ಘಟಕದ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 21/09/2025 ಆದಿತ್ಯವಾರ ನಾರಾಯಣ ಗುರು ಸಭಾಗೃಹ ಕುಳಾಯಿ ಇಲ್ಲಿ ನಡೆಯಿತು. ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ ಇದರ ಅಧ್ಯಕ್ಷರಾದ ಶ್ರೀಯುತ ಕೇಶವ ಸುವರ್ಣರವರು ಮಾತನಾಡಿ ಶ್ರೀ ಗುರುಗಳ ಜೀವನ ಸಾಮರಸ್ಯದ ಬಗೆಗೆ ವಿವರಿಸಿದರು. ಶ್ರೀಮತಿ ಶೃತಿ ಅಮೀನ್. ಕೆ ಇವರು ಗುರುಸಂದೇಶ ನೀಡುವುದರ ಮೂಲಕ ಗುರುವರ್ಯರ
ಜೀವನದ ವಾಸ್ತವಿಕ ಘಟನೆಗಳು ಹಾಗೂ ನಮ್ಮ ಜೀವನದಲ್ಲಿ ಆಧುನಿಕತೆಯ ಗಾಳಿ ಯಾವ ರೀತಿ ಮಡುಗಟ್ಟಿದೆ, ಆಧುನಿಕತೆಯಿಂದ ದೈವೀಕತೆಗೆ ಮಕ್ಕಳ ಜೀವನ ಯಾವ ರೀತಿ ಬದಲಿಸಬಹುದು ಎಂಬುವುದನ್ನು ಮನ ಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಉತ್ತಮ ಶ್ರೇಣಿಯನ್ನು ಪಡೆದ ಅರ್ಹ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಹಾಗೂ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವನ್ನು ನೀಡಲಾಯಿತು. ನಂತರ ಸುರತ್ಕಲ್ ನ ಹೆಸರಾಂತ ಆಯುರ್ವೇದ ವೈದ್ಯರು ಡಾ. ಸದಾಶಿವ ಸುರತ್ಕಲ್ ಇವರನ್ನು ಸನ್ಮಾನಿಸಲಾಯಿತು. ಡಾಕ್ಟರೇಟ್ ಪದವಿಯನ್ನು ಪಡೆದ ಶ್ರೀಮತಿ ಭಾರತಿ ನಿರಂಜನ್ ಉಪನ್ಯಾಸಕರು ಗೋವಿಂದ ದಾಸ ಕಾಲೇಜ್ ಸುರತ್ಕಲ್ ಇವರನ್ನು ಹಾಗೂ ವೈಟ್ ಲಿಫ್ಟಿಂಗ್ ನಲ್ಲಿ ಸಿದ್ಧಾರ್ಥ್ ಸಾಧನೆಗೈದ ವರಾಗಿದ್ದು ಇವರನ್ನು ಅಭಿನಂದಿಸಲಾಯಿತು. ಜೊತೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಕೊಂಡ ವಿದ್ಯಾರ್ಥಿ ವಿಕ್ರ೦ ನಾಯಕ್ ಇವರನ್ನೂ ಅಭಿನಂದಿಸಲಾಯಿತು.
ಗುರುಸ್ಮರಣೆ ಕಾರ್ಯಕ್ರಮ ದ ಅಂಗವಾಗಿ ವಿದ್ಯಾರ್ಥಿ ಗಳಿಗೆ ಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ ಎಂಬ ವಿಷಯದಲ್ಲಿ online ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಷಣ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ – ಗೌತಮಿ ಅರುಣ್ ಭಟ್
ದ್ವಿತೀಯ ಬಹುಮಾನ – ಕಾರುಣ್ಯ ಏನ್.
ತೃತೀಯ ಬಹುಮಾನ – ಆರುಷ್ ಅರ್ ಸನಿಲ್ ಪಡೆದುಕೊಂಡರು. ಹಾಗೆಯೇ ಕಾರ್ಯಕ್ರಮ ದ ಮೊದಲಿಗೆ ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ಮಾತನಾಡಿ ತನ್ನ ಅಧಿಕಾವಧಿಯಲ್ಲಿ ನಡೆಸಲಾಗುವ ಶಿವಗಿರಿ ಯಾತ್ರೆ ಹಾಗೂ ಕುಣಿತ ಭಜನಾ ಸ್ಪರ್ಧೆಯ ಬಗೆಗೆ ಮಾಹಿತಿ ನೀಡಿದರು. ಅದೇ ರೀತಿ ಕೇಂದ್ರ ಸಮಿತಿಯ ಸ್ಂಘಟನಾ ಕಾರ್ಯದರ್ಶಿ ಶ್ರೀಮತಿ ಶುಭ ರಾಜೇಂದ್ರ ಇವರು ಮಾತನಾಡಿ ನಾರಾಯಣ ಗುರುಗಳ ತತ್ವಾದರ್ಶ ಪಾಲನೆಯ ಬಗೆಗೆ ಒಂದಷ್ಟು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶ್ರೀ ಹರೀಶ್ ಮುಂಚೂರು , ಉದ್ಯಮಿ ಹಾಗೂ ಶ್ರೀ ನವೀನ್ ಕುಮಾರ್ ಸುರತ್ಕಲ್ ಮ್ಯಾನೇಜರ್ ಜೆ.ಸಿ.ಬಿ ಮಂಗಳೂರು ಇವರು ಉಪಸ್ಥಿತರಿದ್ದು ಅಧ್ಯಕ್ಷ ಸ್ಥಾನವನ್ನು ಶ್ರೀಮತಿ ವಾಣಿ ಗಣೇಶ್ ಇವರು ವಹಿಸಿದ್ದರು. ಕಾರ್ಯದರ್ಶಿ ಶ್ರೀ ದಿವಿತ್ ಕುಮಾರ್,ಕಾರ್ಯಕ್ರಮ ಸಂಚಾಲಕರಾದ ಶ್ರೀಮತಿ ತಾರಾ ಅಶೋಕ್ ಉಪಸ್ಥಿತರಿದ್ದರು.
ಕಾರ್ಯಕ್ರಮ ದ ಮೊದಲಿಗೆ ಡಿ.ಟ್ರಿಕ್ಸ್ ಡಾನ್ಸ್ ಅಕಾಡೆಮಿ ಸುರತ್ಕಲ್ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಘಟಕದ ಸದಸ್ಯರು ಶ್ರೀಯುತ ಸುಶಾಂತ್ ಪೂಜಾರಿ ಇವರ ನಿರ್ದೇಶಕತ್ವದಲ್ಲಿ ಜಾನಪದ ನೃತ್ಯ ಪ್ರದರ್ಶಿಸಿದರು.
ಸಭಾ ಕಾರ್ಯಕ್ರಮ ದ ಮೊದಲಿಗೆ ಶ್ರೀ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಆರಂಬಿಸಲಾಯಿತು. ಕುಮಾರಿ ಆದ್ಯ ಇವರು ಪ್ರಾರ್ಧಿಸಿದರು.ಘಟಕದ ಅಧ್ಯಕ್ಷರಾದ ಶ್ರೀಮತಿ ವಾಣಿ ಗಣೇಶ್ ಸ್ವಾಗತಿಸಿದರು. ಶ್ರೀಮತಿ ತಾರಾ ಅಶೋಕ್ ವಂದಿಸಿದರು ಯೊಗೀಶ್ ಸನಿಲ್ ಕುಳಾಯಿ, ಶ್ರೀಯುತ ಸತೀಶ್ ಕೋಟ್ಯಾನ್, ಶ್ರೀಮತಿ ಗಾಯತ್ರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.


