ದಿನಾಂಕ: 15 ಸೆಪ್ಟೆಂಬರ್ 2025, ಭಾನುವಾರ ಮಧ್ಯಾಹ್ನ
ಸ್ಥಳ: ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಪದ್ಮನಾಭನಗರ
ಕಾರ್ಯಕ್ರಮವು ಸದಸ್ಯರಿಗಾಗಿ ಫಿಟ್ನೆಸ್ ಆಟಗಳು (ಫ್ಲ್ಯಾಂಕ್ ಚಾಲೆಂಜ್ ಮುಂತಾದವು)ಗಳಿಂದ ಪ್ರಾರಂಭವಾಯಿತು. ಬಳಿಕ, ಸ್ಪರ್ಶ್ ಆಸ್ಪತ್ರೆಯ ಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಬಸವರಾಜ್ ಹಗರಗಿ ಅವರು ಹೃದಯದ ಆರೋಗ್ಯ ಕುರಿತಾದ ಪ್ರೇರಣಾದಾಯಕ ಹಾಗೂ ಜ್ಞಾನಮಯ ಉಪನ್ಯಾಸವನ್ನು ನೀಡಿದರು.
ಡಾ ಬಸವರಾಜ್ ಹಗರಗಿಯವರ ಕೆಲವು ಮುಖ್ಯ ಸಂದೇಶಗಳು* :
1. ಹೃದಯವು ನಮ್ಮ ದೇಹದ ಎಂಜಿನ್ನಂತೆ ಕಾರ್ಯನಿರ್ವಹಿಸುತ್ತದೆ.
2. ಕೊಲೆಸ್ಟ್ರಾಲ್ ಜಮಾವಣೆಯಿಂದ ಹೃದಯದಲ್ಲಿ ಬ್ಲಾಕ್ಗಳು ಉಂಟಾಗುತ್ತವೆ.
3. ಹೃದಯಾಘಾತವು ಕೇವಲ ವಯೋವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಸಂಭವಿಸುತ್ತದೆ. ಆದ್ದರಿಂದ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಕಾಳಜಿಯನ್ನು ವಹಿಸಬೇಕು.
4. ಧೂಮಪಾನ, ಮದ್ಯಪಾನ ಹಾಗೂ ಪ್ಯಾಸಿವ್ ಸ್ಮೋಕಿಂಗ್ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತವೆ.
5. ಪ್ರತಿಯೊಂದು ಊಟದಲ್ಲೂ ಕನಿಷ್ಠ 50% ಹಣ್ಣು-ತರಕಾರಿಗಳನ್ನು ಸೇರಿಸಿಕೊಳ್ಳುವುದು, ಸಾಕಷ್ಟು ವ್ಯಾಯಾಮ ಅತ್ಯಗತ್ಯ.
6. ಹೊರಗಿನ ಆಹಾರ, ವಿಶೇಷವಾಗಿ ಜಂಕ್ ಫುಡ್ ಹಾಗೂ ಕೆಟ್ಟ ಎಣ್ಣೆಯಲ್ಲಿ ತಯಾರಾಗುವ ಆಹಾರವನ್ನು ತಪ್ಪಿಸಿಕೊಳ್ಳಬೇಕು.
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಡಾ. ಬಸವರಾಜ್ ಸಮರ್ಪಕ ಉತ್ತರ ನೀಡಿದರು. ಬಳಿಕ ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಪರ್ಶ್ ಆಸ್ಪತ್ರೆ ಮತ್ತು ಯುವವಾಹಿನಿಯ ಸಂಯುಕ್ತ ಆಶಯದಲ್ಲಿ ಕುಟುಂಬ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಾಯಿತು. ಸ್ಪರ್ಶ್ ಆಸ್ಪತ್ರೆಯ ಸಿಬ್ಬಂದಿ ಶ್ರೀಅಕ್ಷಯ್ ಅವರು ಈ ಕಾರ್ಡ್ನ ಲಾಭಗಳ ಬಗ್ಗೆ ವಿವರಿಸಿದರು. ಇದು ಯುವವಾಹಿನಿಯ 350ಕ್ಕೂ ಹೆಚ್ಚು ಸದಸ್ಯರಿಗೆ ಬಹಳ ಉಪಯುಕ್ತವಾಗಿದೆ.
ಮಾಸಿಕ ಸಭೆ
ಸಭೆಯನ್ನು ಶ್ರೀ ಜಯಂತ್ ಸಾಲ್ಯಾನ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಆರೋಗ್ಯ ನಿರ್ದೇಶಕಿ ಶ್ರೀಮತಿ ಅನಿತಾ ಕಮಲಾಕ್ಷ ಅವರು ಸ್ವಾಗತ ನೀಡಿ, ಯುವ ಆರೋಗ್ಯ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಕಾರ್ಯದರ್ಶಿ ಶ್ರೀ ಸಂತೋಷ್ ಪಣಪಿಲ ಅವರು ಹಿಂದಿನ ತಿಂಗಳ ವರದಿಯನ್ನು ವಾಚಿಸಿದರು.
ಅಧ್ಯಕ್ಷರಾದ ಶ್ರೀ ಶಶಿಧರ್ ಕೋಟ್ಯಾನ್ ಅವರು ಖಜಾಂಚಿಯ ಅನುಪಸ್ಥಿತಿಯಲ್ಲಿ ಹಣಕಾಸು ಲೆಕ್ಕ ಪತ್ರವನ್ನು ಮಂಡಿಸಿದರು.
ಸದಸ್ಯರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಗೌರವ ಸಲಹೆಗಾರರಾದ ಶ್ರೀಸುಧೀರ್ ಪೂಜಾರಿ ಅವರು ಯುವ ಆರೋಗ್ಯ ಕಾರ್ಯಕ್ರಮವು ಅತ್ಯುತ್ತಮ ಹೆಜ್ಜೆ ಮತ್ತು ಇನ್ನಷ್ಟು ಇಂತಹ ಉಪಯುಕ್ತ ಕಾರ್ಯಕ್ರಮಗಳು ನಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷರಾದ ಶ್ರೀ ಶಶಿಧರ ಕೋಟ್ಯಾನ್ ಅವರು ಬೆಂಗಳೂರಿನಲ್ಲಿ ಯುವವಾಹಿನಿಯನ್ನು ಇನ್ನಷ್ಟು ಬಲಪಡಿಸುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡು, ಮುಂಬರುವ ರಾಜ್ಯಮಟ್ಟದ ಯುವ ವೈಭವ ಕಾರ್ಯಕ್ರಮವನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಶ್ರೀ ಸುಧೀರ್ ಪೆರಾಡಿ ಅವರು ಯುವ ವೈಭವದ ಪ್ರಮುಖ ಅಂಶಗಳನ್ನು ವಿವರಿಸಿದರು.
ಆರೋಗ್ಯ ನಿರ್ದೇಶಕ ಶ್ರೀಹರೀಶ್ ಅವರು ಮಾತನಾಡಿ, ಆರೋಗ್ಯ ಕಾರ್ಡ್ಗಳನ್ನು ವಿತರಿಸಿದರು.
ಶ್ರೀ ದಿನೇಶ್ ಎಂ. ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಅಂತ್ಯಗೊಂಡಿತು.
ಶ್ರೀಮತಿ ಮಧುಮತಿ ಕಾರ್ಯಕ್ರಮವನ್ನು ನಿರ್ವಹಿಸಿದರು.


