Yuvavahini

FEB 17, 2019 2.09 PM IST

ವಿಶುಕುಮಾರ್ ಸಾಹಿತ್ಯ ಸಮ್ಮೇಳನದಲ್ಲಿ..ಹಾಸ್ಯ-ಹರಟೆ….

“ನಾನು ಅದೆಷ್ಟೋ ವರ್ಷಗಳ ಕಾಲ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕೆಲಸ ಮಾಡಿರುತ್ತೇನೆ.  ಹಲವಾರು ಕಾನ್ಫೆರನ್ಸಗಳಲ್ಲಿ ಪ್ರಬಂಧ ಮಂಡಿಸಿ, ಹಲವಾರು ಕೃತಿಗಳನ್ನು ಬರೆದು ಸಾಹಿತ್ಯಾತ್ಮಕವಾಗಿ ಒಂದಷ್ಟು ಕೆಲಸ ಮಾಡಿದ್ದೇನೆ. ಆದರೂ…. ದೇಶದಲ್ಲಾಗಲಿ ವಿದೇಶದಲ್ಲಾಗಲೀ ನನ್ನನ್ನು ಕಂಡಾಗ ಗುರುತಿಸುವುದು ಎಕ್ಕಸಕ್ಕ ಬರೆತಿನಾರ್ ಮೇರ್ (ಎಕ್ಕಸಕ್ಕ ಬರೆದವರು ಇವರು) ಎಂದು. “೪೦ ದಶಕಗಳ ಹಿಂದೆ ಬರೆದ ಆ ಹಾಡು ನನ್ನನ್ನು ಇವತ್ತಿಗೂ ಸಾಹಿತ್ಯಲೋಕದಲ್ಲಿ ಜೀವಂತವಾಗಿರಿಸಿದೆ. ಇಂತಹ ಜನಪ್ರಿಯತೆಯನ್ನು ಪಡೆಯಲು ಕಾರಣ ಅಂದು ನನಗೆ ಅವಕಾಶ ನೀಡಿದ ವಿಶುಕುಮಾರ್‌ರವರು. ಈ ಎಲ್ಲಾ ಕೀರ್ತಿಸಲ್ಲಬೇಕಾದುದು ವಿಶುಕುಮಾರ್ ಎಂಬ ಅದ್ಭುತ ವ್ಯಕ್ತಿಗೆ ಎಂದವರು ವಿದ್ವಾಂಸರು ಮತ್ತು ವಿಶ್ರಾಂತ ಉಪಕುಲಪತಿಯವರಾದ ಡಾ|| ವಿವೇಕ್‌ ರೈಯವರು. ಈ ಒಂದು ಮಾತು ಸಾಕು ವಿಶುಕುಮಾರ್ ಸಾಹಿತ್ಯ ಸಮ್ಮೇಳನದ ಅಗತ್ಯ ಎಷ್ಟಿತ್ತು ಎಂದು ಅರಿಯಲು.

೧೭.೦೨.೨೦೧೯ ರ ಭಾನುವಾರ ಮಂಗಳೂರಿನ ಪುರಭವನದಲ್ಲಿ ಅಭೂತಪೂರ್ವವಾಗಿ ಮಾನ್ಯ ಸಚಿವರಾದ ಯು.ಟಿ.ಖಾದರ್‌ರ ವರಿಂದ ಉದ್ಘಾಟನೆಗೊಂಡು,  ಪ್ರಶಸ್ತಿ ಪ್ರದಾನ ಸಮಾರಂಭದ ಅನಂತರದಲ್ಲಿ ಮೂಡಿಬಂದ ಹಾಸ್ಯ-ಹರಟೆ ತುಳು ಭಾಷೆಯಲ್ಲಿ ನಡೆದ ಒಂದು ಸುಂದರ ಕಾರ‍್ಯಕ್ರಮ. ಬಹುಶಃ ಹೆಚ್ಚಿನ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳನ್ನೇ ಆಯೋಜಿಸುವ ಕ್ರಮವಿದ್ದರೂ ಈ ಹಾಸ್ಯ ಹರಟೆ ವಿನೂತನವಾಗಿ ಮೂಡಿಬಂದಿದೆ. ತುಳುವಾಗ್ಮಿ, ನಮ್ಮ ಟಿ.ವಿ ಚಾನಲಲ್ಲಿ ನಿರೂಪಕರಾಗಿರುವ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಕೆ.ಕೆ ಪೇಜಾವರ್‌ರವರು ಮಲ್ಲಿಗೆಯ ಮೊಗ್ಗನ್ನು ಒಂದೊಂದೇ ಪೋಣಿಸಿಟ್ಟ ಹಾಗೆ ವಿಶುಕುಮಾರವರ ವಿಚಾರಧಾರೆಗಳಿಗೆ ಕೊಂಡಿಬೆಸೆದು ತುಳುಭಾಷೆಯ ಸೊಗಡಿನೊಂದಿಗೆ ಹರಟೆಯನ್ನು ಆರಂಭಿಸಿ ಇಂದಿನ ದಿನಗಳಲ್ಲಿ ಹಾಸ್ಯದ ಅಗತ್ಯವೇನು ಎಂಬುದನ್ನು ತಿಳಿಸಿ ರಂಗನಟ ವಿಶುಕುಮಾರರ ನಾಟಕದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ವಿ.ಜಿ. ಪಾಲ್‌ರವರನ್ನು ಮಾತಿನಕಟ್ಟೆಗೆ ಎಳೆದರು.  ವಿ.ಜಿ.ಪಾಲ್ ಸ್ವಲ್ಪ ಭಾವುಕರಾಗಿ ವಿಶುಕುಮಾರೊಂದಿಗಿನ ಅಂದು ಒಡನಾಡಿದ ಕ್ಷಣಗಳನ್ನು ನೆನಪಿಸಿಕೊಂಡರು. ಎಡವುತ್ತಲೇ ವೇದಿಕೆ ಏರಿ ಎಡವಿಗೆ ಕಾರಣವನ್ನು ಹಾಸ್ಯಾತ್ಮಕವಾಗಿ ಪ್ರಶ್ನಿಸಿ ಸಭಿಕರ ಮುಕ್ತನಗುವಿಗೆ ಕಾರಣರಾದರು.  ಮುಂದೆ ಮಾತಿನಕೊಂಡಿಗೆ ಬೆಸುಗೆಯಾದವರು ಯಕ್ಷರಂಗದ ಹಾಸ್ಯನಟ ಚಾರ್ಲಿ ಚಾಪ್ಲಿನ್ ಬಿರುದಾಂಕಿತ ಶ್ರೀ ಸೀತಾರಾಮ್ ಕುಮಾರ್‌ ಕಟೀಲು ಯಕ್ಷರಂಗದ ಹಾಸ್ಯದ ಹರಿವು ಎಷ್ಟು ಸಾಹಿತ್ಯಾತ್ಮಕವಾಗಿ ರಸಗವಳವೆನಿಸುದೆಂಬುದನ್ನು ತಮ್ಮ ಪ್ರಾಸಬದ್ಧವಾದ ಹೆಣ್ಣಿನ ವಿವರಣೆ, ಕೃಷ್ಣಸ್ತೋತ್ರದ ಮೂಲಕ ನಿರಂತರವಾಗಿ ಹೇಳಿ ಸಭಿಕರನ್ನು ಮಂತ್ರಮುಗ್ದಗೊಳಿಸಿದರು. ಕೊನೆಗೆ ಇಡೀ ಸಭಿಕರನ್ನು ಗೋವಿಂದ ಅನ್ನಿಗೋವಿಂದ ಹೇಳಿ ಗೋವಿಂದಾ’ ಅನ್ನಿಸದೆ ಬಿಡಲಿಲ್ಲ.

ಹಾಸ್ಯ ಹರಟೆನ್ನು ಸಮೀಕರಿಸಿದ ಶ್ರೀ ಕೆ.ಕೆ.ಪೇಜಾವರ ಯಕ್ಷಗಾನ ನಾಟಕಗಳು ಜನರಿಗೆ ವಿದ್ಪತ್ಪೂರ್ಣ ಸಾಹಿತ್ಯವನ್ನು, ಮನೋರಂಜನೆಯನ್ನು ಕಟ್ಟಿಕೊಟ್ಟದ್ದು ಎನ್ನುತ್ತಾ ಹರಟೆಯ ಕೊಂಡಿಯನ್ನು ಸಾಹಿತಿ, ನಿವೃತ್ತಿ ಶಿಕ್ಷಕಿ, ಹಿರಿಯ ಸಾಹಿತಿ ಕೆ.ಎ. ರೋಹಿಣಿಯವರ ಕೈಗಿತ್ತರು. ಕೆ.ಎ. ರೋಹಿಣಿಯವರು ಮಹಿಳೆಯರು ಸಂಬಳವಿಲ್ಲದೆ ದುಡಿಯುವವರು, ದಿನನಿತ್ಯ ಕೆಲಸವಿದ್ದರು ’ಕೆಲಸವಿಲ್ಲದವರು’ ಎಂಬ ತಾತ್ಸಾರಕ್ಕೆ ಒಳಗಾದವರೆಂಬ ನೇರ ಕುಟುಕನ್ನು ಸಭಿಕರಿಗೆ ಎಸೆದು ನಗುತ್ತಲೇ ಮಹಿಳೆಯರ ಪರದಾಟಕ್ಕೆ ಅವರಿಗೊಂದಿಷ್ಟು ಸಹಾನುಭೂತಿ ಇರಲಿ ಎಂಬ ಕಳಕಳಿಯನ್ನು ವ್ಯಕ್ತ ಪಡಿಸಿದರು.  ಹಾಸ್ಯ- ಹರಟೆಯನ್ನು ಮುಂದೆತನ್ನಕೈಗೆತ್ತಿಕೊಂಡವರು ತುಳುವರ ಮಾಣಿಕ್ಯ, ರಂಗನಟ, ಅದ್ಭುತ ಹಾಸ್ಯಚಿತ್ರನಟ ಶ್ರೀ ಅರವಿಂದ ಬೋಳಾರ್‌ರವರು.
ಧ್ವನಿವರ್ಧಕ ಹಿಡಿದ ಕೂಡಲೇ ಏನೋ ಅಪಸ್ವರ ಬಂದು ಸಭಿಕರಿಗೆ ನೇರವಾಗಿ ’ಎನಡ ಕೋಪ ಇತ್ತಿಂಡ ಎದುರು ಬತ್‌ದ್ ಹಾಕ್‌ಲೆ ಪಿರವುಡು ಗೊಬ್ಬಡೆ’ (ನನ್ನಲ್ಲಿ ಕೋಪ ಇದ್ದರೆ ಎದುರು ಬಂದು ಹೊಡೆಯಿರಿ ಹಿಂದಿನಿಂದ ಆಟವಾಡಬೇಡಿ)ಎಂದು ಅವರ ಎಂದಿನ ಶೈಲಿಯ ಹಾಸ್ಯ ಮುಖಭಾವದಿ ಪ್ರಶ್ನಿಸಲು ಸಭಿಕರು ಘೋಳ್ ಎಂದು ನಕ್ಕುಬಿಟ್ಟರು. ನಾಟಕದ ಹಾಸ್ಯ ಇನ್ನೊಬ್ಬರ ಮನ ನೋಯಿಸಬಾರದು, ನಮ್ಮ ನಾಟಕ ಆರೋಗ್ಯಕರ ನಗು ತರಿಸುವಂತಹುದು, ದ್ವಂದಾರ್ಥದ  ಆಶಿಸ್ತಿನ ನಾಟಕಕ್ಕೆ  ನಮ್ಮತಂಡದಲ್ಲಿ ಮಾನ್ಯವಿಲ್ಲ ಎಂಬ ಸಂದೇಶದೊಂದಿಗೆ ಅರವಿಂದರು ತಮ್ಮ ಮಾತುಗಳನ್ನು ಕೊನೆಗೊಳಿಸಿದರು. ಹೀಗೆ ನಾಲ್ವರು ಹರಟೆಗಾರರು ಒಬ್ಬರನ್ನೊಬ್ಬರು ಮಾತಾಡಿಸಿಕೊಂಡು ನಗುನಗುತ ಸಮಯಕಳೆದದ್ದೇ ಅರಿವಾಗಲಿಲ್ಲ. ಸಭಿಕರಂತೂ ಮಂತ್ರ ಮುಗ್ದರಾಗಿ ಈ ಹರಟೆಯನ್ನು ಆನಂದಿಸಿದ್ದು ಕಾರ‍್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಎಲ್ಲರ ಹರಟೆಯ ಒಟ್ಟು ಸಾರಾಂಶದೊಂದಿಗೆ ಮುಕ್ತಾಯಗೊಳಿಸಿದ ಶ್ರೀ. ಕೆ.ಕೆ. ಪೇಜಾರ್‌ವರು  ಹಾಸ್ಯ ಹರಟೆ ನಮಗೆ ಮುದನೀಡಲಿ ಎಂಬ ಸದಾಶಯವನ್ನು ಸಾರಿದರು. ಶೀಮತಿ ವಿಜಯಲಕ್ಷ್ಮಿ ಕಟೀಲು ಕಾರ‍್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಮಾಡಿದರು.

ವರದಿ : ವಿಜಯಲಕ್ಷ್ಮೀ ಕಟೀಲು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!