ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ

ಯುವವಾಹಿನಿ ಸೇವಾ ಯೋಜನೆಗೆ ಚಾಲನೆ

ವೇಣೂರು : ಪ್ರತೀ ತಿಂಗಳು ಅಶಕ್ತ ಕುಟುಂಬದ ನೆರವಿಗಾಗಿ ರೂಪಿಸಿರುವ ಘಟಕದ ಕನಸಿನ ಯೋಜನೆಯಾದ ಯುವವಾಹಿನಿ ಸೇವಾ ಯೋಜನೆ ವೇಣೂರು ಇದರ ಚಾಲನೆಯು ದಿನಾಂಕ 23-09-18 ನೇ ಆದಿತ್ಯವಾರದಂದು ವೇಣೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು. ಕ್ಷೇತ್ರದ ದೇವರಿಗೆ ಯೋಜನೆ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿ ,ನಂತರ ದೇವಾಲಯದ ಸಭಾಂಗಣದಲ್ಲಿ ಘಟಕದ ಮಾಸಿಕ ಸಭೆಯನ್ನು ಘಟಕದ ಅಧ್ಯಕ್ಷರಾದ ನಿತೀಶ್ ಎಚ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು, ಘಟಕದ ಕಾರ್ಯದರ್ಶಿ ಸತೀಶ್ ಪಿ ಎನ್ ಸ್ವಾಗತಿಸಿದರು, ಅಧ್ಯಕ್ಷತೆ ವಹಿಸಿದ್ದ ನಿತೀಶ್ ಎಚ್ ಸೇವಾ ಯೋಜನೆಯ ಲಾಂಛನ ಹಾಗೂ ಬ್ಯಾಂಕ್ ಖಾತೆ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ , ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯ ಯೋಗೀಶ್ ಪೂಜಾರಿ ,ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ಘಟಕದ ಉಪಾಧ್ಯಕ್ಷರಾದ ನವೀನ್ ಪಚ್ಚೇರಿ, ಅರುಣ್ ಕೋಟ್ಯಾನ್ ,ಕೋಶಧಿಕಾರಿ ಉಮೇಶ್ಚಂದ್ರ ಅಂಬಲ, ನಿರ್ದೇಶಕರುಗಳಾದ ಹರೀಶ್ ಪಿ. ಎಸ್. , ಶಿವಪ್ರಕಾಶ್ ಅಂಭಾಶ್ರಿ, ನಾಗೇಶ್ ಕೊಟ್ಯಾನ್ ಹೊಸಂಗಡಿ ,ರಾಜೇಂದ್ರ ಕುಕ್ಕೇಡಿ , ಸಲಹೆಗಾರರಾದ ಗಿರೀಶ್ ಕೆ,ಎಸ್,ಸದಸ್ಯರಾದ ಶಾಂತಿರಾಜ್ ಬೊರ್ಡೆಲು,ಕೇಶವ ಬೊರ್ಡೆಲು,ಶುಭಾಕರ ಪೂಜಾರಿ ಅಂಡಿಂಜೆ, ರಮೇಶ್ ಪೂಜಾರಿ ನಡುಮನೆ, ರಕ್ಷಿತ್ ಪ್ರಕಾಶ್ ನಾರಾವಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!