ಪದಗ್ರಹಣ – ಸಾರಥ್ಯ 2019

ಸುರತ್ಕಲ್ : ಯುವವಾಹಿನಿ(ರಿ) ಸುರತ್ಕಲ್ ಘಟಕವು ಅತ್ಯಂತ ಹಿರಿಯ ಘಟಕಗಳಲ್ಲಿ ಒಂದಾಗಿದ್ದು ಬಹಳಷ್ಟು ಸಮಾಜ ಮುಖಿಯಾಗಿ ಮಾಡುತ್ತಿರುವ ಸೇವೆಯನ್ನು ಖ್ಯಾತ ಉದ್ಯಮಿ ಮ್ಯಾನೇಜಿಂಗ್ ಡ್ಯೆರೆಕ್ಟರ್ ಫಾಟ್ಗೆ ಗ್ರೂಫ್ ಆಪ್ ಕಂಪೆನಿಯ ಅಧ್ಯಕ್ಷ ಶೇಖರ್ ಕೆ.ಕರ್ಕೇರ ತಿಳಿಸಿದರು.
ಇವರು ದಿನಾಂಕ 27/01/2019 ಅದಿತ್ಯವಾರದಂದು ಸುರತ್ಕಲ್ ಲಲಿತ್ ಹೊಟೇಲ್ ಇಂಟರ್ ನ್ಯಾಶನಲ್ ನಲ್ಲಿ ಜರಗಿದ ಯುವವಾಹಿನಿ(ರಿ) ಸುರತ್ಕಲ್ ಘಟಕದ 2019-2020ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ – ಸಾರಥ್ಯ 2019 ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ(ರಿ) ಸುರತ್ಕಲ್ ಘಟಕದ ಅಧ್ಯಕ್ಷ ಅಶೋಕ್ ಸುವರ್ಣ ಅಧ್ಯಕ್ಷತೆ ವಹಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಸಸಿಹಿತ್ಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಚಿಲುಮೆ ಪತ್ರಿಕೆಯನ್ನು ಮುಖ್ಯ ಅತಿಥಿಗಳಾದ ಜಿಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಚಂದ್ರಶೇಖರ ನಾನಿಲ್‍ರವರು ಬಿಡುಗಡೆಗೊಳಿಸಿದರು. ಈ ಸಂರ್ಭದಲ್ಲಿ ಚಂದ್ರಶೇಖರ ನಾನಿಲ್‍ರವರನ್ನು ಸನ್ಮಾನಿಸಲಾಯಿತು. ಸನ್ನಾನ ಪತ್ರವನ್ನು ಗುಣವತಿ ರಮೇಶ್ ವಾಚಿಸಿದರು.


ಸಮ್ಮಾನ :- ಜಿಲ್ಲಾ ರಾಜೋತ್ಸವ ಪುರಸ್ಕತ ಚಂದ್ರಶೇಖರ್ ನಾನಿಲ್‍ರನ್ನು ಮತ್ತು ಕಳೆದ ಸಾಲಿನಲ್ಲಿ ಘಟಕದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಅಶೋಕ್ ಸುವರ್ಣ ಮತ್ತು ತಾರಾ ಅಶೋಕ್ ದಂಪತಿಗಳನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷರಾದ ಗುಣವತಿ ರಮೇಶ್ ಮತ್ತು ತಂಡಕ್ಕೆ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಸಸಿಹ್ಲಿತು ಪ್ರತಿಜ್ಞಾ ಬೋಧನೆ ಗೈದರು. ಕೇಂದ್ರ ಸಮಿತಿಯ ಹಿರಿಯ ಘಟಕಗಳಲ್ಲಿ ಒಂದಾಗಿರುವ ಈ ಘಟಕವು ಬಹಳಷ್ಟು ಪ್ರತಿಭಾವಂತರನ್ನು . ಸಮರ್ಥರನ್ನು ಒಳಗೊಂಡಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಸುವರ್ಣ ವಹಿಸಿದ್ದರು. ಎಂಟು ಹೊಸ ಸದಸ್ಯರು ಸೇರ್ಪಡೆಗೋಂಡರು. ಚರಣ್, ಭಾಸ್ಕರ್ ಕೋಟ್ಯಾನ್ ಮತ್ತು ತಂಡದಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಸತೀಶ್ ಕೊಟ್ಯಾನ್ ನಿರೂಪಿಸಿದರು. ರಿತೇಶ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾರಥ್ಯ 2019 ರ ಸಂಚಾಲಕ – ಕಿಶೋರ್ ವಂದಿಸಿದರು. ಜೊತೆ ಕಾರ್ಯದರ್ಶಿ ತಾರಾ ಅಶೋಕ್ ವರದಿ ವಾಚಿಸಿದರು. .
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಪರಮೇಶ್ವರ ಪೂಜಾರಿ, ಯಶವಂತ್, ಲಕ್ಷ್ಮಣ್ ಸಾಲ್ಯಾನ್, ರವೀಂದ್ರ, ತಾರಾನಾಥ ಹೆಜಮಾಡಿ, ರವಿಕುಮಾರ್ ಚಿಲಿಂಬಿ, ರಾಜೇಂದ್ರ ಚಿಲಿಂಬಿ, ಪ್ರಭಾಕರ್ ಕುಳಾಯಿ, ಸತ್ಯಜಿತ್ ಸುರತ್ಕಲ್ ಘಟಕದ ಮಾಜಿ ಅಧ್ಯಕ್ಷರುಗಳು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!