ಉಪ್ಪಿನಂಗಡಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ನಕ್ಷತ್ರ ಶತಭಿಷ ದಿನವಾದ 22.01.2026ರ ಗುರುವಾರದಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ ಹಾಗೂ ಬಜತ್ತೂರು ಬಿಲ್ಲವ ಗ್ರಾಮ ಸಮಿತಿಯ ಸಂಯುಕ್ತ ಆಶ್ರಯದಲ್ಲಿ “ಗುರು ಸ್ಮರಣೆ – 2026” ಭಜನಾ–ಸಂಕೀರ್ತನಾ ಕಾರ್ಯಕ್ರಮ ನಡೆಯಿತು

ಭಜನಾ ಸಂಕೀರ್ತನೆಯಲ್ಲಿ ಘಟಕದ ಸದಸ್ಯರು ಹಾಗೂ ಗ್ರಾಮ ಸಮಿತಿಯ ಸದಸ್ಯರು ಸೇರಿದಂತೆ ಒಟ್ಟು 65 ಮಂದಿ ಭಕ್ತಿಯಿಂದ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಗುರು ಮಂದಿರದ ಸಂಚಾಲಕರಾದ ಅಶೋಕ್ ಕುಮಾರ್ ಪಡ್ಪು, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರು ಹಾಗೂ ಘಟಕದ ಗೌರವ ಸಲಹೆಗಾರರಾದ ವರದರಾಜ್ ಎಂ., ಗುರು ಮಂದಿರದ ಸದಸ್ಯರಾದ ಮಾಧವ ಸಾಲ್ಯಾನ್ ಮುಂಡೂರು, ಮೋಹನ್ ತೆಂಕಿಲ, ಮಾಜಿ ಕಾರ್ಯನಿರ್ವಹಣಾಧಿಕಾರಿ ಉದಯ ಕೋಲಾಡಿ, ಘಟಕದ ಮಾಜಿ ಅಧ್ಯಕ್ಷರುಗಳಾದ ರವೀಂದ್ರ ದಲ್ಕಾಜೆ, ಕೃಷ್ಣಪ್ಪ ಪೂಜಾರಿ, ಕುಶಾಲಪ್ಪ ಹತ್ತುಕಳಸೆ, ಡಾ. ಆಶಿತ್ ಎಂ.ವಿ., ಚಂದ್ರಶೇಖರ್ ಕೆ., ಸನಿಲ್ ಸೋಮಸುಂದರ್ ಕೊಡಿಪ್ಪಾನ, ನಾಣ್ಯಪ್ಪ ಕೋಟ್ಯಾನ್ ಹಾಗೂ ಘಟಕದ ಉಪಾಧ್ಯಕ್ಷರುಗಳಾದ ಅಂಕಿತ್ ಎಂ.ಜೆ., ಲಕ್ಷ್ಮೀಶ ನಿಡ್ಡೆಂಕಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಜತ್ತೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಸೋಮಸುಂದರ್ ಅವರು ಎಲ್ಲರನ್ನು ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ರಮೇಶ್ ಸಾಂತ್ಯ ಅವರು ವಂದಿಸಿದರು.


