
ಅರ್ಹತೆ ಮತ್ತು ಸದಸ್ಯತ್ವ
1) ಇದು ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾದ ಅಂತರ್ ಘಟಕ ಭಜನಾ ಸ್ಪರ್ಧೆಯಾಗಿದೆ.
2) ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರು ನಿಗದಿತ ಅವಧಿಯೊಳಗೆ ವಾರ್ಷಿಕ ಸದಸ್ಯತ್ವ ಪಾವತಿಸಿರುವ ಹಾಗೂ ಕೇಂದ್ರ ಸಮಿತಿಯಿಂದ ಅನುಮೋದನೆಗೊಂಡ ಸದಸ್ಯತ್ವ ಸಂಖ್ಯೆ ಹೊಂದಿರುವ ಅರ್ಹ ಸದಸ್ಯರಾಗಿರಬೇಕು.
3) ಘಟಕದಲ್ಲಿ ಸದಸ್ಯತ್ವ ಶುಲ್ಕ ಪಾವತಿಸಿದ್ದರೂ, ಕೇಂದ್ರ ಸಮಿತಿಯಿಂದ ಸದಸ್ಯತ್ವ ಸಂಖ್ಯೆ ರಚನೆಯಾಗದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
4) ಕೇಂದ್ರ ಸಮಿತಿ ನೀಡಿರುವ ಅರ್ಹ ಸದಸ್ಯರ ಪಟ್ಟಿಯಲ್ಲಿರುವ ಸದಸ್ಯರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸದಸ್ಯರು ತಮ್ಮ ಸದಸ್ಯತ್ವದ ಸ್ಥಿತಿಯನ್ನು samparka.yuvavahini.in ಸಂಪರ್ಕ ಜಾಲತಾಣದಲ್ಲಿ ಮೊಬೈಲ್ ಸಂಖ್ಯೆ ಹಾಗೂ OTP ಮೂಲಕ ಪರಿಶೀಲಿಸಿಕೊಳ್ಳಬಹುದು
5) ಸದಸ್ಯರು ತಾವು ಸದಸ್ಯತ್ವ ಹೊಂದಿರುವ ಘಟಕದ ಮೂಲಕ ಮಾತ್ರ ಸ್ಪರ್ಧಿಸಬೇಕು.
6) ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು.
ತಂಡದ ಸಂರಚನೆ
7) ಪ್ರತಿ ತಂಡದಲ್ಲಿ ಕನಿಷ್ಠ 8 ಹಾಗೂ ಗರಿಷ್ಠ 12 ಸ್ಪರ್ಧಿಗಳಿಗೆ ಅವಕಾಶವಿರುತ್ತದೆ.
8) ಭಜನೆಯನ್ನು ಒಬ್ಬರೇ ಮುನ್ನಡೆಸುವಂತಿಲ್ಲ. ಕನಿಷ್ಠ ಮೂರು ಮಂದಿ ಭಜನೆಗೆ ನೇತೃತ್ವ ವಹಿಸಬೇಕು.
ಭಜನೆಗೆ ಸಂಬಂಧಿಸಿದ ನಿಯಮಗಳು
9) ಭಜನೆಯ ಸಾಹಿತ್ಯದಲ್ಲಿ ಯಾವುದೇ ಲೋಪ ಅಥವಾ ಬದಲಾವಣೆ ಮಾಡಬಾರದು.
10) ಭಜನೆಯನ್ನು ರಿಮಿಕ್ಸ್ ಶೈಲಿಯಲ್ಲಿ ಹಾಡಲು ಅವಕಾಶವಿಲ್ಲ.
11) ಕನ್ನಡ ಹಾಗೂ ತುಳು ಭಾಷೆಯ ಭಜನೆಯನ್ನು ಮಾತ್ರ ಹಾಡಬೇಕು. ಆದರೆ, ಭಜನೆಯು ಭಜನಾ ಸಂಪ್ರದಾಯಕ್ಕೆ ಅನುಗುಣವಾಗಿರಬೇಕು
12) ಸ್ಪರ್ಧೆಯು ಕುಳಿತು ಭಜನೆ ಮಾದರಿಯಲ್ಲಿ ಮಾತ್ರ ನಡೆಯಬೇಕು. ಇತರ ಯಾವುದೇ ರೀತಿಯ ಪ್ರಸ್ತುತಿಗೆ ಅವಕಾಶವಿರುವುದಿಲ್ಲ.
ಸಮಯ ಮತ್ತು ಪ್ರದರ್ಶನ
13) ಪ್ರತಿ ತಂಡಕ್ಕೆ ಗರಿಷ್ಠ 12 ನಿಮಿಷಗಳ ಪ್ರದರ್ಶನ ಸಮಯ ನೀಡಲಾಗುತ್ತದೆ.
14) ನಿಗದಿತ ಸಮಯ ಮೀರಿದಲ್ಲಿ ಅಂಕ ಕಡಿತಗೊಳ್ಳುತ್ತದೆ.
15) ವೇದಿಕೆ ಸಿದ್ಧತೆಗೆ 1 ನಿಮಿಷ ಹಾಗೂ ಪ್ರದರ್ಶನದ ನಂತರ ವೇದಿಕೆ ತೆರವುಗೊಳಿಸಲು 1 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
16) ಸೂಚನಾ ಗಂಟೆ ಬಾರಿಸಿದ ಕ್ಷಣದಿಂದಲೇ ಪ್ರದರ್ಶನದ ಸಮಯ ಆರಂಭವಾಗುತ್ತದೆ.
17) ತಂಡದ ಸದಸ್ಯರು ಪ್ರಸ್ತುತಿಗೆ 10 ನಿಮಿಷಗಳ ಮೊದಲು ವೇದಿಕೆಯ ಎಡಭಾಗದಲ್ಲಿ ಸಿದ್ಧರಾಗಿರಬೇಕು. ಪ್ರದರ್ಶನದ ಬಳಿಕ ವೇದಿಕೆಯ ಬಲಭಾಗದಿಂದಲೇ ನಿರ್ಗಮಿಸಬೇಕು.
ಮೌಲ್ಯಮಾಪನ.
18) ಕೆಳಕಂಡ ಅಂಶಗಳ ಆಧಾರದ ಮೇಲೆ ಅಂಕ ನೀಡಲಾಗುವುದು:
- ರಾಗ
- ತಾಳ
- ಹೊಂದಾಣಿಕೆ
- ಪ್ರಸ್ತುತಿ
- ಭಜನೆಯ ಆರಂಭ ಮತ್ತು ಅಂತ್ಯ
- ಭಜನೆಯ ಆಯ್ಕೆ
- ಸಮವಸ್ತ್ರ
- ಒಟ್ಟು ಪರಿಣಾಮ
ಸಂಗೀತ ಉಪಕರಣಗಳು
19) ಅಗತ್ಯವಿರುವ ಸ್ಪರ್ಧಾ ತಂಡಗಳಿಗೆ ಹಾರ್ಮೋನಿಯಂ ಹಾಗೂ ತಬಲಾ ವಾದ್ಯಗಳನ್ನು ಸಂಘಟಕರು ಒದಗಿಸುತ್ತಾರೆ.
20) ಸ್ಪರ್ಧಾ ತಂಡದಲ್ಲಿ ಹಾರ್ಮೋನಿಯಂ ಹಾಗೂ ತಬಲಾ ವಾದನ ಕಡ್ಡಾಯವಲ್ಲ, ಇದನ್ನು ನಿರ್ವಹಿಸಲು ಅರ್ಹ ಸ್ಪರ್ಧಿಗಳು ಇಲ್ಲದಿದ್ದಲ್ಲಿ ಯಾವುದೇ ಅಂಕ ಕಡಿತವಾಗುವುದಿಲ್ಲ
21) ಪ್ರದರ್ಶನದ ವೇಳೆ ಸಂಘಟಕರಿಂದ ಒದಗಿಸಲಾದ ಧ್ವನಿ ವ್ಯವಸ್ಥೆ ಅಥವಾ ವಾದ್ಯೋಪಕರಣಗಳಲ್ಲಿ ತಾಂತ್ರಿಕ ದೋಷ ಉಂಟಾದಲ್ಲಿ, ಅದಕ್ಕಾಗಿ ಸ್ಪರ್ಧಾ ತಂಡದ ಅಂಕಗಳನ್ನು ಯಾವುದೇ ರೀತಿಯಲ್ಲಿ ಕಡಿತಗೊಳಿಸಲಾಗುವುದಿಲ್ಲ.
ಶಿಸ್ತು ಮತ್ತು ಸಮಯಪಾಲನೆ
22) ಘಟಕಗಳಿಗೆ ನಿಗದಿಪಡಿಸಿದ ವೇಳೆಯಲ್ಲಿಯೇ ಸ್ಪರ್ಧೆ ನೀಡಬೇಕು.
23) ಯಾವುದೇ ಕಾರಣಕ್ಕೂ ಸಮಯ ಬದಲಾವಣೆಗೆ ಅವಕಾಶ ಇರುವುದಿಲ್ಲ.
24) ನಿಗದಿತ ಸಮಯಕ್ಕೆ ತಂಡ ಹಾಜರಾಗದಿದ್ದಲ್ಲಿ ತಂಡವನ್ನು ಅನರ್ಹಗೊಳಿಸಲಾಗುವುದು.
25) ಬೆಳಿಗ್ಗೆ ನಿಗದಿಪಡಿಸಿದ ಸಮಯದಲ್ಲಿಯೇ ಸ್ಪರ್ಧೆ ಆರಂಭವಾಗುತ್ತದೆ (ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಸಹ).
26) ಪ್ರದರ್ಶನದ ದಿನ ನೋಂದಣಿ ಕೌಂಟರ್ನಲ್ಲಿ ಐಡಿ ಪರಿಶೀಲನೆ ಹಾಗೂ ಗುಂಪು ಛಾಯಾಚಿತ್ರದ ಬಳಿಕ ಮಾತ್ರ ಗ್ರೀನ್ ರೂಮ್ ಪ್ರವೇಶಕ್ಕೆ ಅವಕಾಶ.
27) ಪ್ರಸ್ತುತಿಯ ವೇಳೆ ಯುವವಾಹಿನಿ ಐಡಿ ಧರಿಸುವುದು ಕಡ್ಡಾಯವಲ್ಲ.
28) ಭಜನಾ ಸಂಪ್ರದಾಯಕ್ಕೆ ಚ್ಯುತಿ ತರುವ ಯಾವುದೇ ಪ್ರಸ್ತುತಿಗೆ ಅವಕಾಶವಿಲ್ಲ.
ನೋಂದಣಿ
29) ಘಟಕಗಳ ಹೆಸರು ನೋಂದಣಿಗೆ ಕೊನೆಯ ದಿನಾಂಕ: 24-07-2026.
30) ನಿಗದಿತ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಘಟಕಗಳ ಹೆಸರುಗಳನ್ನು ಸ್ವೀಕರಿಸಲಾಗುವುದಿಲ್ಲ.
31) ಎಲ್ಲಾ ಘಟಕಗಳು ಕೇಂದ್ರ ಸಮಿತಿ ನೀಡುವ ಮಾದರಿಯಲ್ಲಿ ಸದಸ್ಯತ್ವ ಸಂಖ್ಯೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಸಂಚಾಲಕರಲ್ಲಿ ನೀಡಬೇಕು.
32) ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿರುವುದು ಪತ್ತೆಯಾದಲ್ಲಿ, ಅಂತಹ ತಂಡವನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ ಅನರ್ಹಗೊಳಿಸಲಾಗುವುದು.
33) ಸ್ಪರ್ಧೆಯ ಕ್ರಮಾoಕವನ್ನು ಸ್ಪರ್ಧಿಸುವ ಘಟಕಗಳ ಪ್ರಯಾಣದ ಅಂತರವನ್ನು ಅಧರಿಸಿ (ಬೆಳಗ್ಗೆ ಹಾಗೂ ಮದ್ಯಾಹ್ನದ ನಂತರ ) ಪ್ರತ್ಯೇಕವಾಗಿಸಿ, ಮುಂಚಿತವಾಗಿ ತಿಳಿಸಲಾಗುವುದು.
ವಿಶೇಷ ಪುರಸ್ಕಾರ
34) ಸಮಾರಂಭದ ದಿನ ಶಿಸ್ತು, ಸಮಯಪಾಲನೆ ಹಾಗೂ ಉತ್ತಮ ಸಂಘಟನೆಯೊಂದಿಗೆ ಭಾಗವಹಿಸಿದ ಘಟಕಕ್ಕೆ ವಿಶೇಷ ಪುರಸ್ಕಾರ ನೀಡಲಾಗುವುದು. ಈ ಕುರಿತು ಕೇಂದ್ರ ಸಮಿತಿಯ ತಂಡ ಗೌಪ್ಯವಾಗಿ ದಿನವಿಡೀ ಮೌಲ್ಯಮಾಪನ ನಡೆಸುತ್ತದೆ.
ಅಂತಿಮ ನಿಯಮಗಳು
35) ಸ್ಪರ್ಧೆಯ ಸುಸೂತ್ರ ನಿರ್ವಹಣೆಗೆ ರಚಿಸಲಾದ ಕೇಂದ್ರ ಸಮಿತಿಯ ನಿರ್ವಹಣಾ ಸಮಿತಿಯ ಸೂಚನೆಗಳನ್ನು ಎಲ್ಲ ಘಟಕಗಳು ಕಡ್ಡಾಯವಾಗಿ ಪಾಲಿಸಬೇಕು.
36) ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ. ಎಲ್ಲರೂ ಅದನ್ನು ಗೌರವಿಸಬೇಕು.
37) ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸಮಿತಿಯನ್ನು ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ : ರಂಜನ್ ಕೆ ಕೋಟ್ಯಾನ್ : 7019820933
ಮನವಿ
ನಿಯಮಗಳನ್ನು ಪಾಲಿಸುವ ಮೂಲಕ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಪ್ರೀತಿಯ ಆತಿಥ್ಯವನ್ನು ಸ್ವೀಕರಿಸಿ, ಸ್ಪರ್ಧೆಯ ಯುವವಾಹಿನಿ ಜೊತೆ
ಎಲ್ಲರೂ ಕೈಜೋಡಿಸಬೇಕೆಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕಳಕಳಿಯ ಮನವಿ.
✍️ ಪ್ರಧಾನ ಕಾರ್ಯದರ್ಶಿ



