ಹಿರಿಯ ಭಜಕರಾದ ಶ್ರೀ ಮಾಧವ ಅಂಚನ್ ರವರ ಸಹಕಾರದಲ್ಲಿ ನಾಲ್ಕನೇ ವರುಷದ ”
“ಮಾಧವ ಕೀರ್ತನೋತ್ಸವ”
ಕಾರ್ಯಕ್ರಮವು ತಾ:14-09-2025 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಳಾಯಿ ಇದರ ಸಭಾಂಗಣದಲ್ಲಿ ನಡೆಯಿತು.
ಮದ್ಯಾಹ್ನ ಘಟಕದ ಅಧ್ಯಕ್ಷರಾದ ಧನಿಶ್ ಕುಳಾಯಿ, ಹಿರಿಯರಾದ ಮಾಧವ ಅಂಚನ್, ಸಂಚಾಲಕರದ ಹರೀಶ್ ಪೂಜಾರಿ ಮತ್ತು ಮಾಜಿ ಅಧ್ಯಕ್ಷರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿದರು.
ಭಜನೆ ಸಂಕೀರ್ತನೆ ಕಾರ್ಯಕ್ರಮದಲ್ಲಿ ಮೊದಲಿಗೆ ಪಣಂಬೂರು ಕುಳಾಯಿ ತಂಡದಿಂದ ಪ್ರಾರಂಭವಾಗಿ ನಂತರ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಸಂಘ ಇಡ್ಯಾ, ಕಾಟಿಪಳ್ಳ, ಮೂಲ್ಕಿ, ಕೂಳೂರು ಮತ್ತು ಕುಳಾಯಿ ತಂಡದಿಂದ ಭಜನೆ ಸಂಕೇರ್ತನೆ ಕಾರ್ಯಕ್ರಮ ನಡೆಯಿತು.ಪಣಂಬೂರು ಕುಳಾಯಿ ತಂಡದಿಂದ ಕುಣಿತ ಭಜನೆಯ ಹಾಗೂ ಗುರು ಪೂಜೆಯ ಮೂಲಕ ಕಾರ್ಯಕ್ರಮವನ್ನ ಮಂಗಳಗೊಳಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನ ಘಟಕದ ಅಧ್ಯಕ್ಷರಾದ ಶ್ರೀ ಧನಿಶ್ ಕುಳಾಯಿ ವಹಿಸಿದ್ದರು ಮುಖ್ಯ ಅತಿಥಿಯಾಗಿ ಶ್ರೀ ಲೋಕೇಶ್ ಕೋಟ್ಯಾನ್, ಅಧ್ಯಕ್ಷರು ಯುವವಾಹಿನಿ(ರಿ)ಕೇಂದ್ರ ಸಮಿತಿ ಭಾಗವಹಿಸಿದರು, ಗೌರವ ಉಪಸ್ಥಿತಿಯಾಗಿ ಘಟಕದ ಸ್ಥಾಪಕ ಅಧ್ಯಕ್ಷರು ಹಾಗೂ ಕೇಂದ್ರ ಸಮಿತಿಯ. ಮಾಜಿ ಅಧ್ಯಕ್ಷರಾದ ಶ್ರೀ ವಿಶ್ವನಾಥ್. ಕೆ. ಭಾಗವಹಿಸಿದರು, ವೇದಿಕೆಯಲ್ಲಿ ಹಿರಿಯರಾದ ಮಾಧವ ಅಂಚನ್, ಕಾರ್ಯದರ್ಶಿ ಮನೋಜ್ ಕುಮಾರ್, ಸಂಚಾಲಕರಾದ ಹರೀಶ್ ಪೂಜಾರಿ ಹಾಗೂ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಪ್ರಜ್ವಲ್ ಪಾಲುಗೊಂಡರು. ಸಂಚಾಲಕರಾದ ಹರೀಶ್ ಪೂಜಾರಿಯವರು ಸ್ವಾಗತಿಸಿದರು, ಮಾಜಿ ಅಧ್ಯಕ್ಷರಾದ ಸುರೇಶ ಪೂಜಾರಿಯವರು ಪ್ರಾಸ್ತವಿಸಿದರು,ಕೇಂದ್ರದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ಪಣಂಬೂರು ಕುಳಾಯಿ ಘಟಕದ ಸಮಾಜ ಮುಖಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
2025ರ ಮಾಧವ ಕೀರ್ತನೋತ್ಸವ ಪ್ರಶಸ್ತಿಯನ್ನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರು, ಹಿರಿಯ ಭಜಕರು, ತಬಲಾ ಹರ್ಮೋನಿಯಂ ಹಾಗೂ ಗುರುಗಳಾದ ಶ್ರೀ ಸದಾನಂದ. ಬಿ. ಎಸ್, ಹೊಸಬೆಟ್ಟು ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಮನೋಜ್ ಅವರು ಧನ್ಯವಾದ ನೀಡಿದರು. ಕಾರ್ಯಕ್ರಮವನ್ನು ರೇಖಾ ಅಂಚನ್ ಹಾಗೂ ಸಂಜೀವ ಪೂಜಾರಿ ಅವರು ನಿರೂಪಿಸಿದರು.


