Yuvavahini

ಕೇಂದ್ರ ಸಮಿತಿ

ಉನ್ನತ ಸಾಧನೆಯ ಪ್ರತಿಭೆ – ಕು| ದಿಶಾ ಎಸ್.

ಪುತ್ತೂರಿನ ಶ್ರೀ ಸಂತೋಷ್ ಹಾಗೂ ಶ್ರೀಮತಿ ದಿವ್ಯಾ ಎಸ್ ಇವರ ಸುಪುತ್ರಿ ಕು. ದಿಶಾ ಎಸ್ ಈ ಬಾರಿ SSLCಯಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆಯನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಪುತ್ತೂರಿನ ಸಂತ ವಿಕ್ಟರ್‍ಸ್ ಹೈಸ್ಕುಲಿನ ವಿದ್ಯಾರ್ಥಿನಿಯಾದ ಈಕೆ ಕನ್ನಡ, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇಕಡಾ 100 ಅಂಕಗಳಿಸಿದ್ದು ಒಟ್ಟಿನಲ್ಲಿ 625 ಕ್ಕೆ 616 ಅಂಕಗಳಿಸಿ(98.56%) ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಶಾಲೆಯ ಅಧ್ಯಾಪಕರು, ಹೆತ್ತವರು ಬಿಲ್ಲವ ಸಮಾಜ ಮತ್ತು ಜಿಲ್ಲೆಗೆ ಕೀರ್ತಿ ತಂದ ಇವರ ಪರಿಶ್ರಮವನ್ನು ಮೆಚ್ಚಲೇಬೇಕು. ಪ್ರಾಯ ಸಹಜವಾದ ಯಾವುದೇ […]

Read More

ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ – 2016

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಪುರಭವನದಲ್ಲಿ ದಿನಾಂಕ 31.07.2016 ರಂದು ಜರುಗಿದ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2016 ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ,ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ,ಮುಂಬಯಿ ಬಿಲ್ಲವ […]

Read More

ಶ್ರೀ ಶೈಲೇಂದ್ರ ವೈ.ಸುವರ್ಣ ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ – 2016

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಪುರಭವನದಲ್ಲಿ ದಿನಾಂಕ 31.07.2016 ರಂದು ಜರುಗಿದ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ಶ್ರೀ ಶೈಲೇಂದ್ರ ವೈ.ಸುವರ್ಣ ಇವರಿಗೆ  ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ 2016 ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, […]

Read More

ಕರಾಟೆ ಮಿಂಚು ಸಂಚಲನದ ಯುವ ಪ್ರತಿಭೆ ಕು| ಚೈತ್ರಾ ಸಾಲಿಯಾನ್

ಕರಾಟೆ – ಆತ್ಮರಕ್ಷಣೆಯ ಕಲೆ. ವಿದ್ಯಾರ್ಥಿ ಜೀನದಲ್ಲಿ ಕಲಿಕೆಯೊಂದಿಗೆ ಈ ಕ್ರೀಡೆಯಲ್ಲಿ ತನ್ನನ್ನು ಪರಿಪೂರ್ಣವಾಗಿ ಸಮರ್ಪಿಸಿ ಮಾರ್ಗದರ್ಶಕ ಶ್ರೀ ಸತೀಶ್ ಪೂಜಾರಿ ಬೆಳ್ಮಣ್ ಇವರ ಗರಡಿಯಲ್ಲಿ ಪಳಗಿ ಉನ್ನತ ಕಪ್ಪು ಪಟ್ಟಿ ಪದವಿಗಳಸಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡು ತಂದೆ ತಾಯಿ, ಸಮಾಜ ಮಾತ್ರವಲ್ಲ ಜಿಲ್ಲೆಗೇ ಹೆಸರು ತಂದ ಕು| ಚೈತ್ರಾ ಸಾಲಿಯಾನ್ ಓರ್ವ ಉದಯೋನ್ಮುಖ ಪ್ರತಿಭೆ. ತಂದೆ ಶ್ರೀ ಅಶೋಕ್ ಸಾಲ್ಯಾನ್ -ತಾಯಿ ಶ್ರೀಮತಿ ಸಾಲ್ಯಾನ್ ದಂಪತಿಗಳಿಗೆ ಗೌರವ ಹೆಮ್ಮೆ […]

Read More

ಉಡುಪಿಯಲ್ಲಿ ಹೊಸ ಇತಿಹಾಸ ಬರೆದ ಯುವವಾಹಿನಿ ; ಅಭೂತಪೂರ್ವ ಯಶಸ್ಸು ಕಂಡ 29 ನೇ ವಾರ್ಷಿಕ ಸಮಾವೇಶ

ಸೂರ್ಯ ನಸುನಗುತ್ತಾ ಮೂಡಿ ತುಸು ಹೊತ್ತು ಕಳೆದಿತ್ತಷ್ಟೇ, ಪೂರ್ವ ದಿಗಂತದಲ್ಲಿ ಕೆಂಬಣ್ಣ ಇನ್ನೂ ಮಾಸಿರಲಿಲ್ಲ, ಕರಗಿದ ಮೋಡ ಇಬ್ಬನಿಯಾಗಿ ಹಸಿರೆಲೆಯ ಮೇಲೆ ಇನ್ನೂ ಜಿನುಗುತ್ತಲೇ ಇತ್ತು. ಹಾಡು ಹಕ್ಕಿಗಳ ಕೂಗು ಕೇಳುತ್ತಲೇ ಇನ್ನೂ ನಿಂತಿರಲಿಲ್ಲ. ಆದರೆ ಉಡುಪಿಯ ಪುರಭವನ ಅಷ್ಟರಲ್ಲಿಯೇ ತುಂಬಿ ತುಳುಕುತ್ತಿದ್ದವು. ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ಮತ್ತು ಮಂಗಳೂರು ಹೀಗೆ ದೂರದೂರಿನಿಂದ ಬಂದಿದ್ದ ಯುವವಾಹಿನಿಯ ಬಂಧುಗಳು ಅದಾಗಲೇ ಪುರಭವನಕ್ಕೆ ರಂಗು ತಂದಿದ್ದರು. ಯುವವಾಹಿನಿಯ 29 ವರುಷಗಳ ಭವ್ಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ನಿಗದಿತ ಸಮಯದಲ್ಲಿ ಸದಸ್ಯರು […]

Read More

ಶ್ರೀಮತಿ ಎಂ. ಜಾನಕಿ ಬ್ರಹ್ಮಾವರರವರಿಗೆ 2016 ರ ಸಾಲಿನ ವಿಶುಕುಮಾರ್ ಪ್ರಶಸ್ತಿ

ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಲನಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನಡೆ ನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿಯ ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯು ಕಳೆದ 14 ವರ್ಷಗಳಿಂದ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ದುಡಿದ, ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ವಿಶುಕುಮಾರ್ ಪ್ರಶಸ್ತಿ ನೀಡುತ್ತಾ ಬಂದಿರುತ್ತದೆ. 2016ರ ಸಾಲಿನ ವಿಶುಕುಮಾರ್ ಪ್ರಶಸ್ತಿಯು ದ್ವಿಭಾಷಾ ಕವಿ, […]

Read More

ಡಾ| ನವೀನ್ ಕುಮಾರ್ ತೋನ್ಸೆ

ತೋನ್ಸೆ ಗರಡಿ ಮನೆ-ಮೂಡು ತೋನ್ಸೆ ಹೊನ್ನಪ್ಪಕುದ್ರು ಇಲ್ಲಿನ ದಿ| ನಾರಾಯಣ ಪೂಜಾರಿ-ಅಮ್ಮಣ್ಣಿ ಪೂಜಾರ್ತಿ ದಂಪತಿಗಳ ಸುಪುತ್ರರಾದ ಡಾ| ನವೀನ್ ಕುಮಾರ್ ತೋನ್ಸೆಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ತೋನ್ಸೆ ನಿಡಂಬಳ್ಳಿ ಪ್ರಾಥಮಿಕ ಶಾಲೆಯಲ್ಲಿ ಪಡೆದು ಮಿಲಾಗ್ರಿಸ್ ಹೈಸ್ಕೂಲ್‌ನಲ್ಲಿ ಪ್ರೌಢ ಹಾಗೂ ಮಿಲಾಗ್ರಿಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ಮಣಿಪಾಲ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಎಲೈಡ್ ಹೆಲ್ತ್ ಸೈನ್ಸ್ ಇಲ್ಲಿ ಬಿ.ಎಸ್‌ಸಿ (MLT) ಪದವಿ ಪಡೆದ ಡಾ| ತೋನ್ಸೆಯವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅನಾಟಮಿಯಲ್ಲಿ ಎಂ.ಎಸ್‌ಸಿ. ಪದವಿ ಪಡೆದರು. ಪ್ರೋ| […]

Read More

ಡಾ| ಪ್ರಕೃತಿ ಶ್ರೀನಾಥ್

ಮೂಲ್ಕಿ ನಾರಾಯಣಗುರು ವಿದ್ಯಾಸಂಸ್ಥೆಯಲ್ಲಿ ಕಲಿತ ಓರ್ವ ಮಹಿಳೆ ಇಂದು ವಿಶ್ವವಿಖ್ಯಾತ ಬೆಂಗಳೂರಿನ CMR Institute of Technology ಯಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ. ಹಲವು ವೈಶಿಷ್ಟ್ಯಪೂರ್ಣ ಸಾಧನೆಯ ಈ ಪ್ರತಿಭಾನ್ವಿತೆ ಸಮಾಜದ ಕೆಲವೇ ಸಾಧಕರಲ್ಲಿ ಮೆಚ್ಚುಗೆ ಗಳಿಸಿ ಯುವ ಪೀಳಿಗೆಗೆ ಆದರ್ಶಪ್ರಾಯರೆನಿಸಿದ್ದಾರೆ. ಪ್ರತಿಷ್ಠಿತ (ಈಗಿನ ವಿದ್ಯಾರ್ಥಿಗಳ ಪ್ರಥಮ ಆಯ್ಕೆ ಎನಿಸಿದ) ಬೆಂಗಳೂರಿನ BMS ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಉತ್ಪಾದನಾ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ PES Institute of Technology ಯಲ್ಲಿ M.Tech ಪದವಿ ಪಡೆದಿರುತ್ತಾರೆ. ಅಲ್ಲಿಗೇ […]

Read More

ತುಳು ಜನಪದ ಅಧ್ಯಯನ ಪ್ರಬೃತಿ ಡಾ| ನವೀನ್ ಕುಮಾರ್ ಮರಿಕೆ

ತುಳುನಾಡಿನ ಪ್ರಾಚೀನ ಶ್ರೇಷ್ಠ ಪರಂಪರೆಯಲ್ಲಿ ನಡೆದು ಬಂದ ರೀತಿ ರಿವಾಜುಗಳು, ಸಾಂಸ್ಕೃತಿಕ ಹರಹುಗಳು ಮತ್ತದರ ಶ್ರೇಷ್ಠತೆ, ವೈಶಿಷ್ಠತೆ ನಮ್ಮಲ್ಲೇ ಹೆಚ್ಚಿನವರಿಗೆ ಅರಿವಿಲ್ಲದಿರಬಹುದು ಅದರಲ್ಲೂ ಜನಜೀವನದ ಮಧ್ಯೆ ಇದ್ದು ತಮ್ಮ ಅಸಾಧಾರಣ ಶಕ್ತಿ ಸಾಮರ್ಥ್ಯಗಳಿಂದ ಅಸಹಾಯಕರಿಗೆ ಸಹಾಯಕರಾಗಿ ದುಷ್ಟರಿಗೆ ಸಿಂಹಸ್ಚಪ್ನರಾಗಿ ಭಕ್ತ ಜನರಿಗೆ ರಕ್ಷಕರಾಗಿ ಇದ್ದ ಕೆಲವು ಶಕ್ತಿಗಳು ಪವಾಡ ಪುರುಷರಾಗಿ ಭೂತಾರಾಧನೆಯ ಕೇಂದ್ರ ಬಿಂದುಗಳಾಗಿ ಇಂದಿಗೂ ಪ್ರಸ್ತುತರಾಗಿದ್ದಾರೆ. ಅಂದಿನ ಅತಿಶಯ ಶಕ್ತಿವಂತ ನಂಬಿದವರಿಗೆ ಇಂಬುಕೊಟ್ಟ ತುಳು ಇತಿಹಾಸದ ದೈವಗಳಲ್ಲಿ ಜುಮಾದಿ ಎಲ್ಲರಿಗೂ ತಿಳಿದಿರುವಂತಹ ಪವಾಡ ಶೀಲ ಭೂತ […]

Read More

ಡಾ| ಶಶಿಧರ ಎಂ. ಕೋಟ್ಯಾನ್

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ. NITKಯಲ್ಲಿ ಇಲೆಕ್ಟ್ರಾನಿಕ್ ಹಾಗೂ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ-ಬಿಟ್ಸ್ ಪಿಲಾನಿ (ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ತಂತ್ರಜ್ಞಾನ ತಜ್ಞರನ್ನು ರೂಪಿಸುವ ಸುಪ್ರಸಿದ್ಧ ಸಂಸ್ಥೆ)ಯಲ್ಲಿ ಪ್ರೊಫೆಸರ್! ಎಲ್ಲಿಂದ ಎಲ್ಲಿಗೆ ಪಯಣ ಅತ್ಯಾಶ್ಚರ್ಯಕರ, ನಂಬಲಸಾಧ್ಯ. ಆದರೆ ಇದು ನಿಜ. ಮೈನವಿರೇಳಿಸುವ ಸಾಧನೆ!! ಕನ್ನಡ ಮಾಧ್ಯಮದಲ್ಲಿ ಕಲಿತವರು ಹಿಂದೆ ಬೀಳುತ್ತಾರೆ ಎಂಬ ಹೆಚ್ಚಿನ ಜನರ ಅಭಿಪ್ರಾಯವನ್ನು ಸಂಪೂರ್ಣ ನಿರಾಧಾರ ಎಂದು ನಿರೂಪಿಸಿದ ಜ್ವಲಂತ ನಿದರ್ಶನ ಡಾ| ಶಶಿಧರ ಎಂ.ಕೋಟ್ಯಾನ್. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಂಕದಕಟ್ಟೆ ನಿರಂಜನ ಸ್ವಾಮಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!