Yuvavahini

FEB 15, 2019 2.39 PM IST

ಯುವಸಿಂಚನ ಮಾಸಿಕ ಪತ್ರಿಕೆ : ಫೆಬ್ರವರಿ 2019

ಸಂಪಾದಕರ ಮಾತು : ರಾಜೇಶ್ ಸುವರ್ಣ

ಒಮ್ಮೆ ಸೂರ್ಯ ಕೇಳಿದನಂತೆ ನಾನು ಮಾಡುವ ಕೆಲಸ ಯಾರು ಮಾಡ ಬಲ್ಲಿರಿ’ ಎಂದು, ಆಗ ಭೂಮಿಯೂ ಸೇರಿ ಎಲ್ಲವೂ ಸ್ತಬ್ದವಾಗಿತ್ತು ಚಿತ್ರಪಟದಂತೆ. ಅಷ್ಟರಲ್ಲಿ ಭೂಮಿಯಲ್ಲಿದ್ದ ಪುಟ್ಟ ಹಣತೆಯೊಂದು ಹೇಳಿತು. ಸೂರ್ಯ ನೀನು ಮಾಡುವ ಕೆಲಸ ನಾನು ಮಾಡಬಲ್ಲೆನು ಎಂದು. ಹೌದು ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಯುಗಯುಗಗಳು ಸೇರಿ ಮಹಾಯುಗವಾಗುವಂತೆ ಶಕ್ತಿಗಳ ಕ್ರೋಡೀಕರಣ ಅಶ್ವಶಕ್ತಿಯ ಹುಟ್ಟಿಗೆ ಕಾರಣವಾಗುತ್ತದೆ. ಇಂದು ಯುವವಾಹಿನಿಯಲ್ಲೂ ಇದೇ ನಡೆದು ಹೋಗಿದೆ. ಸೂರ್ಯನೇ ನಾಚುವಂತಹ ಸೇವಾ ದೀವಿಗೆಯನ್ನು ನಮ್ಮ ಘಟಕಗಳು ಹಚ್ಚಿದೆ. ಯಡ್ತಾಡಿಯಿಂದ ಬೆಂಗಳೂರಿನವರೆಗೆ ಬೆಳಗುತ್ತಿರುವ ನಂದಾದೀಪಗಳು ನಮ್ಮ ಸಮಾಜವನ್ನು ಕತ್ತಲೆಯಿಂದ ಬೆಳಕಿನತ್ತ ನಡೆಸಿದೆ. ಹಾಗಾಗಿ ನನಗಿಂದು ಯುವ ಸಿಂಚನ ಮಹಾ ಗ್ರಂಥದಂತೆ ಕಾಣುತ್ತಿದೆ.
ಇಲ್ಲಿ ನಾವು ಮಾಡಿದ ನೂರಾರು ಕೆಲಸಗಳು ಭದ್ರವಾಗಿದೆ ಮತ್ತು ಮೂರು ಸಾವಿರ ಮನೆಗಳನ್ನು ತಲುಪಲಿವೆ ಹತ್ತು ಸಾವಿರಕ್ಕೂ ಅಧಿಕ ಓದುಗರ ಮನ ಸೇರಲಿದೆ, ಈ ಒಂದು ಸಂತೃಪ್ತಿ ನಮ್ಮದಾಗಿದೆ. ಈ ಸಂಚಿಕೆ ನಿಮ್ಮ ಕೈಗಿಡುವ ವೇಳೆ ಒಂದು ಮಹಾ ಗ್ರಂಥವನ್ನು ಸಿದ್ಧಪಡಿಸಿದ ಅನುಭವವಾಗುತ್ತಿದೆ, ಅಂಕಣ,ಲೇಖನ, ಕಥೆ, ಕವನಗಳಿಗೆ ಜಾಗ ಕಾಯ್ದಿರಿಸಬೇಕು ಎನ್ನುವ ಹಂಬಲ ಇಲ್ಲಿ ದೂರವಾಗಿದೆ, ಏಕೆಂದರೆ ನಮ್ಮ 33 ಕುಟುಂಬಗಳ ನಿರಂತರ ಕಾರ್ಯಕ್ರಮಗಳಿಂದಾಗಿ ಅವುಗಳಿಗಾಗಿ ಜಾಗ ಮೀಸಲಿಡುವುದೇ ಕಷ್ಟವಾಗಿದೆ. ಒಮ್ಮೆಗೆ 60 ಪುಟ ಸಾಕು ಎನ್ನುವ ಚಿಂತನೆ ನಮ್ಮದಾಗಿತ್ತು, ಆದರೆ ಘಟಕಗಳಿಂದ ಬರುತ್ತಿದ್ದ ವರದಿಗಳಲ್ಲಿ ಯಾವುದನ್ನೂ ಬದಿಗೆ ಸರಿಸುವಂತಿಲ್ಲ, ಎಲ್ಲಾ ಕೆಲಸಗಳೂ ಉತ್ತಮವಾದುದೇ ಹಾಗಾಗಿ 60 ರಿಂದ 70 ಪುಟ ಅಲ್ಲಿಯೂ ಜಾಗ ಸಾಲದೆ 88 ಪುಟಗಳಿಗೆ ಏರಿಕೆ ಮಾಡುವ ಅನಿವಾರ್ಯತೆ ಬಂದಿದೆ.
ಮಾಡಿದ ಕೆಲಸ ಮರೆಯುತೇವೆ, ಹೇಳಿದ ಮಾತೂ ನೆನಪಲ್ಲಿ ಉಳಿಯದೇ ಹೋಗಬಹುದು, ಆದರೆ ಅಳಿವಿಲ್ಲದೆ ಉಳಿದು ನಮ್ಮ ಕೆಲಸ ಕಾರ್ಯಗಳನ್ನು ಸದಾ ಹಸಿರಾಗಿಸುವ ಶಕ್ತಿ ಇರುವುದು ಅದು ಬರಹಕ್ಕೆ ಮಾತ್ರ. ಹಾಗಾಗಿ ವಿಜ್ಞಾನ ಯುಗವಾದ ಇಂದಿನ ದಿನದಲ್ಲೂ ಅಕ್ಷರ, ಎಲ್ಲರ ಐಶ್ವರ್ಯವಾಗಿದೆ. ಸಾಧನೆಗಳ ದಾಖಲೀಕರಣ ಎನ್ನುವುದು ಸಾಧನೆಯಾಗಿದೆ.
ದಾಸರ ನಡುವೆ ಒಮ್ಮೆ ಚರ್ಚೆ ನಡೆಯಿತಂತೆ ನಮ್ಮಲ್ಲಿ ಯಾರು ದೇವರ ಬಳಿಗೆ ಹೋಗ ಬಹುದು ಎಂದು ಆಗ ಅಲ್ಲಿದ್ದ ಕನಕದಾಸರು ಹೇಳಿದರಂತೆ `ನಮ್ಮೊಳಗೆ ನಾನು ಹೋದರೆ ಹೋದೇನು’ ಎಂದು, ಅಷ್ಟರಲ್ಲಿ ಎಲ್ಲರೂ ಅವರನ್ನು ದುರುಗುಟ್ಟಿ ನೋಡಿದರು, ಆದರೆ ವಾಸ್ತವವಾಗಿ ದಾಸರು ಹೇಳಿದ್ದು ನಮ್ಮೊಳಗೆ ಇರುವ ನಾನು ಎಂಬುವುದು ಹೋದರೆ ನಾವು ಹೋಗ ಬಹುದು ಎಂದು, ನಮ್ಮೊಳಗೆ ನಾನು ಎನ್ನುವ ಅಹಂ ಸೇರಿ, ನಮ್ಮತನವನ್ನು ಬಲಿ ಪಡೆಯುತ್ತಿದೆ, ಅಹಂ ಅತ್ತಗಿರಲಿ ಇಹಂ ಇತ್ತಗಿರಲಿ ಆಗ ಸರ್ವಂ ಸುಖಮಯವಾಗುವುದು ಎನ್ನುವುದನ್ನು ಉಚ್ಚರಿಸುತ್ತಾ. ಎಂದಿನಂತೆ ಈ ಬಾರಿಯೂ ಸಕಾಲದಲ್ಲಿ ವರದಿಗಳನ್ನು ನೀಡಿದ ಎಲ್ಲಾ ಘಟಕಗಳನ್ನೂ ಅಭಿನಂದಿಸುತ್ತೇನೆ,ಸಹಕಾರ ನೀಡಿದ ನರೇಶ್ ಕುಮಾರ್ ಸಸಿಹಿತ್ಲು, ಸಾಧು ಪೂಜಾರಿ ಹಾಗೂ ಅಕ್ಷರ ಅಚ್ಚುಕಟ್ಟಾಗಿ ಮುದ್ರಿಸಿ ವಿನ್ಯಾಸಗೊಳಿಸಿದ ದಿನಕರ್ ಬಂಗೇರಾ ಅವರಿಗೂ ಪೋಸ್ಟಿಂಗ್ ನಲ್ಲಿ ಸಹಕಾರ ನೀಡಿದ ಸಂಪಾದಕೀಯ ಮಂಡಳಿಯ ಸದಸ್ಯರು, ಯುವವಾಹಿನಿ ಬಂಧುಗಳಿಗೆ ವಂದಿಸುತ್ತಾ, ಮುಂದಿನ ಸಂಚಿಕೆಯಲ್ಲಿ ಜೊತೆಯಾಗೋಣ ಎಂದು ಆಶಿಸಿ ಮಾತು ಮುಗಿಸುತ್ತೇನೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!