19-09-2025, 8:40 AM
ತಾರೀಕು27/07/2025 ರಂದು 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಆಧುನಿಕ ಯುಗದ ಪಿಜ್ಜಾ ಬರ್ಗರ್ ತಿಂಡಿಗಳನ್ನು ಬದಿಗೆ ಸರಿಸಿ ಹಿಂದಿನ ಕಾಲದ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹಿಂದಿನ ಕಾಲದಲ್ಲಿ ಹಿರಿಯರು ಕೃಷಿ ಕಾರ್ಯದಲ್ಲಿ ಪಟ್ಟ ಶ್ರಮ ವನ್ನೂ ತಿಳಿ ಹೇಳುವ ಕಾರ್ಯವಾಗಬೇಕು ಎಂದು ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲು ಹೇಳಿದರು. ಮುಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಮುಲ್ಕಿ ಯುವವಾಹಿನಿ 23 ನೇ ವರ್ಷದ […]
Read More
19-09-2025, 8:00 AM
ಆಟಿ ತಿಂಗಳು ವೈಜ್ಞಾನಿಕವಾಗಿ ಅತೀ ಮಹತ್ವದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ಕಳೆಂಜೆ ಊರಿಗೆ ಬರುವ ಮಾರಿ, ಹಾಗೆಯೇ ಜನರಿಗೆ ಬರುವ ಮಹಾಮಾರಿ ರೋಗಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿತ್ತು” ಎಂದು ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ, ಖ್ಯಾತ ವಕೀಲೆ ಶ್ರೀಮತಿ ಶೈಲಜಾ ರಾಜೇಶ್ ತಿಳಿಸಿದರು. ಅವರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬಜಪೆ – ಕರಂಬಾರು ಸಹಯೋಗದೊಂದಿಗೆ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ […]
Read More
19-09-2025, 7:56 AM
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಧ್ಯಕ್ಷರಾದ ನೈನಾ ವಿಶ್ವನಾಥ್ ಎಲ್ಲರನ್ನು ಸ್ವಾಗತಿಸಿದರು. ಸ್ವಾತಂತ್ರ ದಿನಾಚರಣೆ ಪ್ರಯುಕ್ತ ದೇಶಭಕ್ತಿ ಗೀತೆಗಳ ಸ್ಪರ್ಧೆಯು ನಡೆಯಿತು. ಶ್ರೀಮತಿ ಧನ್ಯಲತ ರಮೇಶ್ ಅವರು ಸ್ವರ್ಧೆಯ ತೀರ್ಪುಗಾರರಾಗಿ ಫಲಿತಾಂಶ ನೀಡಿದರು. ನಂತರ ರಾಷ್ಟ್ರ ಸೇವೆಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾದ ಶ್ರೀ ಸುದೀಪ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಅವರು ಕಾರ್ಗಿಲ್ ಯುದ್ದ ದ ತಮ್ಮ ಅನುಭವಗಳನ್ನು ಹಂಚಿಕೊಂಡರು. ರಕ್ಷಾ ಬಂಧನ ಹಬ್ಬದ ಸಲುವಾಗಿ ಎಲ್ಲ ಸದಸ್ಯರು ಶ್ರೀಯುತ ಸುದೀಪ್ ರಾಜ್ ಅವರಿಗೆ ರಾಖಿಯನ್ನು ಕಟ್ಟಿ ಸಂಭ್ರಮ ಆಚರಿಸಿದರು. […]
Read More
19-09-2025, 7:48 AM
10/08/2025 ಘಟಕದ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ ತುಳುನಾಡಿನ ಸಂಪ್ರದಾಯದ ಪ್ರಕಾರ ಭತ್ತ ಕುಟ್ಟುವುದರ ಮೂಲಕ ವಿಶೇಷವಾಗಿ ಆಟಿದ ಪೊರ್ಲು 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧನ ಲಕ್ಷ್ಮಿ ಗಟ್ಟಿ .(ಸದಸ್ಯರು ರಾಣಿ ಅಬ್ಬಕ್ಕ ಅಧ್ಯಯನ ಪೀಠ ವಿಶ್ವ ವಿದ್ಯಾನಿಲಯ.ಮಂಗಳ ಗಂಗೋತ್ರಿ) ಆಟಿ ತಿಂಗಳ ವಿಶೇಷ ಆಚರಣೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ‘ಪರನೀರ್ ನೆಗೆಪೆರೆ ಬಲ್ಲಿ, ಪೊಸ ನೀರ್ ಉರ್ಕರ್ರೆ ಬಲ್ಲಿ’ ಎಂದರೆ ಹಳೇ ನೀರು ಬತ್ತಬಾರದು, ಹೊಸ ನೀರು ಹೆಚ್ಚಾಗಬಾರದು. ಹಿರಿಯರು, ಕಿರಿಯರು ಸಮಾನ […]
Read More
15-09-2025, 4:06 PM
ಘಟಕದ 7ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಶ್ರೀ ದೇವಿ ಭಜನಾ ಮಂದಿರದ ಆವರಣ. ಘಟಕದ ಸದಸ್ಯರಾದ ಶ್ರೀಮತಿ ಪ್ರತಿಮಾ ಪಾಲನ್ ಗುರು ಪ್ರಾಥನೆ ಮಾಡಿದರು. ಭಜನಾ ಮಂದಿರದ ಉಪಾಧ್ಯಕ್ಷರಾದ ಉಗ್ಗಪ ಬಂಗೇರ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು . ತೀರ್ಪುಗಾರರಾಗಿ ಶ್ರೀಮತಿ ಕನಕ ಮೋಹನ್ ಮತ್ತು ವಿದುಷಿ ಕುಮಾರಿ ಶ್ರೇಯ ಶೆಟ್ಟಿಯವರು ಪಾಲ್ಗೊಂಡಿದರು. ಮುದ್ದು ಕೃಷ್ಣ, ತುoಟ ಕೃಷ್ಣ, ಬಾಲ ಕೃಷ್ಣ, ರಾಧ ಕೃಷ್ಣ, ನಾಲ್ಕು ವಿಭಾಗದ ಸ್ಪರ್ಧೆ ಏರ್ಪಡಿಸಲಾಗಿತು ಸುಮಾರು ಮೂವತಕ್ಕು ಹೆಚ್ಚು […]
Read More
14-09-2025, 4:52 PM
ಸಂಪ್ರದಾಯದ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು. ಆಟಿ ತಿಂಗಳು ಶುದ್ಧತೆಯ, ಶಾಂತಿಯ ಹಾಗೂ ತಾಳ್ಮೆಯ ಸಮಯವಾಗಿದೆ. ಇದರ ಆಚರಣೆಗಳು ಶರೀರ ಶುದ್ಧಿಕರಣ, ಮನಸ್ಸು ಸ್ಥಿರಗೊಳಿಸುವಿಕೆ, ಹಾಗೂ ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತವೆ. ಪ್ರಾಚೀನ ಸಂಪ್ರದಾಯಗಳ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು ಈ ಮೂಲಕ ತೋರುತ್ತದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.. ಅವರು ಘಟಕದ ವತಿಯಿಂದ ಭಾನುವಾರ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು […]
Read More
14-09-2025, 4:40 PM
ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025 ಕಾರ್ಯಕ್ರಮವು ದೈವಜ್ಞ ಸಭಾಭವನ ಜಾಲಹಳ್ಳಿಯಲ್ಲಿ 24 ಆಗಸ್ಟ್ 2025ರ ಭಾನುವಾರ ನೆರವೇರಿತು. ಬೆಳಿಗ್ಗೆ 9.30ಕ್ಕೆ ಗುರುಭಜನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ನಾರಾಯಣಗುರುಗಳ ಪ್ರತಿಮೆಗೆ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ವೈದಿಕ ರೀತಿಯಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಸಲಾಯಿತು. ನಂತರ ಯುವವಾಹಿನಿಯ ನಾಲ್ಕು ತಂಡಗಳಾದ ಯುವ ಬಿರುವೆರ್, ಯುವ ತುಡರ್, ಯುವ ಚಾಲೆಂಜರ್ಸ್ ಮತ್ತು ಯುವ ಪವರ್ ತಂಡದ […]
Read More
26-10-2024, 4:06 AM
ಮಂಗಳೂರು : ಜಗದ್ವಿಖ್ಯಾತ ಮಂಗಳೂರು ದಸರಾ ಮಹೋತ್ಸವದಲ್ಲಿ ಯುವವಾಹಿನಿಯ ವಿವಿಧ ಘಟಕಗಳು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಡೆನ್ನಾನ ಪ್ರೇಕ್ಷಕರ ಮನಸೂರೆಗೊಂಡಿತು. ಬಂಟ್ವಾಳ, ಮೂಡಬಿದ್ರೆ, ಮಂಗಳೂರು, ಕೊಲ್ಯ, ಸುರತ್ಕಲ್, ಕೂಳೂರು, ಮತ್ತು ಕಟಪಾಡಿ ಘಟಕಗಳ ಸದಸ್ಯ ಕಲಾವಿದರು ಪ್ರೇಕ್ಷಕರಿಗೆ ಕಲಾ ರಸದೌತಣ ಉಣಬಡಿಸಿದರು. ಯುವವಾಹಿನಿ ಕಟಪಾಡಿ ಘಟಕದಿಂದ “ಯಾ ದೇವಿ ಸರ್ವ ಭೂತೇಷು” ನವದುರ್ಗೆಯರ ಕಥಾಮೃತ ಪ್ರದರ್ಶನ ನಡೆಯಿತು ಯುವವಾಹಿನಿ ಉಡುಪಿ ಘಟಕದ ಸಚೇಂದ್ರ ಅಂಬಾಗಿಲು ಹಾಗೂ ಯುವವಾಹಿನಿ […]
Read More