ಯುವವಾಹಿನಿ (ರಿ) ಕೂಳೂರು ಘಟಕ

ಸೇವಾ ನಿಧಿ ಯೋಜನೆಯ 2ನೇ ಸಹಾಯ ಹಸ್ತ

ಯುವವಾಹಿನಿ ಕೂಳೂರು ಘಟಕದ ಸೇವಾ ನಿಧಿ ಯೋಜನೆಯ 2ನೇ ಸಹಾಯ ಹಸ್ತ ಅಶೋಕ್ ಪೂಜಾರಿ ಗಂಜಿಮಠ ಇವರು ಕೆಲಸ ಮಾಡುವ ಸಂದರ್ಭದಲ್ಲಿ ದೊಡ್ಡ ರೀಲ್ ಇರ ಕಾಲಿನ ಮೇಲೆ ಬಿದ್ದು ತೀವ್ರ ಗಾಯಗೊಂಡು ಕೊನೆಗೆ ಅವರ ಒಂದು ಕಾಲನ್ನೇ ಕತ್ತರಿಸಿ ತೆಗೆಯಲಾಗಿದೆ. ಇವರ ಕುಟುಂಬಕ್ಕೆ ಇವರೇ ಆಧಾರಸ್ತಂಭ ಆಗಿದ್ದರು. ಈಗ ಇವರಿಗೆ ಹೀಗಾಗಿದ್ದು ಇವರ ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ. ಇವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ರೂ. 10,000 ದ ಚೆಕ್ ನ್ನು ದಿನಾಂಕ 04.09.19 ರ ಸಂಜೆ 5 ಗಂಟೆಗೆ ಸರಿಯಾಗಿ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಸಂಘಟನಾ ಕಾರ್ಯದರ್ಶಿ ನಿಶಿತ್,ಸದಸ್ಯರಾದ ರೇಣುಕಾ ಪ್ರಸಾದ್ ಹಾಗೂ ಜಯಂತಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!