Yuvavahini

SEP 15, 2026 3.56 PM IST

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಉಡುಪಿ ಘಟಕ ಆತಿಥ್ಯದಲ್ಲಿ ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿಯ ಸಹಯೋಗದೊಂದಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಪ್ರಯುಕ್ತ

ಯುವ ಸಿನಿ ದನಿ : ಯುವವಾಹಿನಿ ಕಿರುಚಿತ್ರ ಸ್ಪರ್ಧೆ – 2026

ಯುವವಾಹಿನಿ ಸಂಸ್ಥೆಯು ಯುವ ಪ್ರತಿಭೆಗಳನ್ನು ಗುರುತಿಸಿ, ಅವರಲ್ಲಿರುವ ಸೃಜನಶೀಲತೆ, ಕಥನ, ಅಭಿನಯ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ “ಯುವ ಸಿನಿ ದನಿ” ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯ ನಿಯಮಾವಳಿ

  1. ಸ್ಪರ್ಧೆಯ ಅರ್ಹತೆ : ಈ ಸ್ಪರ್ಧೆಯು ಯುವವಾಹಿನಿಯ 35 ಘಟಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
  2. ನಿರ್ದೇಶನ ಮತ್ತು ಅಭಿನಯ : ಕಿರುಚಿತ್ರದ ನಿರ್ದೇಶಕರು ಹಾಗೂ ಅಭಿನಯಿಸುವ ಎಲ್ಲಾ ಕಲಾವಿದರು ಕಡ್ಡಾಯವಾಗಿ ಯುವವಾಹಿನಿಯ ಅರ್ಹ ಸದಸ್ಯರಾಗಿರಬೇಕು.
    ತಾವು ಸದಸ್ಯತ್ವ ಹೊಂದಿರುವ ಘಟಕದ ಮೂಲಕ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ. ಸ್ಪರ್ಧೆಯ ಪರಿಕಲ್ಪನೆಗೆ ಪೂರಕವಾಗಿ ಮಕ್ಕಳ ಅಗತ್ಯವಿದ್ದಲ್ಲಿ, 0 ರಿಂದ 18 ವರ್ಷದೊಳಗಿನ ಗರಿಷ್ಠ 5 ಮಕ್ಕಳನ್ನು ಮಾತ್ರ ಬಳಸಿಕೊಳ್ಳಬಹುದು. ಆ ಮಕ್ಕಳ ಹೆತ್ತವರು/ಸಹೋದರ/ಸಹೋದರಿ ಯುವವಾಹಿನಿಯ ಅರ್ಹ ಸದಸ್ಯರಾಗಿರಬೇಕು. ಮಕ್ಕಳ ವಯಸ್ಸು 01/11/2026ಕ್ಕೆ ಅನ್ವಯವಾಗುವಂತೆ 18 ವರ್ಷ ಮೀರಿರಬಾರದು.
  3. ತಾಂತ್ರಿಕ ವಿಭಾಗಕ್ಕೆ ವಿನಾಯಿತಿ : ಅಭಿನಯ ಮತ್ತು ನಿರ್ದೇಶನವನ್ನು ಹೊರತುಪಡಿಸಿ, ಛಾಯಾಗ್ರಹಣ, ಸಂಕಲನ, ಸಂಗೀತ, ಹಿನ್ನೆಲೆ ಸಂಗೀತ, ಧ್ವನಿ, ತಾಂತ್ರಿಕ ನಿರ್ವಹಣೆ ಸೇರಿದಂತೆ ಇತರ ತಾಂತ್ರಿಕ ವಿಭಾಗಗಳಲ್ಲಿ ಯುವವಾಹಿನಿಯ ಸದಸ್ಯರಲ್ಲದವರ ಸೇವೆಯನ್ನು ಬಳಸಿಕೊಳ್ಳಬಹುದು, ಅವರೂ ವಯಕ್ತಿಕ ಬಹುಮಾನಕ್ಕೆ ಅರ್ಹರು.
  4. ಘಟಕಕ್ಕೆ ಒಂದು ಕಿರುಚಿತ್ರ : ಪ್ರತಿ ಘಟಕವು ಒಂದು ಕಿರುಚಿತ್ರವನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.
  5. ಕಿರುಚಿತ್ರದ ಅವಧಿ : ಕಿರುಚಿತ್ರದ ಅವಧಿ ಕನಿಷ್ಠ 4 ನಿಮಿಷ ಹಾಗೂ ಗರಿಷ್ಠ 6 ನಿಮಿಷ ಇರಬೇಕು.
  6. ಭಾಷೆ : ಕಿರುಚಿತ್ರವನ್ನು ಕನ್ನಡ ಅಥವಾ ತುಳು ಭಾಷೆಯಲ್ಲಿ ಮಾತ್ರ ತಯಾರಿಸಬೇಕು.
  7. ತೀರ್ಪಿನ ಮಾನದಂಡಗಳು : ತೀರ್ಪುಗಾರರು ಕೆಳಗಿನ ಅಂಶಗಳಿಗೆ ಆದ್ಯತೆ ನೀಡುವರು:
  • ಕಥಾವಸ್ತು ಮತ್ತು ಕಥಾನಿರೂಪಣೆ
  • ಸಾಮಾಜಿಕ ಸಂದೇಶ
  • ನಿರ್ದೇಶನ
  • ಅಭಿನಯ
  • ಛಾಯಾಗ್ರಹಣ
  • ಸಂಕಲನ
  • ಸಂಗೀತ
  • ಸಾಹಿತ್ಯ
  • ಒಟ್ಟಾರೆ ಸೃಜನಶೀಲತೆ ಮತ್ತು ತಾಂತ್ರಿಕ ಗುಣಮಟ್ಟ
  1. ತೀರ್ಪುಗಾರರ ತೀರ್ಮಾನವೇ ಅಂತಿಮ : ಸ್ಪರ್ಧೆಗೆ ಸಂಬಂಧಿಸಿದಂತೆ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಕುರಿತು ಯಾವುದೇ ಆಕ್ಷೇಪಣೆ ಅಥವಾ ಮೇಲ್ಮನವಿಗೆ ಅವಕಾಶ ಇರುವುದಿಲ್ಲ.
  2. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ನಿಷೇಧ : ಸ್ಪರ್ಧೆಯ ಫಲಿತಾಂಶ ಘೋಷಣೆಯಾಗುವವರೆಗೆ ಸ್ಪರ್ಧೆಗೆ ಸಲ್ಲಿಸಿದ ಕಿರುಚಿತ್ರವನ್ನು ಯಾವುದೇ ಸಾಮಾಜಿಕ ಜಾಲತಾಣ ಅಥವಾ ಡಿಜಿಟಲ್ ವೇದಿಕೆಯಲ್ಲಿ ಪ್ರಸಾರ ಮಾಡುವಂತಿಲ್ಲ.
  3. ವಿಷಯಕ್ಕೆ ಸಂಬಂಧಿಸಿದ ನಿಯಮ : ಯಾವುದೇ ವಿಷಯದ ಕುರಿತು ಕಿರುಚಿತ್ರವನ್ನು ತಯಾರಿಸಬಹುದು. ಆದರೆ, ನಿಮ್ಮ ಕಿರುಚಿತ್ರವು ಸಮಾಜಕ್ಕೆ ಅರ್ಥಪೂರ್ಣ ಹಾಗೂ ಉತ್ತಮ ಸಂದೇಶವನ್ನು ತಲುಪಿಸುವಂತಿರಲಿ.

ಕಿರುಚಿತ್ರದಲ್ಲಿ ಯಾವುದೇ ಜಾತಿ/ಧರ್ಮ ನಿಂದನೆ, ವೈಯಕ್ತಿಕ ನಿಂದನೆ ಅಥವಾ ಅವಹೇಳನ, ರಾಜಕೀಯ ಹಾಗೂ ಅಸಭ್ಯ/ಅಶ್ಲೀಲ ವಿಷಯಗಳಿಗೆ ಅವಕಾಶವಿರುವುದಿಲ್ಲ.

  1. ತಾಂತ್ರಿಕ ಗುಣಮಟ್ಟ : ಕಿರುಚಿತ್ರವನ್ನು 1920 × 1080 ಪಿಕ್ಸೆಲ್ (16:9) ಅಳತೆಯಲ್ಲಿ ತಯಾರಿಸಬೇಕು.
  2. ಫೈಲ್ ಮಾದರಿ : ಕಿರುಚಿತ್ರವನ್ನು MP4 ಮಾದರಿಯಲ್ಲಿ ಮಾತ್ರ ಸಲ್ಲಿಸಬೇಕು.
  3. ಅಂತಿಮ ಮುದ್ರಣದ ನಿಯಮ : ಸಲ್ಲಿಸುವ ಅಂತಿಮ ಕಿರುಚಿತ್ರದಲ್ಲಿ ಕಿರುಚಿತ್ರದ ಶೀರ್ಷಿಕೆಯನ್ನು ಹೊರತುಪಡಿಸಿ ಪಾತ್ರವರ್ಗ, ನಿರ್ದೇಶಕರು ಅಥವಾ ತಾಂತ್ರಿಕವರ್ಗದ ಯಾವುದೇ ಹೆಸರುಗಳನ್ನು ನಮೂದಿಸಬಾರದು.
  4. ಪಾತ್ರವರ್ಗ ಮತ್ತು ತಾಂತ್ರಿಕವರ್ಗದ ವಿವರ : ಕಿರುಚಿತ್ರದಲ್ಲಿ ಭಾಗವಹಿಸಿದ ಪಾತ್ರವರ್ಗ, ನಿರ್ದೇಶಕರು ಹಾಗೂ ತಾಂತ್ರಿಕವರ್ಗದ ಸಂಪೂರ್ಣ ವಿವರಗಳನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಕೇಂದ್ರ ಸಮಿತಿಗೆ ಸಲ್ಲಿಸಬೇಕು.
  5. ಅಂತಿಮ ಪ್ರದರ್ಶನಕ್ಕೆ ಆಯ್ಕೆ : ಸಲ್ಲಿಕೆಯಾದ ಕಿರುಚಿತ್ರಗಳಲ್ಲಿ ತೀರ್ಪುಗಾರರ ಆಯ್ಕೆಯಂತೆ ಅತ್ಯುತ್ತಮ 8 ಕಿರುಚಿತ್ರಗಳನ್ನು ಅಂತಿಮ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುವುದು.
  6. ಕಿರುಚಿತ್ರ ಪ್ರದರ್ಶನ : ಆಯ್ಕೆಯಾದ 8 ಕಿರುಚಿತ್ರಗಳನ್ನು ನವೆಂಬರ್ 1, 2026ರಂದು ಉಡುಪಿಯ ಯಕ್ಷಗಾನ ಕಲಾರಂಗದ IYC ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಬೃಹತ್ ಪರದೆಯಲ್ಲಿ ಪ್ರದರ್ಶಿಸಲಾಗುವುದು.
  7. ಪ್ರಶಸ್ತಿ ಪ್ರದಾನ : ಆಯ್ಕೆಯಾದ ಕಿರುಚಿತ್ರಗಳ ವಿಜೇತರಿಗೆ ಅದೇ ಅದ್ಧೂರಿ ವೇದಿಕೆಯಲ್ಲಿ ಸಿನಿ ಅವಾರ್ಡ್ ಶೈಲಿಯಲ್ಲಿ ಪ್ರಶಸ್ತಿ ಹಾಗೂ ಗೌರವ ನೀಡಿ ಸನ್ಮಾನಿಸಲಾಗುವುದು.

ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಗಳು

ಶ್ರೇಷ್ಠ ಕಿರುಚಿತ್ರ – ಪ್ರಥಮ
ಶ್ರೇಷ್ಠ ಕಿರುಚಿತ್ರ – ದ್ವಿತೀಯ
ಶ್ರೇಷ್ಠ ಕಿರುಚಿತ್ರ – ತೃತೀಯ

ಅಗ್ರ ಮೂರು ತಂಡಗಳಿಗೆ ವಿಶೇಷ ನಗದು ಬಹುಮಾನ ಹಾಗೂ ಗೌರವ ನೀಡಲಾಗುವುದು.

ವೈಯಕ್ತಿಕ ಪ್ರಶಸ್ತಿಗಳು

  1. ಶ್ರೇಷ್ಠ ನಿರ್ದೇಶಕ
  2. ಶ್ರೇಷ್ಠ ನಟ
  3. ಶ್ರೇಷ್ಠ ನಟಿ
  4. ಶ್ರೇಷ್ಠ ಪೋಷಕ ನಟ
  5. ಶ್ರೇಷ್ಠ ಪೋಷಕ ನಟಿ
  6. ಶ್ರೇಷ್ಠ ಬಾಲ ನಟ / ಬಾಲ ನಟಿ
  7. ಶ್ರೇಷ್ಠ ಬರಹಗಾರ
  8. ಶ್ರೇಷ್ಠ ಛಾಯಾಗ್ರಹಣ
  9. ಶ್ರೇಷ್ಠ ಸಂಕಲನ
  10. ಶ್ರೇಷ್ಠ ಸಂಗೀತ
  11. ಉತ್ತಮ ಸಂದೇಶಭರಿತ ಕಿರುಚಿತ್ರ

ಹೆಸರು ನೋಂದಾಯಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್ 2026

ಕಿರುಚಿತ್ರ ಸಲ್ಲಿಸಲು ಕೊನೆಯ ದಿನಾಂಕ : 11 ಅಕ್ಟೋಬರ್ 2026

ಕಿರುಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ : 1 ನವೆಂಬರ್ 2026

ಸ್ಥಳ: ಯಕ್ಷಗಾನ ಕಲಾರಂಗದ IYC ಹವಾನಿಯಂತ್ರಿತ ಸಭಾಂಗಣ, ಉಡುಪಿ
ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಎಲ್ಲರೂ ಅದನ್ನು ಗೌರವಿಸಬೇಕು.

📞 ಹೆಚ್ಚಿನ ಮಾಹಿತಿಗಾಗಿ
ಮಹೇಶ್ ಮಲ್ಪೆ : 86606 37172

ನಿಮ್ಮ ಕಥೆ… ನಿಮ್ಮ ದನಿ… ನಿಮ್ಮ ಪ್ರತಿಭೆ…“ಯುವ ಸಿನಿ ದನಿ”

ಯುವವಾಹಿನಿಯ ಯುವ ಪ್ರತಿಭೆಗಳಿಗೆ ಸಿನಿ ಲೋಕದ ಅದ್ಧೂರಿ ವೇದಿಕೆ!

ಪ್ರಧಾನ ಕಾರ್ಯದರ್ಶಿ
ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು

ದಿನಾಂಕ :
ಸ್ಥಳ :

ದಿನಾಂಕ : 2026ನೇ ಸೆಪ್ಟೆಂಬರ್ 6 ಬೆಳಗ್ಗೆ 11 ಗಂಟೆಗೆ
ಸ್ಥಳ : ಮೂಡುಮಾರ್ನಾಡು, ಮೂಡುಬಿದಿರೆ

ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ

ದಿನಾಂಕ :
ಸ್ಥಳ :

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!