ಯುವ ಸಮುದಾಯ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು” .. ನ್ಯಾಯವಾದಿ ಸಂತೋಷ್ ಕುಮಾರ್.
ಯುವಕರು ಸಮಾಜದ ಸಮಸ್ಯೆ, ನೋವುಗಳಿಗೆ ಸ್ಪಂದಿಸುವ ಹಾಗೂ ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಆವರ ಮೂಲಕ ಸಂಘಟನೆಗಳ ಉದ್ದೇಶ ಸಾರ್ಥಕವಾಗಬಲ್ಲುದು. ಯುವವಾಹಿನಿ ಸಂಘಟನೆ ತನ್ನ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿರುವುದು ಅಭಿನಂದನಾರ್ಹ ಎಂದು ಉಪ್ಪಿನಂಗಡಿಯ ಖ್ಯಾತ ನ್ಯಾಯವಾದಿ ಶ್ರೀ ಸಂತೋಷ್ ಕುಮಾರ್ ತಿಳಿಸಿದರು.
ಅವರು ದಿ.22.11.25 ರಂದು ಬೆಳ್ಳಿಪ್ಪಾಡಿ ಶ್ರೀ ಚಂದ್ರಶೇಖರ ಕೆ ಸನಿಲ್ ರವರ ಮನೆ “ಯಮುನಾ” ದಲ್ಲಿ ನಡೆದ ಘಟಕದ ಮಹಾಸಭೆ ಮತ್ತು ಯುವ ಬಾಂಧವ್ಯ 2025ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.
ಯುವವಾಹಿನಿ ಸಂಘಟನೆ ಎಲ್ಲಾ ಸಮುದಾಯಗಳ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಪಾಲಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಹಿರೆಬಂಡಾಡಿ ಅಂಚೆ ಸಹಾಯಕರಾದ ಹರೀಶ್ ಪಾಲೆತ್ತಡಿ ಸಂಘಟನೆಯೆಂಬುದು ನಿರಂತರವಾದ ವ್ಯವಸ್ಥೆ, ಅದನ್ನು ಮುನ್ನಡೆಸುವ ಸಾಮರ್ಥ್ಯವನ್ನು ಸದಸ್ಯರು ತೋರಿಸಬೇಕು ಎಂದು ತಿಳಿಸಿದರು.
ಘಟಕದ ಗೌರವ ಸಲಹೆಗಾರರು ಶ್ರೀ ವರದರಾಜ್ ಎಂ ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ನಾಣ್ಯಪ್ಪ ಕೋಟ್ಯಾನ್ ವಹಿಸಿದ್ದರು.
ಚುನಾವಣಾಧಿಕಾರಿ ಶ್ರೀ ಸೋಮಸುಂದರ್ ನೂತನ ಕಾರ್ಯಕಾರಿ ಸದಸ್ಯರ ಪಟ್ಟಿ ಪ್ರಕಟಿಸಿದರು.
ಬೆಳ್ಳಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀ ವಸಂತ ಕುಂಡಾಪು ಶುಭ ಹಾರೈಸಿದರು.
ಆತಿಥ್ಯ ವಹಿಸಿದ ಶ್ರೀ ಚಂದ್ರಶೇಖರ ಕೆ ಸನಿಲ್ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಬೇಬಿ ಸಾನಿಧ್ಯ ಪ್ರಾರ್ಥಿಸಿದರು.
ಅಧ್ಯಕ್ಷರು ಸ್ವಾಗತಿಸಿದರು, ನಿರ್ದೇಶಕ ರಾಜೀವ ಇಪ್ಪನೋಟ್ಟು ಧನ್ಯವಾದ ಅರ್ಪಿಸಿದರು.ನಿರ್ದೇಶಕ ರಮೇಶ್ ಸಾಂತ್ಯ ನಿರೂಪಿಸಿದರು.


