ವಿಶ್ವ ಬಿಲ್ಲವರ ಸೇವಾ ಚಾವಡಿ ಹಾಗೂ ಯುವವಾಹಿನಿ (ರಿ) ಗ್ರಾಮಚಾವಡಿ-ಕೊಣಾಜೆ ಘಟಕ ಇವರ ಸಹಕಾರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಯ ಆಚರಣೆಯನ್ನು ಅಸೈಗೋಳಿ ಅಭಯ ಆಶ್ರಮದಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಹಿರಿಯರ ಸಮ್ಮುಖದಲ್ಲಿ ಆಚರಿಸಲಾಯಿತು.
ಸಾಮೂಹಿಕ ಗುರುಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು
ಘಟಕದ ಕಾರ್ಯದರ್ಶಿಯಾದ ಸೌಮ್ಯ ಯೋಗೀಶ್ ಸರ್ವರನ್ನೂ ಸ್ವಾಗತಿಸಿದರು.
ನಮ್ಮ ಘಟಕದ ಸದಸ್ಯರು ದೈವ ದಶಕಂ ಶ್ಲೋಕದ ಜೊತೆ ಆಶ್ರಮದ ಹಿರಿಯ ಸದಸ್ಯರು ದೀಪ ಬೆಳಗಿಸಿದರು.
ವಿಶ್ವ ಬಿಲ್ಲವರ ಸೇವಾ ಚಾವಡಿಯ ಉಪಾಧ್ಯಕ್ಷರು ಶ್ರೀ ಅಜಿತ್ ಪೂಜಾರಿ ಅವರು ಮಾತನಾಡಿ ಅಭಯ ಅಶ್ರಮದಲ್ಲಿ ಜಂಟಿ ಸಂಸ್ಥೆ ಆಚರಿಸುತ್ತಿರುವ ಗುರು ಜಯಂತಿಯ ಬಗ್ಗೆ ಮಾಹಿತಿ ನೀಡಿ, ಸರ್ವರಿಗೂ ಗುರು ಜಯಂತಿಯ ಶುಭ ಹಾರೈಸಿದರು
ಕೊಲ್ಯ ಘಟಕದ ಅಧ್ಯಕ್ಷರು ಶ್ರೀ ನಿತಿನ್ ಕರ್ಕೇರ,ಗ್ರಾಮ ಚಾವಡಿ ಘಟಕದ ಅಧ್ಯಕ್ಷರಾದ ಶ್ರೀ ಬಾಬು ಬಂಗೇರ ಕೊಣಾಜೆ ಗುರು ಜಯಂತಿಯ ಶುಭಾಶಯ ಕೋರಿದರು.
ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ಅಶ್ವಿತಾ ಹರೀಶ್ ಕುಂಪಲ ಹಾಗೂ ಗ್ರಾಮಚಾವಡಿ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀ ನಾಗೇಶ್ ಪೂಜಾರಿ ಜೋಗಿ ಬೆಟ್ಟು ಗುರು ಸಂದೇಶ ನೀಡಿದರು.
ಅಭಯ ಆಶ್ರಮದ ಸಿಬ್ಬಂದಿ ಶ್ರೀಮತಿ ಭವಾನಿ ಇವರು ಅಭಯ ಆಶ್ರಮದಲ್ಲಿ ಗುರು ಜಯಂತಿ ಆಚರಣೆ ಮಾಡಿದ ಜಂಟಿ ಸಂಸ್ಥೆ ಗಳಿಗೆ ಧನ್ಯವಾದ ತಿಳಿಸಿದರು
ಕೇಂದ್ರ ಸಮಿತಿಯ ಯುವ ಸಿಂಚನ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕೊನೆಯಲ್ಲಿ ಗ್ರಾಮ ಚಾವಡಿ ಘಟಕದ ಕಾರ್ಯದರ್ಶಿ ಮಿಥುನ್ ಪಜೀರ್ ಧನ್ಯವಾದ ಸಮರ್ಪಿಸಿದರು
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು, ನಿಕಟ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಅಶ್ರಮದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು.
SEP 16, 2025 7.28 PM IST


