ಯುವವಾಹಿನಿ (ರಿ.) ಬೆಂಗಳೂರು ಘಟಕದ 41 ಮಂದಿ ಸದಸ್ಯರು ತಮ್ಮ ಜೀವನದ ಮೊದಲ ಶಿವಗಿರಿ ತೀರ್ಥಯಾತ್ರೆಯನ್ನು 31 ಅಕ್ಟೋಬರ್ 2025 ರಂದು ಮೆಜಸ್ಟಿಕ್ ರೈಲು ನಿಲ್ದಾಣ ದಿಂದ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾದ ಸಂತೋಷ್ ಪಣಪಿಲ ಇವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದರು.
ಗುರುಗಳ ಕೃಪೆಯಿಂದಲೇ ಈ ಯಾತ್ರೆ ಸಾಧ್ಯವಾಯಿತು
ನವೆಂಬರ್ 1, ಶನಿವಾರದ ಬೆಳಿಗ್ಗೆ ತಂಡ ಶಿವಗಿರಿ ತಲುಪಿತು. ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ನಮ್ಮ ತಂಡಕ್ಕೆ ಆಶೀರ್ವಾದ ನೀಡಿ, ಎಲ್ಲ ವ್ಯವಸ್ಥೆಗಳನ್ನು ಸುಗಮವಾಗಿ ನಡೆಸಿಕೊಟ್ಟರು.
ತಂಡವು ಮೊದಲು ಶ್ರೀ ಗಾಯತ್ರಿ ದೇವಾಲಯ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ಸ್ಥಳಕ್ಕೆ ಭೇಟಿ ನೀಡಿತು. ಉಪಹಾರವಾದ ನಂತರ ತಂಡ ಕನ್ಯಾಕುಮಾರಿ ಗೆ ಪ್ರಯಾಣಿಸಿ, ಅಲ್ಲಿ ವಿವೇಕಾನಂದ ಸ್ಮಾರಕ, ತಿರುಳ್ಳುವರ್ “Statue of Wisdom”, ಹಾಗೂ ಗ್ಲಾಸ್ ಬ್ರಿಡ್ಜ್ ಮೂಲಕದ ಪ್ರವಾಸವನ್ನು ಆನಂದಿಸಿತು. ಅಲ್ಲಿ ಕಡಲತೀರದ ಸೂರ್ಯಾಸ್ತದ ಸೌಂದರ್ಯವನ್ನು ಕಣ್ತುಂಬಿಕೊಂಡು, ಮೂಗುತಿ ಸುಂದರಿ ಶ್ರೀ ಕನ್ಯಾಕುಮಾರಿ ದೇವಿ ಯ ಆಶೀರ್ವಾದ ಪಡೆದರು. ನಂತರ ತಂಡ ಮರುತಮಲೈ ನಾರಾಯಣ ಗುರು ಆಶ್ರಮ ಕ್ಕೆ ತೆರಳಿ, ಭೋಜನದ ನಂತರ ಶ್ರೀ ಸತ್ಯಾನಂದ ಸ್ವಾಮೀಜಿ ಯವರ ಆಶೀರ್ವಾದ ಪಡೆದರು ಹಾಗೂ ಆಶ್ರಮದಲ್ಲೇ ವಾಸ್ತವ್ಯ ಮಾಡಿದರು.
ಮುಂದಿನ ದಿನ ಭಾನುವಾರ, 2 ನವೆಂಬರ್ 2025, ಬೆಳಿಗ್ಗೆ 5 ಗಂಟೆಗೆ ತಂಡ ಆಶ್ರಮದಲ್ಲಿ ಧ್ಯಾನ ಹಾಗೂ ಪ್ರಾರ್ಥನೆಗಳಲ್ಲಿ ಭಾಗವಹಿಸಿತು. ನಂತರ ಮರುತಮಲೈ ಪಾದದ ಶ್ರೀ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು, ತಂಡ ತಿರುವನಂತಪುರಂ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದತ್ತ ಪ್ರಯಾಣಿಸಿತು. ಅಲ್ಲಿ ದೇವರ ದರ್ಶನ ಪಡೆದ ನಂತರ ಪ್ರಸಾದ ಊಟ ಮಾಡಿ, ನಂತರ ಚೆಂಬಲತೀ (ಗುರುವಿನ ಜನ್ಮಸ್ಥಳ) ಗೆ ತೆರಳಿ, ನಾರಾಯಣ ಗುರುಗಳ ಬಾಲ್ಯದ ಮನೆಯನ್ನು ನೋಡಿದರು. ಆ ಸ್ಥಳದ ಪವಿತ್ರತೆ ಮತ್ತು ಶಾಂತ ವಾತಾವರಣ ಎಲ್ಲರಿಗೂ ಆಧ್ಯಾತ್ಮಿಕ ಅನುಭವ ನೀಡಿತು.
ಅನಂತರ ತಂಡ ಕುಚುವೇಲಿ ರೈಲು ನಿಲ್ದಾಣದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.
ಎಲ್ಲ ಸದಸ್ಯರು ಈ ಯಾತ್ರೆಯನ್ನು ಅಮೂಲ್ಯ ಹಾಗೂ ಆಧ್ಯಾತ್ಮಿಕವಾಗಿ ಉನ್ನತ ಅನುಭವ ಎಂದು ವಿವರಿಸಿದರು.
. ಈ ಯಾತ್ರೆಯನ್ನು ಆಯೋಜಿಸಿದ ಘಟಕದ ಶ್ರೀ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ರಾದ ಧನ್ಯಶ್ರೀ ಮತ್ತು ಪುನೀತ್ ಇವರನ್ನು ಅಭಿನಂದಿಸಲಾಯಿತು.
ಸ್ಥಾಪಕಾಧ್ಯಕ್ಷರಾದ ಶ್ರೀ ಸುಧೀರ್ ಪೂಜಾರಿ, ಮಾಜಿ ಅಧ್ಯಕ್ಷರಾದ ಶ್ರೀ ಶ್ರೀಧರ ಡಿ. , ಮಾಜಿ ಗೌರವ ಸಲಹೆಗಾರರಾದ ಶ್ರೀ ರಘು ಮಟ್ಟು ಹಾಗೂ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಅನಿತಾ ಕಮಲಾಕ್ಷ , ವಿದ್ಯಾನಿಧಿ ನಿರ್ದೇಶಕರಾದ ಶ್ರುತಿ ಇವರೆಲ್ಲರೂ ಸಂಪೂರ್ಣ ಸಹಕಾರ ನೀಡಿದರು.


