Yuvavahini

FEB 15, 2019 2.39 PM IST

ಯುವಸಿಂಚನ ಮಾಸಿಕ ಪತ್ರಿಕೆ : ಫೆಬ್ರವರಿ 2019

ಸಂಪಾದಕರ ಮಾತು : ರಾಜೇಶ್ ಸುವರ್ಣ

ಒಮ್ಮೆ ಸೂರ್ಯ ಕೇಳಿದನಂತೆ ನಾನು ಮಾಡುವ ಕೆಲಸ ಯಾರು ಮಾಡ ಬಲ್ಲಿರಿ’ ಎಂದು, ಆಗ ಭೂಮಿಯೂ ಸೇರಿ ಎಲ್ಲವೂ ಸ್ತಬ್ದವಾಗಿತ್ತು ಚಿತ್ರಪಟದಂತೆ. ಅಷ್ಟರಲ್ಲಿ ಭೂಮಿಯಲ್ಲಿದ್ದ ಪುಟ್ಟ ಹಣತೆಯೊಂದು ಹೇಳಿತು. ಸೂರ್ಯ ನೀನು ಮಾಡುವ ಕೆಲಸ ನಾನು ಮಾಡಬಲ್ಲೆನು ಎಂದು. ಹೌದು ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಯುಗಯುಗಗಳು ಸೇರಿ ಮಹಾಯುಗವಾಗುವಂತೆ ಶಕ್ತಿಗಳ ಕ್ರೋಡೀಕರಣ ಅಶ್ವಶಕ್ತಿಯ ಹುಟ್ಟಿಗೆ ಕಾರಣವಾಗುತ್ತದೆ. ಇಂದು ಯುವವಾಹಿನಿಯಲ್ಲೂ ಇದೇ ನಡೆದು ಹೋಗಿದೆ. ಸೂರ್ಯನೇ ನಾಚುವಂತಹ ಸೇವಾ ದೀವಿಗೆಯನ್ನು ನಮ್ಮ ಘಟಕಗಳು ಹಚ್ಚಿದೆ. ಯಡ್ತಾಡಿಯಿಂದ ಬೆಂಗಳೂರಿನವರೆಗೆ ಬೆಳಗುತ್ತಿರುವ ನಂದಾದೀಪಗಳು ನಮ್ಮ ಸಮಾಜವನ್ನು ಕತ್ತಲೆಯಿಂದ ಬೆಳಕಿನತ್ತ ನಡೆಸಿದೆ. ಹಾಗಾಗಿ ನನಗಿಂದು ಯುವ ಸಿಂಚನ ಮಹಾ ಗ್ರಂಥದಂತೆ ಕಾಣುತ್ತಿದೆ.
ಇಲ್ಲಿ ನಾವು ಮಾಡಿದ ನೂರಾರು ಕೆಲಸಗಳು ಭದ್ರವಾಗಿದೆ ಮತ್ತು ಮೂರು ಸಾವಿರ ಮನೆಗಳನ್ನು ತಲುಪಲಿವೆ ಹತ್ತು ಸಾವಿರಕ್ಕೂ ಅಧಿಕ ಓದುಗರ ಮನ ಸೇರಲಿದೆ, ಈ ಒಂದು ಸಂತೃಪ್ತಿ ನಮ್ಮದಾಗಿದೆ. ಈ ಸಂಚಿಕೆ ನಿಮ್ಮ ಕೈಗಿಡುವ ವೇಳೆ ಒಂದು ಮಹಾ ಗ್ರಂಥವನ್ನು ಸಿದ್ಧಪಡಿಸಿದ ಅನುಭವವಾಗುತ್ತಿದೆ, ಅಂಕಣ,ಲೇಖನ, ಕಥೆ, ಕವನಗಳಿಗೆ ಜಾಗ ಕಾಯ್ದಿರಿಸಬೇಕು ಎನ್ನುವ ಹಂಬಲ ಇಲ್ಲಿ ದೂರವಾಗಿದೆ, ಏಕೆಂದರೆ ನಮ್ಮ 33 ಕುಟುಂಬಗಳ ನಿರಂತರ ಕಾರ್ಯಕ್ರಮಗಳಿಂದಾಗಿ ಅವುಗಳಿಗಾಗಿ ಜಾಗ ಮೀಸಲಿಡುವುದೇ ಕಷ್ಟವಾಗಿದೆ. ಒಮ್ಮೆಗೆ 60 ಪುಟ ಸಾಕು ಎನ್ನುವ ಚಿಂತನೆ ನಮ್ಮದಾಗಿತ್ತು, ಆದರೆ ಘಟಕಗಳಿಂದ ಬರುತ್ತಿದ್ದ ವರದಿಗಳಲ್ಲಿ ಯಾವುದನ್ನೂ ಬದಿಗೆ ಸರಿಸುವಂತಿಲ್ಲ, ಎಲ್ಲಾ ಕೆಲಸಗಳೂ ಉತ್ತಮವಾದುದೇ ಹಾಗಾಗಿ 60 ರಿಂದ 70 ಪುಟ ಅಲ್ಲಿಯೂ ಜಾಗ ಸಾಲದೆ 88 ಪುಟಗಳಿಗೆ ಏರಿಕೆ ಮಾಡುವ ಅನಿವಾರ್ಯತೆ ಬಂದಿದೆ.
ಮಾಡಿದ ಕೆಲಸ ಮರೆಯುತೇವೆ, ಹೇಳಿದ ಮಾತೂ ನೆನಪಲ್ಲಿ ಉಳಿಯದೇ ಹೋಗಬಹುದು, ಆದರೆ ಅಳಿವಿಲ್ಲದೆ ಉಳಿದು ನಮ್ಮ ಕೆಲಸ ಕಾರ್ಯಗಳನ್ನು ಸದಾ ಹಸಿರಾಗಿಸುವ ಶಕ್ತಿ ಇರುವುದು ಅದು ಬರಹಕ್ಕೆ ಮಾತ್ರ. ಹಾಗಾಗಿ ವಿಜ್ಞಾನ ಯುಗವಾದ ಇಂದಿನ ದಿನದಲ್ಲೂ ಅಕ್ಷರ, ಎಲ್ಲರ ಐಶ್ವರ್ಯವಾಗಿದೆ. ಸಾಧನೆಗಳ ದಾಖಲೀಕರಣ ಎನ್ನುವುದು ಸಾಧನೆಯಾಗಿದೆ.
ದಾಸರ ನಡುವೆ ಒಮ್ಮೆ ಚರ್ಚೆ ನಡೆಯಿತಂತೆ ನಮ್ಮಲ್ಲಿ ಯಾರು ದೇವರ ಬಳಿಗೆ ಹೋಗ ಬಹುದು ಎಂದು ಆಗ ಅಲ್ಲಿದ್ದ ಕನಕದಾಸರು ಹೇಳಿದರಂತೆ `ನಮ್ಮೊಳಗೆ ನಾನು ಹೋದರೆ ಹೋದೇನು’ ಎಂದು, ಅಷ್ಟರಲ್ಲಿ ಎಲ್ಲರೂ ಅವರನ್ನು ದುರುಗುಟ್ಟಿ ನೋಡಿದರು, ಆದರೆ ವಾಸ್ತವವಾಗಿ ದಾಸರು ಹೇಳಿದ್ದು ನಮ್ಮೊಳಗೆ ಇರುವ ನಾನು ಎಂಬುವುದು ಹೋದರೆ ನಾವು ಹೋಗ ಬಹುದು ಎಂದು, ನಮ್ಮೊಳಗೆ ನಾನು ಎನ್ನುವ ಅಹಂ ಸೇರಿ, ನಮ್ಮತನವನ್ನು ಬಲಿ ಪಡೆಯುತ್ತಿದೆ, ಅಹಂ ಅತ್ತಗಿರಲಿ ಇಹಂ ಇತ್ತಗಿರಲಿ ಆಗ ಸರ್ವಂ ಸುಖಮಯವಾಗುವುದು ಎನ್ನುವುದನ್ನು ಉಚ್ಚರಿಸುತ್ತಾ. ಎಂದಿನಂತೆ ಈ ಬಾರಿಯೂ ಸಕಾಲದಲ್ಲಿ ವರದಿಗಳನ್ನು ನೀಡಿದ ಎಲ್ಲಾ ಘಟಕಗಳನ್ನೂ ಅಭಿನಂದಿಸುತ್ತೇನೆ,ಸಹಕಾರ ನೀಡಿದ ನರೇಶ್ ಕುಮಾರ್ ಸಸಿಹಿತ್ಲು, ಸಾಧು ಪೂಜಾರಿ ಹಾಗೂ ಅಕ್ಷರ ಅಚ್ಚುಕಟ್ಟಾಗಿ ಮುದ್ರಿಸಿ ವಿನ್ಯಾಸಗೊಳಿಸಿದ ದಿನಕರ್ ಬಂಗೇರಾ ಅವರಿಗೂ ಪೋಸ್ಟಿಂಗ್ ನಲ್ಲಿ ಸಹಕಾರ ನೀಡಿದ ಸಂಪಾದಕೀಯ ಮಂಡಳಿಯ ಸದಸ್ಯರು, ಯುವವಾಹಿನಿ ಬಂಧುಗಳಿಗೆ ವಂದಿಸುತ್ತಾ, ಮುಂದಿನ ಸಂಚಿಕೆಯಲ್ಲಿ ಜೊತೆಯಾಗೋಣ ಎಂದು ಆಶಿಸಿ ಮಾತು ಮುಗಿಸುತ್ತೇನೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!