Yuvavahini

NOV 15, 2018 2.00 PM IST

ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ : ನವೆಂಬರ್ 2018

ಸಂಪಾದಕೀಯ : ರಾಜೇಶ್ ಸುವರ್ಣ

ಯುವಸಿಂಚನ ಓದುಗ ಮಿತ್ರರೇ,
ಒಂದು ಪೇಟೆಯಲ್ಲಿ ಚಿನ್ನದ ಅಂಗಡಿ ಮತ್ತು ಕಬ್ಬಿಣದ ಅಂಗಡಿ ಅಕ್ಕಪಕ್ಕದಲ್ಲಿ ಇದ್ದವು. ಒಂದು ದಿನ ಚಿನ್ನದ ತುಂಡೊಂದು ಕಬ್ಬಿಣದ ಅಂಗಡಿಯ ಮುಂದೆ ಬಂದು ಬಿದ್ದವು. ಇದನ್ನು ಕಂಡು ಕಬ್ಬಿಣ ಚಿನ್ನದ ಬಳಿ ಕೇಳತ್ತೆ ಚಿನ್ನಕ್ಕ ಚಿನ್ನಕ್ಕ ನೀನೇಕೆ ಇಲ್ಲಿಗೆ ಬಂದಿದ್ದೀಯಾ ? ಇದಕ್ಕೆ ಚಿನ್ನ ಉತ್ತರಿಸುತ್ತೆ ಕಬ್ಬಿಣ್ಣಕ್ಕ ಅಲ್ಲಿ ನನ್ನನ್ನು ಬಡಿಯುತ್ತಿದ್ದಾರೆ ಅದರ ನೋವು ತಾಳದೇ ಇಲ್ಲಿಗೆ ಬಂದಿದ್ದೇನೆ. ಇದನ್ನು ಕಂಡು ಕಬ್ಬಿಣ ನಗುತ್ತಾ ಹೇಳತ್ತೆ ಅಯ್ಯೋ ಚಿನ್ನಕ್ಕ ಹೊಡೆತ ಯಾರಿಗೇ ತಾನೇ ಇಲ್ಲ ಎಲ್ಲರಿಗೂ ಇದ್ದದ್ದೇ, ಅಲ್ಲಿ ನಿನ್ನನ್ನು ಇನ್ಯಾರೋ ಹೊಡೆಯುತ್ತಿದ್ದಾರೆ (ಚಿನ್ನವನ್ನು ಕಬ್ಬಿಣದ ಸುತ್ತಿಗೆಯಿಂದ ಬಡಿಯುತ್ತಾರೆ) ಆದರೆ ಇಲ್ಲಿ ನೋಡು ನನ್ನನ್ನು ನನ್ನವರೇ ಬಡಿಯುತ್ತಿದ್ದಾರೆ (ಕಬ್ಬಿಣವನ್ನು ಕಬ್ಬಿಣದಿಂದಲೇ ಬಡಿಯುತ್ತಾರೆ) ಅಷ್ಟಕ್ಕೂ ನಿನ್ನನ್ನು ಎಷ್ಟು ಬಡಿಯುತ್ತಾರೋ ನೀನು ಅಷ್ಟು ಮಡಿ ಆಗ್ತಿ, ಆದರೆ ನನ್ನನ್ನು ಎಷ್ಟು ಬಡಿಯುತ್ತಾರೋ ನಾನಷ್ಟು ಪುಡಿಯಾಗುತ್ತೇನೆ. ಹೌದು ಬಂಧುಗಳೇ ಕಲ್ಲಿಗೆ ಏಟು ಬಿದ್ದಾಗ ಮಾತ್ರ ಅದು ಶಿಲೆಯಾಗತ್ತೆ ಎನ್ನುತ್ತಾರೆ ಆದರೆ ಆ ಕಲ್ಲಿಗೆ ಬೀಳುವುದು ಉಳಿ ಏಟೇ ಹೊರತು ಕಲ್ಲಿನ ಏಟಲ್ಲ. ಈ ಜೀವನವೇ ಹಾಗೇ ಬಂಧುಗಳೇ ಮತ್ತೊಬ್ಬರ ಎದಿರೇಟಿಗೆ ನಾವು ಬಲಿಷ್ಠರಾಗುತ್ತೇವೆಯೇ ಹೊರತು ನಮ್ಮವರ ಎದಿರೇಟಿಗೆ ಅಲ್ಲ, ನಮ್ಮವರ ಹೊಡೆತ ನಮ್ಮನ್ನು ಕುಗ್ಗಿಸುತ್ತೆ ನಮ್ಮ ಸಮಾಜ ಇಂದು ಒಗ್ಗಟಾಗಲು ಹೆಣಗಾಡುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣವೂ ಇದಾಗಬಹುದು.

ಲೆಕ್ಕಕ್ಕೆ ನಿಲುಕದಷ್ಟಿರುವ ಸಂಘಟನೆಗಳು, ತಾವೂ ಏರದೆ ಮತ್ತೊಬ್ಬರನ್ನೂ ಏರಲು ಬಿಡದೇ ಎಳೆದಾಟದ ನಡುವೆ ಕಾಲ ಕಳೆಯುತ್ತಿದ್ದೇವೆ. ನಮಗಿಂದು ಬಲಿಷ್ಠ ಯುವ ಸಂಘಟನೆಯ ಅಗತ್ಯತೆ ಇದೆ. ಅಂತಹ ಒಂದು ಸಂಘಟನೆ ಹುಟ್ಟಿ 31 ವರುಷ ಕಳೆದಿದೆ. ಇಂದು ಅದರ ಅಗತ್ಯತೆ ಮನೆ ಮಾತಾಗಿದೆ. ಯುವ ಮನಸು ವಾಹಿನಿಯಂತೆ ಹರಿಯಬೇಕು ಅನ್ನುವ ಅಂದಿನ ಸಂಕಲ್ಪ ಮತ್ತು ಆಶಯ ಇಂದು ಕೈಗೂಡುತ್ತಿದೆ. ಊರು ಊರು ಗ್ರಾಮ ಗ್ರಾಮದಿಂದ ಯುವವಾಹಿನಿಗೆ ಆಮಂತ್ರಣ ಬರುತ್ತಿದೆ. ಸಮಾಜ ಬಲಿಷ್ಠವಾಗುವ ಕಾಲ ಸನ್ನಿಹಿತವಾಗಿದೆ. ಇಂತಹ ದಿನದಲ್ಲಿ ನಮ್ಮ ಸಂವಹನ ಮಾಧ್ಯವ ಯುವಸಿಂಚನ ಮನೆ ಮನೆ ತಲುಪಬೇಕಿದೆ. ಯುವವಾಹಿನಿಯ ಪ್ರತಿಯೊಂದು ಕೆಲಸ ಕಾರ್ಯವು ದಾಖಲೀಕರಣಗೊಳ್ಳಬೇಕಿದೆ ದಾಖಲೀಕರಣದ ಒಮ್ಮೊಮ್ಮೆ “ನಾನು” ಕಳೆದುಹೋಗಬಹುದು, ಕಳೆದುಹೋಗದಂತೆ “ನಾವು” ಎಚ್ಚರವಹಿಸೋಣ, ಏಕೆಂದರೆ ಕೊಂಡಿ ಕಳಚುವುದು ಸುಲಭ ಬೆಸೆಯುವುದು ಕಷ್ಟ. ನಮ್ಮಲ್ಲಿ ಕತ್ತರಿಗಳಿಗೆ ಬರವಿಲ್ಲ, ಬರ ಇರುವುದು ಸೂಜಿಗೆ ಮಾತ್ರ. ಯುವಸಿಂಚನ ಒಂದು ಸೂಜಿಯಂತೆ ಅದು ಎಲ್ಲರನ್ನೂ ಎಲ್ಲವನ್ನೂ ಬೆಸೆಯುತ್ತದೆ. ಶ್ರೀರಾಮನಿಂದಲೂ ತಪ್ಪಾಗಿದೆ, ಶ್ರಿಕೃಷ್ಣನಿಂದಲೂ ತಪ್ಪಾಗಿದೆ. ತಪ್ಪನ್ನು ಸೂಚಿಸುವ ಪರಿ ಒಪ್ಪುವಂತಿರಬೇಕು. ಹಾಗಾದಾಗ ಎಲ್ಲರೂ ಎಲ್ಲವೂ ಬದಲಾಗುತ್ತದೆ. ಯುವವಾಹಿನಿ ಮಂಥನದಿಂದ ಹುಟ್ಟಿಕೊಂಡ ಸಂಸ್ಥೆ. ಇಲ್ಲಿನ ಎಲ್ಲಾ ನಿರ್ಧಾರಗಳೂ ಮಥಿಸಿದಾಗ ಹೊರ ಬರುವ ಅಮೃತದಂತೆ, ಹಾಗಾಗಿ ಅದು ಇಂದಿಗೂ ಶಾಶ್ವತವಾಗಿದೆ. ನಾವೆಲ್ಲ ಮುಂದೆಯು ಇದೇ ನಿರ್ಧಾರ ತಳೆಯೋಣ. ಯುವಸಿಂಚನ ಈ ಬಾರಿಯೂ ಪರಿಪಕ್ವವಾಗಿ ಮೂಡಿ ಬಂದಿದೆ. ಕಾರಣ 33 ಘಟಕಗಳೂ ತ್ರಾಸ ನೀಡದೆ ಸಹಕಾರ ನೀಡಿದ್ದಾರೆ. ಅವರವರ ಕಾರ್ಯಕ್ರಮದ ವರದಿಗಳು ಸಕಾಲದಲ್ಲಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪ್ರಚಾರ ನಿರ್ದೇಶಕರನ್ನು ಅಭಿನಂದಿಸುತ್ತೇನೆ. ಅಂತೆಯೇ ನನ್ನ ಕೆಲಸ ಕಾರ್ಯದಲ್ಲಿ ನಾವು ನಿಮ್ಮ ಜತೆ ಯಾವಾಗಲೂ ಇದ್ದೇವೆ ಎಂದು ಬೆನ್ನೆಲುಬಾಗಿ ನಿಂತ ಸಂಪಾದಕೀಯ ಮಂಡಳಿ, ನನ್ನ ಜತೆ ಕೈಜೋಡಿಸಿದ ಕೇಂದ್ರ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಪುಟ ವಿನ್ಯಾಸಗೊಳಿಸಿದ ದಿನಕರ್ ಡಿ.ಬಂಗೇರಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯುವವಾಹಿನಿಯಲ್ಲಿ ಎಂದೆಂದಿಗೂ ಜೊತೆಗಾರರಾಗಿರೋಣ ಎಂದು ಆಶೀಸುತ್ತೇನೆ. ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.
– ಸಂಪಾದಕ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!