ಆಟಿ ತಿಂಗಳು ವೈಜ್ಞಾನಿಕವಾಗಿ ಅತೀ ಮಹತ್ವದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ಕಳೆಂಜೆ ಊರಿಗೆ ಬರುವ ಮಾರಿ, ಹಾಗೆಯೇ ಜನರಿಗೆ ಬರುವ ಮಹಾಮಾರಿ ರೋಗಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿತ್ತು” ಎಂದು ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ, ಖ್ಯಾತ ವಕೀಲೆ ಶ್ರೀಮತಿ ಶೈಲಜಾ ರಾಜೇಶ್ ತಿಳಿಸಿದರು. ಅವರು
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬಜಪೆ – ಕರಂಬಾರು ಸಹಯೋಗದೊಂದಿಗೆ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಶ್ರೀ ಶೀನ ಪೂಜಾರಿ, ಉಪಾಧ್ಯಕ್ಷರು, ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರ (ರಿ) ಕೊಲ್ಲೂರು, ಮುಲ್ಕಿ ನೇರವೇರಿಸಿ ಶುಭಹಾರೈಸಿದರು.
ದೀಪ ಬೆಳಗಿಸಿ, ನೆಜಿ ನೇಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ,, ಶ್ರೀ ಶಿವರಾಮ್ ಪೂಜಾರಿ, ಅಧ್ಯಕ್ಷರು, ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬಜಪೆ – ಕರಂಬಾರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೆಯೇ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಇದನ್ನು ವಿಧ್ಯಾ ನಿಧಿ ಸಂಚಾಲಕರಾದ ಶ್ರೀಮತಿ ಪೂಜಾ ಕಿರಣ್ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಪ್ರಾಯೋಜಕತ್ವ ನೀಡಿ ಸಹಕರಿಸಿದ ಶ್ರೀ ಸುಕುಮಾರ್ ಬಿ ಸಾಲ್ಯಾನ್ ಮತ್ತು ಶ್ರೀಮತಿ ಯಶೋಧಾ ಎಸ್ ಸಾಲ್ಯಾನ್, ದೇಜಮ್ಮ, ಸ್ವಾಮಿಲಪದವು, ಬಜಪೆ ಮತ್ತು
ಸರಿತಾ ಚಾರಿಟೇಬಲ್ ಟ್ರಸ್ಟ್ (ರಿ), ಕೊಳಂಬೆ, ಬಜಪೆಯ ಅಧ್ಯಕ್ಷರಾದ ಶ್ರೀ ವಿನೋಧರ ಪೂಜಾರಿ ಮತ್ತು ಶ್ರೀಮತಿ ಸುಮಿತ ವಿನೋಧರ ಪೂಜಾರಿಯವರನ್ನು ಗೌರವಿಸಲಾಯಿತು
ಶ್ರೀ ಭೋಜ ಬಂಗೇರ – ಮೆಸ್ಕಾಂ ಉದ್ಯೋಗಿ, ಶ್ರೀ ಸುಜನ್ ಪೂಜಾರಿ – ಕ್ರೀಡೆ, ಶ್ರೀ ಸುಜಯ್ ಪೂಜಾರಿ – ಕ್ರೀಡೆ ಇವರಿಗೆ ಗೌರವಪೂರ್ವಕ ಅಭಿಮಾನದಿಂದ ಸನ್ಮಾನಿಸಲಾಯಿತು.
ಸನ್ಮಾನ ಪತ್ರವನ್ನು ಶ್ರೀಮತಿ ಉಷಾ ಸುವರ್ಣ, ಕುಮಾರಿ ಪ್ರಗತಿ, ಕುಮಾರಿ ಸಾನ್ವಿ ವಾಚಿಸಿದರು.
ಘಟಕ ಈ ಸಾಲಿನಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಆಯೋಜಿಸಿದ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನನಾ ಡೆನ್ನನಾ-2025 ರಲ್ಲಿ ಪಂಚಮ ಸ್ಥಾನ ಪಡೆಯುವಲ್ಲಿ ಕಥಾವಸ್ತು ಮತ್ತು ನಿರ್ದೇಶನ ನೀಡಿ ಸಹಕರಿಸಿದ ಶ್ರೀ ಗಣೇಶ್ ಪ್ರಸಾದ್, ಶ್ರೀ ರಾಮ್ ದಾಸ್ ಇವರಿಗೆ ಗೌರವ ಸಲ್ಲಿಸಲಾಯಿತು.


