ದಿನಾಂಕ 20/11/2025 ಶಿಕ್ಷಣ ಮತ್ತು ಸರಳತೆ ನಾರಾಯಣಗುರುಗಳ ಸಮಾಜ ಸುಧಾರಣೆಯ ದ್ವಿಮಂತ್ರ : ಸಂದೀಪ್ ಸಾಲ್ಯಾನ್
ನಾರಾಯಣಗುರುಗಳು ಧಾರ್ಮಿಕತೆಯ ನಿಜವಾದ ಅರ್ಥವನ್ನು ಸಮಾಜಮುಖಿ ಪರಿವರ್ತನೆಯೊಡನೆ ಜೋಡಿಸಿ ನೋಡಿದ ಮಹಾತ್ಮರು. ಧಾರ್ಮಿಕ ತಳಹದಿಯಲ್ಲಿ ಸಮಾಜ ಸುಧಾರಣೆ ಸಾಧ್ಯವೆಂದು ದೃಢವಾಗಿ ನಂಬಿದ ಅವರು, ದೇವಸ್ಥಾನಗಳನ್ನು ಕೇವಲ ಪೂಜಾ ಸ್ಥಳಗಳೆನ್ನದೆ, ಜನರ ಆತ್ಮೋದ್ಧಾರಕ್ಕೆ ದಾರಿಯಾಡಿಸುವ ಪವಿತ್ರ ಕೇಂದ್ರಗಳಾಗಿ ರೂಪಿಸುವ ಕನಸನ್ನು ಕಂಡರು. ದೇವಸ್ಥಾನಗಳು ಅಧ್ಯಯನ, ಜ್ಞಾನಾರ್ಜನೆ ಮತ್ತು ಮೌಲ್ಯಬೆಳೆಸುವ ಸಂಸ್ಕೃತಿಕ ವೇದಿಕೆಗಳಾಗಬೇಕು ಎಂಬುದು ಗುರುಗಳ ಮಹದ್ಭಾವನೆ.
ಉತ್ತಮ ಶಿಕ್ಷಣ ಪಡೆದವರು ಮಾತ್ರ ವೈಚಾರಿಕವಾಗಿ ಚಿಂತನೆ ಮಾಡುವ ಸಾಮರ್ಥ್ಯ ಹೊಂದುತ್ತಾರೆ’ ಎಂಬ ನಂಬಿಕೆಯೊಂದಿಗೆ ನಾರಾಯಣಗುರುಗಳು ಶಿಕ್ಷಣಕ್ಕೆ ಅಪಾರ ಮಹತ್ವ ನೀಡಿದರು. ಆ ಕಾಲದಲ್ಲಿ ಸಮಾಜವು ಎದುರಿಸುತ್ತಿದ್ದ ಅನ್ಯಾಯ, ಅಂಧಶ್ರದ್ಧೆ ಮತ್ತು ಅಸಮಾನತೆಗಳಿಗೆ ಶಿಕ್ಷಣವೇ ಶಾಶ್ವತ ಪರಿಹಾರ ಎಂದು ಅವರು ಆಳವಾಗಿ ಅರಿತಿದ್ದರು. ಸರಳ ಮತ್ತು ಸಾತ್ವಿಕ ಜೀವನವೇ ವ್ಯಕ್ತಿತ್ವದ ನಿಜವಾದ ಅಲಂಕಾರ ಎಂದು ನಾವು ನಾರಾಯಣಗುರುಗಳು ಸಾರಿದರು ಎಂದು ತರಬೇತುದಾರ, ಪತ್ರಕರ್ತ ಸಂದೀಪ್ ಸಾಲ್ಯಾನ್ ತಿಳಿಸಿದರು.
ಅವರು ಘಟಕದ ಆಶ್ರಯದಲ್ಲಿ ಅಮ್ಟೂರ್ ಕಿಶೋರ್ ಕಟ್ಟೆಮಾರ್ ನಿವಾಸದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 60ರಲ್ಲಿ ಗುರುಸಂದೇಶ ನೀಡಿದರು.
ಸಭಾ ಕಾರ್ಯಕ್ರಮದ ಮೊದಲು ಯುವವಾಹಿನಿ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು
ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೆಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅದ್ಯಕ್ಷರು ಪದಾಧಿಕಾರಿಗಳು,ಸಂಘಟನಾ ಕಾರ್ಯದರ್ಶಿಗಳು ನಿರ್ಧೇಶಕರು ಹಾಗು ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು…
ಸಂಗೀತದಲ್ಲಿ ವಿನಯ್ ಆಚಾರ್ಯ
ಸಾತ್ವಿಕ್ ದೇರಾಜೆ, ಸಹಕರಿಸಿದರು
ಘಟಕದ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು.


