7 ನೇ ವರ್ಷದ ಕೃಷ್ಣವೇಷ ಸ್ಪರ್ಧೆಯು ದಿನಾಂಕ 10.8.25 ನೇ ಆದಿತ್ಯವಾರ ಆಶಾಕಿರಣ ಸಭಾ ಭವನದಲ್ಲಿ ಗುರುಗಳಿಗೆ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು..
ಕಾರ್ಯಕ್ರಮದ ಉದ್ಘಾಟನೆಯನ್ನು ಧಾರ್ಮಿಕ ಮುಂದಾಳು ಐ ಕೃಷ್ಣ ಅಸ್ರಣ್ಣ ರವರು ನಡೆಸಿಕೊಟ್ಟರು..ವೇದಿಕೆಯಲ್ಲಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಸ್ಥಾಪಕ ಅಧ್ಯಕ್ಷರು, ಘಟಕದ ಕಾರ್ಯದರ್ಶಿ, ಉಪಸ್ಥಿತರಿದ್ದರು.
ಯಶೋಧ ಕೃಷ್ಣ, ಮುದ್ದುಕೃಷ್ಣ,ಬಾಲಕೃಷ್ಣ ,ತುಂಟಕೃಷ್ಣ ಎಂಬ 4 ವಿಭಾಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.. ಪ್ರತಿವಿಭಾಗಕ್ಕೂ ಪ್ರಥಮ, ದ್ವಿತೀಯ ಪ್ರಶಸ್ತಿಯನ್ನು ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು..
ಸ್ಪರ್ಧೆಯ ತೀರ್ಪುಗಾರರಾಗಿ ಶಿಕ್ಷಕರಾದ ಯೋಗಿತಾ ನವಾನಂದ, ಹಾಗೂ ಸುರೇಂದ್ರ ಪೂಜಾರಿಯವರು ಉತ್ತಮವಾಗಿ ನಡೆಸಿಕೊಟ್ಟರು..
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನಮ್ಮ ಘಟಕದ ಅಧ್ಯಕ್ಷರಾದ ಶ್ರೀಧರ ಪೂಜಾರಿಯವರು ವಹಿಸಿದ್ದರು, ಅತಿಥಿಗಳಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ ,ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರಾದ ಸುಶಾಂತ್ ಪೂಜಾರಿ, ಇಮ್ಯಾಕುಲೆಟ್ ಹಾರ್ಟ್ ಆಫ್ ಮೇರಿ ಚರ್ಚ್ ನ ಧರ್ಮಗುರುಗಳಾದ ಮಾರ್ಸೆಲ್ ಸಲ್ದಾನಾ,
ಶ್ರೀ ರಾಮ ಮಂದಿರ ಎಡಪದವು ಇದರ ಟ್ರಸ್ಟಿಗಳಾದ ಸುಕುಮಾರ್ ಅಮೀನ್,ವಿಶ್ವ ಹಿಂದೂ ಪರಿಷತ್ ನ ಗುರುಪುರ ಪ್ರಖಂಡ ದ ಉಪಾಧ್ಯಕ್ಷರಾದ ವಿಶ್ವನಾಥ್ ಪಾಕಜೆ, ಮುತ್ತೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ, ಉದ್ಯಮಿ ಗಜಾನನ ಕನ್ಸ್ಟ್ರಕ್ಷನ್ ಮಾಲಕರಾದ ಜಗದೀಶ್ ಪಾಕಜೆ,
ಎಡಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗೋಪಾಲ ಪೂಜಾರಿ, ಮುತ್ತೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಷ್ಮಾ, ಘಟಕದ ಕಾರ್ಯದರ್ಶಿ ಶ್ರೀಮತಿ ಅಕ್ಷತಾ,
ಘಟಕದ ಕಲೆ,ಸಾಹಿತ್ಯ, ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಧನ್ಯಶ್ರೀ ಮುಗಿಲ ವೇದಿಕೆಯಲ್ಲಿದ್ದರು.
ನಿಕಟಪೂರ್ವ
ಅಧ್ಯಕ್ಷರಾದ ಅಕ್ಷಿತ್ ಕುಮಾರ್ ರವರು ಎಲ್ಲರನ್ನೂ ಸ್ವಾಗತಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಮ್ಮ ಘಟಕದ ಸದಸ್ಯರನ್ನು ಗೌರವಿಸಲಾಯಿತು.
ಅಧ್ಯಕ್ಷರಾದ ಶ್ರೀಧರ ಪೂಜಾರಿಯವರು ಅಧ್ಯಕ್ಷೀಯ ಭಾಷಣ ಮಾಡಿದರು.
ಕುಮಾರಿ ಧನ್ಯಶ್ರೀ ಮುಗಿಲ, ಶ್ರೀಮತಿ ಸಂಜಾತ, ಕುಮಾರಿ ಬಿಂದಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀಮತಿ ಅಕ್ಷತಾ ಧನ್ಯವಾದಗೈದರು.
SEP 15, 2025 3.29 PM IST


