03-12-2018, 4:34 PM
ಪಣಂಬೂರು ಕುಳಾಯಿ : ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಯುವವಾಹಿಯಂತಹ ಸಂಘಟನೆಗಳು ಬಿಲ್ಲವರ ಸ್ವಾಭಿಮಾನ, ಆತ್ಮಸ್ಥೈರ್ಯಗಳಿಗಾಗಿ ಕೋಟಿ ಚೆನ್ನಯ ಕಾಂತಾಬಾರೆ ಬೂದಾಬಾರೆಯಂತಹ ವೀರ ಪುರುಷರ ಸಾಧನೆಯನ್ನು , ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು, ಸಾಹುಕಾರ್ ಕೊರಗಪ್ಪ, ದಾಮೋದರ ಮಾಸ್ತರ್ ರಂತಹ ಸಾಮಾಜಿಕ ಸೇವೆಯನ್ನು, ಬಂಗಾರಪ್ಪ, ದಾಮೋದರ ಮುಲ್ಕಿ ಹಾಗೇ ನಮ್ಮ ನಡುವೆಯೇ ಇರುವ ಜನಾರ್ದನ ಪೂಜಾರಿಯಂತಹ ರಾಜಕೀಯ ಕ್ಷೇತ್ರದ ಸಾಧನೆಯನ್ನು ಆದರ್ಶವಾಗಿ ತೆಗೆದುಕೊಳ್ಳುತ್ತೇವೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ ದಿ.ವಿಶುಕುಮಾರ್ […]
Read More
18-11-2018, 3:24 PM
ಪಣಂಬೂರು:- ಹಿಂದುಳಿದ ವರ್ಗಗಳಿಗೆ ದೈರ್ಯ ತುಂಬಿ ಅವರ ಬದುಕಿನಲ್ಲಿ ಭರವಸೆ ಬೆಳಕು ಕಾಣಲು ಕಾರಣರಾಗಿದ್ದ ಬ್ರಹ್ಮಶ್ರೀನಾರಾಯಣಗುರುಗಳ ತತ್ವ ಸಂದೇಶ ಸಾರ್ವಕಾಲಿಕ ಮತ್ತು ಅಜರಾಮರವಾಗಿದ್ದು, ಇಂದಿನ ದಿನಗಳಲ್ಲಿ ತತ್ವ ಸಂದೇಶಗಳನ್ನು ಮನೆ ಮನೆಗೆ ತಲುಪಿಸಿ, ಯುವಕರಲ್ಲಿ ಜಾಗ್ರತಿಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ತತ್ವ ಸಂದೇಶಗಳನ್ನು ತಿಳಿಸಿ ಹೇಳುವ ಕಾರ್ಯಕ್ರಮಗಳನ್ನು ಸಂಯೋಜಿಸಿದ ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಹೇಳಿದರು. ದಿನಾಂಕ 18.11.2018ನೇ ರವಿವಾರದಂದು ಯುವವಾಹಿನಿ (ರಿ) […]
Read More
19-10-2018, 3:12 PM
ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ ಮಂಗಳೂರು : ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 10.10.2018 ರಿಂದ 19.10.2018 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಕೂಳೂರು, ಕೊಲ್ಯ, ಸುಳ್ಯ, ಮಾಣಿ, ವೇಣೂರು, ಮೂಡಬಿದ್ರೆ, ಕೆಂಜಾರು-ಕರಂಬಾರು, ಶಕ್ತಿನಗರ, […]
Read More
10-10-2018, 3:45 PM
ಪಣಂಬೂರು : ದೇವಸ್ಥಾನವನ್ನು ನಿರ್ಮಿಸಿ, ದೇವರನ್ನು ಪ್ರತಿಷ್ಟೆ ಮಾಡಿ ಶೋಷಿತ ಸಮಾಜಕ್ಕೆ ದೇವರನ್ನು ಕಾಣುವ ಭಾಗ್ಯವನ್ನು ಕರುಣಿಸಿ, ತಾನು ಗಳಿಸಿದ ಜ್ಞಾನದಿಂದ ಸಮಾಜ ಪರಿವರ್ತನೆಯನ್ನು ಮಾಡಿದ ಸಮಾಜ ಸುದಾರಕ, ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು. ಅವರ ತತ್ವಾದರ್ಶಗಳು ಅಂದಿಗೂ, ಇಂದಿಗೂ, ಮುಂದೆಯೂ ಅಳಿಯದ ಸಂದೇಶವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು. ದಿನಾಂಕ 21.10.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ಕುಳಾಯಿ ಮೂಡುಬೆಟ್ಟು ತುಕಾರಾಮ ಕರ್ಕೇರರವರ ಮನೆಯಲ್ಲಿ ಜರಗಿದ ಬಿಲ್ಲವ ಸಮಾಜ […]
Read More
07-10-2018, 3:41 PM
ಪಣಂಬೂರು : ಬ್ರಹ್ಮಶ್ರೀ ನಾರಾಯಣಗುರುಗಳು ಸನಾತನ ಪರಂಪರೆ, ಧ್ಯಾನ, ತಪಸ್ಸನ್ನು ಪ್ರತಿಪಾದಿಸಿದ್ದರು. ಈ ಮೂಲಕ ಸಮಾಜದಲ್ಲಿ ಆ ಕಾಲದಲ್ಲಿದ್ದ ಅಸ್ಪ್ರಶ್ಯತೆ, ಅಂಧಶ್ರದ್ಧೆ ಮೊದಲಾದ ಸಮಸ್ಯೆಗಳ ಬಗ್ಗೆ ಕ್ರಾಂತಿಕಾರಿ ಬದಲಾವಣೆ ತರಲು ಯತ್ನಿಸಿದ್ದರು. ತಪಸ್ಸನ್ನು ಆಚರಿಸಿ ಭಗವತ್ ಸಾಕ್ಷಾತ್ಕಾರವನ್ನು ಪಡೆದು ಸಮಾಜ ಪರಿವರ್ತನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದರು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು. ದಿನಾಂಕ 07.10.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ಎಂ ಟಿ ಸಾಲ್ಯಾನ್ […]
Read More
23-09-2018, 3:26 PM
ಪಣಂಬೂರು : ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಂದೇಶ ಜಗತ್ತಿನ ಕತ್ತಲೆಯನ್ನು ದೂರವಾಗಿಸುವ ಬೆಳಕಾಗಿದೆ. ಆದ್ದರಿಂದ ಅವರ ಸಂದೇಶಗಳನ್ನು ದೇಶದೆಲ್ಲೆಡೆ ಸಾರುವ ಕೆಲಸವಾಗಬೇಕಾಗಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಬೀಜಮಂತ್ರದಿಂದ ಎಲ್ಲಾ ಮತದ ಜನಮನವನ್ನು ಗೆದ್ದು ಆಧ್ಯಾತ್ಮಿಕ ಆಂದೋಲನಕ್ಕೆ ವೇದಿಕೆ ನಿರ್ವಿುಸಿದ ನಾರಾಯಣಗುರುಗಳು ವಿಶ್ವಮಾನವರಾಗಿ ಬೆಳಗುತ್ತಿದ್ದಾರೆ.ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು. ದಿನಾಂಕ 23.09.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ದಿ.ಲಿಂಗಪ್ಪ ಕರ್ಕೇರ ಸುಬ್ಬ ಮನೆ […]
Read More
05-08-2018, 7:50 AM
ಮಂಗಳೂರು: ಕರಾವಳಿ ಕರ್ನಾಟಕದ ಅವಳಿ ಜಿಲ್ಲೆಗಳಲ್ಲಿ ಮೂವತ್ತು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಪನ್ನಗೊಂಡಿತು. ಸರಕಾರ ಮಾಡುವ ಕಾರ್ಯ ಯುವವಾಹಿನಿ ಮಾಡಿದೆ ಡಾ. ಜಯಮಾಲಾ ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಉದ್ಯೋಗ ಹೀಗೆ ವಿವಿಧ ಮಗ್ಗುಲುಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿಯ ಕಾರ್ಯಸಾಧನೆ ಇತರರಿಗೆ […]
Read More
29-07-2018, 4:31 PM
ಕುಳಾಯಿ : ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಹೊಣೆಗಾರಿಕೆ ಪ್ರಾಮುಖ್ಯವಾಗಿದೆ. ಯುವವಾಹಿನಿ ಸಂಘಟನೆ ಯುವಕರಲ್ಲಿ ಶಿಕ್ಷಣ, ಸಂಘಟನೆ ಬಗ್ಗೆ ಜಾಗ್ರತಿ ಮೂಡಿಸಿ ಸುಸಂಸ್ಕ್ರತ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಟಿದ ಪೊನ್ನುಪೊಂಜೊವುಲು ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಪೆರ್ಮನ್ನೂರು ಸರಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ತಿಳಿಸಿದರು. ಅವರು ದಿನಾಂಕ 29-07-2018ನೇ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ, ಯುವವಾಹಿನಿ(ರಿ) ಪಣಂಬೂರು ಘಟಕ ಮತ್ತು ಯುವವಾಹಿನಿ(ರಿ) ಸುರತ್ಕಲ್ […]
Read More
02-07-2018, 4:19 PM
ಪಣಂಬೂರು : ಯುವವಾಹಿನಿ (ರಿ) ಪಣಂಬೂರು ಘಟಕದ ದಿನಾಂಕ 02-07-2018ನೇ ಸೋಮವಾರದಂದು ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ” ಎನ್ನುವ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು . “ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ” ಎನ್ನುವ ವಿಚಾರದ ವಿಚಾರ ಸಂಕಿರಣ ಜರಗಿತು. ಶ್ರೀ ಯೋಗೀಶ್ ಮಲ್ಲಿಗೆಮಾಡು, ರೋಶನಿ ನಿಲಯ, ಮಂಗಳೂರು ಇವರು ಅತ್ಯುತ್ತಮವಾದ ವಿಚಾರಗಳನ್ನು ಮಂಡಿಸಿದರು. ಈ ಪ್ರಕೃತಿ ಅದರ ವೈಶಿಷ್ಟ್ಯ, ನಾವು ಹೇಗೆ ಪ್ರಕೃತಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ, ಯಾವ ರೀತಿಯಾಗಿ ನಾವು ಪ್ರಕೃತಿಯ ಕೊಡುಗೆಯನ್ನು […]
Read More
09-06-2018, 2:50 AM
ಪಣಂಬೂರು : ಅವ್ಯವಸ್ಥೆಯನ್ನು ತಿಂದುಂಡು ಹೊದ್ದು ಮಲಗೇಳುವ ನಮ್ಮ ಪರಿಸ್ಥಿತಿಯನ್ನು ಬದಲಾಯುಸೋ ಪ್ರಯತ್ನಕ್ಕೆ ಯುವವಾಹಿನಿ ಸಂಘಟನೆ ಅನಿವಾರ್ಯ ಹಾಗೂ ಆಗ ಮಾತ್ರ ಒಂದು ಸುಭದ್ರ ನಾಳೆ, ಒಂದು ನೆಮ್ಮದಿಯ ನಾಳೆ, ಒಂದು ನಿರಾತಂಕ ನಾಳೆ, ಒಂದು ಸ್ಪಷ್ಟ ನಾಳೆ, ಒಂದು ಸಮೃದ್ಧಿಯ ನಾಳೆ ನಿರ್ಮಾಣಕ್ಕೆ ಸಾಧ್ಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 09.06.2018 ರಂದು ಪಣಂಬೂರು, ನವಮಂಗಳೂರು ಬಂದರು ಮಂಡಳಿಯ ರಿಕ್ರಿಯೇಶನ್ ಕ್ಲಬ್ ಇಲ್ಲಿ ಯುವವಾಹಿನಿ(ರಿ) ಪಣಂಬೂರು ಘಟಕದ […]
Read More