Yuvavahini

FEB 15, 2017 5.30 AM IST

ಯುವ ಸಿಂಚನ : ಗಂಗಾಧರ ಪೂಜಾರಿ -ಕಾರ್ಯನಿರ್ವಾಹಕ ಸಂಪಾದಕರು

ಸಂಪಾದಕರ ಮಾತು

ಪ್ರೀತಿಯ ವಾಚಕರೇ,

ಅನುಭವ ಮತ್ತು ಛಲ ಮನುಷ್ಯನ ಭವಿಷ್ಯವನ್ನು ರೂಪಿಸುತ್ತದೆ. ಇದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರವಲ್ಲ. ಸಿಬ್ಬಂದಿ ಇರುವ ಎಲ್ಲಾ ಸಂಸ್ಥೆಗಳಿಗೂ ಕೂಡ ಅನ್ವಯಿಸುತ್ತದೆ. ಯಾವ ಸಂಸ್ಥೆಯಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಸಿಬ್ಬಂದಿ ಇರುತ್ತದೋ ಅಂತಹ ಸಂಸ್ಥೆ ಯಶಸ್ವಿಯಾಗುತ್ತದೆ. ಯಾವ ಸಂಸ್ಥೆಯ ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಕಾರಾತ್ಮಕ ದುಡಿಮೆ ಇರುವುದಿಲ್ಲವೋ, ಕೇವಲ ಸಂಬಳಕ್ಕಾಗಿ ಮಾತ್ರ ಕಾದು ನೋಡುತ್ತಾರೋ ಅಂತಹ ಸಂಸ್ಥೆ ಹೇಳ ಹೆಸರಿಲ್ಲದೆ ನಿರ್ಣಾಮವಾಗಿ ಹೋಗುತ್ತದೆ. ಇದಕ್ಕೆ ಕಾರಣ ದುಡಿತದ ಹಿಂದಿರುವ ಜವಾಬ್ದಾರಿಯ ಕೊರತೆ. ನಮ್ಮ ಜನರಲ್ಲಿ ಅಪಾರ ಜ್ಞಾನವಿದೆ, ಕೌಶಲ್ಯವಿದೆ. ಆದರೆ ಮಾಡಬೇಕಾದ ಕೆಲಸವನ್ನು ತ್ವರಿತವಾಗಿ ಮತ್ತು ನಿಷ್ಠೆಯಿಂದ ತನ್ನದೇ ಕೆಲಸವೆಂಬ ಜವಾಬ್ದಾರಿಯಿಂದ ಮಾಡುವುದಿಲ್ಲ. ಹಾಗಾದಾಗ ಸಂಸ್ಥೆ ಯಶಸ್ವಿಯಾಗಲು ಹೇಗೆ ಸಾಧ್ಯ? ಈ ಬಗ್ಗೆ ಸಂಸ್ಥೆಯ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರು ಯೋಚಿಸಬೇಕಾದ್ದು ಅಗತ್ಯ.

ಯಾರು ಶ್ರಮ ಪಟ್ಟು ಕೆಲಸವನ್ನು ಮಾಡುವರೋ ಅವರಿಗೆ ಗುರಿ ಎನ್ನುವುದು ಸಿಕ್ಕೇ ಸಿಗುತ್ತದೆ. ಆ ಗುರಿ ತಲುಪಲು ಅವರು ಹಗಲು ಇರುಳೆನ್ನದೆ ಶ್ರಮಿಸುತ್ತಾರೆ. ಹಾಗೆಯೇ ಹಾದಿಯನ್ನು ಹುಡುಕುತ್ತಾರೆ. ಅವರಿಗೆ ಆಯಾಸ, ಬೇಸರ ಎಂಬುದೆ ಇರುವುದಿಲ್ಲ. ಗುರಿ ತಲುಪುವವರೆಗೆ ಅವರು ನಿರಂತರ ಪ್ರಯತ್ನ ಮತ್ತು ಕೆಲಸ ಮಾಡುತ್ತಲೇ ಇರುತ್ತಾರೆ. ಅವರು ಬೇರೆಯವರಿಗಿಂತ ಭಿನ್ನವಾಗಿರುತ್ತಾರೆ ಮತ್ತು ಕೆಲಸದಲ್ಲಿ ಮೇಲು ಕೀಳು ಎಂಬ ಭಾವನೆ ಬಿಟ್ಟು ದುಡಿಯಲು ಪ್ರಯತ್ನಿಸುತ್ತಾರೆ. ಯಾರು ಬದುಕನ್ನು ಪ್ರೀತಿಸುವರೋ, ಅವರು ಕೆಲಸವನ್ನು ಪ್ರೀತಿಸುತ್ತಾರೆ. ಯಾರು ಕೆಲಸ ಅಥವಾ ತನ್ನ ಕರ್ತವ್ಯವನ್ನು ಪ್ರೀತಿಸುತ್ತಾರೋ ಅವರನ್ನು ಜಗತ್ತು ಗುರುತಿಸುತ್ತದೆ.

ಲೋಕದ ಸಮಸ್ತ ಮಾನವ ಕೋಟಿಗೆಲ್ಲಾ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ನೀಡಿ, ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಎತ್ತಿ ತೋರಿಸಿದವರು ಮಾನವತಾವಾದಿ, ಚಿಂತಕ, ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳು. ಶ್ರೀ ಗುರುವರ್ಯರು ತೋರಿದ ಜ್ಞಾನದ ಬೆಳಕು ಜಗತ್ತಿನ ಸಮಸ್ತ ಜೀವ ಸಂಕುಲಗಳಿಗೆ ಅನ್ವಯವಾಗುವ ಸಾರ್ವಕಾಲಿಕ ಸತ್ಯ. ಈ ಜಗತ್ತಿನ ಜ್ಞಾನ ಪುತ್ರನನ್ನು ಜಗದ್ಗುರು ಎಂದು ಆರಾಧಿಸುವುದು ಸರಿಯಾದ ಕ್ರಮ. ಇಡೀ ಸಮಾಜ ಒಪ್ಪುವಂತಹ ಈ ದಿವ್ಯ ಚೇತನದ ಹೆಸರಿನಲ್ಲಿ, ಸರಕಾರದ ವತಿಯಿಂದಲೇ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠದ ಸ್ಥಾಪನೆಯ ಘೋಷಣೆಯಾಗಿ ಇದೀಗ ಉದ್ಘಾಟನೆಗೊಂಡು ಕಾರ್‍ಯಚರಿಸುತ್ತಿರುವುದು, ಸಮಾಜದಲ್ಲಿ ಶೋಷಿತರಿಗೆ, ದೀನ ದಲಿತರಿಗೆ ದೊರೆತಂತಹ ಅದ್ಭುತ ಜಯವಾಗಿದೆ. ಇದರ ಹಿಂದೆ ಶ್ರಮ ಪಟ್ಟಂತಹ ಎಲ್ಲರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸೋಣ. ಸಾಹಿತ್ಯ ಲೋಕದಲ್ಲಿಯೂ, ಸುದ್ದಿ ಮಾಧ್ಯಮದಲ್ಲಿಯೂ ಅದ್ಭುತ ಸಾಧನೆಗೈದ ಮುದ್ದು ಮೂಡುಬೆಳ್ಳೆಯವರು ಈ ಗುರುಪೀಠದ ನಿರ್ದೇಶಕರಾಗಿ, ಸರಕಾರದಿಂದಲೇ ಆಯ್ಕೆಗೊಂಡಿರುವುದು ಇನ್ನೊಂದು ಸಂತೋಷದ ಸಂಗತಿ. ಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಮುಖಾಂತರ ಕರ್ಮವೀರರೂ, ಸಾಧನಶೂರರೂ ಆದ ಉತ್ತಮೋತ್ತಮ ಜನಾಂಗವನ್ನೇ ನಿರ್ಮಿಸುವಲ್ಲಿ ಗುರುಪೀಠವು ನಾಂದಿಯಾಗಲೆಂದು ನಮ್ಮ ಹಾರೈಕೆ.

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಯೌವನ ಎಂಬ ಆಶಯ ಲೇಖನ ಮುಖಾಂತರ ಯುವಜನಾಂಗವು ಸರಿಯಾದ ದಾರಿಯಲ್ಲಿ ನಡೆಯಲು ಸರಿಯಾದ ಬೆಳಕನ್ನು ತೋರಿಸಿಕೊಟ್ಟಿರುವ ಶ್ರೀ ಶಿವಾನಂದ ಕರ್ಕೇರ ಇವರಿಗೆ ಯುವಸಿಂಚನ ಬಳಗದ ಕೃತಜ್ಞತೆಗಳು.

ಈ ಬಾರಿಯ ಸಂಚಿಕೆಯಲ್ಲಿ ’ಆತ್ಮ ವಿಶ್ವಾಸ, ಇಂದ್ರಿಯ ನಿಗ್ರಹ ಶಕ್ತಿ ಮತ್ತು ನಮ್ಮ ಸಮಾಜ’ ಎಂಬ ಆಶಯ ಲೇಖನ, ವಿವಿಧ ಘಟಕಗಳು ಹಮ್ಮಿಕೊಂಡ ಸಮಾಜಮುಖಿ ಕಾರ್‍ಯಕ್ರಮಗಳ ವರದಿಯನ್ನು ನಿಮಗೆ ನೀಡುತ್ತಿದ್ದೇವೆ. ಆದರೂ ಒಂದು ಮಾತು. ಯುವವಾಹಿನಿಯ ಹಿರಿಯ-ಕಿರಿಯ ಬರಹಗಾರರನ್ನು ಈಗಾಗಲೇ ಪತ್ರ ಮುಖೇನ ಭೇಟಿ ಮಾಡಿದ್ದೇನೆ. ದಯವಿಟ್ಟು ನಿಮ್ಮದೇ ಈ ಪತ್ರಿಕೆಯಲ್ಲಿ ಸದಸ್ಯರಾಗಿ ತಮ್ಮ ಪ್ರಬುದ್ಧ ಬರಹಗಳ ವಾಹಿನಿಯು ಹರಿಯಲಿ, ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ನೀವು ಕೂಡಾ ನಮ್ಮದೇ ಆದ ಸಾಹಿತ್ಯಿಕ ದೇಣಿಗೆಯನ್ನು ನೀಡಿ – ಬನ್ನಿ – ಸ್ಪಂದಿಸಿ.

– ಕಾರ್ಯನಿರ್ವಾಹಕ ಸಂಪಾದಕ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!