ತು ಕುದುರೆಮುಖ ಬೆಟ್ಟಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಸುಮಾರು 100 ಜನರನ್ನು ಒಳಗೊಂಡ ಪ್ರವಾಸಿ ತಂಡವು ಎರಡು ಬಸ್ಸುಗಳಲ್ಲಿ ಬೆಳಿಗ್ಗೆ 6.00 ಗಂಟೆಗೆ ಸರಿಯಾಗಿ ಯುವವಾಹಿನಿ ಸಭಾಂಗಣದಿಂದ ಹೊರಟ್ಟಿತ್ತು. ಬಜಗೋಳಿಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿದ ನಂತರ ಕಳಸ, ಹೊರನಾಡು, ಶೃಂಗೇರಿ ಮತ್ತು ಕುದುರೆ ಮುಖ ಬೆಟ್ಟಗಳ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ರಾತ್ರಿ 8.00 ಗಂಟೆಗೆ ವಾಪಸು ಬಂದಿದ್ದೇವೆ. ದಿನವಿಡೀ ಹಾಡು, […]
Read More

15-06-2019, 4:49 PM
ಕಡಬ : ಜಾತಿ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ಸಮಾಜವನ್ನು ಒಡೆಯಬಾರದು.ಸಮಾಜಮುಖಿ ಚಿಂತನೆಗಳಿಂದ ಸದೃಢ ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಜಾತಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಕಡಬ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳು ಜಾಗತಿಕ ಮನ್ನಣೆ ಪಡೆದಿವೆ. ಅವರ ಆದರ್ಶ ಮತ್ತು ತತ್ವದಡಿ […]
Read More

02-06-2019, 9:13 AM
ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕರಿಗೆ ಪುರಸ್ಕಾರ 2019 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ 34 ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತವರುಮನೆಯ ಸನ್ಮಾನ : ಬಿ.ತಮ್ಮಯ ಯುವವಾಹಿನಿ ಸಲಹೆಗಾರ, ತುಳುಲಿಪಿ ಶಿಕ್ಷಕ, ಸಾಹಿತಿ ಬಿ.ತಮ್ಮಯ ಅವರ ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು, ಯುವವಾಹಿನಿ ಬಂಟ್ವಾಳ ಘಟಕದ ಸನ್ಮಾನವು ತವರುಮನೆಯ ಸನ್ಮಾನದಂತೆ ಅತ್ಯಂತ ಶ್ರೇಷ್ಠವಾದ ಸನ್ಮಾನ ಈ ಸನ್ಮಾನವು ಅಚ್ಚಳಿಯದೆ ನೆನಪಿನ […]
Read More

31-05-2019, 4:03 PM
ವೇಣೂರು : ಯುವವಾಹಿನಿ ವೇಣೂರು ಘಟಕಕ್ಕೆ ಕಲಾಕಾರ್ ಕಲೋತ್ಸವ ಸಮಾರಂಭದಲ್ಲಿ ಯುವಕೀರ್ತಿ ಬಿರುದು ಪ್ರದಾನ ಮಾಡಲಾಯಿತು. ಯುವವಾಹಿನಿ ವೇಣೂರು ಘಟಕದ ಸಮಾಜಮುಖಿ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನವೀನ್ ಪುಚ್ಚೇರಿ, ನಿಕಟಪೂರ್ವ ಅಧ್ಯಕ್ಷ ನಿತೀಶ್ ಎಚ್, ಸತೀಶ್ ಪಿ.ಎನ್ ಮತ್ತಿತರರು ಉಪಸ್ಥಿತರಿದ್ದರು
Read More

31-05-2019, 2:12 PM
ಕೂಳೂರು : ಸದಸ್ಯರ ಮನೆ ಮನದಲ್ಲಿ ದೇವರ ಮೇಲಿನ ಭಕ್ತಿ ಪಸರಿಸಲಿ ಎಂಬ ಉದ್ದೇಶದೊಂದಿಗೆ ಯುವವಾಹಿನಿ ಕೂಳೂರು ಘಟಕವು ಮನೆ ಮನೆ ಭಜನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ತಿಂಗಳ ಒಂದು ಶುಕ್ರವಾರ ಒಬ್ಬ ಸದಸ್ಯರ ಮನೆಯಲ್ಲಿ ಭಜನೆ ಮಾಡಲಾಗುವುದು. ಈ ತಿಂಗಳ ಮೊದಲ ಭಜನೆಯನ್ನು ದಿನಾಂಕ 31-05-19 ನೇ ಶುಕ್ರವಾರದಂದು ಘಟಕದ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಭಜನೆಯನ್ನು 7.15 ಕ್ಕೆ ಸರಿಯಾಗಿ ಪ್ರಾರಂಭಿಸಿ 8.30 ಗೆ ಮಂಗಳಗೊಳಿಸಲಾಯಿತು. […]
Read More