ದಿನಾಂಕ: 06-07-2025 ನೇ ಆದಿತ್ಯವಾರ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನ,ಗ್ರಾಮ ಚಾವಡಿ ಕೊಣಾಜೆಯಲ್ಲಿ ನೆರವೇರಿತು.ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು..ಘಟಕದ ಒಂದನೇ ಉಪಾಧ್ಯಕ್ಷರು ವಿಜೇತ್ ಪಜೀರು ಪ್ರಾಸ್ತವಿಕ ಭಾಷಣದೊಂದಿಗೆ ಬಂದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು,
ಈ ಕಾರ್ಯಕ್ರಮದ ಉದ್ಗಾಟನೆಯನ್ನು ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘ(ರಿ) ಗ್ರಾಮಚಾವಡಿಯ ಅಧ್ಯಕ್ಷರು ಆದ ಶ್ರೀ ರವೀಂದ್ರ ಬಂಗೇರ ಕೊಣಾಜೆ ಅವರು ದೀಪಾ ಬೆಳಗುವುದರೊಂದಿಗೆ ನೆರವೇರಿಸಿದರು..ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಕೊಣಾಜೆ ವಹಿಸಿದ್ದರು.ಯುವ ವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ, ಶ್ರೀ ಲೋಕೇಶ್ ಕೋಟ್ಯಾನ್ ಇವರು ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು
ಮುಖ್ಯ ಅಥಿತಿಗಳಾಗಿ: ಪ್ರೊಫೆಸರ್ ಕೆ.ಆರ್ ಶಾನಿ.ನಿವೃತ್ತ ಪ್ರಾಧ್ಯಾಪಕರು ಯೂನಿವರ್ಸಿಟಿ ಕಾಲೇಜು ಮಂಗಳೂರು,
ಶ್ರೀಮತಿ ಗೀತಾ ಡಿ.ಕುಂದರ್ ಕೊಣಾಜೆ
ಅಧ್ಯಕ್ಷರು ಕೊಣಾಜೆ ಗ್ರಾಮ ಪಂಚಾಯತ್, ಮಂಗಳೂರ್
ರಾಸಾಯನಿಕ ಶಾಸ್ತ್ರ ವಿಭಾಗದ ಎಚ್.ಓ.ಡಿ ಮತ್ತು ಪ್ರೊಫೆಸರ್ ಆಗಿರುವಂತಹ ಡಾ! ಆಶಿತ್ ಎಮ್.ವಿ,
ಬ್ರೈಟ್ ಗ್ಲೋಬ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರು ಆದ ಶ್ರೀ ಮೋಹನ್ ರಾಜ್, ಯುವ ವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ರಾಜೇಶ್ ವಿಟ್ಲ ಉಪಸ್ಥಿತಿ ಇದ್ದರು..ಈ ಕಾರ್ಯಕ್ರಮದಲ್ಲಿ” ಮಂಜನಾಡಿ ಗ್ರಾಮದ “ಅಶ್ವಿನಿ ಪೂಜಾರಿಯವರ ಮನೆ ಕುಸಿದು ಬಿದ್ದು ತನ್ನ ಇಬ್ಬರು ಮಕ್ಕಳು ಹಾಗೂ ತನ್ನ ಎರಡೂ ಕಾಲುಗಳನ್ನು ಕಳೆದು ಕೊ0ಡಿರುತ್ತಾರೆ, ಅವರ ವೈದ್ಯಕೀಯ ವೆಚ್ಚಕ್ಕಾಗಿ ಆರ್ಥಿಕ ನೆರವು ನೀಡಲಾಯಿತು..ಕಾರ್ಯಕ್ರಮ ದಲ್ಲಿ ಕೇಂದ್ರ ಸಮಿತಿ ಯ ಅಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ಹಾಗೂ ಕೊಣಾಜೆ ಗ್ರಾಮ ಚಾವಡಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು,ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಸಾ೦ಸ್ಕೃತಿಕ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಾಧನ ಪುರಸ್ಕಾರ ನೀಡಲಾಯಿತು, 2024-2025 ನೇ ಸಾಲಿನ sslc ಹಾಗೂ puc ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂಧಿಸಲಾಯಿತು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮತ್ತು ತುರ್ತು ಸಂದರ್ಭದಲ್ಲಿ ಅನಾರೋಗ್ಯ ಅಥವ ಇನ್ನಿತರ ಅವಘಡ ಗಳಿಗೆ ನೆರವಾಗುವ ಆಂಬುಲೆನ್ಸ್ ಸಂಚಾಲಕರ ನಿಸ್ವಾರ್ಥ ಸೇವೆಗೆ ಗೌರವರ್ಪಣೆ ನೀಡಲಾಯಿತು,
ನೂತನ ಕಾರ್ಯದರ್ಶಿ ಯಾದ ಶ್ರೀ ಮಿಥುನ್ ಪಜೀರು ಎಲ್ಲರಿಗೂ ಧನ್ಯವಾದ ನೀಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


