Yuvavahini

MAY 20, 2017 1.25 PM IST

ರವಿರಾಜ್ ಅಜ್ರಿ:-ವಿಶುಕುಮಾರ್ ಎಂಬ ಬರಹಗಾರನ ಕಥೆ- -4

ವಿಶುಕುಮಾರ್ ಹೀಗೊಂದು ನೆನಪು -ಗುಲ್ವಾಡಿ ಪಾಲಿಗೆ ತುಪ್ಪ ಜಾರಿ ಬಿತ್ತು!

           ದಿ ವಿಶುಕುಮಾರ್

ಉದಯವಾಣಿ ಪತ್ರಿಕೆಯ ಪ್ರಾರಂಭದ ದಿನದಿಂದಲೇ ವಿಶುಕುಮಾರ್ ಅವರು ” ಶ್ರೀಸಾಮಾನ್ಯರು ಮಹಾನುಭಾವರು” ಅಂಕಣ ಬರೆಯುತ್ತಿದ್ದರು. ಅದು ತುಂಬಾ ಜನಪ್ರಿಯ ಕಾಲಂ ಆಗಿತ್ತು. ಅವರ ಬರಹ ತೀಕ್ಷಣತೆಯಿಂದ ಕೂಡಿತ್ತು. ಸೂಕ್ಷ್ಮ ಒಳನೋಟ , ಸಮಗ್ರ ಮಾಹಿತಿ ಹಾಗೂ ನಿರ್ಭೀತಿಯಿಂದ ಕೂಡಿತ್ತು.
ಅವರು ಯಾರ ಮೂಲಾಜಿಗೂ ಒಲಿಯುತ್ತಿರಲಿಲ್ಲ. ತಮಗೆ ಅನ್ನಿಸಿದನ್ನು ಬರೆಯುತ್ತಿದ್ದರು. ಎಲ್ಲವೂ ನೇರ. ವಿಶುಕುಮಾರ್ ರ ಆಲೋಚನೆಗಳನ್ನು ಟೀಕಿಸುವವರು ಕೂಡ ಅವರ ಅಂಕಣ ಓದುತ್ತಿದ್ದರು. ಇವರ ಬರವಣಿಗೆಯನ್ನು ” ಪೈ ಫ್ಯಾಮಿಲಿ” ಮೆಚ್ಚಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ವಾರಪತ್ರಿಕೆಯ ಆಲೋಚನೆ ಕೂಡ ಮೂಡಿ ಬಂದಿರುವುದು.
ಆಗಿನ ರಾಜ್ಯ ಮಟ್ಟದ ದಿನ ಪತ್ರಿಕೆಯ ಮಾಲೀಕರು ಒಂದು ದಿನ ಪತ್ರಿಕೆ , ವಾರ ಪತ್ರಿಕೆ ಹಾಗೂ ತಿಂಗಳ ಪತ್ರಿಕೆ ನಡೆಸುವ ಪದ್ಧತಿ. ಹಾಗಾಗಿ ಉದಯವಾಣಿ ಬಳಗವೂ ಕೂಡ ಹಿಂದೆ ಬೀಳಲಿಲ್ಲ.
ಆಗ ಯೋಚನೆ ಬಂದದ್ದೇ ವಾರ ಪತ್ರಿಕೆಗೆ ಯಾರು ಸಂಪಾದಕರಾಗಬೇಕೆಂಬುದು. ಮೊದಲ ಹೆಸರು ಬಂದದ್ದೇ ವಿಶುಕುಮಾರ್ ಅವರದು. ನಂತರ ಸಂತೋಷಕುಮಾರ ಗುಲ್ವಾಡಿಯವರದು. ಆಗ ಗುಲ್ವಾಡಿಯವರು ಬಾಂಬೆಯಲ್ಲಿ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು.
ಇವರಿಬ್ಬರ ಹೆಸರಿನ ಪೈಪೋಟಿಯಲ್ಲಿ ಉದಯವಾಣಿಯ ದೀಪಾವಳಿ ಸಂಚಿಕೆ ಪ್ರಾಯೋಗಿಕವಾಗಿ ಮೂಡಿ ಬಂದದ್ದು ಎಂದು ಸೂಕ್ಷ್ಮದ ಎಳೆಯನ್ನು ವಿವರಿಸಿದರು ವಿಶುಕುಮಾರ್. ಒಂದು ಸಂಚಿಕೆ ಗುಲ್ವಾಡಿ ಹೆಸರಿನಲ್ಲಿ ಬಂದರೆ, ಮತ್ತೊಂದು ಸಂಚಿಕೆಗೆ ವಿಶುಕುಮಾರ್ ಸಂಪಾದಕರಾಗಿದ್ದರು.
ಕಡೆಗೂ ಒಲಿದು ಬಂದದ್ದು ಗಲ್ವಾಡಿ ಪಾಲಿಗೆ-” ತುಪ್ಪ ಜಾರಿ ಬಿದ್ದದ್ದು ಗುಲ್ವಾಡಿ ತಟ್ಟೆಗೆ ” ಎಂದು ನಕ್ಕರು ವಿಶುಕುಮಾರ್.
” ಸ್ವಲ್ಪ ತೂಕವೂ ಗುಲ್ವಾಡಿ ಅವರಿಗೆ ಜಾಸ್ತಿ ಇತ್ತು. ಕಾರಣ ಪೈ ಬಳಗ ಮತ್ತು ಗುಲ್ವಾಡಿ ಒಂದು ವರ್ಗದವರು ತಾನೇ ” ಎಂದರು.
ಇಲ್ಲಿ ಈಗ ಈ ಬರಹಗಾರ ಯೋಚಿಸಬೇಕಾಗಿದೆ. ವಿಶುಕುಮಾರ್ ಮತ್ತು ಬರಹಗಾರನೊಡನೆ ಮಾತುಕತೆ ನಡೆದ್ದದ್ದು ೧೯೭೮ ರ ಸಮಯದಲ್ಲಿ! ಈಗ ಈ ಭಟ್ಟಿಳಿಸಬೇಕಾಗಿದೆ. ಈ ಬರವಣಿಗೆ ನಡೆಯುತ್ತಿರುವುದು ೨೦೧೬ ರಲ್ಲಿ! ವ್ಯತ್ಯಾಸ ತುಂಬಾ ಬದಲಾವಣೆಗಳು ನಡೆದಿವೆ! ಮಣಿಪಾಲದ ಸುವರ್ಣನದಿಯಲ್ಲಿ ಈ ನಡುವೆ ಬೇಕಾದಷ್ಟು ಮಳೆಗಾಲದ ನೀರು ಹರಿದಿವೆ.
1993-94 ರಲ್ಲಿ ಈ ಬರಹಗಾರ ಉದಯವಾಣಿಯಲ್ಲಿ ಉಪಂಪಾದಕನಾಗಿ ಕೆಲಸಕ್ಕೆ ಸೇರಿದ್ದಾನೆ. ಸುಮಾರು ೧೪ ವರ್ಷ ಆ ಸಂಸ್ಥೆಯಲ್ಲಿ ದುಡಿದ – ಪೈ ಫ್ಯಾಮಿಲಿಯ ಅನುಭವವಿದೆ. ಒಂದಳತೆಗೆ ವಿಶುಕುಮಾರ್ ರ ಮಾತು ಒಪ್ಪಿದ್ದರೂ ಪೂರ್ಣ ಒಪ್ಪುವ ಹಾಗಿಲ್ಲ.
” ಪ್ರತಿಭೆಗೆ ಪೈ ಫ್ಯಾಮಿಲಿಯಲ್ಲಿ ಬೆಲೆಯಿದೆ. ಕೆಲಸಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ವ್ಯಕ್ತಿಯನ್ನು ಒಂದಳತೆಗೆ ಅಲ್ಲಾಡಿಸಿ ನೋಡಿ ಬಿಡುತ್ತಾರೆ ಪೈ ಫ್ಯಾಮಿಲಿ. ಅವರಿಗೆ ನಂಬಿಕೆ ಬಂದರೆ, ಮತ್ತೆ ಆ ವ್ಯಕ್ತಿಯ ತಂಟೆಗೆ ಆ ಕುಟುಂಬ ಬರುವುದಿಲ್ಲ. ಯಾರು ಏನೇ ಆ ವ್ಯಕ್ತಿಯ ಮೇಲೆ ದೂರು ಕೊಟ್ಟರೂ , ಅದನ್ನು ಕೇಳುತ್ತಾರೆ. ಆದರೆ ಆಕ್ಷನ್ ತೆಗೆದುಕೊಳ್ಳುವುದಿಲ್ಲ . ಆದರೆ ಆ ವ್ಯಕ್ತಿ ಬೇಡವೆಂದು ಕಂಡು ಬಂದರೆ, ಒಂದು ಸಣ್ಣ ತಪ್ಪು ಸಿಕ್ಕಿ ಬಿದ್ದರೂ ಸಾಕು. ಆತನನ್ನು ಕೆಲಸದಿಂದ ತೆಗೆದು ಬಿಡುತ್ತಾರೆ. ಅಲ್ಲದೆ – ಅವರು ತಮ್ಮ ಬಳಗದ ಜನವನ್ನೇ ನಂಬುವುದಿಲ್ಲ. ಯಾವ ವರ್ಗದ ಜನರೇ ಇರಲಿ. ಪ್ರತಿಭಾವಂತರನ್ನು ನಂಬುತ್ತಾರೆ. ಆ ಸಂಸ್ಥೆಯಲ್ಲಿ ಸಾವಿರಾರು ಉದ್ಯೋಗಿಗಳು ಜಾತಿ- ಭೇದವಿಲ್ಲದೆ ಕೆಳವರ್ಗದಿಂದ ಹಿಡಿದು ಉನ್ನತ ಹುದ್ದೆಯಲ್ಲಿ ದುಡಿಯುತ್ತಿದ್ದಾರೆ ” – ಇದು ಈ ಬರಹಗಾರನ ಮಾತು. ಅಲ್ಲಿ ದುಡಿಯುವ ಉದ್ಯೋಗಿಗಳು ಸಾಕ್ಷಿ .
ಇನ್ನು ವಿಶುಕುಮಾರ್ – ಬಂಡಾಯ ಬರಹಗಾರ. ಕಾಂಟ್ರವರ್ಸಿಗಳೇ ಹೆಚ್ಚು. ಪ್ರತೀ ಹೆಜ್ಜೆಗಳು …ಕೋರ್ಟು ಮೆಟ್ಟಿಲುಗಳು ಹತ್ತುವ ಸಂಭವಗಳೇ ಅಧಿಕ. ಆ ಭಯ ಪೈ ಫ್ಯಾಮಿಲಿಗೆ ಇದ್ದೇ ಇದೆ. ಹಾಗಾಗಿ ” ತರಂಗ” ಸಂಪಾದಕನಾಗುವ ಚಾನ್ಸ್ ತಪ್ಪಿದ್ದು ಈ ಹಿನ್ನಲೆ. ಗುಲ್ವಾಡಿ ಪಾಲಿಗೆ ಜಾರಿದ ತುಪ್ಪದ ಕತೆ!

– ರವಿರಾಜ ಅಜ್ರಿ
22.08.2006

          ರವಿರಾಜ ಅಜ್ರಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!