ಬಾಕ್ರಬೈಲ್ ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದದ 32 ಸದಸ್ಯರು ಕಟೀಲು ಶ್ರೀ ದೇವಿ ಸನ್ನಿದಾನಕ್ಕೆ ಪಾದಯಾತ್ರೆ ತೆರಳಿದ್ದು, ಗ್ರಾಮಚಾವಡಿ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಅವರಿಗೆ ಘಟಕದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು..ಯುವ ವಾಹಿನಿ ಕೊಣಾಜೆ ಘಟಕದ ಅಧ್ಯಕ್ಷರು ಶ್ರೀ ಬಾಬು ಬಂಗೇರ ಎಲ್ಲರನ್ನು ಸ್ವಾಗತಿಸಿದರು, ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದ ಪಾದಯಾತ್ರೆ ಸಂಚಾಲಕರಾದ ಶ್ರೀ ಅರವಿಂದ್ ಬಾಕ್ರ ಬೈಲ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು, ಈ ಸಂದರ್ಭದಲ್ಲಿ ಗ್ರಾಮ ಚಾವಡಿ ಕೊಣಾಜೆ ಘಟಕದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಹರೀಶ್ ಪೂಜಾರಿ ದ್ವಿತೀಯ ಉಪಾಧ್ಯಕ್ಷರು ಅಜಿತ್ ಪಜೀರು,ಪ್ರದಾನ ಕಾರ್ಯದರ್ಶಿಶ್ರೀ ಮಿಥುನ್ ಪಜೀರು, ಕೋಶಾಧಿಕಾರಿಯವರು ಅಜಿತ್ ತಾರಿಪಾಡಿ, ಮಾತೃ ಸಂಘದ ಅಧ್ಯಕ್ಷರು ಶ್ರೀ ವಿಜೇತ್ ಪಜೀರು ಉಪಸ್ಥಿತರಿದ್ದರು.
SEP 16, 2025 6.54 PM IST


