ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ಮಾನವೀಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿ, ಕಾರ್ಕಳ ತಾಲೂಕು ಏರ್ಲಪಾಡಿ ಗ್ರಾಮದ ಚೈತ್ರ–ಸಂತೋಷ್ ದಂಪತಿಗಳ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ರೂ. 20,000 ಧನಸಹಾಯವನ್ನು ನೀಡಲಾಯಿತು. ಮಗುವಿಗೆ ಶ್ರವಣ ಯಂತ್ರ ಅಳವಡಿಕೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಗಾಗಿ ಈ ನೆರವು ಒದಗಿಸಲಾಗಿದ್ದು, ದಿನಾಂಕ 10/02/2026 ರಂದು ಘಟಕದ ಪದಾಧಿಕಾರಿಗಳು ಮಗುವಿನ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಧನಸಹಾಯವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ರಾಕೇಶ್ ಅಮೀನ್ ಹಾಗೂ ಘಟಕದ ಇತರ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದು, ಕುಟುಂಬಕ್ಕೆ ಧೈರ್ಯ ತುಂಬಿ ಮಗುವಿನ ಶೀಘ್ರ ಚೇತರಿಕೆಗೆ ಹಾರೈಸಿದರು. ಸಮಾಜಮುಖಿ ಸೇವೆಯ ಭಾಗವಾಗಿ ನೀಡಿದ ಈ ಸಹಾಯ ಕುಟುಂಬಕ್ಕೆ ಆಧಾರವಾಗಿದ್ದು, ಘಟಕದ ಮಾನವೀಯತೆ ಮತ್ತು ಕಾಳಜಿಯ ಪ್ರತಿಬಿಂಬವಾಗಿ ಪರಿಣಮಿಸಿತು.


