13-09-2019, 9:10 AM
ಯುವವಾಹಿನಿ ಉಡುಪಿ ಘಟಕದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 165 ನೇ ಜನ್ಮದಿನದ ಆಚರಣೆಯನ್ನು ಘಟಕದ ಸಭಾಂಗಣದಲ್ಲಿ ನಡೆಸಲಾಯಿತು. ಅಲೆವೂರು ಭಾಸ್ಕರ ಪೂಜಾರಿ ಇವರು ವಿಧಿವತ್ತಾಗಿ ಗುರುಪೂಜೆಯನ್ನು ನೆರವೇರಿಸಿದರು. ಅಧ್ಯಕ್ಷರಾದ ನಾರಾಯಣ ಬಿ. ಎಸ್ ರವರು ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ, ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದಾರೆ,ಅವರ ಆದರ್ಶಗಳನ್ನು ಪಾಲಿಸಿದರೆ ಜೀವನದಲ್ಲಿ ಒಳಿತಾಗುತ್ತದೆ ಎಂದರು.ಘಟಕದ ಸಲಹೆಗಾರರಾದ ಸಂತೋಷ್ ಕುಮಾರ್ ಮಾತನಾಡಿ ಯುವವಾಹಿನಿಯ ಆಸ್ತಿಯಾಗಿದ್ದು, ದೇವರ ಪಾದ ಸೇರಿದ ತಮ್ಮಯ ಸರ್ ಗೆ ನಾರಾಯಣ […]
Read More
13-09-2019, 9:07 AM
ದಿನಾಂಕ 13/09/2019 ರಂದು 165 ನೇ ನಾರಾಯಣಗುರು ಜಯಂತಿಯ ಪ್ರಯುಕ್ತ ಕುಪ್ಪೆಪದವಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಯುವವಾಹಿನಿ (ರಿ.) ಕುಪ್ಪೆಪದವು ಘಟಕದ ವತಿಯಿಂದ ಅಧ್ಯಕ್ಷರು/ಉಪಾಧ್ಯಕ್ಷರು/ ಸ್ಥಾಪಕ ಅಧ್ಯಕ್ಷರು ಪದಾಧಿಕಾರಿಗಳು,ಸದಸ್ಯರು ಹಾಗೂ ಹಿರಿಯರಾದ ಉಮೇಶ್ ಅಮೀನ್ ರವರ ಮಾರ್ಗದರ್ಶನದಲ್ಲಿ ವಿಶೇಷ ಗುರು ವಂದನೆ ಸಲ್ಲಿಸಲಾಯಿತು.
Read More
13-09-2019, 9:05 AM
165 ನೇ ನಾರಾಯಣಗುರು ಜಯಂತಿ ಪ್ರಯುಕ್ತ ಯುವವಾಹಿನಿ (ರಿ.)ಕಂಕನಾಡಿ ಘಟಕದ ವತಿಯಿಂದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಭೇಟಿ ನೀಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಗುರುಪೂಜೆ ನಡೆಸಲಾಯಿತು.ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ವಿಶೇಷ ಗುರು ಪೂಜೆ ಸಲ್ಲಿಸಲಾಯಿತು.
Read More
13-09-2019, 8:59 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕವು ನಾರಾಯಣ ಗುರು ಜಯಂತಿಯ ಪ್ರಯುಕ್ತ ಗುರುವರ್ಯರು ಸಮಾಜಕ್ಕೆ ಕೊಟ್ಟ ಸಂದೇಶವಾದ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಮಾತಿನಂತೆ ವಿವಿಧ ಮಹಿಳಾ ಮಂಡಳಿಗಳನ್ನು ಜೊತೆಗೂಡಿಸಿ ಬೆಳಗ್ಗೆ12ರಿಂದ ಸಂಜೆ 7 ಘಂಟೆಯವರೆಗೆ ಭಜನಾ ಕಾರ್ಯಕ್ರಮವನ್ನು ನಡೆಯಸಿತು. ಕಾರ್ಯಕ್ರಮಕ್ಕೆಗುರುಸ್ತೋತ್ರ ಹಾಗೂ ಭಜನೆ ಮೂಲಕ ಮಂಗಳೂರು ಮಹಿಳಾ ಘಟಕವು ಚಾಲನೆ ನೀಡಿ ನಂತರ ವಿವಿಧ ಮಹಿಳಾ ಮಂಡಳಿಗಳಿಗೆ ಅವಕಾಶಕೊಟ್ಟು ನಂತರ ಕೊನೆಯ ಹಂತವನ್ನು ಮಂಗಳೂರುಘಟಕದವರೊಂದಿಗೆ ಸೇರಿ ಮುಕ್ತಾಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಉಮಾಶ್ರೀಕಾಂತ್, ನೈನವಿಶ್ವನಾಥ್,ರವಿಕಲ, ನಾರಾಯನಗುರು ತತ್ವ […]
Read More
13-09-2019, 8:54 AM
ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಕೂಳೂರು ಘಟಕದ ವತಿಯಿಂದ *ಚಿರಂತನ ವೃದ್ಧಾಶ್ರಮ* ಸುರತ್ಕಲ್ ಇಲ್ಲಿಗೆ ಭೇಟಿ ನೀಡಿ, ಅಲ್ಲಿನ ಹಿರಿಯ ಚೇತನರಿಗೆ ಸಂಜೆಯ ಉಪಹಾರದ ವ್ಯವಸ್ಥೆಯನ್ನು ಮಾಡಿದೆವು. ನಂತರ ಹಿರಿಯ ಚೇತನರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಸದಸ್ಯರೆಲ್ಲರೂ ಸುಮಾರು 2 ಗಂಟೆಗಳ ಕಾಲ ಅವರೊಂದಿಗೆ ಬೆರೆತು, ಕುಣಿದಾಡಿ ಸಂತಸಪಟ್ಟೆವು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಅಮೀನ್,ಕಾರ್ಯದರ್ಶಿ ಮಧುಶ್ರೀ […]
Read More
10-09-2019, 4:56 PM
ಬಜಪೆ ಪೋರ್ಕೋಡಿ ನಿವಾಸಿ 22 ಹರೆಯದ ರಾಕೇಶ್ ಇವರ ಎರಡು ಕಿಡ್ನಿಯು ನಿಷ್ಕ್ರಿಯವಾಗಿದ್ದು ,ಈತನ ತಾಯಿ ತನ್ನ ಮಗನ ಜೀವ ಉಳಿಸುವ ಸಲುವಾಗಿ ತನ್ನ ಒಂದು ಕಿಡ್ನಿಯನ್ನು ಕಸಿ ಮಾಡುವುದಾಗಿ ನಿರ್ಧರಿಸಿದ್ದು ,ಈ ಶಸ್ತ್ರ ಚಿಕಿಸ್ಥೆಗೆ ಮಂಗಳೂರ್ ನಗರದ ಕೆ ಎಂ ಸಿ ಆಸ್ಪತ್ರೆಯಲ್ಲಿ 12/09/19 ರಂದು ದಿನ ನಿಗದಿಪಡಿಸಲಾಗಿದ್ದು ಸುಮಾರು 8 ಲಕ್ಷಕ್ಕಿಂತ ಅಧಿಕ ಹಣದ ಅವಶ್ಯಕತೆ ಇದೆ .ಬಡತನದಿಂದ ದಿನ ದೂಡುವ ಈ ಪರಿವಾರಕ್ಕೆ ಹಣದ ಸಹಾಯದ ಅವಶ್ಯಕತೆ ತುಂಬಾನೆ ಇದೆ . 09/09/19 […]
Read More
10-09-2019, 9:24 AM
ಯುವವಾಹಿನಿ ರಿ. ಮೂಡಬಿದಿರೆ ಘಟಕ ವತಿಯಿಂದ ದಿನಾಂಕ 10-09-2019 ನೇ ಮಂಗಳವಾರ *ಶಿಕ್ಷಕರ ದಿನಾಚರಣೆ* ಪ್ರಯುಕ್ತ *ಮೂಡಬಿದಿರೆ ವಲಯದ ದ.ಕ ಜಿಲ್ಲಾ ಪಂ.ಹಿ.ಪ್ರಾಥಮಿಕ ಶಾಲೆ ಪುಚ್ಚೆಮೊಗರಿನಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿ ಸ್ವಇಚ್ಛೆಯಿಂದ ತನ್ನ ಸರಕಾರಿ ವೃತ್ತಿಯಿಂದ ನಿವೃತ್ತಿಹೊಂದಿದ ಶ್ರೀಮತಿ ಸುನೀತಾ ಸುವರ್ಣ* ಇವರು ಸುಮಾರು 21ವರ್ಷಗಳ ಕಾಲ ಸುದೀರ್ಘ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.ಇವರು ದಾಮೋದರ್ ಕೆ. ನಿವೃತ್ತ ಎಸ್ ಡಿ ಸಿ.ಸಿ ಬ್ಯಾಂಕ್ ಎಜಿಮ್ ಇವರ ಧರ್ಮಪತ್ನಿ. ಇವರಿಗೆ *ಯುವವಾಹಿನಿ ರಿ. ಮೂಡಬಿದಿರೆ ಘಟಕದ ಪದಾಧಿಕಾರಿಗಳು ಒಟ್ಟು […]
Read More
08-09-2019, 5:07 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 08.09.19 ರಂದು ಹಳ್ಳಿಡೊಂಜಿ ದಿನ ಕಾರ್ಯಕ್ರಮವು ಘಟಕದ ಸದಸ್ಯರಾದ *ಪ್ರಸಾದ್ ಈದು ಬಟ್ಟೇಣಿ ಇವರ ಊರು ಈದು ಬಟ್ಟೇಣಿ, ಕಾರ್ಕಳ* ಇಲ್ಲಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಘಟಕದ 50 ಸದಸ್ಯರು ಕೂಳೂರಿನಿಂದ ಹೊರಟು 10.30 ಕ್ಕೆ ಶಿರ್ತಾಡಿ ತಲುಪಿ ಘಟಕದ ಸದಸ್ಯರಾದ *ಜಯ ಬಂಗೇರ* ಅವರ ಮನೆಯಲ್ಲಿ ಉಪಹಾರ ಮುಗಿಸಿ ನಂತರ ಅಲ್ಲಿಂದ ಹೊಸ್ಮಾರು ಆಶ್ರಮಕ್ಕೆ ಭೇಟಿ ನೀಡಿ, *ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರ ದರ್ಶನ […]
Read More
08-09-2019, 4:48 PM
ದಿನಾಂಕ 08/09/2019 ರಂದು ಯುವವಾಹಿನಿ ಸಭಾಂಗಣದಲ್ಲಿ ಸೋಣ ಸಂಭ್ರಮ ಕಾರ್ಯಕ್ರಮವು ಬೆಳಗ್ಗೆ 9:30ರಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾಶ್ರೀಕಾಂತ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗೋಕರ್ಣನಾಥೇಶ್ವರ ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಉದ್ಘಾಟಿಸಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ನಾನು ಕಲಿತೆ ಹಾಗೂ ಈ ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸಿವ ಕೆಲಸ ನಮ್ಮಿಂದ ಆಗಬೇಕು ಹಾಗಾಗಿ ಆದಷ್ಟು ಮಕ್ಕಳನ್ನು ಜೋಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಶಕ್ತಿ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ್ ಆಚಾರ್ಯ ಸೋಣದ ಮದಿಪನ್ನು ನೀಡಿ […]
Read More
07-09-2019, 5:16 PM
ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ *ಯುವ ಸ್ಪಂದನ ಸೇವಾ ಯೋಜನೆಯ 17ನೇ ಸೇವೆಯನ್ನು ಅಳಿಯೂರಿನಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಹರೀಶ್ ಪೂಜಾರಿ ಅವರು ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದ್ದು ಇದೀಗ ಶಸ್ತ್ರಚಿಕಿತ್ಸೆ ಗೆ ೭ ಲಕ್ಷ ತಗಲುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇವರು ಕಡುಬಡತನದಲ್ಲಿದ್ದು ಇವರಿಗೆ ಹೆಂಡತಿ, ಮಗು ಹಾಗೂ ಹೆತ್ತವರಿಗೆ ಇವರೇ ಆಧಾರ ಸ್ತಂಭವಾಗಿದ್ದು ಇದೀಗ ಮನೆಯವರಿಗೆ ದಿಕ್ಕೇ ತೋಚದಂತಗಿದೆ.ತೀರಾ ಬಡತನದಿಂದಿರುವ ಈ ಕುಟುಂಬಕ್ಕೆ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಳ್ಳಲಾಗದೆ *ಇವರ […]
Read More