Yuvavahini

JUL 31, 2016 11.05 AM IST

ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ - 2016

ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ – 2016

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಪುರಭವನದಲ್ಲಿ ದಿನಾಂಕ 31.07.2016 ರಂದು ಜರುಗಿದ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2016 ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ,ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ,ಮುಂಬಯಿ ಬಿಲ್ಲವ ಜಾಗೃತಿ ಬಳಗದ ಅದ್ಯಕ್ಷರಾದ ಎನ್.ಟಿ.ಪೂಜಾರಿ ಮುಂಬಯಿ, ಉದ್ಯಮಿ ಸಂತೋಷ್ ಪೂಜಾರಿ ಉಗ್ಗೆಲ್ ಬೆಟ್ಟು,  ನಾವುಂದ ಸುಭೋದ ಸ್ಕೂಲ್ ಸಂಸ್ಥಾಪಕರಾದ ಎನ್.ಕೆ.ಬಿಲ್ಲವ ನಾವುಂದ,  ಮೂಡಬಿದ್ರೆ ಎಕ್ಸಲೆಂಟ್ ಪಿ.ಯು.ಕಾಲೇಜು ಉಪನ್ಯಾಸಕರಾದ ಡಾ.ನವೀನ್ ಕುಮಾರ್ ಸೂರಿಂಜೆ, ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷರಾದ ಸಂತೋಷ್ ಕುಮಾರ್, ಸಮಾವೇಶ ನಿರ್ದೇಶಕರಾದ ಪ್ರವೀಣ್ ಕುಮಾರ್  ,  ಪ್ರಧಾನ   ಕಾರ್ಯದರ್ಶಿ ಕೇಶವ ಸುವರ್ಣ ಉಪಸ್ಥಿತರಿದ್ದರು.

’ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ’ ಪುರಸ್ಕೃತ ಬಿಲ್ಲವ ಎಸೋಸಿಯೇಶನ್ ಬೆಂಗಳೂರು

1975 ರಲ್ಲಿ ಕೆಲವೇ ಮಂದಿ ಹಿರಿಯರಿಂದ ಬೆಂಗಳೂರಿನಲ್ಲಿ ಶ್ರೀ ಸುಂದರ್‌ರವರ ಕೆನರಾ ವಾಚ್ ವರ್ಕ್ಸ್ ಆವರಣದಲ್ಲಿ ಆರಂಭವಾದ ಬಿಲ್ಲವ ಸಮಾಜದ ಸಂಘಟನೆ ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಯು 1976 ರಲ್ಲಿ ನೋಂದಾಯಿತ ಗೊಂಡಿತು. ಮುಂದೆ ಹಂತಹಂತವಾಗಿ ಬೆಳೆದು 40 ವರ್ಷಗಳ ಸಾರ್ಥಕ ಸೇವೆ, ಸಾಧನೆಯ ಪ್ರತೀಕವಾಗಿ ಬಿಲ್ಲವ ಭವನವನ್ನು ತನ್ನ ಸ್ವಂತ ನೆಲೆಯಲ್ಲಿ ಕಂಡುಕೊಂಡಿದೆ. ಬ್ರಹ್ಮಶ್ರೀ ನಾರಾಯಣಗುರುಗಳ ವಿಶ್ವಮಾನವ ತತ್ವದ ಬೆಳಕಲ್ಲಿ ಬಿಲ್ಲವ ಸಮಾಜದ ಸಂಘಟನಾತ್ಮಕ ಅಭಿವೃದ್ಧಿಗೆ ದುಡಿಯುತ್ತಿದೆ.

ಶಿಕ್ಷಣ: ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಪ್ರಸ್ತುತ ವಾರ್ಷಿಕ 5-8 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿ ಸಹಕರಿಸುತ್ತಿದೆ. ಸಂಘದ ಆವರಣದಲ್ಲಿ ಸಹೃದಯಿ ಸದಸ್ಯರ ಸಹಕಾರದಿಂದ ಸುಮಾರು 1.25 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಿ ಸುಮಾರು ವಾರ್ಷಿಕ 30 ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯ ವ್ಯವಸ್ಥೆ ಮಾಡಿರುವುದಲ್ಲದೆ ಪ್ರತಿ ವರ್ಷ ಅವರಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ.

ಆರೋಗ್ಯ: ಆರ್ಥಿಕವಾಗಿ ಹಿಂದುಳಿದ ಸದಸ್ಯರು ಅವರ ಅವಲಂಭಿತರಿಗೆ ಅಗತ್ಯವಾದಾಗ ಚಿಕಿತ್ಸೆಗೆ ಸಹಕರಿಸುವುದು, ವರ್ಷಂಪ್ರತಿ ಆರೋಗ್ಯ ತಪಾಸಣಾ ಶಿಬಿರ ನಡೆಸುವುದು, ಉಚಿತವಾಗಿ ಔಷಧಿಯನ್ನು ವ್ಯವಸ್ಥೆಗೊಳಿಸುವಂತಹ ವೈದ್ಯಕೀಯ ವಿಭಾಗ ಕಾರ್ಯಾಚರಣೆ ನಿರಂತರ ನಡೆಯುತ್ತಿದೆ.

ಸಂಘಟನೆ: ಸುಮಾರು 100 ಕ್ಕೂ ಮಿಕ್ಕಿದ ಯುವ ಸದಸ್ಯರನ್ನೊಳಗೊಂಡ ಸೇವಾದಳ, ಮಹಿಳಾ ವಿಭಾಗ, ವಧು-ವರಾನ್ವೇಷಣಾ ಘಟಕ ಇತ್ಯಾದಿಗಳನ್ನು ಆರಂಭಿಸಿ ಸಾಮೂಹಿಕ ಕಾರ್ಯಕ್ರಮ ಜರಗುತ್ತಿವೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಸುಧಾರಣಾ ಹಾಗೂ ಸ್ಫೂರ್ತಿದಾಯಕ ಕಾರ್ಯಕ್ರಮಗಳ ಕೇಂದ್ರವಾಗಿ ಗುರುಮಂದಿರ ಕಾರ್ಯಾಚರಿಸುತ್ತಿದೆ. ಹಾಗೆಯೇ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಳ ಹಾಗೂ ಅವರ ಕಾರ್ಯಕ್ಷೇತ್ರಗಳಾದ ಶಿವಗಿರಿ, ವರ್ಕಳ, ಅರವೀಪುರಂಗಳ ದರ್ಶನ, ಸದಸ್ಯರ ಕುಟುಂಬ ಸದಸ್ಯರುಗಳ ಸಂಪರ್ಕ ಬಲಪಡಿಸುವರೇ ಏಕದಿನ ಪ್ರವಾಸ, ಸಂತೋಷ ಕೂಟ, ಕ್ರೀಡಾಕೂಟ ನಡೆಸಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕ್ರೀಡಾಪಟುಗಳನ್ನು ಸನ್ಮಾನಿಸುವುದು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗೆಯೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಕ್ಷಗಾನದಂತಹ ಕಲೆಯ ಅಭ್ಯಾಸವನ್ನು ಮಕ್ಕಳಿಗೆ ಸಂಸ್ಥೆಯು ನೀಡುತ್ತಿದೆ.

ಸ್ಪಾರ್ಕ್ (ವೃತ್ತಿಪರ ಘಟಕ): ಈ ನೆಲೆಯಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗ ಪಡೆಯಲು ಮಾಹಿತಿ ಸೌಲಭ್ಯ ಒದಗಿಸುವುದು, ವ್ಯಕ್ತಿತ್ವ ವಿಕಸನದಂತಹ ಶಿಬಿರಗಳನ್ನು ನಡೆಸುತ್ತಿದ್ದು ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಸಂಘಟನೆಯಲ್ಲಿ ವಿವಿಧ ಸಲಹಾ ಸಮಿತಿಗಳು, ಉಪಸಮಿತಿಗಳು ಕಾರ್ಯಾಚರಿಸುತ್ತಿದ್ದು ಸಂಘದ ಬೆಳವಣಿಗೆಗೆ ಸಹಕರಿಸುತ್ತಿವೆ. ಸಂಘದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಸುಮಾರು 17 ಕೋಟಿ ರೂಪಾಯಿ ವೆಚ್ಚದಿಂದ ನಿರ್ಮಿಸಲಾದ ಭವ್ಯ ಕಟ್ಟಡ ಬಿಲ್ಲವ ಭವನವು ಸುಮಾರು 1200 ಆಸನಗಳುಳ್ಳ ಹವಾನಿಯಂತ್ರಿತ ಸುಸಜ್ಜಿತ ಸಮುದಾಯ ಭವನ, ಬ್ಯಾಂಕ್‌ಗಳ ಎಟಿಎಮ್, ಎಕ್ಸೆಟೆನ್‌ಶನ್ ಕೌಂಟರುಗಳು ಎಪ್ರಿಲ್ 2016 ರಿಂದ ಕಾರ್ಯಾಚರಿಸುತ್ತಿವೆ. ವಿವಿಧ ಮಹನೀಯರುಗಳ, ಸಂಘ-ಸಂಸ್ಥೆಗಳ, ಬ್ಯಾಂಕಿನ, ದಾನಿಗಳ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡು ವ್ಯವಹರಿಸುತ್ತಿರುವ ಈ ಮಹಾಕಟ್ಟಡವು ಪ್ರಸ್ತುತ ಅಧ್ಯಕ್ಷರಾದ ಶ್ರೀ ಎಮ್. ವೇದಕುಮಾರ್ ಹಾಗೂ ಅವರ ತಂಡದ ಶ್ರದ್ಧಾಮಯ ಶ್ರಮವನ್ನು ಸಾಕ್ಷೀ ಸಮೇತ ಸಾರುತ್ತದೆ.

1975 ರಲ್ಲಿ ಶ್ರೀ ಎಂ.ಆರ್. ಸುವರ್ಣ ಸ್ಥಾಪಕಾಧ್ಯಕ್ಷರಾಗಿ ಕಾರ್ಯಾಚರಣೆ ಆರಂಭವಾಗಿ ಮುಂದೆ ಶ್ರೀಯುತ ಯು. ಭೋಜರಾಜ್, ಶ್ರೀ ಬಿ.ಟಿ. ಸಾಲಿಯಾನ್, ಶ್ರೀ ವಸಂತ, ಡಾ. ಅನಸೂಯ ಸಾಲಿಯಾನ್, ಶ್ರೀ ಸೋಮಶೇಖರ ಅಮೀನ್, ಶ್ರೀ ವಾಸುದೇವ ಕೋಟ್ಯಾನ್, ಶ್ರೀ ಎಂ. ಪ್ರಕಾಶ್, ಶ್ರೀ ಕೆ. ಸುವರ್ಣ, ಶ್ರೀ ಪಿತಾಂಬರ ಹೆರಾಜೆ ಹಾಗೆಯೇ ಪ್ರಸ್ತುತ ಅಧ್ಯಕ್ಷರಾದ ಶ್ರೀ ಎಂ. ವೇದಕುಮಾರ್‌ರಂತಹ ಧೀಮಂತ ನಾಯಕರ ನಿರಂತರ ಶ್ರಮ, ಸೇವೆ, ದೂರಗಾಮಿ ಚಿಂತನೆಯೊಂದಿಗಿನ ರಚನಾತ್ಮಕ, ಅಭಿವೃದ್ದಿಪರ ಕಾರ್ಯಾಚರಣೆ ಬಿಲ್ಲವ ಎಸೋಸಿಯೇಶನ್, ಬೆಂಗಳೂರು ಇದರ ಬೆಳವಣಿಗೆಯಲ್ಲಿ ಮೈಲಿಗಲ್ಲಾಗಿವೆ. ಮುಂದೆಯೂ ಸಮಾಜದ ಅಭಿವೃದ್ಧಿಯ ಮಹದುದ್ದೇಶದಿಂದ ಅನೇಕ ಯೋಚನೆಗಳು ಯೋಜನೆಗಳು ಸಂಘದಲ್ಲಿದ್ದು ಬ್ರಹ್ಮಶ್ರೀ ನಾರಾಯಣಗುರುವರ್ಯರು ಈ ಸಂಘವನ್ನು ಇನ್ನೂ ಬೆಳೆಸುವಲ್ಲಿ ಸಂಘದ ಅಧ್ಯಕ್ಷ ಹಾಗೂ ಸರ್ವಸದಸ್ಯರುಗಳಿಗೆ ಹರಸಲೆಂದು ಆಶಿಸುತ್ತಾ ಬಿಲ್ಲವ ಎಸೋಸಿಯೇಶನ್ ಬೆಂಗಳೂರು (ರಿ) ಈ ಸಂಸ್ಥೆಯನ್ನು ಅದರ ಶ್ರದ್ಧಾಮಯ ಸಾಧನೆಗಳನ್ನು ಗುರುತಿಸಿ ಯುವವಾಹಿನಿ ’ಸಾಧನ ಶ್ರೇಷ್ಠ ಪ್ರಶಸ್ತಿ’ ನೀಡಿ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ತನ್ನ ೨೯ನೇ ವಾಷಿಕ ಸಮಾವೇಶದ ಈ ಶುಭದಿನ, ಶುಭವಸರದಲ್ಲಿ ಗೌರವಿಸುತ್ತದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!